Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೀವನ ಒಂದು ಮಾರಾಟದ ಸಂತೆ...

ಜೀವನ ಒಂದು ಮಾರಾಟದ ಸಂತೆ...
ಯಾಕಾಗಿ ಕಟ್ಟುವೆ ಚಿಂತೆ ಕಳೆಗಳ ಕಂತೆ...
ಅದರಲ್ಲಿ ನೀ ಒಂದು ಕೊತ್ತಂಬರಿ ಕಂತೆ ...
ಕಳೆಗಳ ಕಿತ್ತೊಗೆ ಮಾಡದೆ ನೀ ಚಿಂತೆ...

ಚಿಂತೆಯ ತಲ್ಲಣದಿ ನರ್ತಿಸುವೆ ಏಕೆ...
ಮನ ಶಕ್ತಿಯು ಕುಂದುವುದು ಜೋಕೆ...
ವ್ಯರ್ಥ ಚಿಂತೆಗಳು ಆಳಾಗುವುದು ಬೇಕೇ...
ಸಾರ್ಥಕ ಚಿಂತನದಿ ನೀ ಮಿಂದು ಕಾಣುವೆ ಏರಿಕೆ...

ಎಲ್ಲಿಂದ ಯಾಕಾಗಿ ಬರುತಿದೆ ಈ ಚಿಂತೆ...
ಕ್ಷಣ ಕ್ಷಣವೂ ನೋಡಿಕೊ ಅದರಲ್ಲಿ ಕುಂತೆ ...
ನೋಯುವ ಮನವೇರಲಿ ಬೇಯುವ ಚಿತೆ...
ಚಿಂತೆಯ ಮೂಲ ಕಂಡು ಆಗುವೆ ನಿಶ್ಚಿತಂತೆ...

ಬಂದ ಚಿಂತೆ ಬರಲು ಬಿಟ್ಟರೆ ನೀ ಅದರಂತೆ...
ಬಂದು ಹೋಗುವವು ನೆಂಟರು ಬಂದು ಹೋದಂತೆ...
ಯಾವ ಚಿಂತೆಯು ನಿನಗಂಟದು ಎಂದು ತಿಳಿದಂತೆ...
ಕಳಚುವವು ಭವದ ನಂಟು "ಅದು" ನಿನ್ನರಿವಿಗೆ ಬಂದಂತೆ...

ಅರಿವಿನ ಗುರು ನಿನ್ನೊಳಗೆ ಆವರಿಸಿ ನಿಂತಂತೆ...
ಚಿಂತೆಗಳ ತಂತಿಯನು ಬಿಗಿದು ಮೀಟಿದಂತೆ...
ಸುಜ್ಞಾದದ ಸ್ವರಗಳು ತಾನಾಗೇ ಸೃಜಿಸಿದಂತೆ...
ಮುಳ್ಳಾದ ಚಿಂತೆಗಳು ಹೂವಾಗಿ ಅರಳಿದಂತೆ...

---ಮುಕೇಶ್ ದಾತಾರ್ . ರ---

- ಮುಕೇಶ್ದಾತಾರ್.ರ

17 Jul 2018, 04:37 pm

ಯವ್ವನದ ಯೋಗ

ಮೌನ ಮಾತಾದಾಗ
ನುಡಿ ಮುತ್ತುಗಳಿಗೆ
ಅದುವೇ ಶುಭ ಯೋಗ....!!

ಬದುಕು ಬರಡಾದಾಗ
ಇಬ್ಬನಿಯ ಸ್ಪರ್ಷವೂ
ತರುವುದು ಶುಭ ಯೋಗ..!!

ಕಾಲ ನಿಲ್ಲದೇ ಓಡುವಾಗ
ಕಳೆದ ಅನುಭವದ ಪಯಣದಿ
ದೊರೆವುದು ಶುಭ ಯೋಗ.!!

ಮುಪ್ಪು ತನು ಆವರಿಸಿದಾಗ
ಮನ ಅದನು ಒಪ್ಪದಾಗ
ಪ್ರತಿ ಕ್ಷಣವೂ ಯವ್ವನದ ಯೋಗ....!!

- ಪಿ.ಜಿ.ಜ್ಯೋತಿ

17 Jul 2018, 11:32 am

ಸಿರಿಗಂದ ಹಚ್ಚು ಬಾರೆ..

ಸಿರಿಗಂಧ ಹಚ್ಚ ಬಾರೆ
ಸಿಂಧೂರದ ಸೊಬಗು ತೋರ ಬಾರೆ,
ನನ್ನವಳ ಕೈಯೀಗ ಬರಿದಾಗಿದೆ
ಒಂದೆರೆಡು ಬಳೆಗಳನು ತೋಡಿಸಬಾರೆ.

ಮುಡಿ ಇಂದು ತಾನೇಕೊ ಮುನಿದಂತಿದೆ
ಮೈಸೂರ ಮಲ್ಲಿಗೆಯ ಮುಡಿಸ ಬಾರೆ,
ಕಲಕಳಿಸಿ ನಗುವ ಮೊಗ ನಗೆ ಮರೆತಿದೆ
ತುಟಿಯ ಮೇಲಿನ ಮಚ್ಚೆ ನಗು ಚೆಲ್ಲಿದೆ.

ಹಪಹಪಿಸಿ ಹೃದಯಸುಧೆ ಹಾಲಾಗಿದೆ
ಹಾಲ್ಗೆನೆಯ ಸವಿಯ ಚೂರುಣಿಸ ಬಾರೆ.

- ಚುಕ್ಕಿ

16 Jul 2018, 09:57 pm

ಮಳೆ ಮಳೆ

ಮಳೆ ಮಳೆ ಜಿಟಿ ಜಿಟಿ ಮಳೆ
ಹಳ್ಳ ಕೊಳ್ಳ ಕೆರೆ ತುಂಬುವ ಮಳೆ
ನದ ನದಿಗಳು ತುಂಬಿ ಹರಿಯುವ ಮಳೆ
ರೈತರಿಗೆ ಬಿತ್ತಿ ಬೆಳೆ ಬೆಳೆಯುವ ಮಳೆ.

ಬರಗಾಲ ನೀಗಿಸುವ ಜಿಟಿ ಜಿಟಿ ಮಳೆ
ಡ್ಯಾಂ ತುಂಬಿಸುವ ಮಳೆ ಮಳೆ ಹೊಳೆ
ಮಳೆನಾಡಿನ ಮಳೆ ಹನಿ ಹನಿ ಮಳೆ
ಸಂಪತ್ತು ಸೃಷ್ಠಿಸುವ ಜೀವ ಉಳಿಸುವ ಮಳೆ.

ರಾಜಕೀಯ ಗೊತ್ತಿಲ್ಲ ಅನ್ಯಾಯ ಗೊತ್ತಿಲ್ಲ ಮಳೆಗೆ
ಮಳೆಯ ನಂಬಿ ಬದುಕ ಕಟ್ಟಿ ಬಾಳ ಸಾಗಿಸುವರು
ಮಳೆ ಇಲ್ಲದೆ ಬೆಳೆ ಇಲ್ಲ, ಬೆಳೆ ಇಲ್ಲದೆ ಆಹಾರ ಇಲ್ಲ
ಮಳೆ ಇಲ್ಲದೆ ಏನು ಇಲ್ಲ ಇಲ್ಲ, ಮಳೆ ಮಳೆ ಜೀವ ಮಳೆ.

-ಹೆಚ್.ವಿರು ತಾವರಗೊಂದಿ.

- Viru Tvg T.v.

15 Jul 2018, 10:10 pm

ಮೃತ್ಯು....

ಏಕೆ ಮೃತ್ಯು ಇಷ್ಟೊಂದು ಅವಸರ ನಿಂಗೆ
ನನ್ನ ಕರೆಸಿಕೊಳ್ಳಲು.....
ನಿನ್ನ ರಾಜ್ಯಕ್ಕೆ .. ನನ್ನ ಸ್ವಂತ ಮನೆಗೆ
ನನ್ನನ್ನೇ ಸ್ವಾಗತಿಸಲು...

ಇನ್ನು ಕೆಲವುದಿನಗಳಷ್ಟೇ ಕಳೆದಿದೆ...
ನಾ ಈ ಭೂಮಿಗೆ ಪ್ರವಾಸಕ್ಕೆ ಬಂದು
ಇನ್ನು ನೋಡಬೇಕಿದೆ ತಿಳಿದು ಸಾಧಿಸುವುದಿದೆ
ಇನ್ನು ಪ್ರವಾಸದ ಅವಧಿ ಬಾಕಿ ಇದೆ

ಇನ್ನು ಗೂಡುಬಿಟ್ಟು ಹಾರದ .......
ಹೊರ ಪ್ರಪಂಚವ ಕಾಣದ ಹಕ್ಕಿನಾನು
ಇನ್ನು ಜಗವನ್ನ ಅರಿಯದ ಹೇಳಸು ಕೂಸಿನ
ಮೇಲೆಕೆ ನಿನ್ನ ಮೃತ್ಯುಪಾಶದ ಪ್ರಹಾರ

ನಾ ಇನ್ನು ಸಾಧಿಸಿಲ್ಲ ಶಿವನ ಸಿದ್ದಿಯ ಮಾರ್ಕಂಡೇಯನಂತೆ ನಿನ್ನ ಮೃತ್ಯು ಪಾಶವ
........... ತಡೆಯಲು
ನಾನೇನು ಮೃತ್ಯುಂಜಯನ... ಕವಚಕುಂಡಗಳ
ದಾನವಿತ್ತು ಕೊಟ್ಟಮಾತಿಗಾಗಿ ಜೀವನವನ್ನೇ
ಅರ್ಪಿಸಿ ..... ಮೃತ್ಯುಂಜಯನೇನಿಸಿಕೊಂಡ
ಧಾನಶೂರ..... ಕರ್ಣನಲ್ಲ

ಜಗದ ನಿಯಮ ಪಾಲಿಸದಿದ್ದರೆ ಕ್ಷಮಿಸು
ಹೇ ಮೃತ್ಯು ನೀಡು ಇನ್ನು ನೀಡು..
ಕೆಲವು ದಿನಗಳ ಕಲಾವಕಾಶವನ್ನ......


......ಮಂಜು.

- ಮಂಜು

14 Jul 2018, 08:15 am

ಕಣ್ಣ-ಹನಿಗಳು

*ಹನಿಗವನಗಳು*

*೧.ಬೆಂಕಿ ಹಚ್ಚಿ*
ನಾವು ಕಂಡ ಕನಸಿನ ಸೌಧಕೆ ಬೆಂಕಿ ಹಚ್ಚಿ ಹೋದೆ
ಅದರೊಳಗೆ ನಾ ಸಾಯುವುದ ಕಾಣದೆ
ನೀನೂ ಬೆಂದು ಹೋಗುವೆಯೆಂದು ತಿಳಿಯದೆ
-----------------------------------------------------------------
*೨.ಕಾಲ್ಗೆಜ್ಜೆ*
ಸದ್ದು ಮಾಡದಿರೇ ಕಾಲಗೆಜ್ಜೆಯೇ
ನಿದ್ರಿಸಿದ ಅವನ ನೆನಪುಗಳು ಎದ್ದೀತು
ಅವನ ನೆನೆದು ಮನ ಸತ್ತೀತು
-----------------------------------------------------------------

*೩.ಅವನ ನೆನಪು*
ಮಿಂಚಿ ಮರೆಯಾಗುವ ಅವನ ನೆನಪುಗಳಿಗೆ
ನನ್ನೆದೆಯೇ ಕಗ್ಗತ್ತಲ ಗಗನ
ಆಗಾಗ ಕೇಳಿಸದ ಚೀತ್ಕಾರದ ಸಿಡಿಲು‌ ಗುಡುಗಿನ ತನನ

- ಶ್ರೀಕಾವ್ಯ

13 Jul 2018, 06:38 pm

ನೀನೆ ತಾನೆ!!!

ಕನಸಿನಲ್ಲಿ ಬಂದ ಹುಡುಗಿ ನೀನೆತಾನೆ
ಮನಸಿನಲ್ಲಿ ಕುಳಿತ ಹುಡುಗಿ ನೀನೆತಾನೆ
ಎದುರಲ್ಲಿ ಬಂದ ಹುಡುಗಿ ನೀನೆತಾನೆ ನೀನೆತಾನೆ

ಜಗಳ ಮಾಡೋ ಹುಡುಗಿ ನೀನೆತಾನೆ
ಮುನಿಸಿಕೊಳ್ಲೋ ಹುಡುಗಿ ನೀನೆತಾನೆ
ಕೊಬ್ಬು ಜಂಬ ಇರುವ ಹುಡುಗಿ ನೀನೆತಾನೆ ನೀನೆತಾನೆ

ನನ್ನ ಮರಳು ಮಾಡಿದ ಹುಡುಗಿ ನೀನೆತಾನೆ
ಪ್ರೀತಿ ಮಾಡು ಎಂದ ಹುಡುಗಿ ನೀನೆತಾನೆ
ಕೈಕೊಟ್ಟು ಓಡಿಹೋದ ಹುಡುಗಿ ನೀನೆತಾನೆ ನೀನೆತಾನೆ

- ಚೇತನ್ ಬಿ ಸಿ

12 Jul 2018, 06:14 pm

ಬೀಳ್ಕೊಡುಗೆ...

ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಈ ಕವನವೇ ನಿನಗೆ ನಾ ಕೊಡುವ ಬೀಳ್ಕೊಡುಗೆ...
ಬಿಡುವಿನ ಸಮಯದಿ ನೀನೋಡು ನನ್ನೆಡೆಗೆ...
ನಿನ್ನಲ್ಲೇ ಹಬ್ಬಿರುವೆ ನೀ ಇಳಿಯೆ ನಿನ್ನನ್ನೊಳಗೆ...

ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಮತ್ತೊಮ್ಮೆ ಬರುವಾಗ ನೀ ತಿಳಿಸು ನನಗೆ...
ಒಂದಾಗಿ ಹೋಗುವ ಆ ಮರದ ಕಡೆಗೆ...
ಕ್ಷಣಗಳ ಮಿಂಚಲ್ಲಿ ಒಂದಾಗುವ ಘಳಿಗೆ...

ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ವಿರಹವೇ ತಾಕದು ಈ ನಮ್ಮ ಪ್ರೀತಿಗೆ...
ಭಾವನೆಯ ಜೊತೆಗೂಡಿ ಇರುವೆ ನಾ ನಿನ್ನೊಳಗೆ...
ಮೌನದಲಿ ಆಲಿಸು ನಾ ನಡೆವ ನೆಡುಗೆ...

ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ನಿನ್ನೊಳಗೆ ನೀ ಕೊಟ್ಟೆ ನನಗೊಂದು ಜಾಗ...
ಅಲ್ಲಿಂದಲೇ ನೋಡುವೆ ಈ ಪ್ರೀತಿ ಜಗವ...
ನೀನಿತ್ತ ಆಸರೆಗೆ ಬರೆದಿರುವೆ ಈ ಪ್ರೀತಿ ಪದವ ...

ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಮೌನದಲಿ ನಾ ನಿಂತು ನಿನ್ನ ನೋಡಿ ನೋಡಿ...
ನಿನ್ನೆಲ್ಲ ಆಟದಲ್ಲಿ ನಿನ್ನೊಳಗೆ ಜೊತೆಗೂಡಿ...
ಹಾಡಾಗಿ ಹಾಡುತಿಹೆ ಅಂತರಾಳದ ದನಿಗೂಡಿ...

ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...
ಹೋಗಿ ಬಾ ಗೆಳತಿ ನೀನಿರುವ ಊರಿಗೆ...

---ಮುಕೇಶ್ ದಾತಾರ್ . ರ ---

- ಮುಕೇಶ್ದಾತಾರ್.ರ

12 Jul 2018, 04:37 pm

ವೈದ್ಯ

ಅವರವರ ನೋವಿಗೆ
ಅವರವರ ನಲಿವಿಗೆ
ಅವರವರ ಸುಖ ದುಃಖಕ್ಕೆ
ಸ್ಪಂದಿಸುವನು ವೈದ್ಯ !

ಅವರವರ ಪ್ರೀತಿಗೆ
ಅವರವರ ವಿರಹಕ್ಕೆ
ಅವರವರಲೊಂದಾಗಿ
ಸಂತೈಸುವನು ವೈದ್ಯ!

ಅವರವರ ರೊಚ್ಚಿಗೆ
ಅವರವರ ಕಿಚ್ಚಿಗೆ
ಅವರವರ ರಾಗ ದ್ವೇಷಗಳಿಗೆ
ಹೊರತಾಗಿರುವನು ವೈದ್ಯ!

ಅವರವರ ಚಿಂತನಕೆ
ಅವರವರ ಮಂಥನಕೆ
ಅವರವರ ಯೋಚನಾಲಹರಿಗೆ
ನಿಲುಕುವನು ವೈದ್ಯ!

ಅವರವರ ಭಾವಕ್ಕೆ
ಅವರವರ ಭಕುತಿಗೆ
ಅವರವರ ತೆರನಾಗಿ
ಇರುತಿಹನು ವೈದ್ಯ!

ಡಾ!ಸಿ.ಮುರಳೀಧರ
ಜುಲೈ,2018

- ಡಾ!ಸಿ.ಮುರಳೀಧರ

12 Jul 2018, 11:47 am

ದರ್ಪಣ ಸುಂದರಿ

ಈ ಸೃಷ್ಠಿಯೊಂದು ಸುಂದರ ಕನ್ನಡಿ...
ಬರೆಯಲಾರೆ ನಾ ಅದರ ಮುನ್ನುಡಿ...
ಬಿಂಬಿಸುತಲೇ ನಿಂತಿದೆ ಈ ಸುಂದರಿ...
ಹೇಳುತ್ತಿದೆ ನೀ ಅಂಟಬೇಡ ಜಡಿ ಜಡಿ...

ಶ್ಲಾಘನೆಗಳ ಜೊತೆಗಿಲ್ಲ...
ಕುರೂಪತೆಗೆ ಆಂಟೋಲ್ಲ...
ಬಿಂಬಿಸುತ ಎಲ್ಲವನು ತಾನು...
ತೋರಿಹಳು ಎಲ್ಲರ ಚಲುವನ್ನು....

ಕೋಪದಲಿ ಕುಪಿತಳಾಗಿ...
ಭಾವದಲಿ ಭಾವುಕಳಾಗಿ...
ಯಾವ ಸ್ಥಿತಿಯು ನಾನಲ್ಲವೆಂದು...
ನೋಡುವಳು ನೀ ಯಾಕೆ ಹೀಗೆಂದು...

ಒಮ್ಮೆ ದರ್ಪಣದ ಈ ಚಲುವೆ...
ಕಂಡಳೋ ನನ್ನ ತನುವೊಳಗೆ...
ಕಾಣದು ದರ್ಪ ಅವಳೊಳಗೆ...
ಬಿಂಬಿಸುವ ಸ್ಥಿತಿಯಾದೆನು ಅವಳೊಳಗೆ...

---ಮುಕೇಶ್ ದಾತಾರ್ . ರ

- ಮುಕೇಶ್ದಾತಾರ್.ರ

12 Jul 2018, 10:03 am