Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಧುನಿಕತೆಯಲಿ ಅವನತಿಯ ಗುಂಡಿ

ಚಿಂದಿ ತೊಟ್ಟು ಬಾಳಿದರು
ಅಂದು ಬಡತನದಲಿ
ಚಿಂದಿನೇ ಫ್ಯಾಷನ್ ಎನ್ನುವರು
ಇಂದು ಶ್ರೀಮಂತಿಕೆಯಲಿ

ಅಗುಳು ಅನ್ನವನ್ನು ಆಸ್ವಾದಿಸಿ
ಉಣ್ಣುತಿದ್ದರು ಅಂಗಲಾಚಿ
ಹಸಿವಿನಿಂದ ಬಳಲುವರನ್ನು ಅಲಕ್ಷಿಸಿ
ಮೆರೆವರು ಮೃಷ್ಠಾನ್ನವ ಮಣ್ಣಾಗಿಸಿ

ಕಾಲ ಹರಣ ಮಾಡಲು
ಮಾರ್ಗವು ಹಲವು ನೋಡಿ
ದೋಚುತಿಹರು ಬಹುಮಂದಿ
ಮೋಜಿನ ಮೋಡಿ ಮಾಡಿ

ವಿದ್ಯುತ್ ದೀಪಾಲಂಕಾರದಲಿ
ಕಾಣಬಯಸುವೆವು ನೆಮ್ಮದಿ
ಸತ್ಯಾ-ಅಸತ್ಯತೆಗಳ ಅರಿವಿಲ್ಲದೆ
ಸಾಗುವುದು ಈ ನಮ್ಮ ಜೀವನ-ನದಿ

ಮಹಿಳೆಗೆ ಮೌಲ್ಯಗಳ ಅರಿವಿಲ್ಲ
ಮಾನ ಉಳಿಸೆಂದು ಕೇಳುವರಲ್ಲ
ವಿದೇಶಿಯರ ಮೋಡಿಗೆ ಮನಚೆಲ್ಲಿ
ಕೊರಗುತಿರುವರು ಕಣ್ಣೀರಚೆಲ್ಲಿ

ಸ್ವಾಭಿಮಾನ ನಮಗೆ ಬಹುಮಾನ
ಆಗದಿರಲಿ ಎಂದೆಂದೂ ಅವಸಾನ
ನಾಡ ಸ್ತ್ರೀಯರ ಸಂರಕ್ಷಣೆ
ಭಾರತಮಾತೆಗೆ ಭೂಷಣ

ಇರಬೇಕು ಮಹಿಳೆಗೆ ಉತ್ತಮ
ನಡೆ- ನುಡಿ ಅದೆ ಅಂತಿಮ
ಕೆಲವು ಸ್ತ್ರೀಯರ ಫ್ಯಾಷನ್
ಇಂದಿನ ಅನಾಹುತಕ್ಕೆ ಆಹ್ವಾನ
ಇನ್ನೆಲ್ಲಿದೆ ನಮಗೆ ಸಮಾಧಾನ

ಶಾರಧ

- ಶಕುಂತಲಾ

08 May 2017, 03:33 pm

ಹಾಗೆ ಸುಮ್ಮನೆ ,ನೆನಪುಗಳು ಕಾಡುತಿದೆ ಮೆಲ್ಲನೆ...

ಅವಳ ಸವಿ ನೆನಪಲಿ
ಬರೆದ ಕವಿತೆಗಳು ಅದೆಷ್ಟೋ.....
ಇಂದಿಗೂ ನನ್ನೆದೆಯಲಿ ಉಳಿದಿರುವುದು ...
ಅವಳ ನೆನಪುಗಳು ಒಂದಿಷ್ಟು.....

ಅವಳ ಸವಿ ನೆನಪಲಿ
ಕಳೆಯುತ್ತಿರುವೆ ದಿನ ನಾ ಇಂದು...
ಅವಳು ದೂರಾದರೇನು
ನೆನಪುಗಳು ಸದಾ ಇರಲಿ ನನ್ನೆದೆಯಲಿ
ಇಂದು-ಎಂದೆಂದೂ....
Krishna billadi melbailu..

- krishna Billadi melbailu

08 May 2017, 02:22 pm

ನಗು?

ಪ್ರೀತಿಯ ಎಲ್ಲ ಅದ್ಭುತಗಳನ್ನು
ಒಂದೇ ಕವಿತೆಯಲ್ಲಿ ಸೆರೆ ಹಿಡಿಯೋಣವೆಂದು
ಬರೆಯುತ್ತಾ ಕುಳಿತೆ
ಈ ಇಬ್ಬರು ತಂದ ತಲೆನೋವಿನಿಂದ
ಮೌನದ ಕಗ್ಗತ್ತಲ ಕಾಡಿನಲ್ಲಿ ಬಾವಪೂರ್ಣ
ಅರ್ಥಪೂರ್ಣ ಶಬ್ದಗಳನ್ನ ಹುಡಕದಾದೆ.
ಅಕ್ಷರ ಕಾಣದ ಖಾಲಿ ಹಾಳೆಗಳು ಮೆಲ್ಲನೆ
ತೂರಿ ಬಂದ ಗಾಳಿಗೆ ಹಾರಾಡುತ್ತಾ ಹಾಡಾಗುತ್ತ
ಗುನುಗುಡುತ್ತಾ ಕಿವಿಯಲ್ಲಿ ಮಾತಾದವು
ಮನದ ಸಂವೇದನೆಗಳಿಗೆ ,
ನೆಮ್ಮದಿ ತಂದಿತ್ತು ಶೂನ್ಯ.
ಹೊರಗಡೆ ಹೋಗಿ ತಂಗಾಳಿಗೆ
ಮೈ ಒಡ್ಡಿ ಮೆತ್ತನೆ ಹುಲ್ಲು ಹಾಸಿಗೆ ಒರಗಿ
ಮೇಲೆ ದಿಟ್ಟಿಸಿದೆ
ಕೋಟಿ ಕೋಟಿ ನಕ್ಷತ್ರಗಳು
ಉಲ್ಲಾಸದಿಂದ ನಸು ನಕ್ಕಂತಾಯಿತು .

- ಶಶಿಧರ ಹೆಚ್ ಎನ್

08 May 2017, 11:44 am

ಮಿತ್ರ

ಜೀವನದ ಅತ್ಯಮೂಲ್ಯ ಕೊಡುಗೆ ಜೊತೆಗಿರುವ ಮಿತ್ರ
ಬರುವನು ಕನ್ನಿರಿಡಲು ನಾವು ಸತ್ರ!!
ಅವನದು ಕಪಟವಿಲ್ಲದ ಮನಸು, ನಿಮಗೆಲ್ಲ ಗೊತ್ರ?
ಅವನೆ ಕನ್ರಿ ಬಂಗಾರ ಇರೊದು ಎಲ್ಲರ ಹತ್ರ!
...ಶಂಕರ್ ಸಿ ಕೆ ಎಮ್

- Shankaralingaswamy ckm

08 May 2017, 08:39 am

ಮನಸ್ಸುಗಳ ಅಂತರಂಗದ ಚಳವಳಿ

ಪರಿಸರ ನಾಶಮಾಡುವುದು,
ಮಳೆ ಬರುವುದಿಲ್ಲ ಎ೦ದು ಬೊಬ್ಬೆ ಹೊಡೆಯುವುದು.
ಕಾಡಿನಲ್ಲಿ ಊರು ನಿರ್ಮಿಸುವುದು,
ಕಾಡು ಪ್ರಾಣಿಗಳ ಹಾವಳಿ ಎ೦ದು ಕೂಗುವುದು.
ಕೆರೆ ಜಾಗದಲ್ಲಿ ಮನೆ ಕಟ್ಟುವುದು,
ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎ೦ದು ದೂರುವುದು.
ಕೆರೆಗಳನ್ನು ನು೦ಗಿ ಬಿಡುವುದು,
ಕುಡಿಯಲು ನೀರಿಲ್ಲ, ಅ೦ತರ್ಜಲ ಬತ್ತಿದೆ ಎ೦ದು ಬಾಯಿ ಬಡಿದುಕೊಳ್ಳುವುದು.
ವಾಯು ಮಾಲಿನ್ಯ ಮಾಡುವುದು,
ಶುದ್ದ ಗಾಳಿ ಇಲ್ಲ ಎ೦ದು ಕೊರಗುವುದು.
ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು,
ಆರೋಗ್ಯ ಸರಿಯಿಲ್ಲ ಎನ್ನುವುದು.
ಆಹಾರ ಕಲಬೆರಕೆ ಮಾಡುವುದು,
ರೋಗಗಳಿಗೆ ಆಹ್ವಾನ ನೀಡುವುದು.
ದಿಡೀರ್ ಶ್ರೀಮ೦ತಿಕೆಗೆ ದುರಾಸೆ ಪಡುವುದು,
ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.
ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು,
Traffic jam ಎ೦ದು ಹಲುಬುವುದು.
ಸ೦ಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು,
ಕೋಪದಲ್ಲಿ ಡ್ಯೆವೋರ್ಸ್ ಮಾಡಿಕೊಳ್ಳುವುದು.
ಹಣ ಪಡೆದು, ಜಾತಿ ನೋಡಿ ಓಟಾಕುವುದು,
ಸರ್ಕಾರ ಸರಿಯಿಲ್ಲ ಎ೦ದು ಕೊರಗುವುದು.
ಈಗಲಾದರೂ ಎಚ್ಚೆತ್ತುಕೊಳ್ಳೋಣ,
ಪರಿಸ್ಥಿತಿ ಕ್ಯೆ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ.
ಇದೆಲ್ಲಾ ಖ೦ಡಿತ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ.
ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ನಮ್ಮನ್ನಾಳುವ ಸರ್ಕಾರಗಳಿಗೆ ಮಾತ್ರ.
ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ
ಪರಿವರ್ತನೆ ಮಾಡಿಕೊಳ್ಳೋಣ ಮನಸ್ಸುಗಳ ಅಂತರಂಗದ ಚಳವಳಿ...-sukhesh Gowda

- Sukhesh

08 May 2017, 06:30 am

ಪ್ರೀತಿ

ಪ್ರೀತಿಯಾಗಲು ಪರಿಚಯವೆ ಬೇಕೆ
ಸಾಲೊಲ್ಲವೆ,
ಪರಿ ಪರಿ ವಿಧದಿ ಕೆಣಕುವ ನೋಟ
ಸಾಲೊಲ್ಲವೆ,
ತುಟಿ ಅಂಚಿನ ಕಿರುನಗೆ ಎಂಬ ಬಾಣ.

ಒಮ್ಮೊಮ್ಮೆ ಅನಿಸಿವುದು
ಇರಬೇಕು ಹೀಗೆಯೆ
ಅದ್ಬುತ ಭಾವನೆ
ಕೊನೆಯ ವರೆಗೆ.

ಹೇಳಿತು ಕೊರಗುತ
ಎಲ್ಲಿ ತ್ಯಜಿಸುವಳೊ
ಇಲ್ಲ ಮರೆತೆಬಿಡುವಳೊ
ಎಂದು ಬೆದರಿದ ಮನಸು.

ಪಡೆಯಲೇಬೇಕು
ನನ್ನವಳು ಅವಳು
ನನಗಾಗಿ ಕಾದಿಹಳು
ಎಂದ ಚಲಗಾರ ಕನಸು.

ಕನ್ನಡಿಯಲ್ಲಿ ಒಮ್ಮೆ ಮೊಗವನ್ನು ನೋಡಿ
ಚೇ ಎಂದು ತಾನೇ ದೂರಿ
ಅವಳೆಲ್ಲಿ ಸಿಗುವಳು ನನಗೆ
ಇದೆ ಅಲ್ಲವೆ ನನಸು.

ಕನಸು ನನಸುಗಳ ನಡುವೆ
ಸಾಗುತಿಹುದು ಈ ಮನ
ಸಿಕ್ಕರೆ ಸ್ವರ್ಗ
ಇಲ್ಲವೆ ಹಳೆಮಾರ್ಗ
ಇದೆ ನನ್ನ ಜೀವನ.
-ವಿಜಯತೇಜಸ್ (Abhilash).. ☺☺

- Vijayatejas

07 May 2017, 11:28 pm

ಉಸಿರೇ... ಉಸಿರೆ..

ಯಾವುದೊ ಹಕ್ಕಿಯ ಹಿಕ್ಕೆಯಲಿ ಬಿದ್ದು
ಮೊಳಕೆಯೊಡೆದ ಸಸಿ ನಾನು...!!
ಮಳೆಯ ಆಸರೆಯಲ್ಲಿಯೆ ಬದುಕು
ಕಟ್ಟಿಕೊಂಡ ಬವಣೆ ನನ್ನದು..!!!

ಅದೇಷ್ಟೊ ದನ-ಕರು ಕುರಿ-ಮೇಕೆಗಳ
ಬಾಯಿಂದ ಉಳಿದು ಅಡಿಗಳೆತ್ತರ ಬೆಳೆದು
ಬಿರುಗಾಳಿಯ ಹೊಡೆತಕ್ಕೆ ನೆಲಮುಟ್ಟಿ ಎದ್ದು ಮತ್ತದೆ ಬಾಯಾರಿಕೆಯಲಿ ಹನಿ ಮಳೆಗಾಗಿ ಕಾದು...!!

ಹತ್ತು ಹಲವು ವರ್ಷಗಳ ನಂತರ
ನನ್ನ ನಾನು ವಿಸ್ತರಿಸಿಕೊಂಡು
ಹಕ್ಕಿಪಿಕ್ಕಿಗಳಿಗೆ ಆಸರೆಯ ನೀಡಿ
ತಂಪು ನೇರಳ ನೀಡಿ, ಪ್ರಕೃತಿಯ ಭಾಗವಾಗಿದ್ದೆ...!!

ಸ್ವಾರ್ಥ ಮಾನವನೆ ನಿನ್ನ ವಿಕೃತ
ಮನಸ್ಸಿನ ಮುಂದೆ ಪ್ರಕೃತಿಯೊಳ
ನಮ್ಮ ಜೀವಕೆ ಬೆಲೆಯುಂಟೆ..?
ನನ್ನ ಬುಡಕೆ ಹಾಕಿದ ಕೊಡಲಿ ಪೆಟ್ಟಿಗೆ
ಮುಂದೆ ಕಾದಿದೆ ಪ್ರತಿಪೆಟ್ಟು ನಿನಗೆ ಅರಿವೂಂಟೆ......!!!

- ಪಿ ಅನಿ...

07 May 2017, 09:32 pm

ಹಕ್ಕಿಯಂತೆ‌ ಹಾರಲು‌‌ ಕಾಯುತಿರುವ ಮನಸು

ಹಕ್ಕಿಯಂತೆ ಹಾರಲು‌‌ ಕಾಯುತಿರುವ ಮನಸಿಗೆ ರೆಕ್ಕೆಯ ಕಟ್ಟಲೇನು
ರೆಕ್ಕೆ ಮುರಿದರೆಂದು ಹೆದರಿ ನೆಲಕಚ್ಚಿ ಕೂರಲೇನು

ಹಾರಲು‌ ಬಾರದ ಹೃದಯಕ್ಕೆ ಹಾರುವುದ ಕಲಿಸಲೇನು
ಅಪಘಾತವಾಗುವ ಭೀತಿಯಲಿ ಬಂದಿಸಿ‌ ಇಡಲೇನು‌

ಆಗಸದಂತ ವಿಸ್ತಾರವ ಒಮ್ಮೆ ಕಣ್ತುಂಬಿಕೊಳ್ಳಲೆಂದು‌ ಹಾರಲೇನು
ಅರಿಯದ ಹಾದಿಯ ‌ಪಯಣವ ನೆನೆದು ರೆಕ್ಕೆ ಮುದುರಲೇನು

ಈ ಬುವಿಯಂತ ಪಕ್ಷಿ ನೋಟವ ಕಂಡು ಹರುಷ ಪಡಲೇನು
ಎತ್ತರದಲಿ‌‌ ಹಾರಲಾಗದಿದ್ದರೆಂದು ನೆನೆದು ಸೊಗಸ ನೋಡುವುದ ಮರೆಯಲೇನು

ಹಾರುವ ದಾರಿ ಜೊತೆಗಿನ ಪಯಣಿಗರ ಜೊತೆ ನಗುತ ಸೇರಲೇನು
ಜೊತೆಗೆ ಸರಿದು ಹೋಗಬೇಕಿರುವವರ ನೆನೆದು ಅವರ ಅರಿಯಲಾಗದೆಂದು ಮೌನವಾಗಲೇನು

ಹಾರಿ ಸುತ್ತಿ ಜಗವ ನೋಡ ಬಯಸುತಿದೆ ಮನಸು
ಹಾರಿ‌‌ ಬಿಡಲೇನು‌ ಕಲ್ಪನೆಗಳ‌‌ ಮರೆತು ಕನಸಾಗಲೆಂದು ನನಸು

- ಶ್ರೀಕಾವ್ಯ

07 May 2017, 06:16 pm

ಮಾಸಿದ ಕವಿತೆ

ಒಂದೊಳ್ಳೆ ಕವಿತೆ ಮಾಸಿತು
ಅವಳ ನೆನಪಿನಂಚಲಿ
ಬಿಡದೆ ಕಾಡಿದ ನೆನಪುಗಳು ಯುಗದಾಚೆಗೆ ಎಳೆದೊಯ್ದವು
ಕನಸಿಗೆ ದೊರೆಯದ ಮುಕ್ತಿ
ಮರೆವು ಬಾರದ ನೆನಪು ಕನಸಾಗಿ ಬಂದಿಸಿತ್ತು
ಅವಳ ಮೌನ ಕಥೆಗೆ ಶೃಂಗಾರ ಕಾಣದೆ ಬಂದಿಯಾಗಿತ್ತು.

- ರವಿಕುಮಾರ

07 May 2017, 05:34 pm

ಒಡೆದ ಕನವರಿಕೆ

ಮೂರನೇ ಬಾರಿ ಅದೇ ದಾರಿಗೆ
ಹೆಜ್ಜೆಯಾದೆ ಹುಡುಗೀ
ಖಾಲಿ ಕಲ್ಲಿನ ಬೆಂಚು ಒಂದಿಷ್ಟು
ಹಳೆಯ ನೆನಪು ಮಾತ್ರ ಜೋಳಿಗೆ ತುಂಬಿಸಿ ಹಿಂದಿರುಗುತ್ತಿರುವೆ

ಬಿಸಿಲ ನೆಪಕ್ಕೆ ಮರದ ವಾರೆ ನಿಂತ
ಬೇಸಿಗೆಕಾಲ ಪದೇ ಪದೇ
ಕೊರೆಯುತ್ತದೆ ನಿನ್ನಂತೆ
ಮೌನ ಒಡೆಯಬೇಕೆಂಬ ನನ್ನ
ಉಮೇದು ಕಾಡಿಗೆ ಕಣ್ಣಿಗೆ
ಪದೇ ಪದೇ ಸೋಲುತ್ತಿತ್ತು

ಮುಗಿಲೂರಿನ ಚೆಲುವೆ
ನನ್ನ ತೊದಲುವಿಕೆಗೆ ಅರ್ಥ ಕೊಡುತ್ತಾಳೆ
ಹೊಸತೊಂದು ಅಧ್ಯಾಯ ಬರೆಯಬೇಕೆಂಬ ನನ್ನ ಹುಂಬತನ ಮರಿ ಹಾಕಿದ್ದು ಆವಾಗಲೇ

ನಿನ್ನ ಅತೀ ಸಮೀಪದಲ್ಲಿ
ತೊರೆದು ಬಂದ ಗರಿಷ್ಟ ಮಟ್ಟದ
ಆಶೆಯೊಂದಕ್ಕೆ ತಿಲಾಂಜಲಿ ಇಡದಿರು
ಒಲವಿನ ಪಾಠಶಾಲೆಗೆ
ನೂತನ ವಿದ್ಯಾರ್ಥಿ ನಾ

-ಅವಿಜ್ಞಾನಿ

- ಅವಿಜ್ಞಾನಿ

07 May 2017, 04:55 pm