ಮರಗಳಿರಲಿ ಗಿಡಗಳಿರಲಿ,,
ಹೂ ಹಣ್ಣು ದುಂಬಿ ನಗಲು,,,,
ಜಗವೇ ಸುಂದರ,,
ನಿಸರ್ಗ ನಮ್ಮ ಮಂದಿರ,,,
ಬೆಟ್ಟವಿರಲು ಗುಡ್ಡವಿರಲು,,
ಝರಿ ತೊರೆಗಳು ಹರಿಯುತಿರಲಿ,,,
ಜಗವೇ ಸುಂದರ,,
ಇರಲಿ ಇವು ನಿರಂತರ,,,
ಜಿಂಕೆ ಜಿಗಿದು ಹಕ್ಕಿ ಉಲಿದು,,,,
ಮೋಡ ಅರಳಿ ತೇಲುತಿರಲು,,,
ಜಗವೇ ಸುಂದರ ಮಂದಿರ,,,
ಶುದ್ಧ ಗಾಳಿ, ನೀರು
ದೊರೆಯುತಿರಲು
ಗಿಡ,ಮರಗಳು ನಿತ್ಯ ಬೆಳೆತಿರಲು
ಪರಿಸರ ಉಳಿಸಿ
ಬೆಳೆಸುವವರ ಸಂಖ್ಯೆ ಹೆಚ್ಚುತ್ತಿರಲು
ಈ ಜಗವೆಷ್ಟು ಸುಂದರ!!!
ನೆನೆದು ಮಲಗಿದರೇನು ಮನದಲ್ಲಿ
ಕೈಗೆ ನಿಟುಕದ ಕನಸುಗಳ
ಸವಿ ಸಂಜೆಯ ಹೊತ್ತಲ್ಲಿ........
ಕಣ್ಣು ಕಣ್ಣುಗಳ ಮಿಲನ
ಅದೊಂದು ಮಧುರ ಕ್ಷಣ
ನಾ ಅರಿಯೆನು ಆಕೆಯ ಮನದ ಅಂತರಾಳವ
ಇಂತಿಹುದೋ ನನ್ನ ಮೇಲಾ
ಅಭಿಪ್ರಾಯ ಅವಳಿಗ......
ಬರಿ ಮಾರು ದೂರದ ಪಯಣ
ನನ್ನ ಆಕೆಯ ಕಣ್ಣೋಟದ ಚಲನ
ಗಂಟೆ ಕೂಗಿ ಕರೆಯುವುದು...
ಆಕೆಯ ಆಗಮನದ ಬರುವಿಕೆಯ ಸಮಯ
ನಿಗದಿ ಪಡಿಸಿದಂತಿದೆ ಸಮಯ
ಆ ಗಳಿಗೆಯ ನಮಗಾಗಿ...
ಹೀಗೆ ನಡೆಯುತ್ತಿದೆ ಈ ಸವಿಸಂಜೆಯ
ಕಣ್ಣೋಟದ ಪಯಣ......
ಎರಡು ದಿನದಿಂದೆಕೋ ಮನಸ್ಸಿನಲ್ಲಿ ಕಳವಳ
ಆಕೆ ಕಣ್ಣಿಗೆ ಬಿದ್ದಿಲ್ಲದ ಕಾರಣ....
ಆದಷ್ಟು ಬೇಗ ತಿಳಿಸಬೇಕು ನನ್ನಿ .......
ಪ್ರೀತಿಯ ಒಲೆಯ ಕವನ
ಕಾರ್ಮುಗಿಲು ಕವಿದ ಮೋಡದ ಮರೆಯಲಿ
ನಿಂತಿರುವೇ ನೀನು ಭೂಮಿ ತಾಯಿ ಮಡಿಲಲಿ
ಹನಿಹನಿಯಾಗಿ ಸುರಿಸಿ ಭೂಮಿ ತಂಪಾಗಿಸದೆ
ಜೀವ ಜಲ ರಾಶಿಗೂ ಬಾಯಾರಿಕೆ ನೀಗಿಸದೆ
ಜೋರಾಗಿ ಅತ್ತು ಬಿಡು ನೀ ಒಮ್ಮೆಲೆ
ಗದ್ದೆ ತುಂಬ ಪೈರು ತುಂಬಿದ ತೆನೆಗಳು
ನಿತ್ಯ ದುಡಿಮೆಯ ಬಯಲಿನೆಡೆಗೆ
ಚಳಿಸಲಾಗದ ಕಾಲುಗಳು
ಬಿಸಿಲು ಬೇಗೆಗೆ ಬೆಂದು ಹೋಗಿ
ನಾಡಿ ಬಡಿತ ನಿಂತವು
ಮೊರೆ ಇಡುವೆನು ದೇವಾ ರೈತನು
ಅವನ ಕೂಗು ನಿನಗೆ ಕೇಳಿಸದೆ ???
ಬದುಕು ಕಲಿಸುವ ಸರ್ಕಾರಿ ಸ್ಕೂಲಲ್ಲಿ ಕಲಿತವ್ನೆ ಜಾಣ
ಐಪಿಎಸ್ಸು ಐಎಸ್ಸಿನ ಕೆಲಸ್ದಲ್ಲಿ ಸರ್ಕಾರಿ ಸ್ಕೂಲವ್ರೆ ನೋಡಣ್ಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ
ಲಕ್ಷ ಲಕ್ಷ ಡೊನೆಷನ್ ಕೊಟ್ಟು ಕಲಿತವ್ನು ಅಷ್ಟೇ ಕಣಣ್ಣ..
ಕನ್ನಡ ಕಲಿತವ ಹಣದ ಕೋಟೆ ಕಟ್ಟ ಬಹುದಣ್ಣ..
ವಿದ್ಯೆ ಪಡೆದವ್ನು ದೇಶದ ಒಳಿತಿಗೆ ನಿಜವಾಗಿ ಬೇಕಣ್ಣ..
ವಿದ್ಯೆಇಲ್ಲದ ಮುಖ ಹಾಳೂರಹದ್ದು ಅನ್ನೋದು ಮರೆಯಬೇಡಣ್ಣ..
ಶಿಕ್ಷಣವೇ ಶಕ್ತಿಯಂತೆ ಅನ್ನೋದು ತಿಳಿಯಣ್ಣ..
ನಾವೆಲ್ಲರೂ ಕಲಿಯೋಣ ನಾವೆಲ್ಲರೂ ಬೆಳೆಯೋಣ..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೊ ನಮ್ಮ ಮಕ್ಳಣ್ಣ..
ಉಚಿತ ಶಿಕ್ಷಣ ಕಡ್ಡಾಯ ಶಿಕ್ಷಣ ಮಗುವಿನ ಹಕ್ಕಣ್ಣ
ಆಟದಿಂದ ಪಾಠವನ್ನು ಕಲಿಸೋ ಗುರುವಣ್ಣ
ಸರ್ಕಾರಿಶಾಲೆ ಅನ್ನಬೇಡ ಓದಲು ಕಳಿಸಣ್ಣ..
ನಲಿಕಲಿ ಶಿಕ್ಷಣಕೆ ಮಕ್ಕಳೆಲ್ಲ ಹರುಷದಿ ಬರುವರಣ್ಣ
ಪಾಠ ಮಾಡುವಾಗ ಚಟುವಟಿಕೆ ಇರುವುದಣ್ಣ
ಇಲ್ಲಿ ಯೋಜನೆ ನೂರಾರು ಈ ಮಕ್ಕಳ ಬೆಳಗಿಸಲು..
ಇಲ್ಲಿ ಕಲಿತು ಹೋದರೆ ಬದುಕು ಬಂಗಾರ ಎಂಬ ಮಾತು ನಿಜವಣ್ಣ..
ಈ ಸರ್ಕಾರಿ ಶಾಲೆಯೇ ದೇಶದ ಭವಿಷ್ಯ ನೋಡೋ ನಮ್ಮ ಮಕ್ಳಣ್ಣ..