ಕಲ್ಪನೆಯ ಲೋಕದಲ್ಲಿ ಸಾಗಿ,
ಸಾವಿರ ಕನಸುಗಳ ಕಂಡು,
ಇಲ್ಲ ಸಲ್ಲದ ಭ್ರಮೆಯಲ್ಲಿ ಮುಳುಗಿ,
ಪ್ರಪಂಚವನ್ನೆಲ್ಲ ತನ್ನದೆಂದುಕೊಂಡು,
ಸುಂದರ ಕನ್ಯೆಯರೊಂದಿಗೆ ಸರಸವಾಡಿ,
ಸಿರಿವಂತಿಕೆಯಲಿ ಅಹಂಕಾರವ ಮೆರದು,
ದರ್ಪದಿಂದ ತಾನೇ ಶೂರನೆನುತಿರಲು,
ಥಟ್ಟನೆ ನೆನಪಾಗುವುದು ವಾಸ್ತವ ಲೋಕ,
ಬೇಡವೆಂದರೂ ಕಾಣುವುದು ಕಟು ಸತ್ಯ,
ಒಪ್ಪಿಕೊಳ್ಳಲೇಬೇಕು ಈ ಕಟು ಸತ್ಯ.
ಅವಳ ಮೊದಲ ಮುಟ್ಟು ನಿಂತಾಗ
ಗಂಡನಲ್ಲಿ ಹುಟ್ಟುವ ಅಸಂಖ್ಯ
ಆಸೆಗಳಿಗೆ ಹೆಸರೇನೂ ಇರುವುದಿಲ್ಲ
ಸ್ತ್ರೀ ಸಮುದಾಯವೇ,
ಇವ ಯಾವತ್ತೂ ದೇವರಾಗಬಲ್ಲ ಕಲ್ಲು
*
ಹೊಟ್ಟೆ ಉಬ್ಬುವ ಪ್ರತಿದಿನವು
ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾನೆ
ತನ್ನದೇ ಪ್ರತಿರೂಪ ಹುಟ್ಟಬೇಕೆಂಬ
ಇರಾದೆ ವ್ಯಕ್ತಪಡಿಸದೇ ಇರಿಸಿಕೊಳ್ಳುತ್ತಾನೆ
*
ನೀವು ಕೂಸಿನಿಂದ ತಿನ್ನುವ ಪ್ರತಿ
ಒದೆಗೂ ಎದೆ ನೀಡಬೇಕೆಂದು
ಆಶಿಸುವವನು ಇವನೇ
ಮಹಿಳೆಯರೇ
ನಿಮ್ಮ ನೋವ ನೋಡಿ ನಗುವುದಲ್ಲ ಅವನು
ತನ್ನ ಕಂದನ ಪರಾಕ್ರಮಕ್ಕೆ ಮುಗುಳುತ್ತಾನೆಯಷ್ಟೇ
*
ಹೆರಿಗೆ ವಾರ್ಡಿನಲ್ಲಿ ನಿಮ್ಮ ಯಾತನೆ
ಡೆಲ್ಟಾ ಮಾಪಕದಲ್ಲಿ ಅಳೆಯುತ್ತಾರೆ
ಗರ್ಭಧಾರಿಣಿಗಳೇ,
ಹಾಸು ಬೆನ್ನಿಗೆ ಮುತ್ತನಿಟ್ಟ ಇವನ
ದರ್ದು ಅಳೆಯುವ ಮಾಪಕ
ಇನ್ನೂ ಕಂಡುಹಿಡಿದಿಲ್ಲ..!!
ಹುಟ್ಟಿದ ಮಾತಿಗೆ ಮರಣ, ಸತ್ತ ಮೌನಕೆ ಜನನ
ನಗುವಿನ ಅಲೆಯ ಚುಚ್ಚಿ ಕೊಲ್ಲುವ ನೋವಿನ ಅನುಮಾನ
ಕಣ್ಣ ನೀರ ಕಂಡು ಮಿಡಿದ ಹೃದಯದಲಿ ಮತ್ತದೇ ಕಣ್ಣೀರಿನ ಉತ್ಖನನ
ಮತ್ತದೇ ಅಳು ನಗುವಿನ ಪುನಾರಾಗಮನ
ದಾಹವಾಗಿದ್ದಾಗ, ನಾನು ನೀರನ್ನ(ಪ್ರೀತಿ)ರಸುತ್ತಾ
ಮರಳುಗಾಡಿನಲ್ಲಿದ್ದಾಗ ,
ಓಯಸಿಸ್ ನಂತೆ ಗೋಚರಿಸಿ
ಮುಂದೆ ಮುಂದೆ ಕರೆದೊಯ್ದು
ಬಾಳಿನುದ್ದಕೂ ನಿರಾಸೆಯ ನೀರನ್ನು
ಕುಡಿಸಿದೆಯೇಕೆ ?
ಓಯಸಿಸ್ ನಂತೆ ಕಾಣುವ ನೀರಿಗೂ
ನಿನಗೂ ವ್ಯತ್ಯಾಸವಿಲ್ಲವೇ ?
ಅದಕೆಂದೇ ಮಾಯಾಂಗನೆ ಎಂದಿರಬೇಕು ?
ಚಂಚಲೆ ಎಂದಿರಬೇಕು ಋಷಿ ಮುನಿಗಳು.
ರಚನೆ ...... ಈರಣ್ಣ .ಹೆಚ್
ಪರರೇ ನಮ್ಮವರಾಗಿ, ನಮ್ಮವರೇ ಪರರಾಗಿ
ನಮ್ಮೊಳಗೆ ಪರರು ಸೇರಿ, ಪರರೊಳಗೆ ನಮ್ಮವರ ಹುಡುಕಿ
ಕನ್ನಡ ಎನ್ನಡವಾಗಿ, ಎನ್ನಡದೊಳಗೂ ನೂರಾರು ಭಾವ ಭಾಷೆ ಸೇರಿ
ಸೊರಗಿ ಸೋತರು, ಸತ್ತು ಗೆದ್ದು ಮೆರೆಯುತಿಹುದು ಇಂತಿಪ್ಪ ಬೆಂಗಳೂರು
ಪದ ಪದವನ್ನು
ಹಾಡುಮಾಡಿ ಹಾಡುವವನು ನಾನು
ಆದರೂ ಕಾಡುತ್ತಿದೆ ಈಗೇಕೋ
ಪದಗಳ ಅಭಾವ
ಕವನದಲ್ಲಿ ಹಿಂದಿನಂತೆ
ಹೊರಹಾಕಲಾಗುತ್ತಿಲ್ಲ ಭಾವ
ಭಾವನೆಗಳೇ ಸತ್ತ ಮೇಲೆ
ನಾವು ಜೀವಂತ ಶವ
ರಕ್ತ ಬತ್ತಿದ ಹೃದಯದಲ್ಲೂ
ಪ್ರೀತಿಯ ಕಾರಂಜಿ ಉಕ್ಕಿಸಬೇಕೆಂಬ
ಆಸೆ ಒಂದೇ ನನಗೆ
ಅದಕ್ಕಾಗೆ ಗೀಚುತ್ತೇನೆ
ಆಗೊಮ್ಮೆ ಈಗೊಮ್ಮೆ ಕವನ...