ಕಿರು ಬೆರಳ ತುದಿ ನನ್ನ ಕೈ ತುಂಬಿ ಮುನ್ನಡೆಸಿದ ಕ್ಷಣ ಮರೆಯುವುದು ಹೇಗೆ ನಾ ಚಿರಋಣಿ ಅದರ ಅಕ್ಕರೆಗೆ ಅಪ್ಪ.
ನನ್ನ ಪುಟ್ಟ ಪಾದ ನಡೆದಾಡಿದ ನಿನ್ನ ಎದೆಯ ಅಂಗಳಕೆ ಅನಿವಾಸಿ ಇಂದು ನಾನು, ನಿನ್ನ ಎದೆ ಬಡಿತ ಇನ್ನೂ ಮುನ್ನಡೆಸುತಿದೆ ಪ್ರತಿ ಹೆಜ್ಜೆಗೂ ಮುನ್ನೆಚ್ಚರಿಕೆ ನೀಡಿ ನಿಧಾನಿಸು ಮಗಳೇ ಹೆಜ್ಜೆ ಹಾಕುವ ಮುನ್ನ ಯೋಚಿಸು ಎಂದು.
ಅಂಜಿಕೆಯು ನೀನು ಅಭಯವೂ ನೀನು ಆರೈಕೆ ನೀನು ಧೈರ್ಯವೂ ನೀನೇ ಅಪ್ಪ ಒಂಟಿಯಲ್ಲ ನಾನೆಂದೂ ನೀ ನನ್ನ ನೆರಳಾಗಿ ಕಾಯುತ್ತಿರುವವರೆಗೂ.
ಜಗವಿಡೀ ನನ್ನ ತೊರೆದರೂ ನಿನ್ನೆಡೆಗೆ ಕೈ ತೋರುವೆ ನನಗಾಗಿ ನೀನಿರುವೆಯೆಂದು ನೀ ನನ್ನ ಜಗವೆಂದು ಬೇರ್ಯಾರ ಪ್ರೀತಿ ಬೇಡವೆಂದು ಬೇಕೆಂದು ನಾ ಬೇಡೆನೆಂದು.
ನಿದ್ದೆ ಬರ್ತಾ ಇಲ್ಲ ಯಾಕೋ ನಿದ್ದೆ ಬರ್ತಾ ಇಲ್ಲಾ
ಚಿಂತಿಲ್ಲಾ ಕನಸಿನ ಕ್ರಾಂತಿ ಇಲ್ಲಾ
ಆದರು ಯಾಕೋ ನಿದ್ರೆ ಬರ್ತಾ ಇಲ್ಲಾ
ನಿದ್ರಾ ದೇವತೆ ನೀ ಬಂದಾಗ ಎಚ್ಚರ ಜೀವನದಲ್ಲಿ ಅಗೋದೇ ಇಲ್ಲಾ....
ಗೊತ್ತು ಗುರಿ ಇಲ್ಲದ ಜಾಗವನ್ನು ನೋಡಲು ಅವಕಾಶ ನೀನು ಕೊಡುವದಿಲ್ಲ
ನೀ ಬರುವ ದಾರಿಯಲ್ಲಿ ಯಾವದೇ ಅಡೆತಡೆ ಇರುವದಿಲ್ಲಾ
ನೀ ಬಂದಾಗ ಮಾತ್ರಾ ನಾವು ನಿನ್ನ ಗುಲಾಮರಾಗಿ ಬಿಡುತ್ತೇವೆಲ್ಲಾ...
ಕೋಪವಿಲ್ಲಾ ತಾಪವಿಲ್ಲಾ ನಿನ್ನ ಮೇಲೆ ನಿದ್ರಾ ದೇವತೆ ಯಾಕೆ ನಿನ್ನ ಕರೆದರು ಬರ್ತಾ ಇಲ್ಲಾ
ರಾತ್ರಿ ಕಳೆದು ಸೂರ್ಯ ಹೊಟ್ಟುವದ್ರೋಳಗೆ ಜಾಗ ಖಾಲಿ ಮಾಡಿಬಿಡ್ತಿಲ್ಲಾ
ಬಂದ್ರು ಕುಡಾ ಕಾಯಂ ವಾಸಸ್ಥಳ ಇಲ್ಲಿ ನಿನಗಿಲ್ಲಾ....
ಬಿದ್ದ ಕನಸುಗಳು ನನಸಾಗುವದ್ರೋಳಗ
ಎಚ್ಚರವ ಮಾಡಿ ಮತ್ತೆ ಮತ್ತೆ ಮಾಯವಗತಿಲ್ಲಾ
ಕನಸು ನನಸ ಆದಾಗ ನಾವುಗಳೇ ಇಲ್ಲಿ ಇರಲು ನೀ ಬಿಡುವದಿಲ್ಲಾ
ಯಾಕ ಹಿಂಗ ಮಾಡ್ತಿ ಹಗಲೆಲ್ಲಾ......
ನಿನ್ನ ಕಂಗಳ ಚೂರಿ ಇರಿತಕೆ
ಹೃದಯ ಗಾಯ ಆಗಿದೆ..
ಅದನು ಮರೆತು ಮುಂದೆ ನಡೆಯಲು
ಮದ್ದು ಈಗ ಎಲ್ಲಿದೆ ?!
***
ಅವಳ ಕಣ್ಣೊಳಗೆ
ಸದಾ ನೀರಾಗಿ
ಇದ್ದು ಬಿಡಲೆಂದು ಇಳಿದೆ..
ಕಣ್ ಮುಚ್ಚಿದಳು..
ಸುಮ್ಮನೇ ನೆಲಕ್ಕಿಳಿದೆ..
***
ಮಳೆ ಬೀಳುವ ಈ ಸಂಜೆ
ಮೌನವಾಗದಿರು ಗೆಳತಿ
ಹನಿ ಹನಿಗಳು ಹೇಳುತ್ತಿವೆ
ಮೋಡದ ವ್ಯಥೆಯ..