Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಲಿವು ತುಂಬಿದ ನಿನ್ನೆಗಳು
ಭರವಸೆಯಿಲ್ಲದ ನಾಳೆಗಳು
ಏರಿಳಿತದ ಇಂದಿನ ನೋವ ದಿನಗಳು
ಮರೆಯಲಾರೆ ನಿನ್ನೊಂದಿಗಿನ ಕ್ಷಣಗಳು
ಕಾಪಾಡುವ ಕರವು ಕಾಣದಾಯ್ತು
ನೆಚ್ಚಿದ ನಲಿವು ಸಿಗಯಾಯ್ತು
ಒಲಿದ ಒಲವು ಕಣ್ಮರೆಯಾಯ್ತು
ನಗುವೆಂಬುದು ಮರೀಚಿಕೆಯಾಯ್ತು
ಹರಿವ ಕಣ್ಣೀರಿಗೆ ಆಣೆ ಅಣೆಕಟ್ಟು ಕಟ್ಟಿದೆ
ನೀನಿತ್ತ ಪ್ರೀತಿ ಗೂಡು ಮನದಲಿದೆ
ನಿನ್ನ ನೆನಪು ನನ್ನ ಉಸಿರಾಗಿದೆ
ಆ ಉಸಿರಿಲ್ಲದೆ ತನುವಿಗೆ ಜಗವೆಲ್ಲಿದೆ
ತನುವಿಲ್ಲಿದೆ ಮನ ನಿನ್ನಲಿದೆ
ನೀ ಸನಿಹವಿರದ ಜೀವ ಜಡವಾಗಿದೆ
ಕಡಲ ತೀರದ ಕಲ್ಲು ನಾನಾಗಿರುವೆ
ಅಲೆಗೆ ಅಲುಗದೆ ನವೆಯುತಿರುವೆ
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
07 Nov 2017, 09:32 am
*ಚಿಗುರೆಲೆ*
ಪ್ರಥಮ ನೋಟದಿ ಒಲವು ಮೂಡಿದೆ
ನಿನ್ನ ಕಣ್ಣದು ಮನವ ಸೆಳೆದಿದೆ
ಮನಸು ಮನಸಿಗೆ ಕಟ್ಟಿ ಸೇತುವೆ
ಹೂವ ಹಾಸಿದೆ ಕೇಳೆನ್ನ ಚೆಲುವೆ
ಮನದ ಹಕ್ಕಿ ಹಾಡಿದೆ ಮೌನರಾಗ
ಮಾತು ಮರೆತು ಮೈಮರೆತಾಗ
ನಿನ್ನ ಕಂಡ ಖುಷಿಯಲೀಗ
ಏರಿದ ಹೃದಯ ಬಡಿತದ ವೇಗ
ರಚ್ಚೆ ಹಿಡಿದಿದೆ ಮಗುವಂತೆ ಮನವು
ರಮಿಸಲು ನೀ ಬೇಕೆಂದು ದಿನವು
ಕಾದಿದೆ ಒಂದಾಗುವ ಶುಭಘಳಿಗೆಗೆ
ಬಂಧನದ ಕಿರುಬೆರಳ ಬೆಸುಗೆಗೆ
ನೀ ಬರುವ ದಾರಿಯ ಕಾದು ಕುಳಿತು
ಹೂವಂತ ಮನ ಒಲಿಸುವ ವೇಳೆ
ಚಿಗುರು ಎಲೆಯ ತಾಂಬೂಲ ಸವಿದು
ಒಂದಾಗುವ ಶುಭ ಮಿಲನವದು
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
07 Nov 2017, 09:23 am
ಮೊದಲು
ನಮ್ಮ ನಮ್ಮಲಿಯೇ
ಇರಲಿ
ಸಹಕಾರ !
ತಪ್ಪು
ನುಡಿದವನಿದ್ದರೆ
ತಿದ್ದುವುದರೊಂದಿಗೆ
ಮಾಡಿ ಉಪಕಾರ !!
ಸಾದ್ಯವಾಗದಿದ್ದಲ್ಲಿ
ಸುಮ್ಮನಿದ್ದು ಬಿಡಿ
ನುಡಿಸಬೇಡಿ,
ಅಪಸ್ವರ !!
- ನಾಗರಾಜ್
07 Nov 2017, 08:42 am
ಹಿಂತೆಗೆಯದಿರೆ ನನ್ನ ಚೆಲುವಿ
ನನ್ನ ಕೈಯೊಳಿರುವ ನಿನ್ನ ಮೃದು ಕೈಯನು
ಮಾತೊಂದು ಆಡದಿದ್ದರೂ
ಆಡುತಿಹವಲ್ಲೇ ಬೆರಳು ನೂರು ಮಾತನು.
ಕಂಡೆ ಕವಿ ಹಾಡಿ ಹೊಗಳಿದ
ಬಂಗಾರವಿಲ್ಲದ ಬೆರಳನು,
ಕಣ್ತುಂಬಿಕೊಂಡೆ ಸಿಂಗಾರವಿಲ್ಲದ
ನಿನ್ನ ಕೈ ಉಗುರದ ಹೊಳಪನು.
ಬೆಸೆದು ಅಂಗೈ ಒಳಗೆ,
ನುಸಿದು ಬಂದಿಯಾದವೋ
ಮುನಿಸು ತೋರದ ಮೃದು ಕೈ ಬೆರಳು.
ಕನಸ ಹೊಸೆಯಿತೋ,
ಮನಸ ಬೆಸೆಯಿತೋ,
ಸಂತಸವ ತಂದಿತ್ತ ಆ ನಿನ್ನ ಕರವು.
ಹಿಂತೆಗೆಯದಿರೆ ಹುಡುಗಿ,
ಮತ್ತೊಮ್ಮೆ ಬೇಡುವೆನು
ನಿಂತು ಹೋದೀತು ಹೇಳದೆ ನನ್ನುಸಿರು.
ಕುಂತುಕೊಂಡಿರುವಾಗ
ಚಿಂತೆಯನು ಮರೆತಾಗ
ಮತ್ತೆ ಮರಳುವುದೇಕೆ ನಿಟ್ಟುಸಿರು.
ಕೈ ತುತ್ತನಿಟ್ಟ ಕೈ
ಭಾವನೆಗಳ ಬರೆವ ಕೈ
ಭಾವನೆಗಳಿಗೆ ಬಣ್ಣ ಹಚ್ಚಿದ ಕೈ ಮುಗಿಲಿದ್ದಂತೆ.
ಅದ ನಾನು ಹಿಡಿದಿರಲು
ಅನಿಸುವುದೆನಗೆ ಲೋಕವನೆ ನಾನು
ಕೈಯೊಳು ಹಿಡಿದಿಟ್ಟಂತೆ!
- ಶ್ರೀಗೋ.
07 Nov 2017, 06:30 am
ಯಾರು ಬಣ್ಣಿಸಲಾಗದ
ಬಣ್ಣನೇ ನೀನು
ಯಾರು ಊಹಿಸಲಾಗದ
ಊಹಾರಾಶಿ ನೀನು
ಆ ತಾರಾ ಲೋಖದಲ್ಲಿ ಮಿನುಗುವ
ತಾರೆ ನೀನು
ನಿನ್ನ ಸನಿಹ ಕೋರಿ ಬಂದಿಹ
ಚಂದ್ರಮ ನಾನು..........ಡಿ.ಸಿ....
- ಡಿ.ಸಿ.ನಾಗೇಶ್
06 Nov 2017, 10:52 pm
ಸಿಕ್ಕರು ಸಿಗದ ನನ್ನುಸಿರೆ ನೀನು
ಕಂಡರು ಕಾಣದ ಕನಸೆ ನೀನು
ಬದುಕಲ್ಲಿ ಬಣ್ಣ ತುಂಬಿದ ಸೊಗಸಾದ
ಪ್ರೀತಿಯ ಚಿತ್ತಾರ ನೀನು.
ಏನೆಂದೆ ತಿಳಿಸಲೀ ನನ್ನೊಳವೆ ನೀನೇ ನನ್ನ ಪ್ರಪಂಚದ ಆದಿ ಅಂತ್ಯ ಕಣೆ ಬಂಗಾರ
ತೊರೆದು ಹೋಗದಿರೆ ಚಿನ್ನ ಇನ್ನ ನಿನ್ನ ಬಿಟ್ಟು
ಒಂದು ಕ್ಷಣ ಇರಲಾರೆ ನಾನು ನನ್ನಲ್ಲಿ.
ಬಂದು ಸೇರುವುದು ತಡವಾದರೆ ನೀನು ನಿನ್ನ ಮುಗುಳ್ನಗೆನು ಬಡ್ಡಿಯಾಗಿ
ಕಳಿಹಿಸು ನಾ ಕೊಟ್ಟ ಪ್ರೀತಿಯ ಸಾಲಕ್ಕೆ
ನನ್ನೆದೆಯಲ್ಲಿ ಬಚ್ಚಿಡುವೆ ನಿನ್ನ ಹೃದಯದಷ್ಟು
ಜೋಪಾನವಾಗಿ.
- ಚುಕ್ಕಿ
06 Nov 2017, 10:41 pm
ದೈರ್ಯ ಮಾಡಿ
ಪ್ರೀತಿಸಿದ್ದೇನೋ ನಿಜ
ಕರಾಟೆ ಕಲಿತಿರುವ
ಬಹು ಸುಂದರ,
ಹುಡುಗಿಯನ್ನು !!
ಆದರೆ..
ನಿಜವಾಗಿಯೂ
ಭಯವಾಗುತ್ತಿದೆ
ಅವಳಿಗೆ ತಿಳಿಸಲು,
ನನ್ನೊಳಗಿನ ಪ್ರೀತಿಯನ್ನು !!
- ನಾಗರಾಜ್
06 Nov 2017, 07:12 pm
ಮರೆವು ಸುಲಭವಲ್ಲ ಬಿಡಿ
ಮರೆಯುವ ವಿಷಯ ಬಿಟ್ಟು
ನೆನಪಿರಬೇಕಾದುದೆಲ್ಲಾ
ಮರೆಯುವ ಚಾಳಿಗೆ
ಮನಕೆ ಬಿಸಿನೀರು ಕಾಯಿಸುವ
ಸಂಗತಿಗಳ ಮರೆಯುವುದು ಹೇಗೆ??
✍ ಶ್ರೀ
- saipreethi
06 Nov 2017, 03:03 pm
ಹಣತೆಯಾರಿಸಿ ಹೋದ ನೀನೀಗ
ನಿರುಮ್ಮಳವಾಗಿರಬಹುದು...
ನಂದಿ ಹೋದ ನನ್ನೆದೆಯಲೀಗ
ಸ್ಮಶಾನ ಮೌನ!!
ಮಂಜುಮಣಿ ಮೈಸೂರು
- ಮಂಜುಮಣಿ ಮೈಸೂರು
06 Nov 2017, 02:12 pm
ಭಿಕ್ಷೆಯೆಂದರೆ ಇಲ್ಲದವರು
ಮಾತ್ರ ಬೇಡುವುದಲ್ಲ.
ಇದ್ದವರೂ ಬೇಡಬೇಕು
ಬೇಡುತ್ತಾರೆ ಕೂಡ;
ಈ ಸಭಾಂಗಣದಲ್ಲಿ ಎಲ್ಲರೂ
ನಮ್ಮವರೇ..! ನಿಂದಿಸುವವರಲ್ಲ,
ಬರಿದಾಗಿ ನಿಂದನೆಗೆ ಒಳಗಾದವರು;
ಸಾಧನೆಗೆ ಚಡಪಡಿಸಿದವರು
ಕಾಂಚಾಣಕ್ಕೆ ಹೊಸ್ತಿಲ ದಾಟಿದವರು
ಸುಖಕ್ಕಾಗಿ ಇರುಳು ಕಾದವರು
ವರುಣನಿಗಾಗಿ ಹಂಬಲಿಸಿದವರು;
ದಾರಿದ್ರ್ಯಕ್ಕೆ ಬೇಸತ್ತು ಮಣಿದವರು
ಮಂಡಿಯೂರಿ ಬೇಡಿಕೊಂಡವರು
ಬೆಳಕಿಗಾಗಿ ಹಾತೊರೆದವರು
ಪೃಥ್ವಿಗಾಗಿ ಶಕ್ತಿ - ಯುಕ್ತಿಯಿಂದ ಮಡಿದವರು;
ದೇವ - ದೇವಸ್ಥಾನಗಳನ್ನ ಸೃಷ್ಟಿಸಿದವರು
ಜಾತಿ ಮಾಡಿಕೊಂಡು ನೀತಿ ಹೇಳುವವರು
ನಮ್ಮವರೇ... ಈ ಸಭಾಂಗಣದಲ್ಲಿ
ಜೀವ ತಳಿದು ನಿಂದವರು.
ಏಕಾಂತಪ್ರಿಯ. ಎಂ.ಬಿ
- ಏಕಾಂತಪ್ರಿಯ.
06 Nov 2017, 12:15 pm