ನೀನೇ ನನ್ನ ಉಸಿರ ಜ್ಯೋತಿ
ತೋರಿ ಮುಗುಳು ನಗುವಿನ ಪ್ರೀತಿ
ಮಾಡಿಕೂಂಡೆ ಕೈ ಕುಣಿತದ ಕೋತಿ
ಕಾಣ ಬೇಕಿದೆ ನಿನ್ನ ಇನ್ನೊಂದು ಸರತಿ
ತಿಳಿಸಬೇಕಿದೆ ನನ್ನೀ ಚಿಂತಾಜನಕ ಸ್ಥಿತಿ
ಎಂದಿಗೂ ಆಗಿರು ಹೃದಯದ ಬಡಿತಕ್ಕೆ ವಿಶೇಷ ಅತಿಥಿ
ಮರುಭೂಮಿಯ ಮನಸಲಿ ಬೀಸಿದೆ ನಿನ್ನದೇ ಗಾಳಿಯು ಅತಿ ಅತೀ....
ಕಾರಣವಿಲ್ಲದೆ ಚಂಚಲವಾಗುತ್ತಿದೆ ಮನಸ್ಸು
ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡಿದೆ ಈ ಮನಸ್ಸು
ಭಾವನೆಗಳ ಭ್ರಮಲೋಕದಲ್ಲಿ ಹುಡುಕುತ್ತಿದ್ದೆ ಈ ಮನಸ್ಸು
ಕಾಲಚಕ್ರ ಉರುಳುತ್ತಿದೆ
ನಿಮ್ಮೆಲ್ಲರ ಜೊತೆ ಕಳೆದ ಕ್ಷಣಗಳನ್ನು ನೆನೆಯುತ್ತಿದೆ ಈ ಮನಸ್ಸು
ಆದರೆ ನಿಮ್ಮೆಲ್ಲರ ನೆನಪು ನನ್ನ ಅಂತರಂಗದಲ್ಲಿ
ಉಳಿಯಲಿದೆ ಎಂದೆಂದಿಗೂ
ಎಂಥ ಕಾಲ ಬಂತೋ ತಮ್ಮ
ಈ ಲೋಕವೆಲ್ಲ ಕೆಟ್ ಹೋಯ್ತೋ ತಮ್ಮ
ಈ ಮನುಷ ಪ್ರಾಣಿಗಿಂತ ಕಡೆಯಾದ್ನಲ್ಲೋ ತಮ್ಮ
ಈ ಮನ್ಷನ್ ಜನ್ಮಕಿಷ್ಟು ಬೆಂಕಿ ಹಾಕ್ಲೋ ತಮ್ಮ "ಪ"
ದಿನಕ್ಕೊಂದು ವೇಷ ಹಾಕ್ತಾನೆ
ಕ್ಷಣಕ್ಕೊಂದು ಮಾತನಾಡ್ತಾನೆ.
ಪ್ರೀತಿ ಸ್ನೇಹಕ್ಕೆ ಇವ್ನು ಸೊಪ್ಪ್ ಹಾಕೊಲ್ಲ
ದ್ವೇಷ ಮೋಸ ಮಾಡದೆ ನಿದ್ದೆ ಮಾಡೋಲ್ಲ.
ಆಸ್ತಿಗಾಗಿ ಹೆತ್ತವರನ್ನೇ ಕೊಲೆ ಮಾಡ್ತಾನೆ
ನೋಟಿಗಾಗಿ ನಂಬಿದವರ ಕತ್ತು ಕುಯ್ತಾನೆ.
ಗಂಟಿನ ಆಸೆಗಾಗಿ ಗೋಮುಖವ್ಯಾಘ್ರನಾಗ್ತಾನೆ
ಒಂಟಿ ಹೆಣ್ಣು ಕಂಡರೆ ವಿಕೃತ ಕಾಮುಕನಾಗ್ತಾನೆ.
ಇಲ್ಲಿ ದೀನರಿಗಿಲ್ಲ ಉಳಿಗಾಲ
ಇದು ಹೀನರಿಗೆಲ್ಲಾ ಪರ್ವಕಾಲ " 1 "
ಪಾಪ ಮಾಡಿ ದೇವರ ಹುಂಡಿಗೆ ಹಣ ಹಾಕ್ತಾನೆ
ಪುರಾಣ ಹೇಳಿ ಜನರ ಜೇಬಿಗೆ ಕನ್ನ ಹಾಕ್ತಾನೆ.
ಓಟಿಗಾಗಿ ಕಾಲು ಹಿಡಿತಾನೆ
ಸೀಟಿಗಾಗಿ ತಲೆ ತೆಗಿತಾನೆ.
ಜಾತಿ ಜಾತಿ ಅಂತ ವಿಷದ ಗೋಡೆ ಕಟ್ತಾನೆ
ಧರ್ಮ ಧರ್ಮ ಅಂತ ದ್ವೇಷದ ಬೀಜ ಬಿತ್ತುತ್ತಾನೆ.
ಹಾಡುಹಗಲೇ ಕೊಲೆ ಸುಲಿಗೆ ದರೋಡೆ ನಡೆಯುತಿದೆ
ಸುತ್ತಮುತ್ತಲೇ ದ್ವೇಷ ಮೋಸ ಸ್ವಾರ್ಥ ಮೆರೆಯುತಿದೆ.
ಇದು ಲಂಚಕೋರರ ಪರಪಂಚ
ಇಲ್ಲಿ ನೀಚರೇ ಪರಮೋಚ್ಛ. " 2 "
ತವರನ್ನೂ ತೊರೆದು ಹೊರಟಿರೊ
ಹಸುಗೂಸು ಇವಳು ಹಾಲುಂಡ
ಮನೆಯೂ ಹಾಲಿನಂತೆ ತುಂಬಿ
ಹರಿಯಲಿ ಎಂದೆದು ಸಂತೊಷದ
ಹೊಳೆಯು ತವರಲ್ಲಿ ಎಂದು ಅರಸುತ್ತ
ಅತ್ತೆಯ ಮನೆ ದೀಪ ಬೆಳಗಲೇಂದು
ಬಾಂದವ್ಯದ ಬಂದ ಬೆಳೆಯಲೇಂದು
ಕಾಲಿಟ್ಟ ಹಸಿ ಮುತೈದೆ ಇವಳು.....
ತಾಯಿಯ ಮಡಿಲ ತೊರೆದು ತಾಯಿಯ
ಮಮತೆಯ ಅತ್ತೆಯಲ್ಲಿ ನೆನೆಯುತ್ತ
ಬಂದ ಮುದ್ದು ಕಂದ ಇವಳು......
ತಂದೆಯ ವಾತ್ಸಲ್ಯವ ತನ್ನೋಳಗೆ ಇಟ್ಟುಕೋಂಡು
ಮಾವನಲ್ಲಿ ತಂದೆಯ ನೆನೆಯುತ್ತ ಹೊರಟಿರೋ
ಪುಟ್ಟ ಮಗಳು ಇವಳು.......
ತಾನುಟ್ಟಿ ಆಡಿ ಬೆಳೆದು ಎಲ್ಲವ
ನೆನಪಿನ ಬೊಗಸೆಯಲ್ಲಿ ಇಟ್ಟು ಹೊರಟಿರೊ
ಮುದ್ದು ಕಣ್ಮಣಿ ಇವಳು......
ತನ್ನೆಲ್ಲ ಆಸೆ ಕನಸುಗಳ ತನ್ನವನಿಗೆ ಕೊಟ್ಟು
ಅವನ ಜೊತೆ ಹೆಜ್ಜೆ ಇಟ್ಟು ನಡೆಯುತಿರೊ ಸಂಗಾತಿ ಇವಳು...........
ತನ್ನವರನ್ನೆಲ್ಲ ಮರೆಯದೆ ಎಲ್ಲವ ನೆನೆಯುತ್ತ ಎಲ್ಲರ ಅರಸುತ್ತಾ ಕೊನೆಯ ವರೆಗು ಮನಸಲ್ಲೆ ಇಟ್ಟು ಕೊರಗುವ ಕಾಣದ ಕರುಳಿನ ಕುಡಿ ಇವಳು..........
ತನ್ನ ವಡನಾಟವ ತೊರೆದು ತನ್ನ ಬದುಕನ್ನು ತನ್ನವನೊಂದಿಗೆ ಕಟ್ಟಿಕೋಳ್ಳಲು ಹೊರಟಿರೊ
ಮದುಮಗಳಿವಳು......
ಗಂಡನ ಮನೆಯ ವಂಶವ ಬೆಳಗೀಸೋ
ತಾಯಿ ಇವಳು.......
ತನ್ನೆಲ್ಲ ನೋವ ಮರೆತು ಗಂಡನೋಂದಿಗೆ
ಕೊನೆಯ ವರೆಗು ಕೈ ಹಿಡಿದೂ ಜೊತೆ ನಡೆಯುವ
ನೆರಳು ಇವಳು ........
ಎಲ್ಲರಲ್ಲು ಒಬ್ಬಳು ಎಲ್ಲರ ಮುದ್ದು ಮಗಳೋಬ್ಬಳು ಎಲ್ಲರ ಮನೆ ಮಗಳು ಇವಳೂ
ಹೆಣ್ಣೋಬ್ಬಳು ಇವಳು...........
ಹೆಣ್ಣಿಂದ ಮಾತ್ರಾವೆ ಸಾದ್ಯಾ ಇದೆಲ್ಲ ಅವಳಲ್ಲದೆ ಯಾರಿಲ್ಲ ............ತವರೂರ ಸಿರಿ ಗಂಡನ ಮನೆಯ ಗಿಣಿ ಹಿಡಿದಿಟ್ಟಿರೆ ಬಂದಿ ಬಿಟ್ಟು ನೋಡಿದರೆ
ಮುದ್ದಾದ ತುಂಟ ಗಿಣಿ.........
ಹಳೆಯ ಡವ್'ಗಳ-
ನೆನಪಾದಾಗ!
ವಿಷಕುಡಿದೂ ಈ ಬದುಕ
ಇನ್ನೂ ಉಳಿಸಬೇಕಿದೆ..!?
ನನ್ನೀ ಮುಟ್ಠಾಳ
ಹೃದಯಕ್ಕೆ "ತ್ಯಾಗವೇ ಅಮರ"
ಎಂಬ ಹಳೇ ಟ್ಯಾಗ್ಹಾಕಿ
ಮತ್ತೂ ಮೂರ್ಖವಾಗಿಸಬೇಕಿದೆ..!?
ಕೈತಪ್ಪಿದಮೊದಲಪ್ರೇಮದಗುಂಗಲ್ಲಿ
ಭಾರವಾದ ಹೃದಯವನ್ನು
ಖಾರದ ಜೊತೆ ಸಾರಾಯಿ ಸುರಿದು
ಇನ್ನೊಮ್ಮೆ ಸುಮ್ಮನ್ನಾಗಿಸ ಬೇಕಿದೆ..!?
ಇದ್ದ ಜಾಗವ ಬಿಟ್ಟು
ಊರೂರು ಅಲೆದು
ಆಗಾಗ ಒದ್ದೆಯಾಗುವ ಕಣ್ಣ
ಮಗದೊಮ್ಮೆ ಒಣಗಿಸಬೇಕಿದೆ..!?
ಕೆನ್ನೆಗೆ ಮುತ್ತಿಟ್ಟು ಪ್ರೇಮ ಬೇಡಿದವಳ'
ಬಿಟ್ಟು ಈ ಬದುಕ ಬರಿದಾಗಿಸಿಕೊಂಡ
ನನ್ನೀ ಹೆಸರ
ಯಾರದೋ ಸ್ನೇಹದ ಹಂಗಿನ ಅನುಕಂಪದಲ್ಲಿ
ಮತ್ತೆ ಮತ್ತೆ ಬದಲಿಸಬೇಕಿದೆ..!?ಮಹಿ