ಓ ನನ್ನ ಗೆಳತಿ
ಎಲ್ಲಡಗಿ ನೀ ಕುಳಿತಿ
ಕೂಗುತಿಹುದು ನನ್ನೀ ಮನವು ನಿನ್ನನು
ಕೇಳಲಾರೆಯ ನನ್ನ ಮನದ ಇಂಗಿತವನು.
ನನ್ನ ಮನವು ಗಾಜಿನಷ್ಟೇ ನಾಜೂಕು
ನೀ ನೋಯಿಸಿ ಮಾಡಬೇಡ ಒಡಕು.
ನಿನ್ನ ಕಾದು ಸೊರಗಿದೆ ನಾನು
ನನ್ನ ನೋಡಿ ನಗುತಿಹನು ಅಸ್ತಂಗದ ಸೂರ್ಯನು.
ತಡೆ ಹಿಡಿದೆನು ನಿನ್ನ ಬರುವಿಕೆಗಾಗಿ ನನ್ನ ಉಸಿರನು
ತಡ ಮಾಡದೆ ಬಂದು ಉಳಿಸು ನನ್ನ ಜೀವವನ್ನು.
ಓ ನನ್ನ ಗೆಳತಿ
ಎಲ್ಲಡಗಿ ನೀ ಕುಳಿತಿ.......
ಏನೆಂದು ಗೀಚಲಿ ನಾ ಕವಿತೆಯ ಸಾಲೊಂದ
ಕಳೆದು ಹೋದ ನಿನ್ನ ನೆನಪಲ್ಲಿ ಇಂದು.
ಕಾಯುತ್ತ ಸೊರಗಿದೆ ನನ್ನ ಮನವು ನಿನಗಾಗಿ ಎಂದು......
ಹೇಳಿ ಬಿಡು ನೀ ಬರುವ ಒಂದು ಸುಳ್ಳನ್ನು
ಕಳೆದು ಬಿಡುವೆನು ನನ್ನೀ ಜೀವನವ ನೀನಿರುವೆ ಎಂದು ನಂಬಿ ನಿಜವನ್ನು.....
- ಉಮೇಶ್ .
ಸ್ವಾತಂತ್ರ್ಯ ಹೋರಾಟದಲ್ಲಿ ಮುಂದೆ ನಿಂತು ನಾಲ್ಕುಜನರ ಕಂಗಳಲ್ಲಿ ಉತ್ತೇಜ ತುಂಬಿದ ವಿರಾಧಿ ವೀರರು ನೂರಾರು ಮಂದಿ
ಹಿಂದೆ ನಿಂತು ಪ್ರಾಣತೆತ್ತು ನಾಯಕನ ಕಾಲಿಗೆ ಮಣ್ಣು ಅಂಟದಂತೆ ನೋಡಿಕೊಂಡವರು ಹಲವರು.
ಇದ್ದನೋರ್ವ ಮಹಾತ್ಮ ಕಾಣಲಿಲ್ಲ ಯಾರಿಗಿಂದು ಅವನ ಜೀವನ ಶೈಲಿಯ ಯತಾರ್ಥ ಹೆಸರಾದರೂ ತಿಳಿಯದಾದರು ಒಮ್ಮೆಯಾದರೂ ನೆನೆಯದಾದರು ಅಂದು ಅವರಿಂದ ಜೀವಪಡೆದ ದಲಿತವರ್ಗದ ಅಚಲಿತ ಜನಾಂಗದವರು.
ಕುದ್ಮಲ್ ರಾಂಗಾರಾವ್ ನಾಮದೆಯ ಮುನ್ನಡಿದ ಮನುಗಣಕ್ಕೆ ಇಂದಾದರು ಇವರ ಪರಿಚಯ ಆಗಿದೆಯಾ!!
ಹಿಂದುಳಿದ ವರ್ಗದ ಪದದೂಳಿ ಹಣೆಗೆ ತಾಗದೇನೆ ಕೊನೆಯುಸಿರೆಳೆದರು ನಮ್ಮ ಮಹಾತ್ಮರ ಗುರು ಕಂಡ ಕನಸು ಹೊತ್ತ ಆಸೆ ಕಣ್ಣಾರೆ ಕಾಣದೇನೆ.
ನಿತ್ಯ ನಿನ್ನ ನಗುವು ನಮ್ಮನ್ನು ಕಾಡಿ ಕೊಳ್ಳುತ್ತಿದೆ ನೀ ಸತ್ತರು ಬದುಕಿ ನಕ್ಕರೂ ನಿನ್ನ ಕಣ್ಣೀರೆ ನಮಗೆ ಆಹ್ಲಾದಕರವೆಂದು ನಗುವ ಕಿತ್ತು ಬೆಂಕಿಗೆಸದಂತಿದೆ ಸುಟ್ಟು ಬೂದಿಯಾಗೇ ಎಂದು.
ಯಾರಿರುವರು ನನಗಾಗಿ ಮಾತಲ್ಲಿ ತೋರುವ ಪ್ರೀತಿ ಮನನೊಂದ ಕ್ಷಣದಂದು ಈ ಪಾಪಿಗಳ ಪರದಿಯಿಂದ ದೂರ ಕರೆದೊಗಿ ನನ್ನ ಉಸಿರಾಡಲು ಬಿಡುವವರು.
ನಾಳೊಂದು ದಿನ ಬರುವುದೆಂದು ನಿನಗಾಗಿ ತಿಳಿಸುವರು ಈ ಕ್ಷಣದ ನೋವುಗಳ ಮರೆಗಾಗಿ ಇಂದೇ ಏತಕೆ ನನ್ನ ಈ ನರಕದಿಂದ ಬಿಡಿಸಲಾರರು ನನ್ನವರೆನ್ನುವವರು.
ಗೃಹಬಂದನ ಮಾಡಲೇನು ನಾನು ಜೀವವಿಲ್ಲದ ಜಡವಲ್ಲ ನನಗೂ ಒಂದು ಮನಸ್ಸಿದೆ ಅದರಲ್ಲೂ ನೂರಾರು ಕನಸಿನ ಚಿಗುರು ಮೊಗ್ಗಾಗಿ ಅರಳುತ್ತಿದೆ.
ಬೇಡುವೆನು ನಾನಿಂದು ಕ್ಷಣಮಾತ್ರ ಉಸಿರಾಡು ಬಿಡಿ ಎಂದು ಕಂಬನಿಯ ಭಾರವಿಲ್ಲದೆ ದಯವಿಟ್ಟು ಕೊನೆಯ ಬೇಡಿಗೆ ತೀರಿಸಿಬಿಡು ಇನ್ನೆಂದೂ ನಿಮ್ಮ ಕ್ರೂರವಾದ ಕಣ್ಣುಗಳಿಗೆ ಕಾಣುವುದಿಲ್ಲವೆಂದು ಮಾತು ನೀಡುವೆನು ಮನಸ್ಸಿನಿಂದ.
ಕನ್ನಡ ನಾಡು ಬಲು ಇಷ್ಟ
ಕನ್ನಡ ನುಡಿಯು ಶ್ರೀಮಂತ
ಕನ್ನಡ ಜನಮನ ಅತಿಶ್ರೇಷ್ಠ " ಪ "
ಕೃಷ್ಣ ಕಾವೇರಿ ತುಂಗೆಯಲಿ
ಮಿಂದ ಪುನೀತ ಈ ಕನ್ನಡ..
ಬೆಟ್ಟ ಗುಡ್ಡಗಳ ಖಗಮೃಗಗಳ
ಚೆಲುವ ನಲಿವ ನೋಟದಲಿ
ಪುಳಕೀತ ಈ ಕನ್ನಡ.. ಬೇಲೂರು ಹಂಪೆ ಪಟ್ಟದಕಲ್ಲಿನ ಶಿಲ್ಪಕಲೆಯ ವಿಶ್ವವಿಖ್ಯಾತ ಈ ಕನ್ನಡ.."ಪ"
ಪಂಪ ರನ್ನ ಪೊನ್ನರ ಪದಪುಂಜದಲಿ ಮೆರೆದ ಮಹೋನ್ನತ ಈಕನ್ನಡ..
ದಾಸರ ಶರಣರ ವಚನ ಕೀರ್ತನದಲಿ
ಮನಸೆಳೆವ ಸಂಗೀತ ಈ ಕನ್ನಡ..
ಕದಂಬ ಹೊಯ್ಸಳ ವಿಜಯನಗರವಾಳಿದ ರಾಜವೈಭವೀತ ಈ ಕನ್ನಡ.."ಪ"
ಕನ್ನಡ ಚೆಲುವೇ ರಮಣೀಯ..
ಕನ್ನಡ ಚರಿತೆಯೇ ಸ್ಮರಣೀಯ..
ಕನ್ನಡ ನುಡಿಯೇ ಸುಮಾಧುರ್ಯ..
ಕನ್ನಡ ಜನರೇ ಆದರಣೀಯ.."ಪ"