ಆ ಕನಸನಲ್ಲಿ ಒಂದು ಸುಂದರ ಲೋಕ ಕಂಡೆ
ಸುಂದರ ಸ್ವರ್ಗವೇ ನಾಚುವಂತೆ
ಆ ಹಸಿರು ಮರಗಳು,ಆ ಸುಂದರ ಸರೋವರಗಳು,
ಕೈ ಬಿಸಿ ಕರೆಯುವಹಾಗೆ ಆ ಮಿನುಗುವ ನಕ್ಷತ್ರಗಳು
ಅಬ್ಬಾ..! ಮೋಡದ ಮೇಲೆ ತೇಲಾಡುವ ನಾನು ಚಂದಮಾಮನ ಬಿಗಿದಪ್ಪಿ ಮುದ್ದೀಸುವ ಹಾಗೇ
ಕನಸಲ್ಲಿ ಕನಸೊಂದು ಕಂಡೆ.
..ಹನು.ಮ್..
ಕೊರಳ ಇಳಿಜಾರಿಗೆ ತುಸು ಹೆಚ್ಚಿಗೆ
ನಿನ್ನ ಸನಿಹ ಬೇಕೆನಿಸಿದೆ,
ಸಾವಿನಾಚೆಗಿರುವ ಸುಖವ
ಸವಿವರವಾಗಿ ತಿಳಿಸು ಅದಕೆ
ತಡವರಿಸದೆ ನನ್ನವನಾಗಿ.
ಬಯಕೆಗಳಿಗೆ ಮಿತಿಯೊಡ್ಡಿ
ಮೌನದ ಮುಸುಕು ತೊಡಿಸಿ
ಸಾಕಾಗಿದೆ, ನೂರಾರು ಕವನದ
ಸಾಲು ನೀನಾಗಿ ನನ್ನ ಸೇರಬೇಕಿದೆ.
ಅಧರ ಸುಧೆಯ ಸಿಹಿ ಹೆಚ್ಚಾಗಿದೆ,
ಒಲವುಣಿಸಿ ನಿನ್ನ ತುಟಿಗೆ
ಮತ್ತೆ ಸಿಹಿಯ ತುಂಬಿಕೊಳ್ಳಬೇಕಿದೆ.
ಕದ್ದು ಕೊಡುವ ಮುತ್ತುಗಳು ಸಾಲದಾಗಿವೆ
ಸಾಲವಾಗಿ ಪಡೆದ ಕನಸಿಗೆ ನಿನ್ನ ಜೊತೆ
ಸೇರಿ ಜೀವ ತುಂಬಬೇಕಿದೆ.
ಬೆವರ ಹನಿಯ ಮಿಂಚಲಿ ನನ್ನ
ನಗುವನು ಕೊಂಡು ತರುವನು,
ಕರೆ ಕರೆದು ಕಂದಾ ಎಂದು ಪ್ರೀತಿಯಿಂದ
ತುತ್ತನಿಡುವನು, ಎದೆಯ ಮೇಲಿನ
ಹೃದಯದಾಸಿಗೆಯಲ್ಲಿ ಬೆರಳ ತುದಿಯಲಿ
ಲಾಲಿ ಹಾಡುತ್ತಾ ಗಾಳಿಗೆ ತಂಪು ಕಲಿಸುವನು,
ನಿದ್ದೆಯ ಮಡಿಲಲಿ ನನ್ನ ಮಲಗಿಸುವವನು.
ಬೇರೊಂದು ಹೆಸರುಬೇಕೇನು ಅಪ್ಪ
ಎಂಬ ಆತ್ಮೀಯತೆ ಸಾಲುವುದಿಲ್ಲವೇ!
ಜೀವ ಮಿಡಿಯಲು ಅವನ ಒಂದು ಕರೆಗೆ.
ಗಡಸು ಧ್ವನಿಯಲ್ಲಿ ತುಸು ಕೋಪ ಹೆಚ್ಚಾದರೂನು
ಭುಜಕ್ಕೆ ಒರಗಿ ಕುಂತ ಕ್ಷಣ ಮೃಧು ನೆರಳ ಮೌನ ಸಾಕಾಗುವಷ್ಟುಂಟು ನನ್ನ ನೋವ ಹಂಚಿಕೊಳ್ಳಲು.
ಜೀವ ನೀಡಿದರೂ ಜೋಕಾಲಿ ಜೀಕುತಿರಳು
ಪುಟ್ಟ ಮಗು ತಾನಗುವನು, ಕಣ್ಣ ಮುಚ್ಚಿ ಕದ್ದು
ಮುಚ್ಚಿ ಓಡಿ ಬಂದು ಬಿಗಿದಪ್ಪಿ ಮುದ್ದಾಡುವನು,
ಹೇಳಲೆಷ್ಟು ಚಂದ ನೋಡುವ ನಾಯನಗಳಿಗೆ
ಆನಂದ ಅಪ್ಪನ ಪ್ರೀತಿ ಅವನೊಬ್ಬನಿಗೆ ತಿಳಿದ ರೀತಿ.
ಓ ಮನಸೇ....
ನೀ ಖಾಲಿಯಾದಾಗ..!
ನೀನೇನೊ ತುಂಬಿಕೊಂಡೆ..
ನೂರು ನೆನಪುಗಳ..!
ಕೋಟಿ ಕನಸುಗಳ...!!
ಆದರೆ...
ನನ್ನ ಹೃದಯ ಖಾಲಿಯಾದಾಗ..!
ನೂರು ಕೈ ಒರೆಸಿದರೂ,
ನಿಲ್ಲುತ್ತಿಲ್ಲ ಕಣ್ಣೀರು.....
ಭಾರವಾಗಿ ಹೋಗಿದೆ,
ಈ ಮನದ ಉಸಿರು...
ಒಮ್ಮಯಾದರೂ ಕೇಳಲಿಲ್ಲ...!
ನೀ ನನ್ನ ಒಪ್ಪಿಗೆ......
ನೋವಲ್ಲೇ ಸಾಗುತಿರುವೆ...!
ನೀ ಮಾಡಿದ ತಪ್ಪಿಗೆ.....
ನಿನ್ನ ಬರುವಿಕೆಗಾಗಿ
ಕಾಯ್ದುಕುಳಿತಿರುವ
ಈ ನನ್ನ ಕೊಲ್ಲಲು
ಬೇರಾವ ಆಯುಧಗಳ
ಜರೂರತ್ತಿದೆ ಹೇಳು ಹುಡುಗಿ|
ನೀನೊಮ್ಮೆ ತಿರುಗಿ
ನೋಡದೆ ಹೋದರಾಯ್ತು.
ಸಣ್ಣ ನಗುವೊಂದ
ಬೀರದೆ ಇದ್ದರಾಯ್ತು.
ಮೌನದ ಅಸ್ತ್ರ ಎಸೆದರಾಯ್ತು.
ಆ ಕ್ಷಣವೆ
ಈ ನಾನು
ಸತ್ತಂತಲ್ಲವೇನೆ ಹುಚ್ಚು ಹುಡುಗಿ.