Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೇಹವೆಂಬ ಪಂಜರದಲ್ಲಿ
ಬಂದಿಯಾಗಿರುವೆನು ನಾನು!!
ಪಂಜರಕ್ಕೆ ತಾಗುವ ಪ್ರತಿಯೊಂದು
ಪೆಟ್ಟು ನನ್ನನ್ನು ಕಂಪಿಸುತ್ತಿದೆ!!
ಆಂತರಿಕ ಆನಂದ ತೊರೆದು
ಪ್ರಾಪಂಚಿಕ ಮಾಯೆಯಲ್ಲಿ
ಮುಳುಗಿಹೋಗಿರುವೆ ನಾನು!!
ಆಸ್ತಿ ಅಂತಸ್ತಿನ ಪರದಾಟದಲ್ಲಿ
ನನ್ನ ನಾನು ಮರೆತಿರುವೆನೇನು!!
ಜಗದ ಎಲ್ಲಾ ಸುಖಗಳು ನನ್ನವಾದರೂ
ನನಗೆ ನಿಜವಾದ ಸಂತೋಷ ಲಭಿಸುವುದಿಲ್ಲ!!
ಏಕೆಂದರೆ ಇಷ್ಟುದಿನ ನನ್ನ ದೇಹದ
ನಿರಂತರ ಶ್ರಮಕ್ಕೆ ಬಿಡುವಿಲ್ಲದೆ ಬಿದ್ದ
ಕಷ್ಟಗಳಿಗೆ ನಾನು ನೊಂದಿರುವೆನು ನನ್ನೊಳಗೆ!!
ಈ ಪಂಜರವ ದಾಟಿ ಗಾಳಿಯಲ್ಲಿ ಗಾಳಿಯಾಗಿ ಸೇರುವ ತನಕ ವಿಶ್ರಾಂತಿ ಸಿಗಲಾರದು ನನಗೆ!!
ರೂಪವಲ್ಲದ ರೂಪದಲ್ಲಿ ಶಾಶ್ವತವಲ್ಲದ ದೇಹದಲ್ಲಿ ಅನಗತ್ಯ ನೋವಿನಲ್ಲಿ ಬದುಕುತ್ತಿರುವೆ ಈ ದೇಹಕ್ಕೆ ಹೆಸರೊಂದನಿಟ್ಟುಕೊಂಡು ಮನಸ್ಸಿಲ್ಲದ ಮಾನವರ ಜೊತೆಯಲ್ಲಿ ಆತ್ಮವಾಗಿ ನೊಂದು ನಾನಿಂದು!!
- ಚುಕ್ಕಿ
27 Jul 2017, 06:57 pm
ಮನದ ಕಲ್ಪನೆಗಳ ಮಹಾಪೂರ,
ಮೂಕರಾಗ ಮೌನದ ಸ್ವರ,
ಬರವಣಿಗೆಯ ಆಗರ,
ನೊಂದ ಮನಗಳ ಮಾನಸ ಸರೋವರ
"ಈ ನನ್ನ ಕವನ".
- Spb...@#
27 Jul 2017, 05:20 pm
ಭೂವಿಯ ಪ್ರೀತಿಯ ಚಿತ್ತ
ಬಾನಿನ ನಕ್ಷತ್ರದತ್ತ
ಪ್ರೇಮ ಮಾಯದ ಮತ್ತ
ಇದು ಎಲ್ಲರ ಸ್ವತ್ತ
ಉಂಗುರ ಆಕಾರ ಕತ್ತ
ನೇರ ಕಾಣುವ ಬೆತ್ತ
ಶುಕ್ರ ಹೋಳೆಯುವದು ಬೆಳಗಿನ ಹೊತ್ತ
ಉಣಬಡಿಸುವದು ನೆನಪಿನ ತುತ್ತ
ಕರಿಮಣಿಯಲಿ ಮಿಂಚುವ ಮುತ್ತ
ಕಳಕೊಳ್ಳಬಾರದೆಂಬ ಗತ್ತ
ಹಠ ಮಾಡಿಯಾದರು ಪಡೆಯುವುದು ಅತ್ತ
ಬೆಳ್ಳಿ ಕಾಲುಂಗುರ ಸುತ್ತ
ಬಂಗಾರ ಮೂಗಿನ ನತ್ತ
ಅಲಂಕಾರ ರೂಪದ ಮೊತ್ತ
ಹೊಟ್ಟೆ ತುಂಬಿಸುವ ಭತ್ತ
ಹಿರೇಉಳ್ಳಿಗೇರಿ ಕರೆಮ್ಮ ಪೂಜಿಸಲ್ಪಡುವುದು ಹುತ್ತ
- MB
27 Jul 2017, 04:15 pm
ಕೀರ್ತಿಗಾಗಿ ಹುಟ್ಟಿದ ಕವಿತೆಯಲ್ಲ ಮಮತೆಯ ಮಾತೆಯ ಲಾಲಿ ಹಾಡು
ಗರಿ ಗರಿ ನೋಟುಗಳಲ್ಲ. ಪ್ರತಿಯೊಬ್ಬ ಭಾರತೀಯನ ಉಸಿರಾಟ
ಪಾಠ ಪರೀಕ್ಷೆಗಳಲ್ಲ ನಮ್ಮಂತರಂಗದ ಶಾಂತಿಯ ತೋಟ
ವರ್ಷಕ್ಕೊಮ್ಮೆ ಬರುವ ಹಬ್ಬವಲ್ಲ ದಿನದಿನದ ಪ್ರತಿಕ್ಷಣದ ಹೃದಯದ ಮಿಡಿತ
ಪ್ರಶಾಂತ ಕಡಲು ಬುಡ್ಡೀದೀಪ ನಮ್ಮ ಎದೆಯ ಕಂದೀಲು
....
- ದೊಡ್ಡಕಲ್ಲಹಳ್ಳಿನಾರಾಯಣಪ್ಪ
26 Jul 2017, 11:22 pm
ತಿಳಿದಿದೆಯೇ ಚೆಲುವೆ
ನನ್ನ ನಗುವಿನ ಅಳು ಏಕೆಂದು?
ತಿಳಿದಿದೆಯೇ ಚೆಲುವೆ
ನನ್ನ ಕಣ್ಣೀರಾಗೆ ಬಿದ್ದ ಕೊನೆ ಕನಸು ಯಾವುದೆಂದು?
ತಿಳಿದಿದೆಯೇ ಚೆಲುವೆ
ನನ್ನ ಮಂದಹಾಸದ ಕೊನೆ ಆಸೆ ಯಾವುದೆಂದು?
ತಿಳಿದಿದೆಯೇ ಚೆಲುವೆ
ನನ್ನ ಉಸಿರು ಉಸುರುತ್ತಿರುವ ಹೆಸರು ಯಾರದೆಂದು?
ತಿಳಿದಿದೆಯೇ ಚೆಲುವೆ
ನನ್ನ ಕಣ್ಣು ಕಾಣದ ಹೃದಯ ಕಂಡ ಮೊದಲ ಹೆಣ್ಣು ಯಾರೆಂದು?
ಇವೆಲ್ಲವನೂ ತಿಳಿಸುವೆ ನಾನಿಂದು
ಇದೆಲ್ಲದಕ್ಕೂ ಉತ್ತರ ನೀನೆಂದು........!
- ಅಕವಿ
26 Jul 2017, 09:24 pm
ತಿಳಿದಿದೆಯೇ ಚೆಲುವೆ
ಏಳು ಅದ್ಭುತಗಳಲ್ಲಿ ನಿನ್ನ ಕಣ್ಣುಗಳು ಎಷ್ಟನೆಯದೆಂದು?
ತಿಳಿದಿದೆಯೇ ಚೆಲುವೆ
ಷಡ್ರಸಗಳಲ್ಲಿ ನಿನ್ನ ತುಟಿಗಳು ಎಷ್ಟನೇ ರಸವೆಂದು?
ತಿಳಿದಿದೆಯೇ ಚೆಲುವೆ
ದೇವಲೋಕದ ಅಪ್ಸರಸೆಗಳಲಿ ನೀನು ಎಷ್ಟನೆಯವಳೆಂದು?
ತಿಳಿದಿದೆಯೆ ಚೆಲುವೆ
ಸಪ್ತ ಸರೋವರಗಳಲಿ ನಿನ್ನ ಪ್ರೀತಿ ಎಷ್ಟನೆ ಸರೋವರವೆಂದು?
ಇವೆಲ್ಲವನೂ ತಿಳಿಸುವೆ ನಾನಿಂದು
ಇದೆಲ್ಲದರಲ್ಲೂ ನೀನೇ ಮಿಗಿಲೆಂದು......!!!!!
- ಅಕವಿ
26 Jul 2017, 09:13 pm
ಉಸಿರಲ್ಲಿ ಉಸಿರಾಗಿ ನನ್ನ ಬಚ್ಚಿಡುವೆಯಾ ಲೋಕಕ್ಕೆ ಕಾಣದಂತೆ..............
ಮಡಿಲಲ್ಲಿ ಮಗುವಾಗಿ ನನ್ನ ಕಾಪಾಡುವೆಯಾ
ನರರ ಕಣ್ಣಿನ ಶಾಖ ನನಗೆ ತಾಗದಂತೆ..............
ನನ್ನಲ್ಲಿನ ಕಾಂತಿಗೆ ಕತ್ತಲಾಗಿ ನೀನಿರುವೆಯಾ
ನನ್ನ ನೆರಳುಕೂಡ ನನ್ನ ಕದಿಯದಂತೆ........
ಕೈಯಲ್ಲಿ ಬೆಚ್ಚಗಿನ ಬೆವರಾಗಿ ನೀನಿರುವೆಯಾ ತಂಗಾಳಿ ನನ್ನಲ್ಲಿ ಸೇರಿದಾಗ ದೂರ ಸರಿಸಿ ಮತ್ತೆ ಮರೆಯಾಗುವಂತೆ.............
ಕನಸಲ್ಲಿ ನಲಿವಾಗಿ ಮನಸಲ್ಲಿ ನೆಲೆಯಾಗಿ
ನನ್ನಲ್ಲಿ ನಿನಾಗಿ ಕರೆದಲ್ಲಿ ರೂಪವಾಗಿ ನೀ ಸೇರುವೆಯಾ ಪದಗಳಲ್ಲಿ ಜನಿಸಿದ ಅಕ್ಷರಗಳಾಗಿ
ಬರೆವ ನನ್ನ ಕೈಗಳಿಗೆ ನಗೆಯ ಶಾಯಿಯಂತೆ........
- ಚುಕ್ಕಿ
26 Jul 2017, 08:39 pm
ಬಡವನಿಗೂ ಹಣವಂತನಿಗೂ ಒಂದೇ ಚಿಂತೆ.
ಅದು ಹೊಟ್ಟೆಯ ಚಿಂತೆ.
ಬಡವನಿಗೆ ಹೊಟ್ಟೆ ತುಂಬಿಸುವ ಚಿಂತೆ,
ಹಣವಂತನಿಗೆ ಹೊಟ್ಟೆ ಕರಗಿಸುವ ಚಿಂತೆ !
- ಶ್ರೀಗೋ.
26 Jul 2017, 08:29 pm
ಮುಗ್ದ ಹೇಂಟೆಯು
ಮುದ್ದಿನಿಂದ ಮೊಟ್ಟೆಯಿಟ್ಟು
ಮರಿಯ ಮಾಡಿತು,ನೂರು ಕಾಲ ಬಾಳಿರಿ ನರರ ದೃಷ್ಟಿ ತಾಗದೆ
ಎಂದಿತು ಉಸಿರಕೊಟ್ಟು
ಕರುಳ ಕುಡಿಗಳ
ಜೋಪಾನ ಮಾಡಿತು
ಹದ್ದು-ಕಾಗೆಯ ಕಂಗಳ
ಮರೆಮಾಚಿ ನಾಯಿ- ನರಿಗಳ
ಸನಿಹದಿಂದ ದೂರವಿರಿಸಿ
ಕಿತ್ತು ತಿನ್ನುವ ಒಡೆಯನಿಹನು
ಪಕ್ಕದಲ್ಲೆ,ಎಂಬುದ ಮರೆತು
ಮುದ್ದಿನಿಂದ ತುತ್ತುನೀಡಿತು
ಹರುಷದಲಿ ,
ದಷ್ಟಪುಷ್ಟವಾಗಿ ಬೆಳೆದಿದ್ದ
ಕೋಳಿ ಎಡೆಗೆ ಗಮನವರಿಯಿತು
ತಾಯಿ-ಮಕ್ಕಳ ಅಗಲಿಕೆಗೆ
ಮುನ್ನುಗ್ಗಿದ ಹುರುಪಿನಲಿ
ನೀ ಉಂಡದ್ದು ಉಳಿಯುವುದು
ಕ್ಷಣಕಾಲ
ನಾನಿದ್ದರೆ ಸಂಬಂದ ಉಳಿವುದು
ಅನುಗಾಲ
ಯೋಚಿಸಿ ನೋಡು
ಬಾಳಲು ಬಿಡು!
ಶಾರಧ
- ಶಕುಂತಲಾ
26 Jul 2017, 06:47 pm
ಬೇರೆಯವರು ಮಾಡಲಾಗದ್ದನ್ನು ನಾನು ಮಾಡಿದೆ
ಬೇರೆಯವರು ಹೆದರಿ ಹೋಗಲಾಗದ ಜಾಗಕ್ಕೆ ನಾ ಹೋದೆ
ಏನನ್ನೂ ಕೊಡಲಾರದವರನ್ನು ಏನೋ ಕೇಳಿದೆ
ಇಷ್ಟವಿಲ್ಲದಿದ್ದರೂ ಶಾಶ್ವತ ಒಂಟಿತನವನ್ನು ಸ್ವೀಕರಿಸಿದೆ
ಭಯೋತ್ಪಾದಕನ ಮುಖವನ್ನು ನೋಡಿದೆ
ಭಯದ ಭಾವವನ್ನು ಕೊಂದೆ
ಭಾರತಾಂಬೆಯ ಮಮತೆಯ ಅನುಭವಿಸಿದೆ
ಯುದ್ಧದಲ್ಲಿ ಕಣ್ಣೀರಿಟ್ಟೆ,ನೊಂದು ಬೆಂದೆ,
ಭರವಸೆಯ ಮೆಟ್ಟಿಲು ಹತ್ತಲು ಛಲಬಿಡದೆ ಹೋರಾಡಿದೆ
ಸತ್ತರೂ ಬದುಕಿದರೂ ನಾ ಹೇಳಬಯಸುವುದೊಂದೇ
ನಾನೊಬ್ಬ ಸೈನಿಕ ಉಸಿರಿರುವ ತನಕ ಈ ನಾಡಿನ ರಕ್ಷಕ
- ಎಸ್.ಬಿ
26 Jul 2017, 11:54 am