ನನಗೆಂದು ಮುಗಿಯದು ಬರೆಯುವಾಸೆ
ಇಂದೇಕೊ ಖಾಲಿ ಎನಿಸುತ್ತಿದೆ ಭಾವನೆಗಳ ಮೂಸೆ
ಬಣಗುಡುತಿದೆ ಮೊಗೆದಾಗಲೆಲ್ಲ ಸಿಗುತ್ತಿದ್ದ ಪದಗಳ ಬೊಗಸೆ
ಎಲ್ಲಿ ಅಡಗಿರುವೆ ಪದಗಳ ಪೋಣಿಸಿ ಭಾವಗಳ ಸೇರಿಸುವ ಸೊಗಸೆ....
ಒಂಟಿಯಾದಗಲು ಪದಗಳೆ ಜೊತೆಯು
ಕೂಡಿದಾಗಲು ಇದರಲೆ ಹರಿಯುವುದು ಭಾವಗಳ ನದಿಯು
ಇದರಲೆ ಇರುವುದು ಹತಾಶೆಯ ಮುಳುಗಿಸುವ ಅಲೆಯು
ಇದರಲೆ ಹುಟ್ಟುವುದು ನಗುವಿನ ಸೆಲೆಯು
ಭಾವಗಳು ಪದಗಳ ಸೇರಿ ಸೃಷ್ಟಿಸುವ ಈ ಪಯಣಕೆ ಆಗಲೆ ಕೊನೆಯಿರದ ಪಯಣಿಯು.....
ಕನಸಿನ ಉಸ್ತುವಾರಿಗೊಂದು ಕವನ
ಮನಸಿನ ಶಾಯರಿಗೊಂದು ಕವಿತೆ
ನೋವಿನ ಅಮಲಿನ ಭಾವಕ್ಕೊಂದು
ಖುಷಿಯ ನಗುವ ಹರಡಲಿಕ್ಕೆ ಮತ್ತೊಂದು
ಕಂಡ ಕಾಣಲಾಗದದ್ದಕ್ಕೆಲ್ಲ ಮಗದೊಂದು
ಆದರೂ ಬರೆಯಲು ಏನು ತೋಚುತ್ತಿಲ್ಲ ನನಗಿಂದು.....
ಅಂದು ಎಡೆಬಿಡದೆ ಸುರಿದ ಮಳೆಯು
ನಿನ್ನ ನೆನಪಿನ ಪ್ರವಾಹ ಹರಿಸಿತು.
ಕಾಡುವ ನೆನಪುಗಳಿಗೆ ಲಗಾಮು ಹಾಕುವ ಪ್ರಯತ್ನದಲಿ ಮನ ಸೋತಿತು.
ಒಳಗೊಳಗೆ ಅತ್ತು, ಸೋತು ಹೋದ ಕನಸುಗಳು ಪುನಃ ಚಿಗುರುವುದೆಂದು ಮನ ಬಯಸಿತು.
ಕಲ್ಪನೆಯ ಗೂಡಿನಿಂದ ಹೊರ ಬಂದಾಗ ಬಯಸಿದೆಲ್ಲ ಕಣ್ಣೀರ ಹನಿಯಲ್ಲಿ ಸೇರಿಕೊಂಡಿತು.
ಕವನ ಬರಿಯಲು
ಇಂಥದೇ ಕಾರಣ ಇರಬೇಕೆಂದೇನಿಲ್ಲ
ರಾತ್ರಿ ಕನಸು ಕಾಣಬೇಕೆಂದೇನಿಲ್ಲ
ಕವನ ಕೆಲಯೋಮ್ಮೆ ಏನು ಹೇಳುವುದಿಲ್ಲ
ಬತ್ತಿದ ಭತ್ತಯೋ ಸತ್ತ ಎಮ್ಮೆಯೋ
ಹೀಗೆ ಯಾವುದರ ಮೇಲಾದರೂ
ಬರಿಯ ಬಹುವುದು
ರಕ್ತ ಬತ್ತಿದ ಹೃದಯದಲ್ಲಿ
ಪ್ರೀತಿಯ ಚಿಲುಮೆ ಹುಟ್ಟಿಸಬಹುದು
ಹಸಿದ ಹೊಟ್ಟೆಯಲ್ಲಿ
ಕ್ರಾಂತಿಯ ಕಿಡಿ ಹೊತ್ತಿಸಬಹುದು
ಸದ್ಯಕ್ಕೆ ನಾನು
ಸಾಯುತಿರುವ ಸಸಿಯ
ನೀರಹಾಯಿಸಿ ಕಾಪಿಟ್ಟುಕೊಲ್ಲಬೇಕು
ಕವನ ಬರಿಯಲು ಕಾರಣ ಬೇಕೇ
ನಾನು ಒಪ್ಪಿಕೊಳ್ಳುವುದಿಲ್ಲ
ಕವನ ಬರಿಯಲು
ಕವನ ಬರಿಯಬೇಕಂದನಿಸಬೇಕಷ್ಟೇ
ಕವನ ಬರಿಯಬಹುದು