ಹಬ್ಬದ ಹೊಸತನ ಸಖ ಸಂತೋಷದ ಸಡಗರ
ಅನ್ನ ನೀಡಿ ಹಾರೈಸುವವರ ಜೊತೆ
ಸಂಬಂಧದ ಬಂಧಗಳು,ನೋವು ನಲಿವುಗಳು
ದೇಶದ ನವ ಪೀಳಿಗೆಯಾ ಜೊತೆ
ದೇಶದ ಏಳಿಗೆಯಲೀ, ಕಾಯಕವೇ ಕೈಲಾಸ ನಮ ಧರ್ಮ
ಚಾಲಕರು ಅಣ್ಣಾ ನಾವೇ ಚಲಿಕರು
"ಮುಂಜಾನೆಯ ಮಂಜಲಿ
ಮುತ್ತಿನಂತೆ ಹೋಳೆಯುತಾ,
"ಮುತೈದೆ ತಿಲಕ ಧರಿಸಿ
ಮುತ್ತಿನಂತೆ ಕಂಗೊಳಿಸುತಾ,
"ಕಾವೇರಿ ನದಿಯಂತೆ ಬಳುಕುತ
ಮನೆ ತುಂಬಾ ಹರಿದಾಡುತಾ,
"ಎದ್ದೆಳು ಕಂದ ಎದ್ದೇಳು ಎಂದು
ನನ್ನ ಪ್ರೀತಿಯಿಂದ ಸಾಕಿದ ,
ನನ್ನ "ಅಮ್ಮ" ನಿನಗೆ
ನನ್ನ ಕೋಟಿ ನಮಃನಗಳು.
ಓ ಗೆಳೆಯ
ಯಾಕೆ ನೀ ನನ್ನ ಬಳಿ ಬಂದೆ
ಯಾಕೆ ನೀ ಅಷ್ಟೊಂದು ಪ್ರೀತಿ ಕೋಟ್ಟೆ
ಯಾಕೆ ನಾ ನಿನ್ನ ಮಗುವಿನಂತೆ ನಂಬಿದೆ
ಯಾಕೆ ನಾ ಸಾಯುವಷ್ಟು ಪ್ರೀತಿ ಮಾಡಿದೆ
ಪ್ರೀತಿಯನ್ನು ದ್ವೇಷಿಸುವ ಮನಸ್ಸು ನನ್ನದು
ಆ ಕಲ್ಲು ಮನಸ್ಸನು ಹೇಗೆ ಕರಗಿಸಿದೆ ನೀನು
ನಾನು ಪ್ರೀತಿ ಮಾಡುವ ಹಾಗೆ ಹೇಗೆ ಮಾಡಿದೆ ನೀನು
ತಿಳಿಯುತ್ತಿಲ್ಲ ನನಗೆ .....
ನನ್ನ ದಾರಿ ಸರಿನ ತಪ್ಪ ಹೇಳು ಗೆಳೆಯ
ಪ್ರತಿ ಕ್ಷಣ ನೀ ನನ್ನ ಬಳಿಯೇ ಇರ ಬೇಕು ಎಂಬ ಆಸೆ
ನೀ ನನ್ನ ಬಿಟ್ಟು ಬೇರೆ ಯಾರ ಜೊತೆನು ಮಾತಡಬಾರದು ಎಂಬ ಹಠ
ನಾ ಹೇಳಿದ ಹಾಗೆ ಇರಬೇಕು ಎಂದ ಸ್ವಾರ್ಥ
ಏಕೆ ನಾ ಹೀಗೆ ಮಾಡುತಿರುವೆ ಹೇಳು ಗೆಳೆಯ .....
ನಿನ್ನ ಒಂದು ಕ್ಷಣ ಬಿಟ್ಟಿ ಇರಲಾರದಷ್ಟು ಪ್ರೀತಿ ತುಂಬಿಕೊಂಡಿರುವೆ ಗೆಳೆಯ ನಿನಗಾಗಿ ....
ಒಂದು ದಿನದಲ್ಲಿ ಪ್ರತಿ ಕ್ಷಣ ಕೂಡ ಜಗಳ ಕೋಪ ಸಿಟ್ಟು
ಇವೆ ಇರುತ್ತವೆ ಯಾಕೆ ಗೆಳೆಯ ......
ನಾ ಯಾಕೆ ನಿನ್ನ ಪ್ರೀತಿ ಮಾಡಿದೆ
ನಾ ಯಾಕೆ ನಿನ್ನ ನಂಬಿದೆ
ನಾ ಯಾಕೆ ನಿನ್ನ ಬಿಟ್ಟಿ ಇರಲಾರದಷ್ಟು ಹಚ್ಚಿಕೊಂಡಿರುವೆ
ಹೇಳು ಗೆಳೆಯ.....
ಓ ಗೆಳೆಯ ಸಿಗುವೆಯ ನೀನು
ಬರುವೆಯ ನನ್ನ ಬಳಿ
ಇಡಿಯುವೆಯ ನನ್ನ ಕೆೃ
ಕಟ್ಟುವೆಯ ಮೂರು ಗಂಟು
ನಿನ್ನ ದಾರಿಯ ಕಾಯುತ್ತ ಕುಳಿತಿರುವಳು ನಿನ್ನ
ಮುದ್ದು .......
ಕೊನೆಗೊಂಡ ಕಿರು ಬಯಕೆ ಮನದಲ್ಲಿ
ಉದಯಿಸಿ ಮಾತಲ್ಲಿ ಮುಗಿದು ಮೌನದ ಮಸಣದಲ್ಲಿ ಶಾಶ್ವತವಾಗಿ ನಿದ್ರಿಸುತ್ತಿದೆ.
ಎಚ್ಚೆತ್ತುಕೊಂಡ ಅತಿರಥ ಮಹಾರತರು
ನಮ್ಮ ಪುರುಷ ಪ್ರಪಂಚದ ಪ್ರಬುದ್ದರು,
ಊರ ಮೇಲೆ ಬಿದ್ದು ನಾರುಹಂದಿಗಳಂತೆ
ತಲೆ ಬಾಗದೆ ರಸ್ತೆಗೆ ಅಡ್ಡಲಾಗಿ ಕುಡಿದು ಬಿದ್ದಿರುವರು ಮೈಯ ಮೇಲೆ ಪ್ರಜ್ಞೆ ಇಲ್ಲದಂತೆ.
ನವ ಮಾಸಗಳೊತ್ತ ತಾಯಿ ಸೆರಗು ಹಿಡಿದು ಬದುಕಿದವರು ಇವರು ನಿದ್ದೆಯಲ್ಲಿ ಬೆಚ್ಚಿಬಿದ್ದು ಅಮ್ಮ ಭಯವೆಂದು,
ಆ ತಾಯಿಯೇ ಬೆಚ್ಚಿ ಬಿಳುವಳಿಂದು ಹತ್ತರ ಮೇಲೆ ಹೊರಗೆ ಹೋದರೆ ಯಾವ ಕುಡುಕನ ಕಣ್ಣು ಬಿಳುವುದೋ ಎಂದು.
ನಿನ್ನಲ್ಲಿನ ಅಹಂಕಾರವಿಂದು ತಾರತಮ್ಯವ ತಂದು ಒಡ್ಡಿತೆ ಹೆಣ್ಣೆಂದು ಗಂಡೆಂದು ಇಂದು,
ಮೊದಲ ಉಸಿರು ಮರೆಯದಿರು ನೀನೊಂದು ಹೆಣ್ಣೆಂದು ತದ ನಂತರ ಗಂಡಾಗಿ ಬೆಳೆದು ನಿಂತಿರಿವೆಯೆಂದು ಇಂದು.
ಸ್ವಾತಂತ್ರ್ಯ ಪುರುಷರ ಜನ್ಮಹಕ್ಕೂ ಅಲ್ಲ! ಗೃಹಬಂದನ ಹೆಣ್ಣಿನ ಜೀವನದ ಅಂಗವೂ ಅಲ್ಲ!
ಸಮಾನತ್ವ ಕೊಡಲಿಂದು ನೀನೊಂದು ದೇವರೆಂದು ನೀರಗಬೇಡ,
ನೀನು ಪಡೆದ ಈ ಜನ್ಮ ಜೀವನ ಒಂದು
ತಾಯಿ ಕೊಟ್ಟ ಭಿಕ್ಷೆ ನಿನಗೆ,
ಅವಳ ಕರುಳ ಕಿತ್ತುಕೊಂಡು ರಕ್ತದ ಮಡಿಲಲ್ಲಿ ಬಿದ್ದು ಎದ್ದು.