Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿಸರ್ಗವೆಷ್ಟು ಸುಂದರ!!

ಮರಗಳಿರಲಿ ಗಿಡಗಳಿರಲಿ,,
ಹೂ ಹಣ್ಣು ದುಂಬಿ ನಗಲು,,,,
ಜಗವೇ ಸುಂದರ,,
ನಿಸರ್ಗ ನಮ್ಮ ಮಂದಿರ,,,
ಬೆಟ್ಟವಿರಲು ಗುಡ್ಡವಿರಲು,,
ಝರಿ ತೊರೆಗಳು ಹರಿಯುತಿರಲಿ,,,
ಜಗವೇ ಸುಂದರ,,
ಇರಲಿ ಇವು ನಿರಂತರ,,,
ಜಿಂಕೆ ಜಿಗಿದು ಹಕ್ಕಿ ಉಲಿದು,,,,
ಮೋಡ ಅರಳಿ ತೇಲುತಿರಲು,,,
ಜಗವೇ ಸುಂದರ ಮಂದಿರ,,,
ಶುದ್ಧ ಗಾಳಿ, ನೀರು
ದೊರೆಯುತಿರಲು
ಗಿಡ,ಮರಗಳು ನಿತ್ಯ ಬೆಳೆತಿರಲು
ಪರಿಸರ ಉಳಿಸಿ
ಬೆಳೆಸುವವರ ಸಂಖ್ಯೆ ಹೆಚ್ಚುತ್ತಿರಲು
ಈ ಜಗವೆಷ್ಟು ಸುಂದರ!!!

- Prakash Angadi

14 Jun 2018, 01:42 pm

ಕಣ್ಣೋಟದ ಪಯಣ..

ನೆನೆದು ಮಲಗಿದರೇನು ಮನದಲ್ಲಿ
ಕೈಗೆ ನಿಟುಕದ ಕನಸುಗಳ
ಸವಿ ಸಂಜೆಯ ಹೊತ್ತಲ್ಲಿ........
ಕಣ್ಣು ಕಣ್ಣುಗಳ ಮಿಲನ
ಅದೊಂದು ಮಧುರ ಕ್ಷಣ
ನಾ ಅರಿಯೆನು ಆಕೆಯ ಮನದ ಅಂತರಾಳವ
ಇಂತಿಹುದೋ ನನ್ನ ಮೇಲಾ
ಅಭಿಪ್ರಾಯ ಅವಳಿಗ......
ಬರಿ ಮಾರು ದೂರದ ಪಯಣ
ನನ್ನ ಆಕೆಯ ಕಣ್ಣೋಟದ ಚಲನ
ಗಂಟೆ ಕೂಗಿ ಕರೆಯುವುದು...
ಆಕೆಯ ಆಗಮನದ ಬರುವಿಕೆಯ ಸಮಯ
ನಿಗದಿ ಪಡಿಸಿದಂತಿದೆ ಸಮಯ
ಆ ಗಳಿಗೆಯ ನಮಗಾಗಿ...
ಹೀಗೆ ನಡೆಯುತ್ತಿದೆ ಈ ಸವಿಸಂಜೆಯ
ಕಣ್ಣೋಟದ ಪಯಣ......
ಎರಡು ದಿನದಿಂದೆಕೋ ಮನಸ್ಸಿನಲ್ಲಿ ಕಳವಳ
ಆಕೆ ಕಣ್ಣಿಗೆ ಬಿದ್ದಿಲ್ಲದ ಕಾರಣ....

ಆದಷ್ಟು ಬೇಗ ತಿಳಿಸಬೇಕು ನನ್ನಿ .......
ಪ್ರೀತಿಯ ಒಲೆಯ ಕವನ


....... ಮಂಜು

- ಮಂಜು

13 Jun 2018, 08:26 pm

ವೇದನೆ

ಕಾರ್ಮುಗಿಲು ಕವಿದ ಮೋಡದ ಮರೆಯಲಿ
ನಿಂತಿರುವೇ ನೀನು ಭೂಮಿ ತಾಯಿ ಮಡಿಲಲಿ
ಹನಿಹನಿಯಾಗಿ ಸುರಿಸಿ ಭೂಮಿ ತಂಪಾಗಿಸದೆ
ಜೀವ ಜಲ ರಾಶಿಗೂ ಬಾಯಾರಿಕೆ ನೀಗಿಸದೆ
ಜೋರಾಗಿ ಅತ್ತು ಬಿಡು ನೀ ಒಮ್ಮೆಲೆ
ಗದ್ದೆ ತುಂಬ ಪೈರು ತುಂಬಿದ ತೆನೆಗಳು
ನಿತ್ಯ ದುಡಿಮೆಯ ಬಯಲಿನೆಡೆಗೆ
ಚಳಿಸಲಾಗದ ಕಾಲುಗಳು
ಬಿಸಿಲು ಬೇಗೆಗೆ ಬೆಂದು ಹೋಗಿ
ನಾಡಿ ಬಡಿತ ನಿಂತವು
ಮೊರೆ ಇಡುವೆನು ದೇವಾ ರೈತನು
ಅವನ ಕೂಗು ನಿನಗೆ ಕೇಳಿಸದೆ ???

- Prakash Angadi

13 Jun 2018, 05:45 pm

ಶುಭ ಸಂಜೆ......

ತಂಪು ತಂಗಾಳಿಯು ಸುಯ್ಯುತಿಹದು
ಈ ಸವಿಸಂಜೆಯ ಹೊತ್ತಲ್ಲಿ........
ಸಂಗೀತದ ಪರಿಯಲ್ಲಿ .. ಬೀಸುತ್ತ
ಹಾಗೆ ಇಂಪಾಗಿ ಕಿವಿಗೆ ಅಪ್ಪಳಿಸುತ್ತ
ಹೇಳುತಿಹಾಡು ಶುಭ ಸಜೆಯ ಸಂದೇಶ

ಎತ್ತರದ ಬೆಟ್ಟಗುಡ್ಡಗಲಿಲ್ಲ........
ಬೃಹದಾಕಾರವಾಗಿ ಬೆಳೆದುನಿಂತ ಮರಗಳಿಲ್ಲ
ಜುಳು ಜುಳು..ಗಾನದ ಹರಿವ ತೊರೆಗಲಿಲ್ಲ
ಸೊಂಪಾಗಿ ಬೆಳೆದು ನಿಂತ ಬಿದಿರುಮಣೆಗಳ
ಕಟ ಕಟ ಶಬ್ದಗಲಿಲ್ಲ

ಕೋಗಿಲಯ ಇಂಪಾದ ಕಂಠಸಿರಿಯ ಕೂಗಿಲ್ಲ
ದನಕರುಗಳ ಹೆಜ್ಜೆಯ ಸಪ್ಪಳವಿಲ್ಲ
ತೆಂಗಿನ ಕಾಯಿ ದಪ್ಪೆಂದು ಬಿದ್ದ ಹಾಗೂ ಇಲ್ಲ
ಕುರಿದನಗಾಯ್ಕರ ಗದ್ದಲವಂತು ಮೊದಲಿಲ್ಲ

ಕಾರುಮೊಟರುಗಳ ಕರ್ಕಶ ಶಬ್ದದನಡುವೆ
ಮೋಡಮುಟ್ಟುವ ಕಟ್ಟಡಗಳ ಮದ್ಯೆ
ಜನಜಂಗುಳಿಯ ಗದ್ದಲದ ನಡುವೆ

ಏಕೋ ನಮ್ಮಳ್ಳಿಯ ಸುಂದರ ಸವಿ
ನೆನಪುಗಳ ಹೊತ್ತು ತಂದಿಹದು
ಈ ಸವಿ ಸಂಜೆಯ ತಂಪು ತಂಗಾಳಿ
ನಮ್ಮೂರ ಜ್ಞಾಪಿಸಿ ನೆನಪಿಗೆ ತಂದ ನಿನಗೊಂದು
.......... ಧನ್ಯವಾದ



.........ಮಂಜು

- ಮಂಜು

12 Jun 2018, 06:08 pm

ಚಕಿತನಾಗುವೆ

ಚಕಿತನಾಗುವೆ ಚೆಲುವೆ ನಿನ್ನ ನೋಟಕ್ಕೆ,
ಚತುರೆ ನೀನು ಈಜು ಬಾ ನನ್ನ ಸರಸದ ಸೆಲೆಯಲಿ,
ಕೌತುಕ ಜೋರಾಗುವುದು ನಿನ್ನ ನೋಡ ಬರುತಿರುವಾಗ,
ಹತ್ತಿರವಿರುವಾಗ ದೂರದಂತೆ, ದೂರವಿರುವಾಗ ಹತ್ತಿರದಂತೆ,
ಏನಿದು ಮಾಯಾಜಾಲ?

- Harshavardhana

12 Jun 2018, 02:01 pm

ಕೂಡಿಟ್ಟದನ್ನೆಲ್ಲ ಹೊರುವವರ್ಯಾರು..?

ಕೂಡಿಟ್ಟದೇಲ್ಲ ಪರರಿಗೆಂದು ಹೇಳುವರು
ಜ್ಞಾನಿಗಳು..... ಸಾಧಕರು
ಅದ ಕೇಳಿ ಬದಲಾದವರುಂಟೆ ತಿಳಿದರು
ಕುಡಿಡುವುದ..... ನಿಲ್ಲಿಸಿದವರುಂಟೆ

ಏಕೆ ಈ ಜ್ಞಾನಬಂಡಾರಗಳ ತಿಳಿವಂತಿಕೆ
ಈ ಯುಗದ ಜನಕೆ......

ಸತ್ಯದದಾರಿ ಬಲುಕಠಿಣವಂತೆ ಅದಕ್ಕೆ
ಇಲ್ಲಿ ಸತ್ಯದದಾರಿ ತುಳಿಯುವುದಿಲ್ಲವೇನೋ
ಸುಳ್ಳಿನದಾರಿ ಬಲು ಸುಲಭವಂತೆ.....
ಅದಕ್ಕೆ ಇರಬೇಕು ಇಲ್ಲಿ ಸುಳ್ಳೇ ಸರ್ವಾಧಿಕಾರಿ

ಪರಮಾತ್ಮ ನೋಡುತಿಹನು ನಿನ್ನ ಕರ್ಮಗಳ
ಏನ ನೋಡುವನು ಅನ್ಯಾಯಗಳ
ಬಡವರ ಕಷ್ಟಗಳಸುಮ್ಮನೆ ತಟಸ್ಥನಾಗಿ ನಿಂತು
ನೋವುಂಡವರ ಕೂಗಿಗೆ ಕಿವಿಗೊಡದೆ

ಅನುಭವಿಸಬೇಕು ಪಾಪಗಳ ಫಲವ
ಆದರೆ.. ಯಾರೋ ಮಾಡಿದ ಪಾಪವ
ಯಾರೋ ಅನುಭವಿಸುತಿಹರು...... ಇಲ್ಲಿ
ಪುಣ್ಯದ.... ಫಲದ ಕನಸು ಕಾಣುತ್ತಾ

ಯಾರ ದೂರಿದರೆನಂತೆ ನಿನ್ನ ನಿ ನೋಡಿಕೊ
ಇಂದಿಗಾದರು ಬಿಡು ನಿನ್ನ ಆಸೆಕೊತ್ತಲಗಳ
ಈ ಕೋಟೆ ಗದ್ದಲಗಳ ... ಅರಮನೆಯ
ಯಾವುದು ಇಲ್ಲಿ ನಿಜವಲ್ಲ........


.......... ಮಂಜು

- ಮಂಜು

11 Jun 2018, 06:39 pm

ಯಾರಿಹರು ಈ ಮನಕೆ ಸೂತ್ರಧಾರಿ

ಎತ್ತ ನೋಡಿದರತ್ತ ಕೈಗೆ ನಿಲುಕದ
ಭಾವನೆಗಳ ಸರಮಾಲೆ ಮನದಲ್ಲಿ
ಏಕಾದರು ಇರುವುದೋ.. ಈ ಕೆಟ್ಟ ಮನಸ್ಸು
........ ಈ ದೇಹದಲ್ಲಿ

ಬೇಡವಾದ ಚಿಂತನೆಗಳ ಏಕೆ ನೆನಪಿಸಿ..
ಕೊಳ್ಳುವುದೋ ಮತ್ತೆ ಮತ್ತೆ
ನೋವು ತರಿಸಲೆಂದು ....
ಇನ್ನಷ್ಟು ದುಪ್ಪಟಗೊಳಿಸಲು ಈ
ಕಲಿಯುಗದ ಕಷ್ಟಗಳ ಪಯಣವ

ಕಣ್ಣಿಗೆ ಕಾಣಿಸುವುದೆಲ್ಲ ನಿಜವಲ್ಲ...
ಎಂದೆನಿಸುತಿಹದು ಈ ಮನಕೆ
ಆ ಹಿಂದಿನ ದಿನಗಳ ನೆನಪುಗಳು
ಇನ್ನು ಚುಚ್ಚುತಿಹದು ಇಟಿಯಂತೆ

ಅದೊಂದು ದಿನ ಅದೊಂದು ದಿನ
ಏಕಾದರು ಬಂತೋ ನನ್ನ ಜೀವನದಲ್ಲಿ
ಇಂದಿಗೂ ಅನುಭವಿಸುವಂತೆ ಮಾಡಿದೆ
.............. ಅದರ ಫಲವ

ನಾ.... ಏಕೆ ಮೊದಲಿನಂತಿಲ್ಲ
ಎಂಬ ಪ್ರಶ್ನೆ ಸದಾ ಮನಸ್ಸಿನಲ್ಲಿ
ಕೊರೆಯುತಿಹದು ಗುಂಗಿಯಂತೆ
ಮತ್ತೇ ಮತ್ತೆ ಬರಬಾರದೇಕೆ ಆ ಕಳೆದುಹೋದ
ಆ ಮಧುರ ದಿನಗಳ ಕ್ಷಣಗಳು

ಕಾಲ ಚಕ್ರ ತಿರುಗಬಾರದೇಕೆ ಹಿಂದಕ್ಕೆ
ನನ್ನಿ ಪರಿಯ ನೋವ ಕಣ್ಣಾರೆ ಕಂಡ್ಡಿದ್ದು.......



...... ಮಂಜು

- ಮಂಜು

10 Jun 2018, 09:22 pm

ಸರ್ಕಾರಿ ಸ್ಕೂಲಲ್ಲಿ ಕಲಿತವ್ನೆ ಜಾಣ

ಬದುಕು ಕಲಿಸುವ ಸರ್ಕಾರಿ ಸ್ಕೂಲಲ್ಲಿ ಕಲಿತವ್ನೆ ಜಾಣ
ಐಪಿಎಸ್ಸು ಐಎಸ್ಸಿನ ಕೆಲಸ್ದಲ್ಲಿ ಸರ್ಕಾರಿ ಸ್ಕೂಲವ್ರೆ ನೋಡಣ್ಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ


ಲಕ್ಷ ಲಕ್ಷ ಡೊನೆಷನ್ ಕೊಟ್ಟು ಕಲಿತವ್ನು ಅಷ್ಟೇ ಕಣಣ್ಣ..
ಕನ್ನಡ ಕಲಿತವ ಹಣದ ಕೋಟೆ ಕಟ್ಟ ಬಹುದಣ್ಣ..
ವಿದ್ಯೆ ಪಡೆದವ್ನು ದೇಶದ ಒಳಿತಿಗೆ ನಿಜವಾಗಿ ಬೇಕಣ್ಣ..
ವಿದ್ಯೆಇಲ್ಲದ ಮುಖ ಹಾಳೂರಹದ್ದು ಅನ್ನೋದು ಮರೆಯಬೇಡಣ್ಣ..
ಶಿಕ್ಷಣವೇ ಶಕ್ತಿಯಂತೆ ಅನ್ನೋದು ತಿಳಿಯಣ್ಣ..
ನಾವೆಲ್ಲರೂ ಕಲಿಯೋಣ ನಾವೆಲ್ಲರೂ ಬೆಳೆಯೋಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೊ ನಮ್ಮ ಮಕ್ಳಣ್ಣ..


ಉಚಿತ ಶಿಕ್ಷಣ ಕಡ್ಡಾಯ ಶಿಕ್ಷಣ ಮಗುವಿನ ಹಕ್ಕಣ್ಣ
ಆಟದಿಂದ ಪಾಠವನ್ನು ಕಲಿಸೋ ಗುರುವಣ್ಣ
ಸರ್ಕಾರಿಶಾಲೆ ಅನ್ನಬೇಡ ಓದಲು ಕಳಿಸಣ್ಣ..
ನಲಿಕಲಿ ಶಿಕ್ಷಣಕೆ ಮಕ್ಕಳೆಲ್ಲ ಹರುಷದಿ ಬರುವರಣ್ಣ
ಪಾಠ ಮಾಡುವಾಗ ಚಟುವಟಿಕೆ ಇರುವುದಣ್ಣ
ಇಲ್ಲಿ ಯೋಜನೆ ನೂರಾರು ಈ ಮಕ್ಕಳ ಬೆಳಗಿಸಲು..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ..
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ..

- ಸುರೇಶ್ ಟಿ ವಿ

09 Jun 2018, 08:24 pm

ಹಸಿರು - ಉಸಿರು

ನನ್ನೊಡಲ ಉಸಿರು‌
ನಿನ್ನಲೆ‌ ಬೆರೆತಿದೆ ಹಸಿರೆ
ಅಳಿಯದುಳಿಯಲೆನ್ನ ಹೆಸರು
ನೀನೇನೆ‌ ಮೂಲ ಆಸರೆ

ದೂರಾದರೆ ಈ ಭುವಿಯ ಮರೆತು
ಬೇರೇನಿಲ್ಲ ಅಳಿವಿನ ಹೊರತು
ಮರೆಯಾಗದಿರು ಉಳಿಸದೆ ಗುರುತು
ಬದುಕುವೆ ನಾ‌ ನಿನ್ನ ಬೆರೆತು

ನೀ ನಳನಳಿಸಿ ಹಸಿರಾಗಿ ನಕ್ಕರೆ
ನಗುವೆ ಕುಡಿದಂತೆ ಹಾಲು ಸಕ್ಕರೆ
ನೀನೇನೆ ಅತ್ತು ಅತ್ತು ಸತ್ತರೆ
ಸುಟ್ಟು ಸಾಯುವಳು ಈ ಧರೆ

ನೀನಿಲ್ಲದೆ‌ ನಾನೇನು ಅಲ್ಲ
ನಾನಿಲ್ಲದೆ ಅಳಿವುದು ಎಲ್ಲ
ನೀ ಜೊತೆಜೊತೆಯಿರೆ ನಲ್ಲ
ಕರುಳ‌ಬಳ್ಳಿಗಳ ಜೀವನ ಸವಿಬೆಲ್ಲ

- ಶ್ರೀಕಾವ್ಯ

08 Jun 2018, 06:39 pm

ವಿಧಿಯಾಟ

ಈ ಕಣ್ಗಳಲಿ ತುಂಬಿ ಹರಿಯುವಷ್ಟು ಕಣ್ಣೀರ ದಾರೆ,, ಆದರೂ ಬಿಕ್ಕಿ ಅಳುವ ಸ್ವಾತಂತ್ರ್ಯ ವಿಲ್ಲ ಎನಗೆ...

ಮನಸಿಗೆ ಭಾರವಾದ ನೋವು ಹೇಳಲು ಕಾತೊರೆಯುತ್ತಿದೆ ,,ಆದರೆ ಕೇಳುವ ಒಂದು ಹೃದಯವಿಲ್ಲ ....

ಯಾರೋ ನನ್ನೋರು ?
ಎಲ್ಲಾ ಸ್ವಾರ್ಥಿಗಳ ಲೋಕ
ಎಲ್ಲೋ ,ಯಾರೋ ಪ್ರೀತಿ ,ವಾತ್ಸಲ್ಯಕ್ಕೆ ಬೆಲೆ ಕೊಡೋರಾದ್ರು ಯಾರೋ .....

ಹೇಳಲಾಗುತಿಲ್ಲ ಮನ ಬಾರ, ಸಹಿಸಲಾಗುತಿಲ್ಲ ವೇದನೆಯ,
ಅಳಲು ಬಿಕ್ಕಿ ಬಿಕ್ಕಿ ಅಳ ತೊಡಗಿದೆ
ಸಾಂತ್ವನಿಸುವವರಿಲ್ಲವೋ....

ಏನೋ ವಿಧಿ ,ಯಾಕೋ ಯಾಕೋ ಇಂತ ಬದುಕ ಕೊಟ್ಟು ನೋಡುವ ಹುಚ್ಚು ಸಾಹಸ ನಿನಗೆ ಶರಣು ತಂದೆ ನಿನಗೆ ....

ಇನೆಂದು ಕೊಡದಿರು ನನ್ನ ಶತ್ರುಗಳಿಗೂ ಈ ನನ್ನ ಬದುಕಾ

ಮುಂದೆ ನನಗಾಗಿ ಬರುವುದು ಒಳ್ಳೆಯ ಬದುಕು ಎಂಬ ಸಣ್ಣ ನಂಬಿಕೆಯೂ ಹುಸಿಯಾಗಿದೆಯಲ್ಲೋ ಭಗವಂತ

- Acchu love

08 Jun 2018, 05:33 pm