Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಗುರುಗಳು

ಬದುಕು ರೂಪಿಸಿದವರಿವರು ಬಾಳಲಿ...
ಎರಡೇ ಪದಗಳಲಿ ನಾ ಹೇಗೆ ಹೇಳಲಿ??

ಗಿಡ್ಡನೆಯ-ದಪ್ಪನೆಯ ದೇಹದ ಆಕಾರ..
ಹೆಗಲಮೇಲೊಂದು ಸರಳತೆಯ ಬ್ಯಾಗಿನ ವಿಕಾರ..
ಗಣಿತ-ಇಂಗ್ಲಿಷ್ ಬೋಧನೆಯು ವೃತ್ತಿಯ ಸತ್ಕಾರ..
ಮಕ್ಕಳ ಮೇಲಿನ ಮಮತೆ-ಕಾಳಜಿಯ ಸಾಕಾರ...
ನನ್ನಂಥವರಿಗೆ ಅವರ ಕೊಡುಗೆ ಬಹುದಾಕಾರ...

ಉದ್ದನೆಯ ಸಾಧಾರಣ ದೇಹದ ಕೋನ..
ಶಾಂತ ಸ್ವಭಾವದ ಅವರ ದೃಷ್ಟಿಯೇ ಒಂದು ಯಾನ..
ಅವರನ್ನೇ ಎಳೆಯದ ಅವರ ಗಾಡಿಯ ಹೆಸರು ಲೋನಾ..
ಶಿಕ್ಷಕ ವೃತ್ತಿಗೆ ಅವರ ಹೆಸರೇ ಒಂದು ದೊಡ್ಡ ಮಾನ...
ನಮ್ಮಂತವರಿಗೆ ಅವರು ಸಿಕಿದ್ದೆ ನಮಗೊಂದು ಬಹುಮಾನ..

ಸಣ್ಣನೆಯ-ಕಪ್ಪನೆಯ ದೇಹದ ರೂಪ...
ಸಂಗೀತ ಆರಾದನೆಯೇ ಅವರ ಪ್ರವೃತ್ತಿಯ ಸ್ವರೂಪ..
ಡಸ್ಟರ್ನಲ್ಲಿ ಕೈ ಬೆರಳಿಗೆ ಬಡಿಯವ,ಹಾ ಹಾ ಅವರ ಕೋಪ..
ನಿಮ್ಮಿಂದಲೇ ಸಂದಿ-ಸಮಾಸ ಇವತ್ತಿಗೂ ಕಣಸಿನಲ್ಲಿಯೂ ಆಲಾಪ.
ರಾಜ್ಯೋತ್ಸವದ ಕಳಸ ಬಂದಿದ್ದೆ ನಮಗೊಂದು ಅಪರೂಪ..

- ಆರ್ ಎಸ್ ಸುಗ್ಗಿ.

22 Nov 2017, 09:00 pm

ನಮ್ತಾಯಿ....!

ತುಂಗೆಯಾಗಿ ಭದ್ರೆಯಾಗಿ ಬಂದಳೀಕೆ ಮಾಗಿ ಮಾಗಿ
ಬರವ ತಣಿಸೆ ನೆಲವ ಉಣಿಸೆ ಸಡಗರವು ಹಿಗ್ಗಿ ಹಗ್ಗಿ

ಬರದ ಬಿಸಿ ಚಿಂತೆ ಹುಸಿ ನೆಲವು ಕಸಿ ಸುಗ್ಗಿ ಸುಗ್ಗಿ
ಕಲ್ಲುಗುಂಡಿಯಲ್ಲಿ ಕುಗ್ಗಿ ಹರಿದಳಾಕೆ ತಗ್ಗಿ ಬಗ್ಗಿ

ಕೃಷಿಯ ಖುಷಿಯ ಕಸಿಕಟ್ಟುತ
ನೆಲದ ಮಗದ ಹಗೆಯಾಗುತ

ಕೇಳಿದಲ್ಲಿ ಕೈಚಾಚಿ ನೀರೊದಗಿಸಿ ನೆಲವು ಹಸಿ
ನಮ್ಮೆಲ್ಲರ ದೇವತೆ ತುಂಗ ಭದ್ರೆ ನಮಸ್ತೆ

- Dev

22 Nov 2017, 05:35 pm

ಮಧುರ

ಬರೆದೆ ನಾನು ನಿನ್ನ ನೆನಪಲಿ
ಹೊಳೆದ ನೂರು ಪದಗಳ
ಎಲ್ಲಾ ಸೇರಿ ಇಂದು ಬಾನಲಿ
ಹಕ್ಕಿ ಚಿಲಿಪಿಲಿ ಅಂಗಳ || ಪ ||

ಮೌನ ಮುರಿದು ಹೃದಯದೊಳಗೆ
ಪ್ರೀತಿ ಬಿತ್ತಿ ಹೋದೆ ನೀನು
ಅದುವೆ ಇಂದು ಮನದ ಒಳಗೆ
ಚಿಗುರಿ ಹಬ್ಬಿದೆ ನೋಡು ನೀನು || ಪ ||

ನಾಳೆ ನಮ್ಮದು ಎನ್ನುತ್ತಿರಲು
ಒಳಗೆ ಕುಣಿದಿದೆ ನವಿಲು
ದೂರದಲ್ಲಿ ಇದ್ದರೂನು
ಬೆಸೆದು ಬಿಟ್ಟಿದೆ ಕಾಮನಬಿಲ್ಲು

- ನೆನಪಿನ ನಾವಿಕ

22 Nov 2017, 05:33 pm

ನಿನ್ನ ನೆಲೆ..

ನೆನಪುಗಳ ನೋವು ಮನದಿ ಮನೆಮಾಡಿರಲು,
ಹೇಳಲಾಗದೆ ಮನ ಮೌನವತಾಳಿರಲು,
ನಿನ್ನ ನೋಡವ ಆಸೆಯು ಮನತುಂಬಿರಲು,
ಗೆಳತಿ
ಎಲ್ಲಿ ಹುಡುಕಲಿ ನಾ ಈಗ ನಿನ್ನ ನೆಲೆ
ಕಾಯುತಿರುವೆ ಸದಾ ಆ ನಿನ್ನ ನೆನಪಲೆ.

- Spb...@#

22 Nov 2017, 05:22 pm

ಫಲ

ಶಿರವ ಧರೆಗೆ ತಾಗಿಸಿ ಮಲಗಿದರೆ
ಕಾಣುವುದು ನೀಲಾಂಬರವು ಕಣ್ಣೆದುರೆ
ಉಣ್ಣಲು ಅನ್ನವಿಲ್ಲ,ಉಡಲು ಬಟ್ಟೆಯಿಲ್ಲ
ಮಿದು ಬೆಳಕಲಿ,ಮಧುಭರಿತ ಸ್ವಪ್ನವಿದೆ
ಸಾಧಿಸಲು ಮನ್ನುಗ್ಗಿದರೆ ಫಲವಿದೆ!

ಕಡಲೊಂದು ದುರ್ಗಮ ಹಾದಿಯ
ಸುಗಮವಾಗಿಸಿ ಸಾಗಬಲ್ಲುದು
ಕಾನನದ ಕುಸುಮವೊಂದು
ದೈವ ಪೂಜೆಯಲ್ಲಿ ಎಡೆ- ಪಡೆಯಬಲ್ಲುದು
ಅಲಕ್ಷಿಸಲ್ಪಟ್ಟವರೆ ಎಲ್ಲರ ಲಕ್ಷ್ಯಸೆಳೆಯಬಲ್ಲರು!

ಹಕ್ಕಿಯೊಂದು ಧೃತಿಗೆಟ್ಟರೆ
ಹಾರಬಲ್ಲದೆ ಆಗಸದೆತ್ತರ
ಎದುರಾದ ಎಡರು- ತೊಡರಿಗೆ
ಬಲಿಯಾದರೆ ಸಾಗೀತೇ
ಸಾಧನೆಯ ಬಹುದೂರದಾದಿ!



ಶಾರಧ

- ಶಕುಂತಲಾ

22 Nov 2017, 05:13 pm

ಕನಸುಗಳ ದಾರಿ.

ತಿರುಗಿ ಬರುವೆನೆಂದ ನನ್ನವಳು
ಬರುವ ಹೊತ್ತಾದರೂ ಬಾರದಾಗ,
ಬರುವ ದಾರಿಯ ಹಿಡಿದು ಹೊರಟೆ ಬರುವಳೆಂದು,
ಕಾಲ ಕಳೆದರೂ ಕಾಲು ಸವೆದರೂ,
ದಿನರಾತ್ರಿ ಸದಾ ಒಡುತಲಿರುವೆ ನನಸಲ್ಲದ ಆ ಕನಸುಗಳ ದಾರಿಯಲಿ...

- Spb...@#

22 Nov 2017, 12:10 am

ಮುಖವಾಡ ಬೇಕಾಗಿದೆ

ಮುಖವಾಡ ಬೇಕಾಗಿದೆ ನನಗೊಂದು,
ಚೆಂದನೆಯ ಆಕರ್ಷಕ ಮುಖವಾಡ,
ನೋಡಿದವರು ಮತ್ತೊಮ್ಮೆ ಮಗದೊಮ್ಮೆ
ನೋಡುತ್ತಲೇ ಇರಬೇಕು,
ಇವ ನಯ ನಾಜೂಕಿನವನೆಂದು ನಂಬಬೇಕು !
ನಯ ವಂಚನೆಗೆ ಹೇಳಿ ಮಾಡಿಸಿದಂತಿರಬೇಕು,
ರಾತ್ರಿ ಕಂಡ ಬಾವಿಗೆ ಹಗಲು ಬಿಳುವಂತಿರಬೇಕು.

ಬೇಕೇ ಬೇಕು ಮುಖವಾಡ,
ನಮ್ಮ ನೋವ ಮರೆಸಿ
ಹೊರಗೆ ಮುಗುಳ್ನಗೆ ಚೆಲ್ಲಲು
ದುಮ್ಮಿಕಿದ ಎರಡು ಹನಿ ಕಣ್ಣೀರು
ಪನ್ನೀರೆಂದು ಹೇಳಿ ನಂಬಿಸಲು !

ಆತ್ಮ ಬಂಧುಗಳು ಕೊಡುವ
ಕೊಡಲಿ ಏಟನು ತಾಳಿ,
ನೋವು ನಲಿವುಗಳನ್ನು ಮೀರಿ
ತನ್ಮಯತೆಯಲಿ ಬಾಳಿ,
ಜತನದಲಿ ಬಾಳ ಪಯಣವನ್ನು ಬೆಳೆಸಲು..
ಬೇಕೇ ಬೇಕಾಗಿದೆ ನನಗೊಂದು
ಸುಂದರ ಮುಖವಾಡ !
ಸಾಕಾಗಿದೆ ಈ ಬಣ್ಣ ಗೆಟ್ಟು ಸುಕ್ಕು ಬಿದ್ದ
ಆತ್ಮಾಭಿಮಾನದ ಕೆಟ್ಟ ಮುಖ.

- ಶ್ರೀಗೋ.

22 Nov 2017, 12:02 am

ನಂಜಾದಿತೆಂದು

ಚಡಪಡಿಸದಿರು ಹೃದಯವೇ ನಿನಗೆಂದು
ಒಂದು ಛಾಯೆಯೂ ಜೊತೆಗಿಲ್ಲವೆಂದು ಮರೆತು
ಮಂಕಾಗಿ .

ಕಾಡ್ಗಿಚ್ಚು ನಿನ್ನ ಬಡಿತಕೆ ಬೆರೆತಿದೆಯೆಂದು
ಕಿರುಚಿ ಹೇಳದಿರು ನನ್ನಲ್ಲಿ ನಾ ಸುಟ್ಟು ಬೂದಿಯಾಗುತ್ತಿರುವೆನೆಂದು.

ಕಣ್ಣ ಹನಿಗಳು ಉದುರಿ ನಿನ್ನ ಕೋಮಲ ರೂಪಕೆ ನಂಜಾದಿತೆಂದು ದೂರದಿರು ನನ್ನ ಇಂದು ನಿನಗಿಲ್ಲದ ಮಾತು ನನ್ನಲ್ಲೆಕೆಂದು ಮೌನಕ್ಕೆ ನನ್ನಲ್ಲಿ ಬರವಿಲ್ಲ ತುಂಬಿಕೊ ಎಂದು.

ಅಶರೀರ ಮನಕೆ ಕಲ್ಪಿತ ಸ್ವರೂಪ ನೀನೆಂದು ಮೆರೆಯದಿರು ನಿನ್ನಲ್ಲಿನ ಸೊಕ್ಕು ಚೊಕ್ಕಾಗಿ ಮುಗಿಲೇರಿಸದೆ ನನ್ನಲ್ಲೇ ಕೂಡಿಟ್ಟಿದೆಯೆಂದು ತಿಳಿದು ನನ್ನ ನಿರ್ಲಕ್ಷಿಸದಿರು.

- ಚುಕ್ಕಿ

21 Nov 2017, 11:58 pm

ಶವದ ಯಾತ್ರೆ

ನನ್ನ ಶವದ ಯಾತ್ರೆ
ಸಾಗುವಾಗ, ಮರೆಯಲ್ಲಿ
ನನ್ನವಳು ನಿಂತು
ಅಳುವುದು
ಕಂಡು ನನ್ನ ಮನಸ್ಸು
ದೂರದಿಂದಲೇ
ಮರಗೀತು..|


✍ಅನಿಲ್ ಕುಲಕರ್ಣಿ

- ಅನಿಲ್ ಕುಲಕರ್ಣಿ

21 Nov 2017, 11:36 pm

ನನ್ನನಗಲಿ ಹೋಗದಿರು

ನಿಲ್ಲದಿರು ನೀನೆಂದಿಗೂ ನನ್ನಗಲಿ ಹೋಗದಿರು
ಕಂಬನಿಯೇ ಬದುಕಲು ಬಿಡದ ಜನರಿಗೂ
ನನ್ನ ಬಿಟ್ಟು ಹೋಗದ ನಿನಗೂ ಅಜಗಜಾಂತರ
ವ್ಯತ್ಯಾಸವುಂಟು.

ನಿತ್ಯ ನರಕತೋರುವವರು ಮಾತಲ್ಲಿ ನಿತ್ಯ ನನ್ನ
ನೋವಲ್ಲೂ ಜೊತೆಗಿರುವರುವೆ ನಲಿವಲ್ಲೂ
ಹುಡುಕಿಬರುವೆ ನೀನಿಗಿಂತ ಆತ್ಮೀಯ
ಬಂದುವಿಲ್ಲ ಈ ಬಡಪಾಯಿ ಜೀವಕೆ.

- ಚುಕ್ಕಿ

21 Nov 2017, 11:16 pm