ಸಾಂಸ್ಕ್ರತ ನಗರಿಯ ರಾಣಿ
ಮಹಿಷಾಸುರನ ಸಂಹಾರಿಣಿ
ಅರಮನೆಗೆ ನಮ್ಮ ಬೇಟಿ
ಮೃಗಾಲಯವ ದಾಟಿ
ರಸ್ತೆಯ ಇಕ್ಕೆಲಗಳಲ್ಲಿ
ಹಸುರಿನ ಮೆರವಣಿಗೆಯಲ್ಲಿ
ಸಾಗಿದೆವು ಶ್ರೀರಂಗಪಟ್ಟಣದೆಡೆಗೆ
ಶ್ರೀರಂಗ, ನಿಮಿಷಾಂಬನ ದರ್ಶನಕೆ
ಸಂಭ್ರಮದ ವಾತಾವರಣ
ನೀಡಿದ ಕಾಲನು ಆಮಂತ್ರಣ
ಅಂದು ಸಕ್ಕರೆ ನಾಡಿಗೆ
ಯಮರಾಜನ ನಡಿಗೆ
ಮುವತ್ತು ಮಂದಿಯ ಮರಣ
ಹೃತಾತ್ಮರ ಕೂಡಿತು ಅಂಬಿಯ ಪ್ರಾಣ
ದು:ಖ ಮಡುಗಟ್ಟಿತು ಎಲ್ಲೆಲ್ಲು
ಹನಿಗಟ್ಟಿತು ಎಲ್ಲರ ಕಣ್ಣಲ್ಲು
ಜಗ್ಗದ-ಕುಗ್ಗದ ಸರದಾರ
ಮರಳಿ ಬಾ ಹಮ್ಮೀರ
ಧ್ವನಿ ಪರಿಶೀಲನೆಗೆ
ಹಾಡೊಂದು ನೆಪ
ನಡೆ ಪರಿಶೀಲನೆಗೆ ನೃತ್ಯವೊಂದು ನೆಪ
ಕೈರುಚಿಯ ತಿಳಿಯಲು ಉಪಹಾರವೊಂದು ನೆಪ
ಹೆಚ್ಚು ಮಾತನಾಡಿದರೆ ಮಾತಾಳಿ
ಕಡಿಮೆ ಮಾತನಾಡಿದರೆ ಸೌಮ್ಯಸ್ವಭಾವಿ.
ಮೆಲ್ಲನಡೆವ ಹೆಜ್ಜೆ ಭಾರ ಹಿಡಿದು
ಗೆಜ್ಜೆ ಬೆಲೆ ಎಣಿಸುವರು,
ಉಟ್ಟ ಸೀರೆಯ ಅಂಚಿನ ನುಣುಪು ನೋಡಿ ರೇಷ್ಮೆಯ ನಾಣ್ಯತೆ ಅರಿವರು.
ಮನೆಯ ಕೋಣೆಗಳ ಸುತ್ತಿನೊಡಿ ಆಸ್ತಿಪಾಸ್ತಿಯ ಅಳೆವರು,
ಕುಂಟು ನೆಪಗಳು ಹೇಳಿ ಇಲ್ಲಸಲ್ಲದ ಗುಣಗಾನ
ಮಾಡಿ ಮಗನ ಮಾರಿಕೊಳ್ಳುವರು,
ಹೆಣ್ಣು ನೋಡುವ ಕಾರ್ಯದಲ್ಲಿ
ವರದಕ್ಷಿಣೆಯ ಲಂಚಪಡೆದು ಹೆತ್ತವರು.
ಮಗಳೆಂದರೆ ಖರ್ಚುವೆಚ್ಚ
ಮಗನೆಂದರೆ ಕೂಡಿದದ ಸ್ವತ್ತು,
ಗಗನತಾರೆಯ ಮುಟ್ಟಲೆತ್ನಿಸುವ ಶಕ್ತಿ ಇದ್ದರೂ ಹೆಣ್ಣು
ಪರಕೀಯಳು
ಸತ್ತ ವೇಳೆಗೆ ತೊಟ್ಟು ನೀರು ಕೊಡದ ಮಗ ತಮ್ಮವನು.
ಸಂತೆಯಲ್ಲಿ ವಸ್ತುಪ್ರದರ್ಶನ ಮನೆಗಳಲ್ಲಿ ವಧುವಿನ ಪ್ರದರ್ಶನ ಒಂದೇ ಆಗಿಹೋಗಿದೆ ಮಗಳ ಬೆಲೆ ತಿಳಿಯದ ಮೂರ್ಖರಿಗಿಂದು.
ವಸ್ತುಗಳ ಹಣ ಕೊಟ್ಟು ಕೊಳ್ಳುವರು ಮಗಳ ಹಣ ಕೊಟ್ಟು ಮಾರಿಕೊಳ್ಳುವರು.
ಕಾಲಗಳ ಕೆಳಗೆ ನಡಿಯುತಿದೆ
ಜೀವನದ ಚಕ್ರ
ಬಹುದೂರ ಕ್ರಮಿಸದೆ ನಡುವೆ ನಿರ್ಗಮಿಸಿದವರೆಸ್ಟೋ
ಕಾಲಡಿಯ ಕೆಳಗೆ ಕಾಲು ಸಿಲುಕಿಸಿಕೊಂಡಿರುವವರೆಸ್ಟೋ
ತಿಳಿಯದೆ ಮಬ್ಬರು ಹುಬ್ಬೇರುಸುವಂತೆ ಕೊನೆ ಕಂಡವರೆಸ್ಟೋ ನಾ ಕಾಣೆ.....
ಅಸಲಿಗೆ ತಿಳಿದವರು ತಿಳಿಯದಂತೆ ನಟಿಸುತ್ತಿರುವರೊ
ತಿಳಿಯದೇನೋ ತಿಳಿದಿದೆ ಎಂದು ನಮ್ಮನ್ನು ಮಬ್ಬರಾಗಿಸುತ್ತಿರುವರೇನೋ ಒಂದು ಅರಿಯೇನು ನಾನು
ಹೀಗಿಯು ಇರಬಹೋದೆ ಕಾಲ ಚಕ್ರದ ಪಾಠ
ಇನ್ನೆಷ್ಟು ಇರಬಹುದು ನಮ್ಮ ಪಾತ್ರದ ಕಲಿಯುವಿಕೆಯ ಪುಟಗಳ ಲೆಕ್ಕದ ಆಟ