Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಡೆದ ಗಟ್ಟಿ ಹೃದಯ

ನೀನು ಬಂದೆ ಬೆಳದಿಂಗಳ
ಬಾಲೆಯಂತೆ......
ಆದರೆ ಆಗಲಿಲ್ಲ ನನ್ನ
ಮಕ್ಕಳಿಗೆ ತಾಯಿಯಂತೆ...

ಆದರು ನಾ ತೆಲೆ ಕೆಡಸಿಕೊಳ್ಳದಂತೆ
ಅದೆ ಮತ್ತೋಂದು ಮದುವೆ
ಜೋಡಿಯಂತೆ.....

ಈಗ ಅವಳು ನನ್ನ ಮಕ್ಕಳಿಗೆ
ತಾಯಿಯಂತೆ........
ಅರಳುತಿಹವು ನನ್ನ ಮಕ್ಕಳು
ಕಮಲದಂತೆ....

ಜೋಪಾನವಾಗಿರುವೆವು ನಾನು
ನನ್ನ ಮಕ್ಕಳು ಅವಳ ಪ್ರೀತಿಯ
ಬಲೆಯಲ್ಲಿ ಎಂದಿನಂತೆ......

- Mahantesh Hosamani

25 Jan 2018, 11:47 am

ಪ್ರೇಯಸಿಗಾಗಿ

ಕಾದಿದ್ದೆ ನಿನಗಾಗಿ
ನೀನು ಮೂಡಿ ಬಂದೆ ಶಶಿಯಾಗಿ
ಆ ಶಶಿ ಬೆಳಕಲಿ ಹುಟ್ಟಿತು ಪ್ರೀತಿ ಮೊಗ್ಗಾಗಿ....

ಆ ಮೊಗ್ಗು ಅರಳಿತು ಹೂವಾಗಿ
ಸೂರ್ಯನ ಕಾಂತಿಯಿಂದಾಗಿ
ನಾನು ಆ ಹೂವಿಗೆ ಹಾರಿ
ಬರುವ ದುಂಬಿಯಾಗಿ .....

ಕಾದಿರುವೆ ನಿನಗಾಗಿ
ಹೇಳು ನೀನು ಮಕರಂದವನು
ಹೊರ ಸೊಸುವೆ ನನಗಾಗಿ ....

ಪ್ರೇಯಸಿ ನಾನಿರುವುದೆ
ನಿನಗಾಗಿ ....
ಒಪ್ಪುವೆಯಾ ನನ್ನ ಪ್ರೀತಿಯ
ನನಗಾಗಿ......

- Mahantesh Hosamani

25 Jan 2018, 11:28 am

ಏತಕೀ ಕೋಪ

ಏತಕೀ ಕೋಪ ರಾಧೆಯ ರಮಣ
ಪ್ರಯೋಗಿಸಬೇಡ ಇರಿವ ಮೌನ ಬಾಣ
ಕಾಣುವಾಸೆ ನಿನ್ನ ಸೂಜಿಗಲ್ಲ ಕಣ್ಣ
ತಿರುಗಿ ನೋಡೊಮ್ಮೆ ಸೋತ ಹೆಣ್ಣ

ಮುರಳಿ ನಾದದ ಪ್ರೇಮಸ್ವರ ಕೇಳದಿದ್ದರೆ
ಮನಕದ್ದವನ ತುಂಟ ನಗು ಕಾಣದಿದ್ದರೆ
ತಂಗಾಳಿಯಂತೆ ರಮಿಸುವ ಕೃಷ್ಣನೇ‌ ಇರದಿದ್ದರೆ
ಈ ರಾಧೆಗೆಂದೂ ಜೊತೆಯು ಕಣ್ಣೀರೆ

ಮದನನೇ ನಿನ್ನ ಕಟು ಮುನಿಸು
ಕೊಲ್ಲುವ ಮುನ್ನ ನನ್ನ ಪ್ರೇಮಿಸು
ನೀನಿರದ ನಾನು ಬರಿಯ ಕನಸು
ಗೋಪಾಲನೆ ಈ ಗೋಪಿಯ ಉಳಿಸು

ಮುರಳೀದರ ಒಲುಮೆಯಲೇಕೆ ಈ ಅಪಸ್ವರ
ಪೂಜಿಸುವ ರಮಣಿಯ ಮಾಡುವೆಯ ದೂರ
ಪ್ರೀತಿಸಿಗದ ಮನಸೆಂದು ಭೂಮಿಗಿಂತ ಭಾರ
ಹಿಡಿದ ಕೈಯ ಬಿಡಿಸಿ ಹೋಗದಿರೊ ಅಭ್ಯಂಕರ

- ಶ್ರೀಕಾವ್ಯ

25 Jan 2018, 12:45 am

ಯಾವ ಕಡೆ ನಿನ್ನ ನಡೆ

ಯಾವ ಕಡೆ ನಿನ್ನ ನಡೆ
ಏಕೆ ಈನಡೆ ಮನುಷನಾದೊಡೆ
ಸತ್ತಾಗ ಬರುವುದೇನು ನೋಟಿನ ಗುಡ್ಡೆ
ನಿನಗೆ ಕೊಡುವುದು ಹಿಡಿ ಮಣ್ಣು ಅಡಿ ಬಂಡೆ
ಜಗದಾಟದಲಿ ನಿನಗಿಲ್ಲದಿರಬಹುದು ಅಡೆತಡೆ
ದೇವನಾಟದಲಿ ನಿನ್ನ ಸ್ವಾರ್ಥಕ್ಕಿದೆ ನಿಲುಗಡೆ "ಪ"


ಹೆಣ್ಣಿನ ಶೋಷಣೆ ಒಂದು ಕಡೆ
ಹೊನ್ನುಮಣ್ಣಿಗಾಗಿ ವಂಚನೆ ಇನ್ನೊಂದು ಕಡೆ
ಏನು ಹೀನ ನಿನ್ನ ನಡೆ ಎಲ್ಲಾ ಕಡೆ
ಒಪ್ಪತ್ತಿನ ಊಟಕ್ಕಾಗಿ ಬವಣೆ ಒಂದು ಕಡೆ
ಮೋಜಿನ ಆಟಕ್ಕಾಗಿ ವಂಚನೆ ಇನ್ನೊಂದು ಕಡೆ
ಎಷ್ಟೂ ಕ್ರೂರ ನಿನ್ನ ನಡೆ ಎಲ್ಲಾ ಕಡೆ
ಎಲ್ಲೆಲ್ಲೂ ಮೆರೆಯುತಿದೆ ದ್ವೇಷ ಮೋಸದ ದರೋಡೆ


ಎಷ್ಟು ದಿನ ಬದುಕಿರುವೆ ಓ ಹೆಬ್ಬಂಡೆ
ನಿನ್ನಲ್ಲಿರೋ ಸ್ವಾರ್ಥಕೆ ನೀಡೋ ಬಿಡುಗಡೆ
ಇರುವಷ್ಟು ದಿನ ಸಾಗುತಿರೋ ಬೆಳಕಿನೆಡೆ
ನಾಲ್ಕು ಜನರ ಮನಸಲ್ಲಿ ಒಳ್ಳೆಯ ಹೆಸರು ಪಡೆ
ಕೆಡವೋ ನೀನು ಅಪಕಾರ ಎಂಬ ತಡೆಗೋಡೆ
ಕಟ್ಟೋ ನೀನು ಉಪಕಾರ ಎಂಬ ಪ್ರೀತಿ ಸ್ನೇಹದ ಪಡೆ
ಸೇರಬೇಕು ನೀನು ದಾನಧರ್ಮದ ದಂಡೆ

- ಸುರೇಶ್ ಟಿ ವಿ

24 Jan 2018, 04:14 pm

ನಮ್ಮೂರ ಚೆಲುವೆ

ನಮ್ಮೂರ ಚೆಲುವೆ
:::::::::::::::::::::::::::::::::::::::::::::::::::::
ನಮ್ಮೂರ ಚೆಲುವೆ. ಹೂವಂತೆ ನೀನು ನಗುವೆ.
ಚೆಂದ್ರನು ನಾಚುವಂತೆ ನಿನ್ನ ಸೌಂದರ್ಯ.
ಹೊ ಕೇಶ ಕಾಂತಿಯ ಹೊಳಪೆ .
ಚೆಂದಕಾಣದಿರು ಓಮ್ಮೆ .
ಬಿಡುವಿಲ್ಲ ನನ್ನ ಕಣ್ಣಿಗೆ .ನಿನ್ನ ಅಂದವ ನೋಡಿ ಅಂದಕಾರ‌ ನಾಗುತ ನಾನಿರುವೆ.

ಚೆಲುವ ತೋಟದಲ್ಲಿ ಒಲವ ಹಕ್ಕಿಗಳೆರಡು.
ಪಂಜರದ ಹೊಳಗಿಂದ ಇಣುಕಿ ನೋಡುತಿದೆ ನನ್ನನ್ನು.
ನಿನ್ನ ನೋಟದೊಳಗದೇನು ಇಟ್ಟಣೊ ಪರಮಶಿವ.
ನಿನ್ನ ಕುಡಿನೊಟಕ್ಕೆ ಮನಸೋತು. ಮರುಹುಟ್ಟ ಬಯಸುತಿದೆ ನನ್ನ ಹ್ರುದಯದ ಮಿಡಿತಗಳು.

ಹೂವಿಂದ ಹೀರಿದ .ದುಂಬಿಯಿಂದ ಕದ್ದಂತಹ .ಜೇನ ಹನಿಯನ್ನು ಬಚ್ಚಿಟ್ಟಿರುವೆ ನೀ.
ದಾಳಿಂಬೆ ಹೆಸಳಿನಂತೆ ಹೊಳೆದಿರುವ ನಿನ್ನ ತುಟಿಯಂಚಲ್ಲಿ .
ಗುಳಿಕೆನ್ನೆ ಇಳಿಗಲ್ಲ ನಿನ್ನ ಕೊರಳ ಮೇಲೆಲ್ಲ.
ಆಕಾಶ ನೀಲಿಯಲ್ಲಿ ಚೆಂದ್ರತಾರೆ ತೊಟ್ಟಿಲಲ್ಲಿ
ನಿನ್ನ ಹೆಜ್ಜೆಯ ಗೆಜ್ಜೆ ನಾದಕ್ಕೆ. ಹೆಜ್ಜೆ ಹಾಕಲು ಕಾದಿವೆ ನಕ್ಷತ್ರಗಳ ಗುಂಪುಗಳು ಸದಾ...

ನಿನ್ನ ವರ್ಣಿಸಲು ಪದಳಿಗೆ ಕೊನೆಯಿಲ್ಲ.
ಶ್ರುಷ್ಟಿಯ ಮೂಲವೇ ಇ ಜಗವೆಲ್ಲ

ರಚನೆ: ನೆನಪಿನ ನಾವಿಕ ಸಂತೋಷ್

- ಸಂತೋಷ್//ಜೀತು

24 Jan 2018, 07:46 am

ಗುಲಾಬಿ ಮೊಗ್ಗಿನ ಹುಡುಗಿ

ಅಲೆದಾಡುತಲಿ ನಾನೊಮ್ಮೆ ಹೊಕ್ಕೆ
ಹೂವೊಂದೂ ಕಾಣದ ಹೂದೋಟಕ್ಕೆ.
ಎತ್ತ ಹುಡುಕಿದರೂ ಒಂದು ಹೂವಿಲ್ಲ
ಹತ್ತಿರ ಸೆಳೆವ ಒಂದು ನಗುವಿಲ್ಲ,
ಅತ್ತಿತ್ತ ತಿರುಗಿ, ನನ್ನಾಸೆ ಕರಗಿ
ನಿರಾಸೆಯನು ಕೊಂಡು
ಮನವು ಬೇಸರಗೊಂಡು
ಹೊರಡಲಾನುವಾದಾಗ
ತೋರಿದಳು ಮೊಗವ
ಆ ಮುಗ್ದ ಚೆಲುವೆ,
ಈಗಷ್ಟೇ ಅರಳಿರುವ
ಅರೆ ಮೊಗ್ಗಿನ ಹೂವೆ.

ಗುಲಾಬಿ ಬಣ್ಣದ ಹೂವಿನೆಸಳ
ಉಡುಗೆಯಲಿ ಈ ಚೆಂದುಳ್ಳಿ
ಹುಡುಗಿಯ ಚೆಲುವು ಬಹಳ
ನಡಿಗೆಯಲಿ ಒನಪು ವಯ್ಯಾರ
ನೋಟದಲ್ಲಿ ತುಂಬಿ ಕೊಂಚ ಶೃಂಗಾರ
ಸೆಳೆದಳೋ ಚೆಲುವಿ
ಪೌರ್ಣಮಿಯ ಬೆಳುದಿಂಗಳ
ಚೆಲ್ಲಿ ಹರಡಿದ ಕಂಗಳ
ಕಾಂತಿಯನು ಬೀಸಿ ಒಗೆದು
ಮನಸಿಗೆ ಉರುಳು ಹಾಕಿ ಹಿಡಿದು,
ಜೇನ್ದುಟಿಯ ಬಿರಿಯದೇನೆ
ಮೌನದಲೇ ನೂರು ಮಾತುಗಳ
ಮಾಣಿಕ್ಯವನು ಮಾಲೆ ಮಾಡಿ..
ಮಮತೆಯ ಮಡಿಲಲ್ಲಿ ಮಗುವಾಗೆಂದು
ಮೋಹದಲಿ ಮದನೆ
ಕೂಗಿ ಹೇಳಿದಳು..

ಸಂಪಿಗೆ ಎಸಳಿನ ನೀಳ
ಮೂಗಿನ ತುದಿಗೆ ಸಿಕ್ಕಿಕೊಂಡ
ಮೂಗುತಿಯ ಆಕರ್ಷಕ ಗಾಳ
ಹಾಕಿದಳು ಮನಸಿಗೆ
ತೀರಿಸಲಾರೆನು ಈ ಪ್ರೀತಿಯ ಸಾಲ
ಹುಟ್ಟಿ ಬಂದರೂನು
ಮತ್ತೆ ನೂರು ಕಾಲ!

- ಶ್ರೀಗೋ.

23 Jan 2018, 11:07 pm

ನಗುವ ಹೂವುಗಳು......

ನಗುವೆಂಬುದು ಒಂದು
ಹೂವಿನ ಸಂತೆಯಂತೆ
ಹುಡುಕಿದಷ್ಟು ರಾಶಿ ರಾಶಿ
ಬಣವೆಗಳಂತೆ ನೋಡಿದಷ್ಟು
ಆಯ್ಕೆ ಮಾಡುವುದು ಬಲು
ಕಷ್ಟವಂತೆ........
ಬಣ್ಣ ಬಣ್ಣದ ಸಾಲುಗಳಂತೆ
ನೋಡಿ ನಡೆದಷ್ಟು ದಾರಿ
ಸವೆಯದಂತೆ........
ಕೊಂಡೊಯ್ಯುವ ಆಯ್ಕೆ
ಬಲು ಕಷ್ಟ ವಂತೆ......
ಅದ ಕೋಳ್ಳಲು ಹಣ
ಬೆಕೀಲ್ಲವಂತೆ.........
ನೋವೊಂದ ಅರಿತ
ಮನಸೊಂದು ಇದ್ದರೆ ಸಾಕಂತೆ.....
ಆ ನಗುವಿನ ಸಂತೆಯೊಳಗೆ
ವ್ಯಾಪಾರಿಯು ಕಾಣದ ದೈವವಂತೆ.....
ಅದ ಕೊಳ್ಳುವ ಗ್ರಾಹಕರು ನಾವುಗಳಂತೆ...

- ರಾಗಸಿರಿ....

23 Jan 2018, 08:03 pm

ಜೈ ಸೈನಿಕ ಜೈ ರೈತ

ಹಸಿರು ಸೀರೆ ಉಟ್ಟ
ಸಿರಿ ದೇವಿಗೆ ನನ್ನ ನಮನ...
ನಿನ್ನ ಕಾಯಲು ಪ್ರಾಣ ಪಣಕ್ಕಿಟ್ಟ
ಕೆಚ್ಚೆದೆಯ ಸೈನಿಕನಿಗೆ ಕೋಟಿ ನಮನ...


ಹಸಿರು ಸೀರೆ ಉಟ್ಟ
ಸಿರಿ ದೇವಿಗೆ ನನ್ನ ನಮನ....
ನಿನ್ನ ಒಡಲಲಿ ಹುಟ್ಟಿದ ನದಿಗಳ ಮಿಲನ
ಅದರಿಂದ ಅನ್ನ ಬೆಳೆದ ಅನ್ನದಾತನಿಗೆ
ಕೋಟಿ ನಮನ...


ಹಸಿರು ಸೀರೆ ಉಟ್ಟ
ಸಿರಿ ದೇವಿಗೆ ನನ್ನ ನಮನ...
ಅದನ್ನರಿಯದೆ ದುಡ್ಡಿಗೆ ಸಾಯಿತ್ತಿರುವ ರಾಜಕಾರಣಿಗಳಿಂದ ಅನ್ನದಾತನಿಗೆ,ಸೈನಿಕನಿಗೆ ಯಾವಾಗ ಸಿಗುವುದೊ ಸುಕಕರ ಜೀವನ....

- Mahantesh Hosamani

23 Jan 2018, 05:37 pm

ಪ್ರೇಮಿಯ ಪ್ರೇಮ ನಿವೇದನೆ

ಮುರುಕು ದೋಣಿಯಲಿ
ನಮ್ಮಿಬ್ಬರ ಪಯಣ
ದಡ ಸೇರಿದರೆ ಸಾಗುವುದು ಜೀವನ....

ದಡ ಸೇರಿಸಿ ನೀ ಬಂದರೆ
ನನ್ನ ಬಾಳಲಿ ಬೆಳದಿಂಗಳ
ಬಾಲೆಯಂತೆ ....

ಆಗ ನನ್ನ ಜೀವನ
ಹುಣ್ಣಿಮೆಯ ಬೆಳದಿಂಗಳಂತೆ
ಸಾಗುವುದು ಜೀವನ
ಆಶಾಕಿರಣದಂತೆ...

ಗೆಳೆತಿ ನೀನು ಬಾರದಿದ್ದರೆ
ದೋಣಿಯಲಿ ಈ ಪಯಣಿಗನ
ಜೀವ ಜೀವನ ಮುಗಿದಂತೆ ...

ನೋಡು ಗೆಳತಿ ನಿನ್ನ ಕೈಯಲ್ಲಿ ಇದೆ
ಈ ಪಯಣಿಗನ ಜೀವ ಜೀವನ ನ...

- Mahantesh Hosamani

23 Jan 2018, 02:54 pm

ಕನ್ನಡ

ಉರಿಸಿದರು ಕವಿಗಳು
ಕನ್ನಡ ದೀವಿಗೆ....

ಸ್ಮರಿಸುತ ಅರ್ಚನೆ
ಕನ್ನಡ ತಾಯಿಗೆ...

ಯುಗಗಳು ಕಳೆದರು
ಅಳಿಯದ ಭಾಷೆಗೆ...

ಜಗವನು ಪೊರೆವ
ಭುವನೇಶ್ವರಿಗೆ...

...ಕುಶಿ...

- sharin rao

23 Jan 2018, 01:37 pm