ಬಂದಿ ನಾನು ನನ್ನೊಳಗೆ ಪದಗಳ ರೂಪದಲ್ಲಿ
ಮುಂದೊಂದು ದಿನದಂದು ಕೃತಿಯಾದರು ಉಸಿರಲ್ಲೇ ಉಳಿಯುತ್ತೆ ಮನಸಲ್ಲೇ ಕುತಿರುತ್ತೆ ನನ್ನ ಕವನ ನನಗಾಗಿ.....................
ಕವನ ನನ್ನ ಕನಸಾಗಿ ಕೈಹಿಡಿದಿಲ್ಲ ಅಂದು ನಿದ್ದೆಯಿಂದೆದ್ದು ಮರೆತರೆ ಮರೆಯಾಗಲು ಇಂದು ನನ್ನ ಕಣ್ಣಿರಲ್ಲಿ ಒನ್ನೊಂದು ಅಕ್ಷರವೂ ಮಿಂದು ಪದಗಳಾಗಿ ಕಾಣುತ್ತಿದೆ ನಿಮ್ಮ ನಯನಕೆ ಇಂದು.......................
ಕಲೆದೋದ ಕಹಿ ದಿನಗಳ ನನ್ನಲ್ಲಿ ನೆನೆಯಲು
ಮತ್ತೆ ಅವನ್ನು ಮರೆಯಲು ನಿನ್ನ ನೆರವು ಬೇಕಾಗಿದೆ ಕವನ ನಿನ್ನ ಅಕ್ಕರೆ ನನಗಿಂದು ಅತ್ಯವಶ್ಯಕವಾಗಿದೆ ಕವನ..................
ಜಾರಿರಲು ಕಣ್ಣ ಹನಿಗಳು
ಸೇರಿಹೋಗಿವೆ ಉಳಿದೋದ ಮಾತುಗಳು
ತಂಪಾದ ಗಾಳಿಗೂ ಅನಿಸಿದೆ ಕೊಂಚ ಕಂಪನ
ಆಗಿರಲು ನೋವಿನ ಬಿಸಿಯುಸಿರಿನ ಸಿಂಚನ
ಮೈ ಸೋಕಿದ ತಂಪು ಗಾಳಿಯೂ
ತಂದಿದೆ ಎದೆ ಸುಡುವ ನೋವುಗಳ ನೆನಪಿನ ಹಾವಳಿಯ
ಹಕ್ಕಿಗಳ ಕಲರವು ಕಾಡಿದೆ ಮನಸ
ಏನನೊ ಹೇಳಲು ಹವಣಿಸಿ ಮೌನವಾದಂತೆ
ಎಲ್ಲಿಂದಲೊ ಬೀಸಿ ಬಂದ ತಂಗಾಳಿಯು
ಕದ್ದು ಹೋಗಲು ಯತ್ನಿಸಿದಂತನಿಸುತಿದೆ ನನ್ನುಸಿರ
ಸೂರ್ಯನು ಮಂಕಾಗುತಿರುವನು ಕತ್ತಲೆಯ ನೆನೆಪಿಸಿ
ಬೆಳಕು ಕೊಡಲು ಆಗುವುದೇನು ಆ ಶಶಿಗೂ ಕೊಂಚ ಕಸಿವಿಸಿ
ಚುಕ್ಕಿ ತಾರೆಗಳು ಕಾಣಲು ಸಿಗದೆ ಬೇಕಂತಲೆ ಮರೆಯಾದಂತೆ
ಮಾತಿಗೆ ಶುರುವಿಟ್ಟಿದ್ದ ಮರಗಿಡಗಳು ಸ್ಥಬ್ಧವಾದಂತೆ
ದೃಷ್ಟಿ ನೆಟ್ಟಲೆಲ್ಲ ನೀರವ ಮೌನ ಆವರಿಸಿದಂತೆ
ಮನಸೊಳಗೆ ತುಂಬಿರಲು ಮೌನ ಬೆಳಕಿನ ಕಿಂಡಿಯೇ ಇರದ ಕತ್ತಲೆಯಂತೆ
ಸಲಿಗೆ ಎಂದೂ ನನ್ನ ದೌರ್ಬಲ್ಯವಲ್ಲ
ಎಲ್ಲರೊಂದಿಗೆ ಜೊತೆಗೂಡಿ ಬಾಳ ಬೇಕೆಂಬುವುದೇ ನನ್ನ ಬದುಕಿನ ಕೌಶಲ್ಯ
ಸಲಿಗೆಯಿಂದ ಶಿಖರವೇರಿ ನಕಾರತ್ಮವ ನೀ ತೋರಿದರೂ ಅದಕ್ಕಿದೆ ಇಲ್ಲಿ ಪರಿಹಾರ
ಸಂಬಂಧ-ಸಲಿಗೆಯನು ಬೇರ್ಪಡಿಸಿ
ಇರುವೆನು ಒಂಟಿಯಾಗಿ, ಸುಲಿಗೆಗಾರರ ಬದಿಗೆ ಸರಿಸಿ, ಸಲಿಗೆಗಾರರ ದೂರ ಸರಿಸಿ
ಕೊನೆಗೊಂಡಿದೆ ನಂಬಿಗೆ ಕೊನೆಗೊಮ್ಮೆ
ನಿನ್ನೊಡನೆ ಸಾಯುವ ಬದಲು ಈಗಲೇ ನಿನ್ನ ತೊರೆದು ಹೋಗುವೇನೆಂದು.............
ನೂರು ಮಾತುಗಳಿಂದ ಕೂಡಿಟ್ಟುಕೊಂಡ
ನಿನ್ನ ಮೇಲಿನ ನಂಬಿಕೆ ನುಚ್ಚು ನೂರಾಗಿ ಹೋಯಿತು ನೀನು ನನ್ನ ಬೆಳಸಿಕೊಂಡ ಅಪನಂಬಿಕೆಯಿಂದ................
ಅವಸರದ ಪ್ರೀತಿ ನಟಿಸಿದರೆ ಸಾಲದು
ಮಾತಿನಲ್ಲಿ ಎಲ್ಲದಕ್ಕಿಂತ ಮಿಗಿಲಾದ ನಂಬಿಕೆ ಇಟ್ಟುಕೊಂಡಿರಬೇಕು ಮನಸಿನಲ್ಲಿ................
ಪ್ರೀತಿ ಇದ್ದಲ್ಲಿ ನೂರು ತಪ್ಪು ಕಣ್ಣಿಗೆ ಕಂಡರೂ ತಪ್ಪೇನಿಸುವುದಿಲ್ಲ ಮನಸಿನಲ್ಲಿ.................
ಅವರು ಮಾಡುವ ತಪ್ಪುಗಳಿಗಿಂತ ಅವರ ಮೇಲಿನ ಪ್ರೀತಿಯೇ ಹೆಚ್ಚಾಗಿರುತ್ತದೆ ಹೃದಯದಲ್ಲಿ...............
ಅನುಮಾನವೆಂಬ ಭೂತ ಬೆಂಬಿಡದೆ ಕಾಡುತ್ತಿದ್ದರೆ
ನಂಬಿಕೆ ಎಲ್ಲಿಂದ ಬರುವುದು ನಿನ್ನಲ್ಲಿ............
ಸಾವಿರ ಸರಿಯು ತಪ್ಪಾಗಿ ಕಾಣುವುದು ಅನುಮಾನದ ಪರಿವೆಕ್ಷಣೆಯಲ್ಲಿ...............