Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ

ಮನದ ಮಂದಿರದಲ್ಲಿ ಬೆಳಗಿದ
ಪ್ರೀತಿಯ ದೀಪ ನೀನು ....

ಹೃದಯ ಸಮುದ್ರದಲ್ಲಿ ಸಿಕ್ಕ
ಪ್ರೀತಿಯ ಮುತ್ತು ನೀನು....

ಕಣ್ಣ ಕೂಳದಲ್ಲಿ ಅರಳಿದ
ಪ್ರೀತಿಯ ಪುಷ್ಪ ನೀನು....

ನೆನಪಿರಲಿ .......
ದೀಪ ಆರದಿರಲಿ, ಮುತ್ತು ಒಡೆಯದಿರಲಿ,
ಪುಷ್ಪ ಬಾಡದಿರಲಿ

ಇಂತಿ ನಿನ್ನಲ್ಲಿ ಒಬ್ಬ ......

- Irfandharwad

23 Jan 2018, 11:55 am

ಸಂಜೆ

ಬೆಳಗಿತು ದೀಪವು
ಕತ್ತಲ ಅಳಿಸಲು......

ಮುಳುಗಿದ ಸೂರ್ಯನ
ನೆನಪನು ಮರೆಸಲು....

ಚದುರಿದ ಬಾನಲಿ
ಮೋಡವು ಸರಿಯಲು....

ಮರಳಿದ ಚಂದ್ರನು
ಮನವನು ತಣಿಸಲು....

ಕುಶಿ....

- sharin rao

22 Jan 2018, 04:23 pm

ನನ್ನೋಡೆಯ.......

ನಿನೀಲ್ಲದೆ ಜಿವವೆ ನಿಲ್ಲುತಿಲ್ಲ
ನನ ಗೆಳೆಯ ಎಂದು ಅಗಲಿರದ
ನಾವು ಇಂದೇಕೆ ಹೋದೆ ನನ್ನಿನಿಯ
ಬೇಗ ಬರಬಾರದೆ ಕಾಯುತಿದೆ
ನಿನ್ನೋಡತಿಯ ಹೃದಯ
ಮಿಡಿಯುತಿದೆ ನಿನಗಾಗಿ
ಒಂದೋದು ಷ್ಕಣವು ನಿನೀಲ್ಲದೆ
ಗಳಿಗೆಯೇ ಸಾಗೂತ್ತಿಲ್ಲ ನನ್ನೋಡೆಯ
ಅಂದು ಕೈ ಹಿಡಿದು ಏಳು ಹೆಜ್ಜೆ ಇಟ್ಟ
ಗಳಿಗೆ ನೆನಪಾಗಿದೆ ನನಗಿಗ
ಮನಸುತುಂಬಿ ಬರುತಿದೆ
ಬರಬಾರದೇ ನಿನ್ನ ಸತಿಗಾಗಿ
ಹೇಗೆ ಇರುವೆ ಈ ನಿನ್ನ ಹೃದಯದರಸಿಯ
ಬಿಟ್ಟು ನಿನಗೂ ನನ್ನ ನೆನಪಾಗುತಿದೆಯೆ
ಆ ನೆನಪಿನಲ್ಲೆ ದಿನ ಸವೆಯಿತು ಇಂದೆ ಬಂದುಬಿಡು
ಕಾಯುತಿರುವೆ ನಿನ್ನೋಡತಿ
ಬಂದುಬಿಡೋ ನನ್ನೋಡೆಯ...........

- ರಾಗಸಿರಿ....

22 Jan 2018, 10:19 am

ಅಂತರಾಳದಲಿ ಏನಿದೆ

ಹೇಳಿಬಿಡು ಗೆಳತಿ ನಿನ ಅಂತರಾಳದಲಿ ಏನಿದೆ ಎಂದು ಸ್ನೇಹ ಎಂಬ ಬಳ್ಳಿಯೀದೆಯೋ ಪ್ರೀತಿ ಎಂಬ ಚಿಗುರಿದೆಯೋ
ಹೇಳಿಬಿಡು ಗೆಳತಿ ನಿನ್ನಂತರಾಳದಲಿ ಏನಿದೆಯಂದು.

- chinnaswami

22 Jan 2018, 06:13 am

ಪಯಣ

ಜನನದಿಂದಲೆ ಭೂಮಿಗೆ ಪಯಣ
ಬಾಲಕ ಬಾಲಕಿಯಾಗಿ ಭುವಿಗೆ ನಮಿಸುವೆ ನಮನ
ಅಮ್ಮ ಎಂದೋಡನೆ ಕನ್ನಡದ ಜನನ
ಶಾಲೆ ಸೇರುತ್ತಲೆ ಅಕ್ಕರದ ಕಲಿಕೆಗೆ ಆಗಮನ
ಯುವಕನಾಗುತ್ತಲೆ ನೌಕರಿಯ ಹುಚ್ಚುತನ
ನೌಕರಿಯು ಸಿಗದೆ ಹೊದರೇ ಜೀವನದ ಜಿಗುಪ್ಸೆತನ
ಪ್ರಾಯ ಬಂದೊಡನೆ ಮದುವೆಯ ಮುಂದಾಳುತನ
ಅಪ್ಪ ಎನ್ನುವ ಶಬ್ದ ಆಲಿಸಿದೊಡನೆ ಸಂಸಾರದ ಜವಾಬ್ದಾರಿತನ
ಷಷ್ಟಿಯಾದೊಡನೆ ಮಕ್ಕಳ ಕಲ್ಯಾಣದ ಮೌನ ಮನನ
ಅಜ್ಜ ಆದೊಡನೆ ಆರೋಗ್ಯದ ವೈಪರಿತನ
ಸಾವು ಬಂದರೇ ಕೈಲಾಸದ ಕಡೆಗೆ ಗಮನ ಎಲ್ಲರಿಗೂ ಹೇಳಿ ಹೊಗುವೇ ಬದುಕಿನ ಅಂತಿಮ ನಮನ
ಮರಣದೊಂದಿಗೆ ಮುಗಿಯಿತ್ತು ನಮ್ಮಿ ಜೀವನದ ಪಯಣ.........
............
..............................ಆನಂದ ಎಮ್

- Jehovah

21 Jan 2018, 10:47 am

ಸಿಹಿಗನಸು

ಚೆಂದಿರನಂತ ನಿನ್ನ ಮೊಗಕೆ
ಪುಷ್ಪಾರ್ಚನೆ ಮಾಡಲೇನು
ಮುದ್ದಾದ ನಿನ್ನ ಕೆನ್ನೆಗೆ
ಮುತ್ತೊಂದ ನೀಡಲೇನು.
ಮಳೆಯಲ್ಲಿ ಕೊಡೆಹಿಡಿದು
ಚಳಿಯಲ್ಲಿ ಬಿಗಿದಪ್ಪಿ
ನಿನ್ನೊಂದಿಗೆ ಸಾಗಲು ಕಾಯುತ್ತಿರುವೆ
ಗೆಳತಿ ನೀ ಎಲ್ಲಿರುವೆ.

....ನಿಮ್ಮ ಪ್ರೀತಿಯ ಹುಡುಗ "ರಾಜ್"

- ವರದ ಪ್ರೇಮ ಜೀವಿ

20 Jan 2018, 12:59 pm

ಒಂಟಿ ಜೀವವಿದು

ಇಂದೇಕೊ ಈ ಜೀವನ
ಬೇಸರವಾಗಿದೆ ಗೆಳತಿ.
ಎಲ್ಲಾ ಇದ್ದರೂ ಒಬ್ಬೊಂಟಿಯಂತೆ
ಈ ಜೀವನ ಸಾಗುತಿದೆ ಗೆಳತಿ.
ನಾನು ಒಂಟಿಯಾಗಿ ಸಾಗಿದರೆ
ನನ್ನಿಂದೆ ಬರುವುವವರು ಯಾರಿಲ್ಲ ಗೆಳತಿ.
ನನಗೆ ಎಷ್ಟೇ ಕಷ್ಟ ಬಂದರೂ ನನ್ನಿಂದೆ
ನೀ ಇರುವೆ ಎಂದುಕೊಂಡೆ ಗೆಳತಿ.
ಆದರೆ ಈ ಬಡಪಾಯಿ ಜೀವವ
ನೀನು ಬಿಟ್ಟೋದೆಯ ಗೆಳತಿ.
ನನಗೆ ಈಗ ಅರಿವಾಗಿದೆ
ಈ ಜೀವಕ್ಕೆ ಬೆಲೆ ಇಲ್ಲ ಎಂದು ಗೆಳತಿ.

ನಿಮ್ಮ ಪ್ರೀತಿಯ "ರಾಜ್"

- ವರದ ಪ್ರೇಮ ಜೀವಿ

20 Jan 2018, 12:52 pm

ಎಲ್ಲರೂ ಕಾಲ್ಎಳೆಯವ್ರೆ

ಎಲ್ಲರೂ ಕಾಲ್ಎಳೆಯವ್ರೆ
ಒಳ್ಳೆವ್ರು ಯಾರವ್ರೆ
ಈ ಮನ್ಷ ಯಾವುದಕ್ಕೂ ಸಹಿಸೋಲ್ಲ
ಎಲ್ಲದಕ್ಕೂ ತಲೆ ಹಾಕೋದು ಬಿಡೋಲ್ಲ

ಕೆಟ್ಹೋದ್ರೆ ಥೂ ಅಂತ ಉಗಿತಾರೆ ನೀತಿ ಪಾಠ ಹೇಳ್ತಾರೆ
ನೆಟ್ಗಿದ್ರೆ ಇವ್ನೇನ್ ಮಹಾ ಅಂತಾರೆ
ಸ್ವಲ್ಪ ಮೆತ್ಗಿದ್ರೆ ಬಂದ ಸತ್ಯಹರಿಶ್ಚಂದ್ರನ ತುಂಡು ಅಂತಾರೆ
ಸ್ವಲ್ಪ ಜೋರಾಗಿದ್ರೆ ಏನ್ ಧೀಮಾಕು ಏನ್ ಜಂಭ ಅಂತಾರೆ
ಈ ಮನ್ಷ ಬದ್ಕೋದು ಇಲ್ಲ
ಬದ್ಕೋಕು ಬಿಡೋಲ್ಲ

ಗೊತ್ತಿಲ್ಲ ಅಂದ್ರೆ ಏನ್ ಸಾಚಾ ಇವ್ನು ಅಂತಾರೆ
ಗೊತ್ತಿದೆ ಅಂದ್ರೆ ಏನ್ ನೀಚಾ ಇವ್ನು ಅಂತಾರೆ
ಸೋತಾಗ ಅಂಗಂತೆ ಹಿಂಗಂತೆ ನಮ್ಗ್ಯಾಕೆ ನಮ್ಗ್ಯಾಕೆ ಅಂತಾರೆ
ಗೆದ್ದಾಗ ಹೌದ ಹೌದ ಅವನು ನಮ್ಮವ್ನು ಅವನು ನಮ್ಮವ್ನು ಅಂತಾರೆ
ಬದುಕಿದ್ರೆ ಸತ್ತಾದ್ರು ಸಾಯಾಬಾರ್ದ ಅಂತಾರೆ
ಸತ್ತರೆ ಪಾಪ ಒಳ್ಳೆ ಮನ್ಷ ಹೋಗ್ಬಿಟ್ಟ ಅಂತಾರೆ

- ಸುರೇಶ್ ಟಿ ವಿ

20 Jan 2018, 07:32 am

ಇದು ನಮ್ಮ ಸಮಾಜ........

ಗೊತ್ತಿಲ್ಲ ಗುರಿ ಇಲ್ಲ ಯಾರಗೆ ಯಾರು ತಿಳಿದಿಲ್ಲ
ಯಾರೋ ಪದವಿ ಎರಲು ಇನ್ಯಾರೊ ಬಲಿಪೀಟವಂತೆ ಅದರ ಮೇಲೆ ಅವರ
ಬದುಕಿನ ಬಣ್ಣದ ಚಿತ್ತಾರವಂತೆ ನಾವು ನೋಡಿ
ಕಣ್ಣ ತುಂಬಿಸಿಕೋಳ್ಳಬೆಕಂತೆ ಹೋಟ್ಟೆ ಹಸಿದಿದ್ದರು ಜುಟ್ಟಿಗೆ ಮಲ್ಲಿಗೆ ಹೂವೋಂದು ಬೇಕಂತೆ.....

ಬನ್ರಪ್ಪೋ ಬನ್ರಿ ಕೆಳ್ರಪ್ಪೋ ಕೇಳ್ರಿ
ನಮಗೆನು ತಿಳಿದಿಲ್ಲ ತಿಳಿದೋರೆಲ್ಲ ಮಣ್ಣಲ್ಲಿ
ಮಣ್ಣಾಗಿ ಕಣ್ಮುಚ್ಚಿ ಮಲಗ್ಯಾರಲ್ಲ
ಮನುಷ್ಯ ಮನುಷ್ಯನನ್ನೆ ತುಳಿದು ಮೆಟ್ಟಿಲೆರಬೆಕಂತೆ ಇಲ್ಲದಿದ್ದರೇ ಬದುಕ ಇಲವಂತೆ
ಕಣ್ಮಂದೆ ಆನ್ಯಾಯವೆ ನಡೆಯುತ್ತಿದ್ದರು ನ್ಯಾಯ ಕೇಳುವವರು ಯಾರಿಲ್ಲ ಕಣ್ಮಚ್ಚಿ ಅಂದರಂತೆ ನಿಲ್ಲುವರಲ್ಲ.......

ಕೆಳಿರೋ ಎಲ್ಲ ನೋಡಿರೋ ಎಲ್ಲ ಈ ಜಗವ ನೋಡಿರೋ ಎಲ್ಲರ ಬದುಕ ನೋಡಿರೊ ಆದರೋಳಗೆ ನಮ್ಮನೆ ನಾವೆ ನೋಡಿಕೋಳ್ಳಿರೋ
ನಮಗಾಗೀ ನಾವೆ ಕಟ್ಟಿಕೋಂಡ ಲೋಕದೋಳಗೆ
ನಾವೆ ಪರರಂತೆ ಬದುಕ ಬೇಕಲ್ಲೋ ಸುಂದರವಾದ ಲೋಕದೋಳಗೆ ಕಪ್ಪಾದ ಚಾಯೆಯೋಂದು ಬಂದು ಆವರಿಸಿದಂತೆ ಈ ಸಮಾಜ.......

ಕಟ್ಟುಪಾಡುಗಳ ನಡುವೆ ನಾವು ಬದುಕಬೆಕಲ್ಲ
ಇಲ್ಲಿಯಾರು ನಮ್ಮವರಲ್ಲ ನಮ್ಮನ್ನೆ ನಾವು ನೋಡಿಕೋಂಡೂ ಬದುಕಬೆಕಿದೆ ಇಲ್ಲೀ
ಹುಟ್ಟೂವಾಗ ಯಾರಿಲ್ಲ ಹೋಗುವಾಗ ಯಾರಿಲ್ಲ ನಡುವೆ ಎಕೆ ಈ ಕಟ್ಟುಪಾಡುಗಳ ಸಮಾಜದೋಳಗೆ ನಾವು ನಮ್ಮತನವ ಕಳೆದು
ಬದುಕಬೆಂಕಂತೆ.........

ತನ್ನದೆ ಆದ ಸಂಸಾರ ಸುಖವಾಗಿ ಬದುಕಲು
ಸಮಾಜಕ್ಕೆ ಕೋಡಬೇಕಂತೆ ಸಂಪ್ರದಾಯಗಳ
ಬಳುವಳಿ ಇಲ್ಲದಿದ್ದರೆ ನಾವೆ ಮಾಡಿದ ಸಮಾಜ ನಮ್ಮನೆ ಹೋರಹಾಕುಂತಂತೆ.......

ನಾವು ಕಟ್ಟಿಕೋಂಡ ಸಮಜಕ್ಕೆ ನಮ್ಮನೆ ಆಳುವ ದೊರೆಬೇಕಂತೆ ಅವರ ಆಯ್ಕೆಯು ನಮ್ಮದೆ ಆದರು ನಮಗಿಲ್ಲಿ ಬೆಲೆ ಇಲ್ಲವಂತೆ
ಲಂಚ ಬ್ರಷ್ಠಾಚಾರ ದುರಾಸೆ ಹಣದಾಹ ಮೋಹ ಈ ಎಲ್ಲಭೂತಗಳ ತುಂಬಿರುವ ಸಮಾಜ....

ಕಂದನೋಬ್ಬ ಹುಟ್ಟಿ ಬೆಳೆದು ತನ್ನಂತೆ ತಾನು ಆಗಲು ಸಮಾಜದ ಎಲ್ಲರ ನಡುವೆ ಬದುಕಲು ಅವರಿಷ್ಟದಂತೆ ಬದುಕಬೇಕಂತೆ
ವಿದವೆಯೋಬ್ಬಳು ಮರುಮದುವೆಯಾದರೆ ಅವಮಾನವಂತೆ ಅದೆ ಗಂಡೊಬ್ಬನು ಮರು ಮದುವೆಯಾದರೆ ರಾಜನಂತೆ
ಹೆಣ್ಣೋಬ್ಬಳು ಗಂಡನನ್ನು ತೊರೇದರೆ ಅವಳಿಗೆ ಬದುಕುವ ಅರ್ಹತೆಯೆ ಇಲವಂತೆ ಹೆಣ್ಣೋಬ್ಬಳು ಒಂಟಿಯಾಗಿ ತನ್ನಂತೆ ತಾನು ಬದುಕಲು ಬಿಡದ ಸಮಾಜ .......

ಕಷ್ಟಪಟ್ಟು ಬೆವರು ಸುರಿಸಿ ಬೆಳೆಯ ಬೆಳೆದು ಎಲ್ಲರಿಗು ಅನ್ನ ಹಾಕುವ ರೈತನೋಬ್ಬ ಬಡವನಂತೆ
ಎಲ್ಲೋ ಮೊಸದಿಂದ ಸಂಪಾದಿಸಿ ಸುಮ್ಮನೆ ಕೂತು ತಿಂದು ತೇಗಿ ಬಿಕ್ಷುಕನಿಗೆ ಅನ್ನಹಾಕದ ಅಲ್ಪನೋಬ್ಬ ಶ್ರೀಮಂತನಂತೆ.......

ಇದು ನಮ್ಮ ಸಮಾಜ ನಮಗೆ ನಾವೆ ಹಾಕಿ ಕೋಂಡ ಕಬ್ಬಿಣದ ಸರಪಳಿಗಳ ಬೇಲಿ ಎಂದೆದಿಗು ಕಿತ್ತೂ ಬಿಡಿಸಿಕೋಳ್ಳಲಾಗದೆ ಕುಂತಲ್ಲೇ ಕೊರಗಿ ಮರಗಿ ಅಸ್ತಿಪಂಜರವಾಗುವ ವರೆಗೆ ನಮ್ಮನ್ನೂ ಬಿಟ್ಟೋಗದ ನಮ್ಮದೆ ಆದ ಸುಂದರವಾದ ಸಮಾಜ...........ಎಷ್ಟು ಚಂದದ ಸಮಾಜ

- ರಾಗಸಿರಿ....

19 Jan 2018, 05:32 pm

ಗಂಗವ್ವ ತಾಯೇ ನನ್ನವ್ವ ಮಾಯೇ

ಸಿಟ್ಟ್ಯಾಕೆ ಸಿಡುಕ್ಯಾಕೆ ಗಂಗವ್ವ
ಇದು ತರವಲ್ಲ ನಿನಗೆ ಹಡೆದವ್ವ
ನೀ ಸಿಟ್ಟಾದಗೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲ
ಕರುಣೆಯ ತೋರಿ ಹರಸವ್ವ
ಈ ಮಕ್ಕಳ ರಕ್ಷಿಸು ಜಗದವ್ವ

ಒಣ ಒಣ ಒಣ ಮುನಿಸುಬ್ಯಾಡ
ಧಡ ಧಡನೇ ಸುರಿಯ ಬ್ಯಾಡ
ಗಂಗವ್ವ ಜಲಪ್ರಳಯ ಮಾಡಿಕೊಂಡು
ತವರಿಗೆ ಮರಳಬ್ಯಾಡ
ಹೇ ಮಾಯೇ ಬರಗಾಲ ತಂದುಕೊಟ್ಟು
ತವರ ಬಿಟ್ಟು ಹೋಗಬ್ಯಾಡ

ಕಾಲ ಕಾಲಕೆ ನೀ ಬಾರೇ
ಈ ತವರಿಗೆ ಸಿರಿಯ ನೀ ತಾರೇ
ಪ್ರೀತಿಯ ಸಂಭಂಧ ಬೆಸೆಯುವ ನೀರೇ
ಜಗಕ್ಕೆಲ್ಲಾ ಬೇಕಿದೆ ನಿನ್ನುಸಿರ ಹಸಿರೇ
ಈ ಧರಣೆಯ ತಣಿಸುವ ನಿನ್ನಾಸರೇ...

- Bhagya Girish

19 Jan 2018, 01:10 pm