ಅಂದು ಸಂಜೆ............................ .. ಅಂದು ಸಂಜೆ ಕಡುಗೆಂಪು ಬೆಳಕಿನಲಿ
ಅ ದಿಬ್ಬದ ಮೇಲಿನ ಒಂಟಿ ಮಾವಿನ ಮರದ ಕೆಳಗೆ ಕುಳಿತು ಯೋಚಿಸುತ್ತಿದ್ದೆ ಅವಳ ನೀರೀಕ್ಷೇಯಲಿ.
ತಂಗಾಳಿ ಬೀಸುತ್ತಿತ್ತು ಎಲ್ಲೆಡೆ ಚಿಗುರೋಡೆದಿತ್ತು ನನ್ನ ಮನಸ್ಸು ಆರಳಿತ್ತು.
ನನ್ನ ಮುಂದೆ ಹಾದು ಹೋಗುವ ಕಾಲುದಾರಿಯನ್ನೆ ನೋಡುತ್ತಿದ್ದೆ ತದೇಕ ಚಿತ್ತದಿಂದ.
ದೂರದಿಂದೊಂದು ಆಕಾರ ಸಕಾರಗೊಳ್ಳುತ್ತ ಬಂದು ನನ್ನೆದಿರು ನಿಂತಿತು ಆ ಹುಡುಗಿಯ ರೂಪದಲಿ.
ನನ್ನನ್ನು ನಾನು ನಂಬದಾದೆ
ಹೃದಯ ತಲ್ಲಣಿಸಿತ್ತು ತಳಮಳಗೊಂಡೆ
ಇರಲಿ ಎಂದು ಬಿಗಿದಪ್ಪಿ ಮುತ್ತು ಕೊಟ್ಟೆ
ಹಾಗೆಯೇ ಮಾಯವಾದಳು ಆ ಹುಡಗಿ. ಬೆಚ್ಚಿಬಿದ್ದು ಕೂಗಿ ಕರೆದೆ ಸುತ್ತೆಲ್ಲ ಹುಡುಕಿದೆ
ಸಿಗಲ್ಲಿಲ್ಲ ,ಕಾಣಸಲಿಲ್ಲ..
ಎಲ್ಲೆಲ್ಲೂ ಅನುರಣಿಸಿದಂತಾಯಿತು
"ನಾನು ನಿನ್ನ ಕನಸಲಿ ಮನಸಲಿ ಮಾತ್ರ ಇರುವೆ
ನಾನು ನಿನ್ನ ನೆನಪಲಿ ನೆನಪಾಗಿ ಉಳಿವೆ
ನಾನು ತಿರುಗಿಬಾರದ ನಾಡಲ್ಲಿರುವೆ".
ಬೆಳದಿಂಗಳು ಕತ್ತಲ ನುಂಗುವಾಗ
ಕಪ್ಪು ಕೊಡೆಯ ಮಳೆಯ
ಮುತ್ತುತ್ತವೆ ನನ್ನೊಳಗಿನ
ಇಶ್ಕ್ ನ ರುಜುವಾತಿಸಲು
ಮುಂಗುರಳ ಸರಿಸಿ
ಮುತ್ತಿಟ್ಟದ್ದೇ ಆಗಿದೆ ಹುಡುಗಿ
ಜಡೆ ಮಳೆಗೆ ಪ್ರಣಯದ
ಬಿಸಿ ಏರಲು ನಿನ್ನ
ಸನಿಹ ಬೆಚ್ಚಗಿರಿಸುತ್ತದೆ
ವಯಸ್ಸಿನ ಏಕಾಂತವೂ ದೂರ
ನಿಲ್ಲುವುದೂ ಆಗಲೇ
ಅರ್ಧ ಚಂದ್ರಾಕೃತಿಯ ನೆತ್ತಿ
ಚುಂಬಿಸಲು ಕಪ್ಪು ಹುಡುಗನ
ತುಟಿ ಬೆಳ್ಳಗಾಗುತ್ತದೆ
ಆಕಸ್ಮಾತ್ ನಿನ್ನೊಳಗೆ ಅನಾವಶ್ಯಕ
ನೆನಪೊಂದು ಹುಟ್ಟಿಕೊಂಡರೆ
ನನ್ನ ದೂಷಿಸದೇ ಕಳೆದ ಕಾಲವ
ಮೆಲ್ಲ ಮೆಲುಕು ಹಾಕು ಕಾಡ ಹೂವು ಮುಡಿದ
ಜಡೆಯ ನೀಳ ಮೂಡಿಯೊಂದು ಈಗಲೂ ನಾ
ತೊಟ್ಟ ಬಟ್ಟೆಗೆ ಸಿಕ್ಕಿಕೊಂಡಿದ್ದು ನೀ ಅರಿಯದ ರಹಸ್ಯ
ಗಿಡಗಂಟಿ ಮೆಟ್ಟಿ ಕೀಳುವಾಗ ಸೋರಿದ ರಕ್ತಕ್ಕೆ
ನಾ ಹೇಳಿದ ನೆಪ ಕಿವಿ ಮೇಲಿಟ್ಟ ಹೂವೆಂದ ನೀ
ತಿರುಗಿ ನನಗೆ ಕೊಟ್ಟು ಹೋದದ್ದು
ಶ್ವಾಸಿಸುತ್ತಿರುವ ಘಮಕ್ಕೂ ವ್ಯತ್ಯಾಸ ತಿಳಿಯದಂತೀಗ
ಇನಿಯನ ಜತೆಯಾಗಿ ಕಾಡ ದಾರಿ ಬರುವಾಗ
ನಮ್ಮ ಹೆಜ್ಜೆ ಜಾಡುಗಳ ಒರೆಸುತ್ತಿರು
ಒಂದೊಮ್ಮೆ ಕೂಗಿದ ಹೆಸರು ಬಂಡೆ ಅಂಚಲಿ
ಕೇಳುತ್ತದೆ ನನಗೆ ಅದೂ ನೀ ತಿಳಿಯದ ಪರಮ ವಿಪರ್ಯಾಸ
ಯಾರೋ ಬಿತ್ತಿಟ್ಟ ಬೀಜದೊಳಗಿಂದ
ಮೊಳಕೆ ಒಡೆದ ಚಿಗುರಿನೊಳಗೆ
ಪರಾಗ ಸ್ಪರ್ಶದ ಕ್ರಿಯೆಗೆ ಚಾಲ್ತಿ ಮಾಡಿದ್ದಾದರೂ ನೀ ಹೇಳದೇ ಬಿಟ್ಟು ಹೋದ ಕಠಿಣ ಸತ್ಯ
ನಿನ್ನೆ ನಾಳೆಗಳ ಲೆಕ್ಕ ತಪ್ಪಿದ ಅಲೆಗಳ
ನಡುವೊಂದು ಮೌನ ಹುಟ್ಟೋದು
ಅರ್ಥವಿಲ್ಲದೇ ಕಣ್ಮರೆಯಾಗಿಬಿಡಲಿ
ಪ್ರೀತಿಯ ಎಲ್ಲ ಅದ್ಭುತಗಳನ್ನು
ಒಂದೇ ಕವಿತೆಯಲ್ಲಿ ಸೆರೆ ಹಿಡಿಯೋಣವೆಂದು
ಬರೆಯುತ್ತಾ ಕುಳಿತೆ
ಈ ಇಬ್ಬರು ತಂದ ತಲೆನೋವಿನಿಂದ
ಮೌನದ ಕಗ್ಗತ್ತಲ ಕಾಡಿನಲ್ಲಿ ಬಾವಪೂರ್ಣ
ಅರ್ಥಪೂರ್ಣ ಶಬ್ದಗಳನ್ನ ಹುಡಕದಾದೆ.
ಅಕ್ಷರ ಕಾಣದ ಖಾಲಿ ಹಾಳೆಗಳು ಮೆಲ್ಲನೆ
ತೂರಿ ಬಂದ ಗಾಳಿಗೆ ಹಾರಾಡುತ್ತಾ ಹಾಡಾಗುತ್ತ
ಗುನುಗುಡುತ್ತಾ ಕಿವಿಯಲ್ಲಿ ಮಾತಾದವು
ಮನದ ಸಂವೇದನೆಗಳಿಗೆ ,
ನೆಮ್ಮದಿ ತಂದಿತ್ತು ಶೂನ್ಯ.
ಹೊರಗಡೆ ಹೋಗಿ ತಂಗಾಳಿಗೆ
ಮೈ ಒಡ್ಡಿ ಮೆತ್ತನೆ ಹುಲ್ಲು ಹಾಸಿಗೆ ಒರಗಿ
ಮೇಲೆ ದಿಟ್ಟಿಸಿದೆ
ಕೋಟಿ ಕೋಟಿ ನಕ್ಷತ್ರಗಳು
ಉಲ್ಲಾಸದಿಂದ ನಸು ನಕ್ಕಂತಾಯಿತು .