ಹೇ ಹುಡುಗಿ ನಿನ್ನ ನೆನಪು
ನನ್ನ ಬಿಡದೆ ಕಾಡುತಿದೆ.
ನಿನ್ನೊಂದಿಗೆ ಇರಲು ಈ
ಜೀವ ಹಂಬಲಿಸುತ್ತಿದೆ.
ನಿನ್ನ ವೇದನೆಯ ಸಹಿಸದೆ
ಈ ಮನವು ಅಳುತಲಿದೆ
ನಿನಗೆ ಮರು ಜೀವವ ನೀಡುಲು
ಈ ಜೀವ ಕಾಯುತಲಿದೆ.
ಓ ನನ್ನ ಮನವೆ
ನೀ ಎಲ್ಲಿ ಅವಿತಿರುವೆ.
ಮರೆತು ಹೋದ ಕವಿತೆ
ಮತ್ತೆ ಮನವ ಏಕೆ ಕಾಡಿದೆ..!
ಒಲವಿನಿಂದ ಹೃದಯ
ಪುನಃ ರಾಗ ಬೆರೆಸಿ ಹಾಡಿದೆ..!
ಮನದ ಒಡಲ ದಡದಿ ಬರೆದ
ಹೆಸರು ನೀ ಅಂದು ಅಳಿಸಿದೆ..!
ನನ್ನ ನಿನ್ನ ಪ್ರೇಮ ಬಂಧ
ಅದೇಕೊ ಇಂದು ಹಳಸಿದೆ..!
ಹುಚ್ಚು ಮನಸು ಹಳೆಯ
ನೆನಪ ಹೆಕ್ಕಿ ಹೊತ್ತು ತಂದಿದೆ..!
ನಿನ್ನ ನಗುಮೊಗದ ಚಿತ್ರಪಟವು
ಇನ್ನೂ ಎನ್ನ ಕಣ್ಣ ಮುಂದಿದೆ..!
~ ಸಿದ್ದು_ಗುಂಡ
ನಷತ್ರಲೋಕದ ಮಿನುಗುತಾರೆಯೆ
ಮಿನುಗುವೆಯೇಕೆ ಸದಾ ನಿನಗೇನು
ಕೆಲಸವೆ ಮಿನುಗುತಲೆ ಇದ್ದು ಬಿಡು ಹಿಗೆಯೆ
ಜಗದ ಅಳಿವು ಉಳಿವನ್ನೆಲ್ಲ ನೊಡುತಾ ನಗುತಲೇ
ಇರುವೆಯಲ್ಲೆ...........
ನಿನಗೇನು ತಿಳಿದಿದೆಯೆ ಅದರ ಪರಿ
ಕಂಡಾಗಲ್ಲೆಲ್ಲ ಹೊಳೆಯುತಲೆ ಇರುವೆಯಲ್ಲ
ನೊಂದರು ಬೆಂದರು ನಗುತಲೇ ಬಾಳು
ಬೆಳಗಲೆಂದೆನೆ ನಿನ್ನ ಈ ಮಿನುಗುವ ಪರಿ........
ಅದರ ಅರ್ಥ ನನಗು ಸ್ವಲ್ಪ ಹೇಳಿ ಕೊಟ್ಟು ಬಿಡೆ
ನಿನ್ನ ಈ ಪರಿಯ ಮಿನುಗುವಿಕೆಯನ್ನ
ನಾನು ಯಲ್ಲವ ನೊಡಿ ನೊಂದರು ಬೆಂದರು
ನಿನ್ನಂತೆಯೆ ಮಿನುಗುತಲೇ ಇದ್ದು ಬಿಡುವೆ
ಮೌನದ ತಾರೆಯಂತೆ ಮಿನುಗುವ ತಾರೆಯಾಗಿ..........
ಬಾಳೆಂಬ ಅಂಗಳದಲ್ಲಿ.......
ದಿನ ಕಳೆದ ಹಾಗೆ ಅವಳ ನೆನಪು.
ಅತಿಯಾಗಿದೆ ಈ ಮನಕೆ.
ಹಗಲು ಎನ್ನದೆ ರಾತ್ರಿ ಎನ್ನದೆ.
ಕನಸು ಕಾಣುವ ಸಮಯ
ರಾತ್ರಿ ಇರಬಹುದು.
ಹಗಲು ಇರಬಹುದು.
ಆದರೆ ಅವಳ ನೆನಪುಗಳು
ಹೆಚ್ಚಾಗಿ ಕಾಡುತ್ತಿವೆ...
ಹಗಲಿರುಳು ಎನ್ನದೆ...
ನಾಡೆಂದರೆ ನಾಡು ನನ್ನ ಕನ್ನಡ ನಾಡು
ನುಡಿಯೆಂದರೆ ನುಡಿ ನನ್ನ ಕನ್ನಡ ನುಡಿ..
ಕರ ಮುಗಿದು ಬಾರೋ
ನನ್ನ ಕನ್ನಡ ದೇಗುಲದ ಒಳಗೆ..
ಅಭಿಮಾನ ಸುರಿದು ಪ್ರಾರ್ಥಿಸೋ
ತಾಯಿ ಭುವನೇಶ್ವರಿಯ ಪ್ರೀತಿಗೆ.." ಪ "
ಕುಡಿಯೋ ನೀ ತುಂಗಾ ಕಾವೇರಿ ನೀರನ್ನ
ಆಗುವುದು ನಿನ್ನ ಜನುಮ ಪಾವನ..
ನೋಡೋ ಮಲೆನಾಡ ಸೊಬಗು ಕಣ್ಣಾರ
ಕುಣಿಯುವುದು ನಿನ್ನ ಮನ ಮುಗಿಲೇತ್ತರ..
ಮೊದಲ ಸಲದ ನೋಟಕ್ಕೆ
ಅವಳೇ ನನ್ನವಳೆಂದೆ
ಪ್ರೀತಿಯ ಅಲೆಯಲ್ಲಿ ಬಿದ್ದ . ಹೃದಯದ ಮಾತು
ಪ್ರೆಮಂಕುರದಲಿ ಪ್ರೇಮದ ಹೂವ ಅರಳಿಸಿದವಳು....
ಭಗವಂತ ಹೆಣೆದ ಬಲೆಗೆ ಸಿಲುಕಿದೆವು ನಾವು
ನೂರೆಂಟು ಕನಸುಗಳ ಕಟ್ಟಿ ಬದುಕಿ ತೋರಿಸಬೇಕು ಜಗಕೆ
ಮನದ ಮಾತುಗಳ ಹಂಚಿಕೆ ಈ ವೇದಿಕೆ
ಕಂಡು ಕಾಣದ ವೇದನೆಯ ಮಾತು ಇಂದೇಕೆ
ಇದು ಮೊದಲ ಸಲದ ಪ್ರೆಮಂಕುರದ ಮಾತು....