ಎಡವುತ್ತಲೇ ಇರುತ್ತವೆ ಆಗಾಗ ಹೃದಯಕ್ಕೆ
ಚಿಕ್ಕದೋ ದೊಡ್ಡದೊ ಗಾಯ ಮಾಡಿ ನಗುವ
ಬಹುರೂಪಿ ಪ್ರೀತಿಯ ಕಲ್ಲುಗಳು,
ಎಷ್ಟು ಬದಿಗೆ ಸರಿದು ನಡೆದರೂ ಬಿಡವು
ಮತ್ತೆ ನಮ್ಮ ದಾರಿಗೆ ಬಂದು ಎಡವದೇ ಇರವು
ರಕ್ತ ಒಸರದಿದ್ದರೇನಂತೆ, ಹೃದಯದ ಅನು-
ರಕ್ತ ಬಾವನೆ ಬಿರಿಯಲಾರದೇನು ?
ಕಲ್ಲುಗಳು ಕರಗಲಾರವು ಪ್ರೀತಿಯ ಕಣ್ಣೀರಿಗೆ
ಕೊಲ್ಲುವುದನಷ್ಟೇ ಬಲ್ಲವು ಬಂದವರನು ದಾರಿಗೆ
ಎಂತ ಹುಚ್ಚರಯ್ಯ ನಾವು,
ಎಡವಿದ ಕಲ್ಲನ್ನೂ ತಡವಿ ಮುದ್ದಾಡುವೆವು
ಮತ್ತೆ ಅದು ಗುದ್ದಿ ಮನದ ನೆಲವ ಪುಡಿ
ಗೈವದೆಂಬ ಹಿಡಿ ನೆನಕೆಯೂ ಇಲ್ಲದೇ.
ಎಡವಿ ಬಿದ್ದರೂ ಲೆಕ್ಕವಿಲ್ಲದಷ್ಟು ಸಲ,
ಮೈ ಕೊಡವಿ ನಡೆವೆ ಮುಂದೆ ಅದೇನು ಮನೋಬಲ
ಮತ್ತೊಂದು ಮುಗ್ದ ಕಲ್ಲು ಕಾಲಿಗಡರಿ
ತೊಡರಿ ನೀ ಮುಗ್ಗರಿಸಿ ಬೀಳುವ ವರೆಗೆ !
ಭುವಿಯ ಭಾಗ್ಯ ಜೀವಿಯೇ
ನಿನ್ನ ಬೀಳ್ಕೊಡುವ ಮುನ್ನ
ಆಗು ಈ ಜಗದ ಆಶಾಕಿರಣ..
ಜೊತೆ ಬರೋದಿಲ್ಲ ನೀ ಕೂಡಿಟ್ಟ ಆಸ್ತಿ ಹಣ
ಜೊತೆ ಬರೋದೊಂದೆ ನೀ ಮಾಡಿದ ಧರ್ಮ ದಾನ
ಜೀವನ ಜನನ ಮರಣ ನಡುವಿನ
ಒಂದು ರೋಚಕವಾದ ಕ್ರೀಡಾಂಗಣ..
ಎಲ್ಲರಲ್ಲಿ ಒಬ್ಬನಾಗಿ ನೀನು
ಆಟವಾಡಬೇಕು ಪ್ರತಿದಿನ..
ವಿನಯ ಎಂಬ ನಿಯಮ
ಪಾಲಿಸಬೇಕು ಪ್ರತಿಕ್ಷಣ..
ಅಹಂಕಾರ ಎಂಬ ಗೆರೆ
ತುಳಿಯಬಾರದು ನಿನ್ನ ತನುಮನ..
ಆತ್ಮವಿಶ್ವಾಸದಿಂದ ಸಂತಸದಿಂದ
ಸಾಗಬೇಕು ಆಟದ ಪಯಣ..
ಗೆದ್ದರೆ ನೀನು ಪಡೆಯುವೆ
ಬಹುದೊಡ್ಡ ಸ್ಥಾನಮಾನ..
ಸೋತರೆ ಬಿಟ್ಟು ಹೋಗಬೇಡ
ನೀನು ಗೆಲುವಿನ ನಿಲ್ದಾಣ..
ಕಲಿಯಬೇಕು ನೀನು ಆಟದಲ್ಲಿ
ಏಟುಗಳ ಚಪ್ಪಾಳೆಗಳ ನೀತಿಪಾಠವನ್ನ.." 1 "
ಅಪ್ಪ ಅಮ್ಮನ ಹೃದಯದಲ್ಲಿ
ಕಟ್ಟಬೇಕು ನೀನು ನಗುವಿನ ಗಗನ..
ಕಟ್ಟಬೇಕು ಈ ಭೂಮಿಯಲ್ಲಿ
ನೀನು ಪ್ರೀತಿ ಸ್ನೇಹದ ಬಣ..
ಮಾಡಬೇಡ ನೀನು ಯಾರಿಗೂ
ದ್ವೇಷ ಮೋಸದ ಕದನ..
ಉಣಿಸಬೇಕು ನೀನು ಎಲ್ಲರಿಗೂ
ಶಾಂತಿ ಸಹನೆಯ ಭೋಜನ..
ಮೆಚ್ಚಬೇಕು ಜಗವೆಲ್ಲಾ
ನಿನ್ನ ಜೀವನ ವಿಧಾನ..
ಸಾರಬೇಕು ಬಲ್ಲವರೆಲ್ಲಾ
ನಿನ್ನ ಸಾಧನೆಯ ಕಥನ....." 2"
ಈ ಲೋಕ ನಿನಗೆ ಇಹಲೋಕ
ಪಾಪಕ್ಕೆ ನೀ ಕಡಿವಾಣ ಹಾಕಬೇಕು
ಪುಣ್ಯದ ಚಿಲವ ಮನಿ ಮನಗಳಿಗೆ ನೀ ಹಂಚಬೇಕು
ಕೊನೆಗೆ ಸಾಗುವೆ ನೀ ಪರಲೋಕ...
ದಾರಿಯಲಿ ತುತಾಗಭೂದು ನಿನ್ನ ಪಾಪದ ಚೀಲ
ಪುಣ್ಯದ ಲೆಕ್ಕವು ಹೆಚ್ಚಾದರ ನೀ ಕೆಳ
ಬೆನ್ನಿಗೆ ಬಾರವಲ್ಲ ನಿನ್ನ ಪುಣ್ಯದ ಚೀಲ
ನೀ ಹೂಗುವದಾರಿಯಲಿ ಹೇಳಬ್ಯಾಡ ನೀ ಸುಳ್ಳ....
ಪರಲೋಕದಲ್ಲಿ ಮೆಚ್ಚತಾನ ನಿನ್ನ ಶಿವನು
ಯಾರಿಗು ಮಾಡದಿರು ಮೋಸವನ್ನು
ಮೃತು ಲೋಕಕ್ಕೆ ಕಾಲಿಟ್ಟರ ಬೆಂಕಿ ಹಚ್ಚತಾನ ನಿನಗೆ ಯಮನು
ಪಾಪದ ಲೆಕ್ಕ ತಪ್ಪಲಾರ ಎಂದಿಗು ಅವನು...
ಮಾಡದಿರು ಮೂಸವ ಮನುಜ ನೀ ಹುಟ್ಟಿದ ಜಗಜಂತುಗಳಿಗೆ
ಪ್ರೀತಿ ಪ್ರೇಮದಿಂದ ಪುಣ್ಯದಲೆಕ್ಕ ಹೆಚ್ಚಿಸು ನಿನ್ನ ಅಣು ಅಣುವಿನೂಳಗು
ಹೆಚ್ಚೆಚ್ಚು ಪ್ರೀತಿ ಕಳೆಯುವದು ದ್ವೇಷದಾ ಭೀತಿ ನಿನ್ನದ ಈ ಜಗದೊಳಗೆ....
ಮಾಡದಿರು ಮನುಜ ನೀ ಮೂಸವ
ಹುಟ್ಟಿದ ಜಗಜಂತುಗಳಿಗೆ.........✍ಈಶ್ವರ್ ಬಿ....
ಮುಳ್ಳಾಗು ಮನವ ಕುಕ್ಕುವ
ಮೃಗ ಪಕ್ಷಿ ಜಂತುಗಳಿಗೆ,
ಮುಳ್ಳಲ್ಲೇ ಅರಳಿ ಕಂಪು ಬೀರುವ
ಜಾಜಿ ಮಲ್ಲಿಗೆಯಾಗು
ನಿನ್ನಾತ್ಮಾಭಿಮಾನಕೆ ಗೌರವ ಕೊಡುವ
ಸಜ್ಜನ ಸ್ನೇಹಿ ಹಿತೈಷಿಗಳಿಗೆ.
ಸದಾ ನಿನ್ನೊಂದಿಗಿರಲಿ ಹುಡುಗಿ
ಎಡಗೈಲಿ ಖಡ್ಗ, ಬಲಗೈಲಿ ಲೇಖನಿ,
ಆತ್ಮ ರಕ್ಷಣೆಗೆ ಒಂದು,
ಆತ್ಮ ನಿವೇದನೆಗೆ ಮತ್ತೊಂದು..
ತುಟಿಯಲ್ಲಿ ಹಂಚುತ್ತಿರು ಮಂದಹಾಸವ
ಮರೆಯದೆಲೆ ನೀನು ಮುಂದೆ ಎಂದೆಂದೂ..
ನಿನ್ನ ಬಾಳ ಕತ್ತಲ ದಾರಿಯಲ್ಲಿ
ನಾನೆಂದಿಗೂ ಬರುವೆ ಕಿರು ದೊಂದಿಯಾಗಿ
ನೀನಿಡುವ ಪ್ರತಿ ಹೆಜ್ಜೆಗಳ ಕೆಳಗೆ ಕೈಯಿಟ್ಟು
ಕಾಪಾಡುವೆ ನಿನ್ನ ಮೃದು ಪಾದ ಮನಸುಗಳ
ದುರ್ಗಮ ದಾರಿಯ ಕಲ್ಮುಳ್ಳು ಚುಚ್ಚದಿರಲೆಂದು.
ಅನುದಿನವೂ ಉಣಿಸಿದೆ ನೀನೆನಗೆ,
ಪ್ರೀತಿ ವಾತ್ಸಲ್ಯದ ಅಮೃತ ಸುಧೆ,
ಅವ್ವ ಕೊಟ್ಟಂತೆ ರುಚಿಯ ಕೈತುತ್ತು
ಆತ್ಮೀಯ ಗೆಳತಿಯ ಸಿಹಿ ಹೊತ್ತು
ನಿನ್ನ ನಗುವಲ್ಲೇ ಕಳೆದು ಹೋದೆ
ನಾನು ಮೂರು ಹೊತ್ತು.
ತೊರೆಯಲೆಂತು ಹೆಣ್ಣೇ ನಿನ್ನೊಲವಿನ ಒಡನಾಟ
ಆಡಿ ನಲಿದೆವಲ್ಲೇ ಹುಡುಗಿ ಮೈ ಮರೆತು ಮಂಗನಾಟ
ಸಾಗುತಿರಲಿ ಹೀಗೆಯೇ ನಮ್ಮ ಪ್ರೀತಿಯ ಕೂಟ
ನೋವುಗಳ ಮರೆಸಿ ಕಿರುನಗೆಯ ಮೂಡಿಸುವ
ಚೆಲುವಿನಾಟ.
ಪ್ರೀತಿಯ ತೋರಿ ಮನವ
ಕೊಳ್ಳೆ ಹೊಡೆದು
ದುಖಃವ ಮರೆಸಿ
ನಗುವ ಕಲಿಸಿ
ಇಂದು ನನ್ನ
ಬಿಟ್ಟು
ಕಣ್ಣಿರ ಕೊಂಡು ಹೋದೆಯಲ್ಲೆ ಗೆಳತಿ
ನೀ ಬಾರದಿದ್ದರು ನನ್ನ ಕಣ್ಣಿರ
ಮರುಕಳಿಸು ಗೆಳತಿ
ನಿನ್ನ ನೆನಪಲ್ಲೆ ಅತ್ತುಅತ್ತು ಸಾಯುವೆ ಗೆಳತಿ
ಕಣ್ಣಿರ ಮರುಕಳಿಸು
ಅಂಜಿಕೆಗೂ ಹೆದರಿಕೆ ಆಗುವಂತೆ ನೂರು
ಪಾಠ ಕಲಿಸಿದ ಜೀವನ ಶಾಲೆಗೆ ನನ್ನ ನಮನ.
ಗಮನಾರ್ಹ ನಾ ಸಲ್ಲಿಸಿದ ರೊಕ್ಕ
ಕಣ್ಣೀರಾದುದು ವಿಷಾದ,ಆದರುನೂ ಚಿಂತೆ ಇಲ್ಲ ಚಿತೆ ಸೇರುವವರೆಗೂ ನಾ ಈ ಮಿತ್ಯ ಲೋಕದ ಪಾಠಗಳನ್ನು ಮರೆಯುವುದಿಲ್ಲ.
ಕೆಟ್ಟದೊಂದು ಕಾಲ ಒಳ್ಳೆಯ ಘಳಿಗೆ
ಬರುವುದು ಬಹು ವಿರಾಳ, ಇತ್ತೀಚೆಗೆ ಈ ಜಗತ್ತಿನಲ್ಲಿ ಜೀವಿಸುವ ಜನರಿಗೆ ನಟಿಸಿವುದು
ಬಲು ಸರಳ.
ನಾ ಕೊಟ್ಟ ಮಾತುಗಳಿಗೆ ಬದ್ಧಳಾಗಿ ಬದುಕಬೇಕೆಂದು ಬಯಸುವವರು ತಾವು ಇತ್ತ ಭಾಷೆಗೆ ಗಡಿದಾಟದೆ ವ್ಯವಹರಿಸುವುದು ಮುಖ್ಯವೆಂದು ಮರೆಯಬಾರದೆಂದಿಗೂ!!
ಅನುಭವ ಇತ್ತ ಕಹಿ ತುತ್ತು ವಯಸ್ಸು
ತಿಳಿಯಲು ಇನ್ನು ಉಳಿದಿರುವ ಸಹಿ ತುತ್ತು ,
ಇನ್ನು ಬಾಕಿ ಇವೆ ಸಾವಿರಾರು ಗಮ್ಮತ್ತು ,
ಕಣ್ಣು ಕಾಣದ ಅಮಲು
ಕಾರ್ಮೋಡ ಕವಿದ ಮುಗಿಲು
ನೋಡಲು ಕಾಯುತ್ತಿರುವ ಒಡಲು
ಸಲ್ಲಿಸುತ್ತಿದೆ ಒಂದು ನಮನ
ಬೇಡವೆಂದರೂ ಜರುರಾಗಿ ಹಾಜರಿರುವ ಪ್ರತಿದಿನದ ಮುಂಜಾವಿಗೆ.