Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾನು ಕೂಡ ಕಾದೆ..

ಜಗದ ಪ್ರೇಮಕೆ
ಎಂದೂ ಮಾದರಿ
ದ್ವಾರಕೆಯ
ಕೃಷ್ಣ ಮತ್ತು ರಾಧೆ..!
ರಾಧೆಯಂತೆ
ಹಗಲು ಇರುಳು
ಇಂದು ನಿನಗಾಗಿ
ನಾನು ಕೂಡ ಕಾದೆ..!
~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

21 Feb 2018, 07:59 am

ಮನಸಿಗೆ ಬೇಕಿದೆ ಮಜ್ಜನ !

ಎಲ್ಲವನೂ ಬಿಟ್ಟು ನಿಂತ ಮಹಾ ಮಹಿಮಗೆ
ಮಾಡುವರಯ್ಯ ಮಹಾ ಮಜ್ಜನವ
ರಾಜ್ಯವನೆ ತೊರೆದವಗೆ ರಾಜ್ಯಾಡಳಿತವೇ
ರಾಶಿ ರಾಶಿ ಹಾಲ್ಬೆಣ್ಣೆ ತುಪ್ಪವ ತಂದು ಸುರಿಯುವುದನ್ನು ಕಂಡು,
ಕನಲಿರಬಹುದೇ ಆ ಮಹಾತ್ಮನಾತ್ಮ ?

ಹೊಟ್ಟೆಗಿಲ್ಲದೇ ಸಾಯುತಿಹರು ದೀನರು,
ಸಾಲದ ಸುಳಿಯಲ್ಲಿ ಸತ್ತರು ಬಡ ರೈತರು
ಪೋಷಕಾಂಶಗಳಿಲ್ಲದೆ ನರಳುವ ಮಕ್ಕಳು
ದಿಗಂಬರನ ಮೇಲೆ ಬೆಣ್ಣೆ ತುಪ್ಪ ತಂದು ಸುರಿವರು!

ಮೂಡ ಮತಿಗಳ ನಡುವಲ್ಲಿ ಮರೆಯಾಯ್ತು
ಮಾನವೀಯತೆ, ಅದೆಲ್ಲೋ ಮರೀಚಿಕೆ..
ಬಂಗಾರ ತೊಡುವ ದೇವರು,
ಗರ್ಭ ಗುಡಿಗೆ ಕನ್ನ ಹಾಕುವ ಮನುಜರು
ಗರ್ಭದಲಿ ಹೊತ್ತು ಹೆತ್ತವಳನ್ನೇ ಬುರ್ಕಾದೊಳು
ಮುಚ್ಚಿಡುವ ಮಂದ ಮತಿಗಳಿವರು.

ಏನ ಬಳಿಯುವಿರಣ್ಣ
ಚರ್ಚಿನ ಗೋಡೆಗೆ ಬಿಳಿ ಬಣ್ಣ,
ಸಂಪತ್ತು ತುಂಬಿರುವ ದೇಶದಲ್ಲಿ ಮಕ್ಕಳೇ
ಆಗಿರುವರು ಪ್ರಾಣ ತೆಗೆವ ಆಪತ್ತು!
ಹೊಟ್ಟೆ ಪಾಡಿಗೆ ಹುಟ್ಟಿಕೊಂಡ ದೇವನ
ಹೆಸರಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವನಿಟ್ಟವರಾರು ?
ಮನುಷ ಮನುಷ್ಯನ ಕೊಲ್ವದೆ ಧರ್ಮವೆಂದು
ಬರೆದು ಸತ್ತ ದುರಾತ್ಮರುಗಳ್ಯಾರು?

ತುಪ್ಪ ಸುರಿವದು ನಿಲ್ಲಿಸಿ,
ಎಂದೋ ಸತ್ತರೂ ಬದುಕಿರುವ ಮಹಾ ಮಹಿಮನ
ಮತ್ತೆ ಮತ್ತೆ ಕೊಲ್ಲದಿರಿ,
ಅವನ ತತ್ವಗಳ ಕೊರಳು ಹಿಸುಕುತ್ತ
ಬೆಣ್ಣೆ ತುಪ್ಪಗಳ ವ್ಯರ್ಥವಾಗಿ ಕಗ್ಗಲ್ಲ ಮೇಲೆ ಸುರಿದು !

- ಶ್ರೀಗೋ.

20 Feb 2018, 09:40 pm

ಚೋರಿ (ಚೂರಿ)

ಹೆಣ್ಣೆ ಹೆಣ್ಣೇ ಓ ಹೆಣ್ಣೆ ಹೆಣ್ಣೇ
ನಿನ್ನ ಕನಸನು ಕದ್ದ ಕಣ್ಣೆ

ಅರಯಲೇಗೆ ನಿನ ಕಣ್ಣ ಸನ್ನೆ
ನೋಡ್ತ ಇದ್ರೆ ಎಲ್ಲಾ ಸೊನ್ನೆ ಸೊನ್ನೆ

ನಿನ್ನ ಸ್ಪರ್ಶದಿಂದ ಭೂಮಿ ತಂಪು ಆಯ್ತು
ನನ್ನ ಉಸಿರ ಈಗ ನಿನಗೆ ಒತ್ತೆ ಇಟ್ಟು ಆಯ್ತು

ನೀ ಈಗ ಆಗೋದೇ ನನ್ನ ಎಲ್ಲ ಚಟುವಟಿಕೆ
ನಿನ್ನ ನಗುವಿಂದ ಶುರುವಾಯ್ತು ಎದೆಯ ತಡವಡಿಕೆ

- Jyothi

20 Feb 2018, 07:43 pm

ಬಿಗುವಾಯ್ತು ಉಡುಗೆ !

ಬಿಗುವಾಗಿದೆ ನನ್ನ ಚೆಲುವೆ ತೊಡುವ ಉಡುಗೆ
ಸೊಗಸಾಗಿದೆ ನಗು ಚೆಲ್ಲಿ ನಡೆವ ಅವಳ ನಡಿಗೆ
ಹೆಣ್ತನದ ಊರಲ್ಲಿ ಹರೆಯದ ನೆಂಟರ ಸಂಚಾರ
ಕಣ್ತುಂಬುವ ನಾರಿಗೆ ಯೌವ್ವನದ ಬಂಟರ ಉಪಚಾರ.

ತುಂಬಿಕೊಂಡ ನಯ ನುಣುಪಿನ ಗುಳಿ ಕೆನ್ನೆ
ಕಲಿತಿರುವಳು ಈಗಷ್ಟೇ ಮಿಟುಕಿಸಿ ಸೆಳೆವ ಕಣ್ಸನ್ನೆ
ಕೆಂದುಟಿಗಳಲಿ ಪ್ರೇಮಾಮೃತದ ಮೃದು ಬೆಣ್ಣೆ
ಅಂಗಗಳು ಅರಳಿ ತುಂಬಿಕೊಂಡವೋ ಮಧುರ ಕನಸನ್ನೇ!

ಕೌಮಾರ್ಯ ಕಳೆದು, ಹೆಣ್ತನವು ಸುಳಿದು
ಮಧುರ ಮನದ ಎದೆಯಂಗಳದಲ್ಲಿ
ಸುಂದರ ಸುಕೋಮಲ ಕುಂಭಗಳನ್ನಿಟ್ಟು
ಕಾಮನೆಯ ಅಮೃತವನು ತುಂಬಿದವರಾರೆ?

ಬಾಲ್ಯವನು ತೊಳೆದು, ಹೊಂಗನಸು ಬೆಳೆದು
ಕಂಗಳಲ್ಲಿ ಕಾಮನ ಬಿಲ್ಲನು ಮೂಡಿಸಿ,
ಎಳೆಯ ಇಳೆಯ ಮೇಲೆ ಆಸೆಯ ಹೊಳೆಯ
ಹರಿಸಿದವರಾರೆ?

ಹೇಳೇ ಚೆಲುವಿ ಬಿಗುವಾಯ್ತೆಕೆ ನಿನ್ನುಡುಗೆ?
ಬಡವಾಗಿದ್ದ ಮನಸಲ್ಲಿ ತುಂಬಿಕೊಂಡವೆ
ಎಣಿಸಲಾಗದ ಸುಂದರ ಕನಸುಗಳ ಕೊಡುಗೆ.

- ಶ್ರೀಗೋ.

20 Feb 2018, 04:18 pm

ಮೂಡಣ ರವಿ...

ರವಿ ಮೂಡಿಬಂದ ಮೂಡಣದಾಗ
ಕಿರಣ ಚೆಲ್ಲಿದ ಪ್ರಕೃತಿಗೆ ವೇಗ
ಪಕ್ಷಿಗಳ ಚಿಲಿಪಿಲಿ ಅವನಿಗೆ ಸ್ವಾಗತ
ಗಿಡ ಮರ ಜೀವಿಗಳೇ ಅವನ ಸ್ನೇಹಿತ....

ಮುಂಜಾನೆಯ ಇಬ್ಬನಿಯನ್ನೂ
ಹೀರುತ್ತಾನಿಂದ ರವಿಮಾಮ,
ಅವನನ್ನು ನೋಡಿ ನಾಚುತ್ತಾ
ಮರೆಯಾದ ಚಂದಮಾಮ....

ಬಾನಂಗಳದ ತುಂಬೆಲ್ಲಾ ಅವನದೇ ಚಿತ್ತಾರ
ನೋಡುವವರ ಕಣ್ಣಲ್ಲಿ ಮಿಂಚಿನ ಝೇಂಕಾರ.
ಹೊಳೆಯುವ ಸಮಯದಿ ಅವನ ವಯ್ಯಾರ
ಹೇಳುವನು ನಕ್ಕು ನಾನೇ ಸುಂದರ....

ಎಲ್ಲಾ ಜೀವಿಗಳ ಜೀವ ಅವನು
ಬಯಸುವುದಿಲ್ಲ ಯಾರಿಂದ ಏನ್ನನ್ನು
ಅವನಿಲ್ಲದೆ ಇಲ್ಲ ಜಗದಲ್ಲೇನು....
:::::: ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

20 Feb 2018, 07:24 am

ನನ್ನವಳು

ನನ್ನನ್ನೆ ಮರೆತೆ ನಾನೂ ನನ್ನವಳು ನಕ್ಕಾಗ,
ಮಾತಾಡದೆ ಮೌನವಾದೆ ನನ್ನವಳು ಎದುರಾದಾಗ,
ನೋಡಲು ಇದಾಳೆ ಸುಂದರಿ ಬಹಳ,
ಇವಳೆ ನನ್ನ ಮುತ್ತು-ಹವಳ.

- ismail

19 Feb 2018, 07:40 am

ಮದುವೆಯ ಬಂಧ

ಮದುವೇ ಎಂಬ ಮೂರಕ್ಷರದಲಿ
ಜೀವನ ಬಂಡಿ ನಿಂತೈತೈ
ಗಂಡು ಹೆಣ್ಣು ಇಬ್ಬರ ಬಾಳಲಿ
ಹೋಸ ಜಗವೋಂದು ತೆರಿದೈತೆ

ಗಂಡನ ಆಸರೆ,ಹೆಂಡತಿಗೆ
ಮಡದಿಯ ಪ್ರೀತಿ ಗಂಡನಿಗೆ
ಸಿಕ್ಕರೆ ಅದೇ ಸವಿ ಬಾಳಿಗೆ
ಸುಖ ಸಂಸಾರದ ನಾಳೆಗೆ
ಇರಲಿ ನಂಬಿಕೆಯ ಹೋದಿಕೆ ನಿಮ್ಮ ಗೂಡಿಗೆ

ಸಂಗಾತಿಯೋಂದಿಗೆ ಹೋಸ ಜೀವನ
ಮಧುರ ನೆನಪುಗಳ ಸಮ್ಮಿಲನ
ಒಲವೇ ಬದುಕಿನ ಸಂಜೀವನ
ಈಗೆಯೇ ಸಾಗಲಿ ಬದುಕಿನ ಪಯಣ
ಇದುವೇ ಜೀವನ ಪಥದ ಹೋಸ ಯಾನ

ಕಷ್ಟವೇ ಬರಲಿ,ದುಃಖವೇ ಇರಲಿ
ಒಟ್ಟಿಗೆ ಜಯಿಸುವ ಛಲಹೊಂದಿರಲಿ
ಗಂಡು ಹೆಣ್ಣು ಎನ್ನದೆ
ಮೇಲು ಕೀಳು ಬೇದವ ತೋರದೆ
ಮುಂದೆ ಸಾಗಲಿ ಬಂಡಿಯು ನಿಲ್ಲದೆ
ಸೋಲಿಗೆ ತಲೆಯ ಬಾಗಿಸದೆ

- Bhagya Girish

18 Feb 2018, 07:28 pm

ಚಹಾದ ಕಪ್ಪು...☕️☕️

ಸಖಿ, ಚಹಾವನ್ನು
ಸವಿಯುತ್ತಿರೇ
ನೀನು ಒಂದೊಂದೆ ಸಿಪ್ಪು..!
ಅನಸಿತ್ತು ಎನಗೆ
ಆಗಲಿಲ್ಲವೇಕೆ ನಾ
ನಿನ್ನ ಕೈಯೊಳಗಿನ ಆ ಕಪ್ಪು..!
~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

18 Feb 2018, 05:06 pm

ಏನೆಂದು ಬರೆಯಲಿ

ಏನೆಂದು ಬರೆಯಲಿ
ನಾ ನಿನ್ನ ಕುರಿತು.!
ನಿನ್ನಂತರಂಗದೊಳು
ಒಂದಾಗಿರುವಾಗ
ನಾ ನಿನ್ನ ಬೆರೆತು..!

ಕನಸೆಂಬ ಲೋಕಕ್ಕೆ
ಅಧಿಪತಿಯು ನಾನೀಗ
ನನ್ನನ್ನೇ ಮರೆತು.!
ಮುಗ್ದನಾದೇನು ನಾ
ತನುವ ಮರೆತು ನಿನ್ನ
ಸನ್ನಡತೆಯನರಿತು..!

ಮಾರುತಿಹೇ ನಾನು
ಬಣ್ಣಬಣ್ಣದ ಕನಸುಗಳ
ಬಾಳಸಂತೆಯಲಿ ನಿತ್ಯದಿ.!
ಟಿಸಿಲೊಡೆಯ ಬೇಕಿದೆ
ಪ್ರೀತಿಲತೆಯೊಂದು
ನಿನ್ನಯ ಸಾಮಿಪ್ಯದಿ..!

ಏನೆಂದು ಬರೆಯಲಿ ನಾ
ಭಾವನೆಗಳದು ನೂರು.!
ವರ್ಣಿಸಲು ಅಲ್ಪನು ನಾ
ನಿನ್ನ ಸೌಂದರ್ಯವ,
ದೌಡಾಯಿಸುತ ನೀ
ನನ್ನ ಕಾಮನೆಯ ಸೇರು..!

ಏನೆಂದು ಹೇಳಲಿ ಗೆಳತಿ
ಸೆಳೆಯುವ ಕಾಂತಿಯದು
ನಿನ್ನ ಕಣ್ಣಲ್ಲಿದೆ..!
ಹಗಲಿರುಳೂ ನಡೆಯುವ
ವಿರಹದ ಕ್ರಾಂತಿಯದು
ನನ್ನಲ್ಲಿದೆ..!

ಇನ್ನೇನೂ ಹೇಳೆನು ಹುಡುಗಿ
ನಾ ನಿನ್ನಲ್ಲೇ ಇರುವೆ ಅಡಗಿ...!
~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

18 Feb 2018, 05:05 pm

ದೇವರು

ಹಸಿದು ಬಂದಾಗ
ತುತ್ತು ಅನ್ನ ನೀಡಲಿಲ್ಲ.
ಬಾಯಾರಿ ಬಂದಾಗ
ಬೊಗಸೆ ನೀರು
ಕೊಡಲಿಲ್ಲ.

ನಿನ್ನಿಂದ ಹೇಗೆ ತಾನೇ ಸಾಧ್ಯ
ನೀನೊಂದು ಕಲ್ಲು.
ದೇವರೆಂದು ಹೆಸರಿಟ್ಟುಕೊಂಡಿರುವ
ನಿರ್ಜೀವ ಕಗ್ಗಲ್ಲು.

ಪಿ.ಡಿ. ಮಂಜು ಸಾಮ್ರಾಟ್

- Manjunath

18 Feb 2018, 04:51 pm