Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆ, ಬೆಳೆ, ಬೆಲೆ

ಮಳೆ ಬಂದಿತು
ಬೆಳೆ ಬಂದಿತು
ಇಳೆ ಹಸಿರಾಯಿತು
ಬೆಳೆಗೆ ಬೆಲೆ ಬಂದಿತೆ?

- HarshaHL

26 Apr 2017, 12:57 pm

ಏಕೆ?

ಪ್ರೀತಿ ಮಾಡುವ ಹೊತ್ತಿನಲ್ಲಿ
ದ್ವೇಷ ಕಾರುವಿರೇಕೆ?
ಸ್ನೇಹ ಹರಡುವ ಕಾಲದಲ್ಲಿ
ಕ್ರೋಧಗೊಲ್ಲುವಿರೇಕೆ?
ಗೋಡೆ ಉರಿಳಿಸುವ ಕಾಲದಲ್ಲಿ
ಮರಳಿ ಕಟ್ಟುವ ಪ್ರಯತ್ನವೇಕೆ?
ಪ್ರೇಮವ ನಾಟಿ ಮಾಡುವಾಗ
ಕಾಟಕೊಡುವಿರೇಕೆ?

- HarshaHL

26 Apr 2017, 12:50 pm

ಕಳೆದೊಗುವ ಆಸೆಯಾಗಿದೆ

ಕಳೆದೊಗುವ ಆಸೆಯಾಗಿದೆ
ನನಗಿಂದು ಮೌನವೆಂಬ
ಪ್ರಶಾಂತವಾದ ಪ್ರಪಂಚದಲ್ಲಿ.....

ನನ್ನ ಮೌನ ಮಾತನ್ನು
ಕಟ್ಟಿ ಹಾಕುತ್ತಿದೆ ತಾನಿರುವ ಜಾಗದಲ್ಲಿ
ಮಾತು ಕೂಡಾ ಮೌನಿಯಾಗಬೇಕೆಂದು.......

ಮಾತೆಂಬ ಶತ್ರುವಿನ ಕೈಗೆ ಸಿಗಲು
ಇಷ್ಟವಿಲ್ಲ ನನಗಿಂದು..........
ಎಲ್ಲಾ ಸಮಸ್ಯೆಗಳಿಗೆ ಕಾರಣ ಈ ಮಾತು
ಮನನೋಯಿಸುವ ಮಾತೂ........

ಮೌನವೆಂಬ ಸ್ನೇಹಿತನೊಡನೆ ಸದ್ದಿಲ್ಲದೆ
ನಗುತಿರಳು ನಾನತ್ತ ಕಣ್ಣೀರು ನನಗಿಂದು
ತಿಳಿಸಿದೇ.....................

- ಚುಕ್ಕಿ

26 Apr 2017, 09:17 am

ಭರವಸೆ

ಟೀ ಎಂಬ ಅಮಲಿನಲ್ಲಿ ಎದ್ದೆ
ಬ್ರೇಕ್ಫಾಸ್ಟ್ ಎಂಬ ಆಹಾರದಲ್ಲಿ ಕುಂತೆ
ಆಫೀಸ್ ಅನ್ನೋ ಬೇಸರದಲಿ ತಯಾರಾದೆ
ಕೆಲಸ ಎಂಬ ಒತ್ತಡದಲ್ಲಿ ಬೇಸತ್ತೆ ಮಧ್ಯಾನದ ಊಟಕೆ ಹೋದೆ
ಆದ ಒತ್ತಡ ನೆನದು ಊಟವ ಮರೆತೇ
ಸಂಜೆಯೋಳು ಟೀ ಗೆ ಹೋದೆ ಅಲ್ಲಿ ಜನರ ಸರದಿ ನೋಡಿ ವಾಪಾಸ್ ಅದೇ
ರಾತ್ರಿ ಮನೆಗೆ ಹೋರಟೇ
ಆಗ ಎಲ್ಲವನ್ನು ಹೇಳಿತು ನನ್ನ ಕಣ್ಣ
ಹನೀ ಒಂದು ಅಳಬೇಡ ಕಷ್ಟ ಕ್ಕೆ
ಫಲ ಮುಂದೆ ಒಂದು ಸಿಗುತ್ತೆ ಎಂಬ ಭರವಸೆಯನು.

- PRAVEEN

26 Apr 2017, 08:09 am

ನಗು - ಅಳು

ನಾನು ಬಂದೇ ಸಮುದ್ರ ದ ಅಲೆಗಳ
ಹಾಗೆ ನಗು ನಗುತಾ
ಅದ್ರೆ ಮತ್ತೆ ವಾಪಾಸ್ ಹೋಗುವಾಗ
ನಿರಾಸೆ ಆಗಿ
ದುಃಖದ ಜೊತೆ ಕಲ್ಮಶ ಎಲ್ಲ ಹೋತು
ಓವೈದೇ
ಆಗ ಗೊತ್ತಾಯಿತು ನನಗೆ
ಖುಷಿ ಇಂದ ಅಳ್ಳುವುದು ಸುಲಭ
ಆದ್ರೆ
ದುಃಖ ಇಂದ ನಗು ವುದು ಕಷ್ಟವೆಂದು .

- PRAVEEN

26 Apr 2017, 06:44 am

ಹೊತ್ತೊಯ್ಯುವ

ಸತ್ತವರ ಹೆಣಗಳನ್ನು ಹೊತ್ತೊಯ್ಯುವ ಹೆಗಲಿಗಿಂತಾ...........
ಬದುಕಿದ್ದಾಗ ಚಿತ್ರವದೇ ಕೊಟ್ಟು
ಮಾನಸಿಕವಾಗಿ ಸಾಯಿಸುವವರ
ಸಂಖ್ಯೆಯೇ ಜಾಸ್ತಿ.............

ರಣಹದ್ದುಗಳು ಮರುಭೂಮಿಯಲ್ಲಿ
ಸತ್ತ ಹೆಣಗಳ ಕಿತ್ತು ತಿಂದರೆ.........?
ರಕ್ತ ಬಾರದೆ,ಹೊಡೆದ ಹೊಡೆತದ
ಗುರ್ತುಕಾಣದೆ , ನಗುವಲ್ಲೇ ನರಕತೋರುವವರು
ಈ ಮಾನಹೀನ ಮಂದೆಯಲ್ಲಾ .........

ನನ್ನಲ್ಲಿ ಅಡಗಿರುವ ಆಕ್ರೋಶವೆಲ್ಲಾ
ಲಾವದಂತೆ ಉಕ್ಕಿ ಬರುತ್ತಿದೆ ಇವರನ್ನೆಲ್ಲಾ
ಸುಟ್ಟು ಬೂದಿ ಮಾಡಲೂ...........
ಗಡಿದಾಟಿದ ಸಮುದ್ರವಾದರು ತನ್ನ ರಭಸವ
ಕಳೆದುಕೊಳ್ಳಬಹುದು ದೂರ ಹೋದಂತೆ.......

ಯಾರ ಮೇಲೂ ಉಳಿದಿಲ್ಲ ಕಿಂಚಿತ್ತೂ
ನಂಬಿಕೆ ನನ್ನಲ್ಲಿ ................
ಆ ಪರಶಿವನ ರುದ್ರರೂಪ ಕಂಡಿರುವರೊ
ಇಲ್ಲವೋ ತಿಳಿದಿಲ್ಲ ನನಗೆ .........

ಒಂದುದಿನಾ ಈ ಘೋರಗಳು ಹೆಚ್ಚಿದಾಗ
ಕಾಣುತ್ತೆ ಆ ಅಗಸದಿಂದ ಈ ನೋವಣೋತ್ತ ಭೂತಾಯಿಯವರೆಗೂ ಸ್ಥಳವಿಲ್ಲದೆ
ಬಿದ್ದ ಹೆಣಗಳ ರಾಶಿ ...........

ದುರ್ಜನರ ದುರ್ಮಗ ಕೊನೆಗೊಂಡು
ಆ ಕಾಲಭೈರವ ಮಾಡುವ ಆನಂದ
ತಂಡವದ ಸಾಕ್ಷಿ........................

- ಚುಕ್ಕಿ

26 Apr 2017, 12:53 am

ಕ್ರೂರರು

ಕರುಣೆ ಇಲ್ಲದ ಕ್ರೂರರು
ಈ ಪಾಪಿ ಜನರು ಎಲ್ಲಾರ
ನಗು ನುಂಗುವುದೇ ಇವರ
ಕೆಲಸ ..........

ಮತ್ತೊಬ್ಬರ ಮನವರಿತು
ಸತ್ತರು ಇವರು ನಡೆಯಲಾರರು
ಎಂತಹಾ ಕಟುಕರಿವರು......

ಮುಖವಾಡ ಧರಿಸಿರುವ
ರಾಕ್ಷಸರು.............

- ಚುಕ್ಕಿ

25 Apr 2017, 11:28 pm

ಶಶಿ..

ಕತ್ತಲ‌ ಇರುಳಿಗೆ ಆದಿತ್ಯನ ನಿರ್ಗಮನ
ಎರವಲ ಪಡೆದು ಶಶಿಯ ಆಗಮನ
ತಾ ಪಡೆದುದೆಲ್ಲವ ಸವೆಸಿ ಬೆಳಗುತಿರುವ ಜಗವ
ಉಲ್ಲಾಸಿಸಿರುವ ಮನವ ಹೆಚ್ಚಿಸಿ ಉನ್ಮಾದವ
ಇರುಳ‌ ಮೆರುಗ ಅಲಂಕರಿಸಿರುವ ತಾರೆಗಳ ಜೊತೆಗಾರನಿವ
ನಕ್ಷತ್ರ ‌ಪುಂಜವ ಜೋಡಿಸಿ ನೋಡಿ ನಗುತಲಿರುವ
ಕಾಣಬಲ್ಲ‌ ಕಲೆಗಳನ್ನೆ ಮರೆಸಿ ಮೋಡಿಮಾಡಿರುವ
ಬೆಳಗುತಲೆ‌ ಜಗವ ‌ಕಾಣದೆ ಮರೆಯಾಗಿಬಿಡುವ
ಮಡಿಯುತ ಚುಕ್ಕೆಗಳೆಲ್ಲವ ಜೊತೆಗೆ ಒಯ್ಯುವ
ನಭವನೆ ಮಂಕಾಗಿಸಿ ಬೆಳಕ ಹಿರಿಮೆಯ ಸಾರಿರುವ
ತಾನೆ ಕರಗಿ‌‌ ಸೋತರು ನಗುತ ಮತ್ತೆ ತುಂಬಿ ಬೆಳಗುವ
ಸೋಲಿಗೆ‌‌ ಸೋತು‌ ಎಲ್ಲರ‌‌ ಮರೆತು ಸಾವಿಗೆ ಹವಣಿಸುವ‌‌‌ ಬದುಕಿಗೆ ಉತ್ತರವಾಗಿರುವ

- ಶ್ರೀಕಾವ್ಯ

25 Apr 2017, 11:18 pm

ಸಮುದ್ರ ತೀರದ ಇಳಿಸಂಜೆ

ಏರಿಳಿಯುತಿರುವೆ ನನ್ನ ಭಾವನೆಲಯೇ
ಒಮ್ಮೋಮ್ಮೆ ಸದ್ದಾಗಿ ದಡಕ್ಕೆ ಬಡಿಯುವೇ
ಮತ್ತೊಮ್ಮೆ ಮೌನದಿ ಹಿಂದೆ ಸರಿಯುವೇ
ತಣ್ಣನೆ ಗಾಳಿಯೇ ನಿನ್ನಯ ಮುದ್ದಿಗೆ
ನನ್ನ ಆಸೆಯ ಬಹುದೂರ ಹಾರಿಸಲೆ
ಇಲ್ಲದೆ ಉಸಿರೆಳೆದು ಎದೆಯೊಳಗೆ ಬಂದಿಸಲೆ
ಮುಳುಗುತಿರುವೆ ಒ ರವಿಯೇ
ನನ್ನ ಕಲ್ಪನೆಗೆ ಬಣ್ಣ ತುಂಬಿರುವೆ
ಮತ್ತೊಮ್ಮೆ ಬರುವೆಯೆಂದು ನಂಬಿರುವೆ
ಇರುಳು ಸರಿಯುವ ಮುನ್ನ.....

- ABHILASH

25 Apr 2017, 11:14 pm

ನಿನ್ನದೆ ನೆನಪು...

ನೆನಪಲ್ಲೇ ಬಂದು ನೆನಪಾಗುತ್ತೀಯ ನೀನು...........
ನೆನಪನ್ನೇ ಇನ್ನೂ ನೆನಪಾಗಿಸುತ್ತಿಯ ನೀನು..........
ನಿನ್ನ ಪ್ರತಿ ನೆನಪಲ್ಲಿ ಒಂದು ಮಾತು ಇರುತ್ತೆ............
ಆದರೆ ನನ್ನ ಪ್ರತಿ ಮಾತಲ್ಲಿ ನಿನ್ನ ನೆನಪಿರುತ್ತೆ..........

ಶಾಬುದ್ದೀನ ಎಸ್ ಆರ್..

- shabudin

25 Apr 2017, 10:39 pm