ಪ್ರೀತಿಯ ಎಲ್ಲ ಅದ್ಭುತಗಳನ್ನು
ಒಂದೇ ಕವಿತೆಯಲ್ಲಿ ಸೆರೆ ಹಿಡಿಯೋಣವೆಂದು
ಬರೆಯುತ್ತಾ ಕುಳಿತೆ
ಈ ಇಬ್ಬರು ತಂದ ತಲೆನೋವಿನಿಂದ
ಮೌನದ ಕಗ್ಗತ್ತಲ ಕಾಡಿನಲ್ಲಿ ಬಾವಪೂರ್ಣ
ಅರ್ಥಪೂರ್ಣ ಶಬ್ದಗಳನ್ನ ಹುಡಕದಾದೆ.
ಅಕ್ಷರ ಕಾಣದ ಖಾಲಿ ಹಾಳೆಗಳು ಮೆಲ್ಲನೆ
ತೂರಿ ಬಂದ ಗಾಳಿಗೆ ಹಾರಾಡುತ್ತಾ ಹಾಡಾಗುತ್ತ
ಗುನುಗುಡುತ್ತಾ ಕಿವಿಯಲ್ಲಿ ಮಾತಾದವು
ಮನದ ಸಂವೇದನೆಗಳಿಗೆ ,
ನೆಮ್ಮದಿ ತಂದಿತ್ತು ಶೂನ್ಯ.
ಹೊರಗಡೆ ಹೋಗಿ ತಂಗಾಳಿಗೆ
ಮೈ ಒಡ್ಡಿ ಮೆತ್ತನೆ ಹುಲ್ಲು ಹಾಸಿಗೆ ಒರಗಿ
ಮೇಲೆ ದಿಟ್ಟಿಸಿದೆ
ಕೋಟಿ ಕೋಟಿ ನಕ್ಷತ್ರಗಳು
ಉಲ್ಲಾಸದಿಂದ ನಸು ನಕ್ಕಂತಾಯಿತು .
ಜೀವನದ ಅತ್ಯಮೂಲ್ಯ ಕೊಡುಗೆ ಜೊತೆಗಿರುವ ಮಿತ್ರ
ಬರುವನು ಕನ್ನಿರಿಡಲು ನಾವು ಸತ್ರ!!
ಅವನದು ಕಪಟವಿಲ್ಲದ ಮನಸು, ನಿಮಗೆಲ್ಲ ಗೊತ್ರ?
ಅವನೆ ಕನ್ರಿ ಬಂಗಾರ ಇರೊದು ಎಲ್ಲರ ಹತ್ರ!
...ಶಂಕರ್ ಸಿ ಕೆ ಎಮ್
ಪರಿಸರ ನಾಶಮಾಡುವುದು,
ಮಳೆ ಬರುವುದಿಲ್ಲ ಎ೦ದು ಬೊಬ್ಬೆ ಹೊಡೆಯುವುದು.
ಕಾಡಿನಲ್ಲಿ ಊರು ನಿರ್ಮಿಸುವುದು,
ಕಾಡು ಪ್ರಾಣಿಗಳ ಹಾವಳಿ ಎ೦ದು ಕೂಗುವುದು.
ಕೆರೆ ಜಾಗದಲ್ಲಿ ಮನೆ ಕಟ್ಟುವುದು,
ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತದೆ ಎ೦ದು ದೂರುವುದು.
ಕೆರೆಗಳನ್ನು ನು೦ಗಿ ಬಿಡುವುದು,
ಕುಡಿಯಲು ನೀರಿಲ್ಲ, ಅ೦ತರ್ಜಲ ಬತ್ತಿದೆ ಎ೦ದು ಬಾಯಿ ಬಡಿದುಕೊಳ್ಳುವುದು.
ವಾಯು ಮಾಲಿನ್ಯ ಮಾಡುವುದು,
ಶುದ್ದ ಗಾಳಿ ಇಲ್ಲ ಎ೦ದು ಕೊರಗುವುದು.
ಮಿತಿ ಇಲ್ಲದೆ ಸಿಗರೇಟು, ಎಣ್ಣೆ ಹೊಡೆಯುವುದು,
ಆರೋಗ್ಯ ಸರಿಯಿಲ್ಲ ಎನ್ನುವುದು.
ಆಹಾರ ಕಲಬೆರಕೆ ಮಾಡುವುದು,
ರೋಗಗಳಿಗೆ ಆಹ್ವಾನ ನೀಡುವುದು.
ದಿಡೀರ್ ಶ್ರೀಮ೦ತಿಕೆಗೆ ದುರಾಸೆ ಪಡುವುದು,
ಬಿಪಿ, ಶುಗರ್ ಹಾವಳಿಗೆ ತುತ್ತಾಗುವುದು.
ಗೊತ್ತು ಗುರಿಯಿಲ್ಲದೆ vehicle ಗಳನ್ನು ರಸ್ತೆಗಿಳಿಸುವುದು,
Traffic jam ಎ೦ದು ಹಲುಬುವುದು.
ಸ೦ಭ್ರಮದಲ್ಲಿ ಮದುವೆ ಮಾಡಿಕೊಳ್ಳುವುದು,
ಕೋಪದಲ್ಲಿ ಡ್ಯೆವೋರ್ಸ್ ಮಾಡಿಕೊಳ್ಳುವುದು.
ಹಣ ಪಡೆದು, ಜಾತಿ ನೋಡಿ ಓಟಾಕುವುದು,
ಸರ್ಕಾರ ಸರಿಯಿಲ್ಲ ಎ೦ದು ಕೊರಗುವುದು.
ಈಗಲಾದರೂ ಎಚ್ಚೆತ್ತುಕೊಳ್ಳೋಣ,
ಪರಿಸ್ಥಿತಿ ಕ್ಯೆ ಮೀರುವ ಮುನ್ನ ಕ್ರಮ ಕ್ಯೆಗೊಳ್ಳೋಣ.
ಇದೆಲ್ಲಾ ಖ೦ಡಿತ ಅನಿವಾರ್ಯ ಅಥವಾ ಅನಿರೀಕ್ಷಿತವಲ್ಲ. ಮಾನವ ನಿರ್ಮಿತ.
ಇದನ್ನೆಲ್ಲಾ ನಿಯಂತ್ರಿಸುವ ಶಕ್ತಿ, ಅಧಿಕಾರ ಇರುವುದು ನಮ್ಮನ್ನಾಳುವ ಸರ್ಕಾರಗಳಿಗೆ ಮಾತ್ರ.
ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ
ಪರಿವರ್ತನೆ ಮಾಡಿಕೊಳ್ಳೋಣ ಮನಸ್ಸುಗಳ ಅಂತರಂಗದ ಚಳವಳಿ...-sukhesh Gowda
ಯಾವುದೊ ಹಕ್ಕಿಯ ಹಿಕ್ಕೆಯಲಿ ಬಿದ್ದು
ಮೊಳಕೆಯೊಡೆದ ಸಸಿ ನಾನು...!!
ಮಳೆಯ ಆಸರೆಯಲ್ಲಿಯೆ ಬದುಕು
ಕಟ್ಟಿಕೊಂಡ ಬವಣೆ ನನ್ನದು..!!!
ಅದೇಷ್ಟೊ ದನ-ಕರು ಕುರಿ-ಮೇಕೆಗಳ
ಬಾಯಿಂದ ಉಳಿದು ಅಡಿಗಳೆತ್ತರ ಬೆಳೆದು
ಬಿರುಗಾಳಿಯ ಹೊಡೆತಕ್ಕೆ ನೆಲಮುಟ್ಟಿ ಎದ್ದು ಮತ್ತದೆ ಬಾಯಾರಿಕೆಯಲಿ ಹನಿ ಮಳೆಗಾಗಿ ಕಾದು...!!
ಹತ್ತು ಹಲವು ವರ್ಷಗಳ ನಂತರ
ನನ್ನ ನಾನು ವಿಸ್ತರಿಸಿಕೊಂಡು
ಹಕ್ಕಿಪಿಕ್ಕಿಗಳಿಗೆ ಆಸರೆಯ ನೀಡಿ
ತಂಪು ನೇರಳ ನೀಡಿ, ಪ್ರಕೃತಿಯ ಭಾಗವಾಗಿದ್ದೆ...!!
ಸ್ವಾರ್ಥ ಮಾನವನೆ ನಿನ್ನ ವಿಕೃತ
ಮನಸ್ಸಿನ ಮುಂದೆ ಪ್ರಕೃತಿಯೊಳ
ನಮ್ಮ ಜೀವಕೆ ಬೆಲೆಯುಂಟೆ..?
ನನ್ನ ಬುಡಕೆ ಹಾಕಿದ ಕೊಡಲಿ ಪೆಟ್ಟಿಗೆ
ಮುಂದೆ ಕಾದಿದೆ ಪ್ರತಿಪೆಟ್ಟು ನಿನಗೆ ಅರಿವೂಂಟೆ......!!!