Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಪ್ಪಾ..

ಕಿರು ಬೆರಳ ತುದಿ ನನ್ನ ಕೈ ತುಂಬಿ ಮುನ್ನಡೆಸಿದ ಕ್ಷಣ ಮರೆಯುವುದು ಹೇಗೆ ನಾ ಚಿರಋಣಿ ಅದರ ಅಕ್ಕರೆಗೆ ಅಪ್ಪ.

ನನ್ನ ಪುಟ್ಟ ಪಾದ ನಡೆದಾಡಿದ ನಿನ್ನ ಎದೆಯ ಅಂಗಳಕೆ ಅನಿವಾಸಿ ಇಂದು ನಾನು, ನಿನ್ನ ಎದೆ ಬಡಿತ ಇನ್ನೂ ಮುನ್ನಡೆಸುತಿದೆ ಪ್ರತಿ ಹೆಜ್ಜೆಗೂ ಮುನ್ನೆಚ್ಚರಿಕೆ ನೀಡಿ ನಿಧಾನಿಸು ಮಗಳೇ ಹೆಜ್ಜೆ ಹಾಕುವ ಮುನ್ನ ಯೋಚಿಸು ಎಂದು.

ಅಂಜಿಕೆಯು ನೀನು ಅಭಯವೂ ನೀನು ಆರೈಕೆ ನೀನು ಧೈರ್ಯವೂ ನೀನೇ ಅಪ್ಪ ಒಂಟಿಯಲ್ಲ ನಾನೆಂದೂ ನೀ ನನ್ನ ನೆರಳಾಗಿ ಕಾಯುತ್ತಿರುವವರೆಗೂ.

ಜಗವಿಡೀ ನನ್ನ ತೊರೆದರೂ ನಿನ್ನೆಡೆಗೆ ಕೈ ತೋರುವೆ ನನಗಾಗಿ ನೀನಿರುವೆಯೆಂದು ನೀ ನನ್ನ ಜಗವೆಂದು ಬೇರ್ಯಾರ ಪ್ರೀತಿ ಬೇಡವೆಂದು ಬೇಕೆಂದು ನಾ ಬೇಡೆನೆಂದು.

- ಚುಕ್ಕಿ

10 Nov 2018, 10:40 am

ಮೌನ

ಏನೋ ಚಿಂತೆ
ಏನೋ ವ್ಯತೆ
ಏನನ್ನೊ ಬೇಡುತಿದೆ
ಹೇಳಿಕೊಳ್ಳಲಾಗದಂತಿದೆ
ಮೌನವೆ ಮದ್ದಾಗಿದೆ

ಕದಡಿದ ನೀರ್ಗೊಳದಂತೆ
ಮುದುಡಿದ ಮಲ್ಲಿಗೆಯಂತೆ
ಸಿಹಿಯು ಕಹಿಯಾದಂತಿದೆ
ಏಕಾಂತವ ಬಯಸಿದೆ
ಮೌನವೆ ಮದ್ದಾಗಿದೆ

ಸಂಗಾತಿಯೊಡನೆ
ಮೂಡಿದ ವಿರಸ
ಬೆಂಗಾವಲಿನಂತೆ
ಬರುತಿದೆ ದಿವ-ದಿವಸ
ಬಿಡಿಸಲಾಗದ ನಂಟು
ಸಡಿಲಿಸದ ಮೊಂಡು
ಮೌನವೆ ಮದ್ದಾಗಿದೆ


ಅತೃಪ್ತತೆ ಅಧಿಕವಾಗಿ
ಸಂತೃಪ್ತಿ ಮರೆಯಾಗಿ
ಮೌನವೆ ಮರವಾಗಿದೆ


ಶಾರಧ

- ಶಕುಂತಲಾ

09 Nov 2018, 10:03 pm

ನಂದಾದೀಪ

ಕೊನೆಯುಸಿರ ಬಿಗಿ ಹಿಡಿದು ಕೊರಗುತ್ತಿದೆ
ನಂದಾದೀಪ ನಾಂದಿ ಹಾಡಲೆಂದು ತನ್ನ ಈ ಪುಟ್ಟ ಜೀವನಕೆ.

ಎಲ್ಲಿಂದ ಆಯ್ದು ತಂದ ಮಣ್ಣೊ ಯಾವ ಮೇಘ ಹಿಡಿದಿಟ್ಟ ಹನಿಯೋ ಯಾರ ಕೈಯಲ್ಲಿ ಕೇಸರಾಗಿ ಆಕೃತಿ ಪಡೆದಿದೆಯೋ ಸುಟ್ಟು ಬೆಂಕಿಯಲ್ಲಿದ್ದು ಗಟ್ಟಿಯಾಗಿ ಈ ಮಣ್ಣಿನ ದೀಪ.

ತಾ ಬಿತ್ತದ ಬೀಜ ಹತ್ತಿಯಾಯಿತು ಬಿಡದೆ ಬಿಟ್ಟು ಗಿಡವ ಬತ್ತಿಯಾಯಿತು, ನೀರೆರೆಯದೆ ಬೆಳೆದ ತೆಂಗು ಎಣ್ಣೆ ನೀಡಿತು ಯಾರದೋ ಅರಕೆಗೆ ತಾ ಆರತಿಯಾಯಿತು.

ಗಾಳಿಯ ಬೇಡಿ ಎಣ್ಣೆ ಮುಗಿದರೂ ಇನ್ನು ಸ್ವಲ್ಪ ಹೊತ್ತು ಉಸಿರಾಡುವ ಆಸೆ ಸಿಗಬಹುದೇ ಅವಕಾಶ ಮತ್ತೆ ಜೀವ ಪಡೆಯಲು ಈ ನಂದಾದೀಪಕೆ!!

- ಚುಕ್ಕಿ

09 Nov 2018, 05:04 pm

ಪ್ರೀತಿ

ಮನಸ್ಸಲ್ಲೇನೋ ಕಚಗುಳಿ..
ತಡಬಡಿಕೆಯ ಅರೆಗುಳಿ..
ಸಂಯಮವಿರದ ಊರುಗೂಳಿ..
ಬರಿ ಕೊಕೊಕ್ಕೋ ಕಿರಿಚುವ ಹ್ಯಾಟಿಕೋಳಿ..

ಒಬ್ಬರನೊಬ್ಬರನು ಅರ್ಥೈಸುವ ವೇದಿಕೆ..
ದುಃಖವಾದಗ ನೋವನೊರಿಸುವ ಹೊದಿಕೆ..
ಮುಗಿಯದ ಮಾತು-ಪಿಸುಮಾತುಗಳ ಗರಿಕೆ..
ಇಷ್ಟ-ಕಷ್ಟಗಳ ಸಮ್ಮಿಲನದ ಮೌನ ಕೋರಿಕೆ..

ಕೋಳಿ-ಜಗಳಗಳ ಕಾಳಗದ ಗರಡಿಮನೆ..
ಊಹಿಸಲಾರದ ಕನಸುಗಳ ಅರಮನೆ..
ಮಾನ-ಅನುಮಾನಗಳ ಒಣ ಖಾಲಿಮನೆ..
ಇಬ್ಬರಲೊಬ್ಬರು ಕೈ ಬಿಸಿದಾಗ ದೊಡ್ಡ ಸೆರೆಮನೆ!
ಸುಗ್ಗಿ..

- ಆರ್ ಎಸ್ ಸುಗ್ಗಿ.

08 Nov 2018, 09:43 am

ಪ್ರೇಮಿ

ಕಣ್ಣ್ ರೆಪ್ಪೆ ತೆರೆದರು,ಮುಚ್ಚಿದರು
ದುಮ್ಮೀಕ್ಕಿ ಹರಿಯುತ್ತಿದೆ
ಕಣ್ಣ ಕಂಬನಿಯ ಹನಿ
ಪಯಣದ ಹಾದಿ ಮರೆತು

ಕನಸುಗಳೇ ಕಣ್ಮರೆಯಾಗಿವೆ
ಕಾಣದ ಕಡಲಿನತ್ತ
ಮನಸುಗಳೆ ಮಾಯವಾಗಿದೆ
ನೆನಪುಗಳ ನೋವಲ್ಲಿ

ಆದರೂ ನಗುತ್ತಿರುವೆ
ನನ್ನೆರಡು ಕಣ್ಣ್ ಗಳಿಗೆ
ನೋವಾದಿತು ಎಂದು
ಆ ನನ್ನ ಎರಡು ಕಣ್ಣಗಳು ನೀವೇ
ಅಮ್ಮ ಅಪ್ಪ........

ರಾಜು ಹಾಸನ




ರಾಜು ಹಾಸನ

- ರಾಜು ಹಾಸನ

06 Nov 2018, 11:28 pm

ಉಸಿರನುಳಿಸು..

ನಾ ಬಣ್ಣಿಸಲಾರೆ ಹೆಣ್ಣೇ
ನಿನ್ನ ಮೊನಚು ಕಂಗಳ ನೋಟವ,
ನುರಿತ ಯೋಧನೊಬ್ಬ ಹಿರಿದು
ಬೀಸಿದಂತಿದೆ ತನ್ನ ಖಡ್ಗವ!
ನೋಟದ ಇರಿತಕೆ ಗಾಯಗೊಂಡು
ಮರುಗಿ ಒರಗಿದೆ ಹೃದಯವು,
ಇನಿತು ಕರುಣೆ ತೋರು ಚೆಲುವೆ,
ಹನಿ ಪ್ರೀತಿಯನುಣಿಸಿ, ಒಲವ ಹನಿಸಿ
ಉಳಿಸು ನನ್ನೀ ಉಸಿರನು!

- ಶ್ರೀಗೋ.

06 Nov 2018, 08:44 am

ನಿದ್ದೆ ಬರ್ತಾ ಇಲ್ಲಾ

ನಿದ್ದೆ ಬರ್ತಾ ಇಲ್ಲ ಯಾಕೋ ನಿದ್ದೆ ಬರ್ತಾ ಇಲ್ಲಾ
ಚಿಂತಿಲ್ಲಾ ಕನಸಿನ ಕ್ರಾಂತಿ ಇಲ್ಲಾ
ಆದರು ಯಾಕೋ ನಿದ್ರೆ ಬರ್ತಾ ಇಲ್ಲಾ
ನಿದ್ರಾ ದೇವತೆ ನೀ ಬಂದಾಗ ಎಚ್ಚರ ಜೀವನದಲ್ಲಿ ಅಗೋದೇ ಇಲ್ಲಾ....

ಗೊತ್ತು ಗುರಿ ಇಲ್ಲದ ಜಾಗವನ್ನು ನೋಡಲು ಅವಕಾಶ ನೀನು ಕೊಡುವದಿಲ್ಲ
ನೀ ಬರುವ ದಾರಿಯಲ್ಲಿ ಯಾವದೇ ಅಡೆತಡೆ ಇರುವದಿಲ್ಲಾ
ನೀ ಬಂದಾಗ ಮಾತ್ರಾ ನಾವು ನಿನ್ನ ಗುಲಾಮರಾಗಿ ಬಿಡುತ್ತೇವೆಲ್ಲಾ...

ಕೋಪವಿಲ್ಲಾ ತಾಪವಿಲ್ಲಾ ನಿನ್ನ ಮೇಲೆ ನಿದ್ರಾ ದೇವತೆ ಯಾಕೆ ನಿನ್ನ ಕರೆದರು ಬರ್ತಾ ಇಲ್ಲಾ
ರಾತ್ರಿ ಕಳೆದು ಸೂರ್ಯ ಹೊಟ್ಟುವದ್ರೋಳಗೆ ಜಾಗ ಖಾಲಿ ಮಾಡಿಬಿಡ್ತಿಲ್ಲಾ
ಬಂದ್ರು ಕುಡಾ ಕಾಯಂ ವಾಸಸ್ಥಳ ಇಲ್ಲಿ ನಿನಗಿಲ್ಲಾ....

ಬಿದ್ದ ಕನಸುಗಳು ನನಸಾಗುವದ್ರೋಳಗ
ಎಚ್ಚರವ ಮಾಡಿ ಮತ್ತೆ ಮತ್ತೆ ಮಾಯವಗತಿಲ್ಲಾ
ಕನಸು ನನಸ ಆದಾಗ ನಾವುಗಳೇ ಇಲ್ಲಿ ಇರಲು ನೀ ಬಿಡುವದಿಲ್ಲಾ
ಯಾಕ ಹಿಂಗ ಮಾಡ್ತಿ ಹಗಲೆಲ್ಲಾ......

ನಿದ್ದೆ ಬರ್ತಾ ಇಲ್ಲಾ ಯಾಕೋ ನಿದ್ದೆ ಬರ್ತಾ ಇಲ್ಲಾ
ನಿದ್ದೆ ಬಂದಾದ ಮೇಲೆ ಎಚ್ಚರ ಅಗೋದೇ ಇಲ್ಲಾ....

- ishwar

06 Nov 2018, 01:34 am

ನನ್ನ ಚೆಲುವೆ

ಆಚೆಯಾ ಊರಾಗ,
ಅಲ್ಲಿರುವೆ ನೀ ಚೆಲುವೆ..
ಮಾತಾಡೋಣೆಂದರೆ ಮನೆ ದೂರ...!
ಮಾತಾಡೋಣೆಂದರೆ ಮನೆ ದೂರ ಇರಲಿ ಚಿನ್ನ..
ಮನಸಿನ ಮನೆ ಮಾತ್ರ ಬಲು ಹತ್ತಿರ...!!

ಗೆಜ್ಜೆಯ ಹಾಕೊಂಡು,
ಹೆಜ್ಜೆಯ ಹಾಕುತ್ತಾ..
ಸಜ್ಜಾಗಿ ಬರುತೀದಿ ಕನಸಿನಲಿ...!
ಸಜ್ಜಾಗಿ ಬರುತೀದಿ ಕನಸಿನಲಿ ನನ್ನ ಚೆಲುವೆ..
ಕುದ್ದಾಗಿ ಬರಬಾರ್ದೆ ಮನಸಿನಲಿ...!!

- S Anju Doddmani

05 Nov 2018, 11:22 pm

ಹನಿಗಳು

ನಿನ್ನ ಕಂಗಳ ಚೂರಿ ಇರಿತಕೆ
ಹೃದಯ ಗಾಯ ಆಗಿದೆ..
ಅದನು ಮರೆತು ಮುಂದೆ ನಡೆಯಲು
ಮದ್ದು ಈಗ ಎಲ್ಲಿದೆ ?!
***
ಅವಳ ಕಣ್ಣೊಳಗೆ
ಸದಾ ನೀರಾಗಿ
ಇದ್ದು ಬಿಡಲೆಂದು ಇಳಿದೆ..
ಕಣ್ ಮುಚ್ಚಿದಳು..
ಸುಮ್ಮನೇ ನೆಲಕ್ಕಿಳಿದೆ..
***
ಮಳೆ ಬೀಳುವ ಈ ಸಂಜೆ
ಮೌನವಾಗದಿರು ಗೆಳತಿ
ಹನಿ ಹನಿಗಳು ಹೇಳುತ್ತಿವೆ
ಮೋಡದ ವ್ಯಥೆಯ..

- ಶ್ರೀಗೋ.

05 Nov 2018, 10:34 pm

#ಮಾತು ಮೌನದ ಸೆರಗಿನಲಿ

ಮಾತು ಮೌನದ‌ ಸೆರಗಿನಂಚಲಿ
ಕಟ್ಟಿಟ್ಟ ಪುಡಿಗಾಸಿನಂತಾಗಿಬಿಟ್ಟಿದೆ
ಉಸಿರಾಡಲು ಪಾಪ ತುಸುವೂ
ಸ್ವತಂತ್ರವಿರದೇ ಕಷ್ಟವಾಗಿರಬೇಕು

ಜೀವ ಬಾಯಿಗೆ ಬಂದು
ಉಸಿರು ನಿಂತಂತಾಗಿ
ಮೈಯೆಲ್ಲ ತಣ್ಣಗೆ ಕೊರೆಯುತಿರುವಂತಿದೆ
ಜೀವ ಉಳಿಸಿಕೊಳ್ಳಲು ಹಾತೊರೆಯುತಿದೆ

ಹಿಂದೊಮ್ಮೆ ರಾಜನಂತೆ ಮೆರೆದು
ಮನದ ರಾಜ್ಯದಲ್ಲೆಲ್ಲ ಠೀವಿಯಿಂದ
ಸಂಕೋಚ ಸಂಕೋಲೆಗಳೇ ಇರದೆ
ಬದುಕಿದವನಿಗೆ ಸಂಕಟವಾಗಿರಲೇಬೇಕು

ಅದಕೂ ಬಿಡುಗಡೆ ಪಡೆಯುವ ಆತುರ
ನನಗೂ ಆ ಚತುರನ ಸಂಧಿಸುವ ಅವಸರ
ಬಿಡುಗಡೆಯ ದೊರಕಿಸಿ ಅವನ ರಾಜ್ಯಭಾರವ
ನನ್ನೊಳಗೂ ಕಂಡು ಕುಣಿದು ಕುಪ್ಪಳಿಸುವಾಸೆ

ಬಂಧಿಯಾಗಿಸಿ ಮಾತನು ನಿರ್ಭಂದಿಸಿ
ತನ್ನೊಳಗೆ ಗೌಣವಾಗಿಸಿ ನಿಂತಿರುವ
ಘಟಾನುಘಟಿ ಮೌನದ ಹಿಂದೆ ಅಲೆಯುತಿರುವೆ
ಅಮ್ಮನ ಸೆರಗಿನಂಚಿನ ಪುಡಿಗಾಸಿಗೆ ಅಲೆವ ಮಗುವಿನಾಗೆ

- ಶ್ರೀಕಾವ್ಯ

05 Nov 2018, 05:38 am