Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹರಿಯುತ್ತಿರುವ ನದಿಯೊಂದು
ಎಂದೂ ನಿಲ್ಲದೆ ಓಡುತಿಹುದು
ಅದರ ಓಟದೊಳಗೆನ್ನ
ಹಾಯಿದೋಣಿ ಸಿಲುಕಿಹುದು||
ಎಲ್ಲೋ ತಿರುಗಿ, ಹೇಗೋ ಹೊರಳಿ
ಏಗುತ ತಾ ಮತ್ತೆ ಕೆರಳಿ
ಎತ್ತಿ ಕುಣಿಸಿ, ಮತ್ತೆ ರಮಿಸಿ
ಮುಂದೆ ಕೊಂಡೊಯ್ದದೂ||
ಅದೋ ನೋಡು ಮಿಂಚುಳ್ಳಿ
ಮೀನು ಹಿಡಿಯುವ ಮಹಾ ಕಳ್ಳಿ
ರೂಪವೇನೋ ಚೆಂದುಳ್ಳಿ
ಮನಸು ಮಾತ್ರ ಊಸರವಳ್ಳಿ||
ಬಂದೇ ಹೋಯ್ತು ಜೋಗದಾ ಗುಂಡಿ
ಸಿಗಲೇ ಇಲ್ಲ ಪ್ರೇಮದಾ ಕಿಂಡಿ
ಪ್ರೀತಿ ದೀಪ ಹೋಯ್ತು ನಂದಿ
ಪ್ರಪಾತದೊಳಗೆ ಬದುಕ ಬಂಡಿ||
- ಶ್ರೀಗೋ.
24 Jul 2017, 10:26 pm
ಕಡಲಿನಲಿ ಸಾಗುತಿಹ
ದೋಣಿಯಲಿ ಅಂಬಿಗನು
ಹರಿಗೋಲ ತಾ ಹಿಡಿದು
ಹಾಡುತಲಿ ಸಾಗಿಹನು!!
ಬಾನಿನಲಿ ಹಾರುತಿಹ
ಹಕ್ಕಿಗಳ ಸಾಲೊಂದು
ಅಂಬಿನ ಧನಿ ಕೇಳಿ
ತಲೆದೂಗಿ ಬಂದಿಹವು!!
ಸೂರ್ಯನ ರಶ್ಮಿಯದು
ನೀರಿನಲಿ ಹೊಳೆಯುತಲಿ
ಸಾಗಿಹುದು ಅಂಬಿಗನ
ಪಯಣದಿ ಒಡಗೂಡಿ!!
ನೀರಿನಲಿ ಮೀನುಗಳು
ಹರುಷದಿ ಬಳುಕುತಲಿ
ಆಡಿ ನರ್ತಿಸುತಿಹವು
ಅಂಬಿಗನ ಗಾನ ಕೇಳಿ!!
- ಪಿ.ಜಿ.ಜ್ಯೋತಿ
24 Jul 2017, 09:31 pm
ನನ್ನವಳೆಂದರೆ ಮುಳುಗೋ ಸೂರ್ಯನ
ಕಿರಣಗಳ ಹಾಗೇ ಅತಿಯಾಗಿ ಮಿಂಚುತ್ತಾ
ಮದ್ದಾದ ಮನಸ್ಸುಗಳ ಸೆಳೆಯುತ್ತಾ..
ಸಂಚರಿಸಿ ಸಂಚರಿಸಿ ಕೊನೆಯಲ್ಲಿ
ಕಣ್ಮರೆಯಾಗುವ ಚಲುವೆ ನನ್ನವಳು..
ಮನದ ಗೂಡಲ್ಲಿ ನಿನ್ನದೇ ನೆನಪು..
..
- ಪ್ರೀತಿನೀಇಲ್ಲದೆ
24 Jul 2017, 07:19 pm
ಅದು ನದಿಯ ತೀರ
ಅಲ್ಲಿ ಬರೆದೆ ನಿನ್ನ ಹೆಸರ
ಅಲೆಗಳೆದ್ದರೂ
ತೀರಕೆ ಅಪ್ಪಳಿಸಿದರೂ
ಅಳಸಿ ಹೋಗದು ನಿನ್ನ ಹೆಸರು
ಏಕೆಂದು ಹೇಳುವೆಯಾ?
ಏಕೆಂದರೆ ಆ ನದಿಯ ತೀರ, ನನ್ನ ಹೃದಯ!
ಅದು ಆಕಾಶದ ಅಂಗಳ
ಅಲ್ಲಿ ಕಂಡೆ ನಿನ್ನ ಕಂಗಳ
ಸಿಡಿಲೇ ಬಡಿಯಲು
ಗುಡುಗೇ ಬರಲು
ಕಾಣೆಯಾಗವು ನಿನ್ನ ಕಂಗಳು
ಏಕೆಂದು ಹೇಳುವೆಯಾ?
ಏಕೆಂದರೆ ಆ ಆಕಾಶದ ಅಂಗಳ, ನನ್ನ ಹೃದಯ!
ಅದು ಬೆಳದಿಂಗಳ ತಾವರೆ
ಅಲ್ಲಿ ಕಂಡೆ ಮುದ್ದಾದ ನಿನ್ನ ಚೆಹರೆ
ಬಿರುಗಾಳಿ ಬಂದರೆ
ಮುಂಗಾರು ಸುರಿದರೆ
ಕಳೆಗುಂದದು ನಿನ್ನ ಚೆಹರೆ
ಏಕೆಂದು ಹೇಳುವೆಯಾ?
ಏಕೆಂದರೆ ಆ ಬೆಳದಿಂಗಳ ತಾವರೆ, ನನ್ನ ಹೃದಯ!
ಅದು ಜೇನುಗಳೇ ತುಂಬಿರುವ ಕುಟೀರ
ಅಲ್ಲಿ ಕಂಡೆ ಮಧು ತುಂಬಿದ ನಿನ್ನಧರ
ಬೆರೆತರೂ ಬೇವು
ಸೋಕಿದರೂ ವಿಷವು
ಕಹಿಯಾಗದು ನಿನ್ನ ಅಮೃತದ ಅಧರವು
ಏಕೆಂದು ಹೇಳುವೆಯಾ?
ಏಕೆಂದರೆ ಆ ಜೇನುಗಳ ಕುಟೀರ, ನನ್ನ ಹೃದಯ!
- ಅಕವಿ
24 Jul 2017, 05:25 pm
ಕಾಮಧೇನು ಧರೆಗೆ ಬಂದರೂ
ಜನರ ಹಸಿವು ನೀಗದು!!
ಅವರ ಮನದ ದಾಹದ ಬುತ್ತಿ
ಎಂದು ಖಾಲಿ ಆಗದು!!
ಆಸೆ ಎಂಬ ಕೂಸು ಹೊತ್ತು
ಸಾಗುವವರೇ ಎಲ್ಲರೂ!!
ಕೂಸು ಬೆಳೆದು ದೊಡ್ಡದಾದರೂ
ಮರಳಿ ಆಸೆ ಪಡುವರು!!
ಏನಿದು ಯಾವ ಮೋಹದ
ಹಸಿವು ಜನರನು ಸುತ್ತಿಕೊಂಡಿದೆ!!
ಸಾವನ್ನು ಬೆನ್ನಿಗೆ ಕಟ್ಟಿಕೊಂಡರೂ
ಏಕೆ ಈ ಭಾವ ಅವರನು ಮುತ್ತಿದೆ!!
- ಪಿ.ಜಿ.ಜ್ಯೋತಿ
24 Jul 2017, 11:20 am
ಸಂತಸದ ಗಾಳಿ ಬೀಸುವ ಗಳಿಗೆ
ದುಃಖವೆಲ್ಲ ತೂರಿ ಹೋಗಲಿ ದೂರಕೆ!!
ಮನದ ದುಗುಡದ ಮುಖವಾಡವು
ತಾ ಕಳಚಿ ಉರುಳಲಿ ನೆಲಕ್ಕೆ!!
ವಿಸ್ವಾಸದ ಸೇತುವೆಯ ಮೇಲೆ
ಸಾಗಿ ಮುನ್ನಡೆಯಲಿ ಬದುಕಿನ ನಡಿಗೆ!!
ನಂಬಿಕೆಯೇ ಆಧಾರ ಸ್ತಂಭವಾಗಿ
ಕೈ ಹಿಡಿದು ನಡೆಸಲೀ ಸದಾ ಹೀಗೆ!!
ಮನಕೆ ಹಿತ ಎನಿಸುವ ಬದುಕನು ಕಟ್ಟಿ
ಬಾಳ ಬಯಸುವ ಕನಸು ನನಸಾಗಲಿ!!
ಮುಗಿಲ ಎತ್ತರಕ್ಕೆ ಬೆಳೆದು ಬಳಲದೇ
ಎದ್ದು ನಿಲ್ಲುವ ಬದುಕು ಹಿತ ನೀಡಲಿ!!
- ಪಿ.ಜಿ.ಜ್ಯೋತಿ
24 Jul 2017, 11:03 am
ರಾತ್ರಿಯು ಕಳೆಯುತಲಿ
ಕನಸುಗಳು ಕರಗುತಿವೆ!!
ಚಂದಿರನೇ ನೀ ನೋಡಿ
ನಗುತಲಿ ಇರುವೆಯಾ!!
ಕನಸಿನಲಿ ನನ್ನವಳ
ಕಾಣುವುದೇ ನೆಮ್ಮದಿಯು!!
ಬೆಳಕು ಹರಿದರೆ ಅವಳು
ನಿನ್ನ ಸೇರುವಳು!!
ಬೇಸರವು ದಿನವೆಲ್ಲ
ಗೋಚರಿಸಿ ನನ್ನ ಒಳಗೆ!!
ಮತ್ತೆ ನೆನೆಯಲೇ ಅವಳ
ರಾತ್ರಿಯ ಕನಸಿನಲ್ಲಿ!!
ಕನಸಿನಲಿ ಬಂದವಳು
ಹಿತ ಉಣಿಸಿ ಹೋಗುವಳು!!
ಹಗಲಿನಲಿ ತಣಿಸು ಬಾರೇ
ನೀ ವಿರಹದ ಹಸಿವ!!
- ಪಿ.ಜಿ.ಜ್ಯೋತಿ
24 Jul 2017, 10:46 am
ಮೂಡಣದಿ ಮುಂಜಾನೆ
ಹೊಂಬೆಳಕ ಆರತಿ!!
ಪಡುವಣದಿ ಕಡಲಿನಲಿ
ಅಂಬಿಗನು ಸಾರತಿ!!
ತೆಂಕಣದಿ ಓಡುತಿರುವ
ಮೋಡಗಳ ಸಾಲಿದೆ!!
ಬಡಗಣದಿ ಹಾರುತಿರುವ
ಹಕ್ಕಿಗಳ ಗುಂಪಿದೆ!!
ಎಲ್ಲೆಲ್ಲೂ ಸೌಂದರ್ಯವು
ಕಣ್ಣ ತುಂಬಿಕೊಂಡಿದೆ!!
ಅದ ನೋಡುತಲಿ ಕವಿಯ
ಮನ ಎಲ್ಲಿಗೋ ಓಡಿದೆ!!
- ಪಿ.ಜಿ.ಜ್ಯೋತಿ
24 Jul 2017, 10:16 am
ಕೋಗಿಲೆಯು ನೀನು ನಿನ್ನ ಸುಮಧುರ ಕಂಠಸಿರಿಯು ನಾನು.
ದೋಣಿ ನೀನು ಅದರ ಉಟ್ಟು ನಾನು,
ನೆನಪುಗಳ ಸಾಗರ ನೀ ಅದನ್ನಡಗಿಸಿರುವ ಮನಸೆಂಬ ಸರೋವರ ನಾನು,
ಸಾಗಲಿ ನಮ್ಮಿಬ್ಬರ ನೆನಪಿನ ಪಯಣ ಎಂದೂ ಹೀಗೆ,
ಮುಗಿಯದ ಸಪ್ತಸಾಗರ ಕಡಲ ತೀರದ
ಮುಗಿಲ ಹಾಗೆ..
..Spb..@#
- Spb...@#
24 Jul 2017, 09:12 am
ಅವಳು ಅಳುವ ಮುನ್ನ
ನಾ ಅವಳ ನಗಿಸಲೇ ಬೇಕು!!
ಕಣ್ಣ ಹನಿಗಳ ಮೇಲೂ ಅವಳ
ಖುಷಿಯ ಬರೆಯಲೇ ಬೇಕು!!
ಇರುಳಿನಲ್ಲಿ ಭಯವ ತರುವ
ಆ ಕಪ್ಪು ಛಾಯೆ ಅಳಿಸ ಬೇಕು!!
ದೀಪದಂತೆ ಅವಳ ಬದುಕಿಗೆ
ಬೆಳಕನು ನಾ ತೋರಬೇಕು!!
ಹಗಲಿನಲ್ಲಿ ನೆರಳಿನಂತೆ
ಅವಳಿಗೆ ಅಂಟಿ ನಡೆಯಬೇಕು!!
ಒಂಟಿ ತನದ ದುಗುಡ ಅಳಿಸಿ
ಹಿತವನು ನಾ ನೀಡಬೇಕು!!
- ಪಿ.ಜಿ.ಜ್ಯೋತಿ
24 Jul 2017, 08:54 am