Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವ್ವನ ನೆನಪು ......

ಹೊತ್ತು ಹೊಂಟೊಯುತು
ನೆತ್ತಿಯ ಮ್ಯಾಲ ಸೂರ್ಯ ಬಂದಾಯ್ತು
ಎದ್ದೇಳು ನನ್ನ ಮುದ್ದು ಮಗುವೇ ಬೆಳಗಾಯ್ತು
ಮುದ್ದು ಮಾಡಿ ಎಬ್ಬಿಸಿದಳು ಬಾಲ್ಯದಲಿ ನನ್ನವ್ವ....

ಹರೆಯು ತಿರುಗಿ ಕರಿಯಾದ ಗಲ್ಲದ ಚಕ್ಕು
ಚಿಗುರು ಮಿಸಿಯ ನನ್ನ ಮುದ್ದು ಮಗುವೇ
ಬೈದು ಬುದ್ದಿ ಹೇಳಿ ದುಡಿಯಲು ಹಚ್ಚಿದಳು
ಬದುಕೆಂಬ ಬಣ್ಣದ ಲೋಕಕ್ಕೆ ನನ್ನ ಬಿಟ್ಟಾಳು ನನ್ನವ್ವ.....

ಹಸನಾದ ಬದುಕಿಗೆ ಬಿಸನಕಿ ವಳಕಲ್ಲಿಗೆ ಹಾಡುಕಟ್ಟಿ
ಸೊಗಸಾದ ಸಧುಗುಣಿಯ ಸೊಸೆಯ ತಂದಾಳು
ಒಬ್ಬಂಟಿತನವ ಸೂಸೆಯಿಂದ ಹೂಗಲಾಡಿಸಿಯಾಳು ಮನಿಯಾಗ
ತಾ. ಹೂಗುವಮುನ್ನ ಸೊಸೆಗೆ ಕಿವಿಮಾತು.ಮಗನ ಕೈ ಬಿಡಬ್ಯಾಡ ಎಂದು ಹೆಳ್ಯಾಳು ನನ್ನವ್ವ....

ಹೆದರಿದೆನು ಬೆದರಿದೆನು ಅವ್ವನಿಲ್ಲದ ನೆನಪಲಿ
ಚಿಂತೆಯಲ್ಲಿ ನೆರೆ ಹಾಯ್ದವು ತಲೆ ಕೂದಲೆಲ್ಲ
ಮರಿಸಲು ಮಡದಿ ಮಕ್ಕಳಿರಲು ಮನೆಯಲಿ
ಮನದೊಳಗಿನ ನನ್ನವ್ವನ ನೆನಪು ನಾ ಸತ್ತ ಮೇಲು ಮರೆಯಾಗಲಿಲ್ಲ ನನ್ನವ್ವ........

- ishwar

13 Feb 2018, 08:56 am

ಪ್ರೀತಿಯ ಕಲ್ಲು..

ಎಡವುತ್ತಲೇ ಇರುತ್ತವೆ ಆಗಾಗ ಹೃದಯಕ್ಕೆ
ಚಿಕ್ಕದೋ ದೊಡ್ಡದೊ ಗಾಯ ಮಾಡಿ ನಗುವ
ಬಹುರೂಪಿ ಪ್ರೀತಿಯ ಕಲ್ಲುಗಳು,
ಎಷ್ಟು ಬದಿಗೆ ಸರಿದು ನಡೆದರೂ ಬಿಡವು
ಮತ್ತೆ ನಮ್ಮ ದಾರಿಗೆ ಬಂದು ಎಡವದೇ ಇರವು
ರಕ್ತ ಒಸರದಿದ್ದರೇನಂತೆ, ಹೃದಯದ ಅನು-
ರಕ್ತ ಬಾವನೆ ಬಿರಿಯಲಾರದೇನು ?
ಕಲ್ಲುಗಳು ಕರಗಲಾರವು ಪ್ರೀತಿಯ ಕಣ್ಣೀರಿಗೆ
ಕೊಲ್ಲುವುದನಷ್ಟೇ ಬಲ್ಲವು ಬಂದವರನು ದಾರಿಗೆ
ಎಂತ ಹುಚ್ಚರಯ್ಯ ನಾವು,
ಎಡವಿದ ಕಲ್ಲನ್ನೂ ತಡವಿ ಮುದ್ದಾಡುವೆವು
ಮತ್ತೆ ಅದು ಗುದ್ದಿ ಮನದ ನೆಲವ ಪುಡಿ
ಗೈವದೆಂಬ ಹಿಡಿ ನೆನಕೆಯೂ ಇಲ್ಲದೇ.
ಎಡವಿ ಬಿದ್ದರೂ ಲೆಕ್ಕವಿಲ್ಲದಷ್ಟು ಸಲ,
ಮೈ ಕೊಡವಿ ನಡೆವೆ ಮುಂದೆ ಅದೇನು ಮನೋಬಲ
ಮತ್ತೊಂದು ಮುಗ್ದ ಕಲ್ಲು ಕಾಲಿಗಡರಿ
ತೊಡರಿ ನೀ ಮುಗ್ಗರಿಸಿ ಬೀಳುವ ವರೆಗೆ !

- ಶ್ರೀಗೋ.

13 Feb 2018, 12:46 am

ನಿನ್ನ ಬೀಳ್ಕೊಡುವ ಮುನ್ನ (ಸಾಯುವ ಮುನ್ನ )

ಭುವಿಯ ಭಾಗ್ಯ ಜೀವಿಯೇ
ನಿನ್ನ ಬೀಳ್ಕೊಡುವ ಮುನ್ನ
ಆಗು ಈ ಜಗದ ಆಶಾಕಿರಣ..
ಜೊತೆ ಬರೋದಿಲ್ಲ ನೀ ಕೂಡಿಟ್ಟ ಆಸ್ತಿ ಹಣ
ಜೊತೆ ಬರೋದೊಂದೆ ನೀ ಮಾಡಿದ ಧರ್ಮ ದಾನ


ಜೀವನ ಜನನ ಮರಣ ನಡುವಿನ
ಒಂದು ರೋಚಕವಾದ ಕ್ರೀಡಾಂಗಣ..
ಎಲ್ಲರಲ್ಲಿ ಒಬ್ಬನಾಗಿ ನೀನು
ಆಟವಾಡಬೇಕು ಪ್ರತಿದಿನ..
ವಿನಯ ಎಂಬ ನಿಯಮ
ಪಾಲಿಸಬೇಕು ಪ್ರತಿಕ್ಷಣ..
ಅಹಂಕಾರ ಎಂಬ ಗೆರೆ
ತುಳಿಯಬಾರದು ನಿನ್ನ ತನುಮನ..

ಆತ್ಮವಿಶ್ವಾಸದಿಂದ ಸಂತಸದಿಂದ
ಸಾಗಬೇಕು ಆಟದ ಪಯಣ..
ಗೆದ್ದರೆ ನೀನು ಪಡೆಯುವೆ
ಬಹುದೊಡ್ಡ ಸ್ಥಾನಮಾನ..
ಸೋತರೆ ಬಿಟ್ಟು ಹೋಗಬೇಡ
ನೀನು ಗೆಲುವಿನ ನಿಲ್ದಾಣ..
ಕಲಿಯಬೇಕು ನೀನು ಆಟದಲ್ಲಿ
ಏಟುಗಳ ಚಪ್ಪಾಳೆಗಳ ನೀತಿಪಾಠವನ್ನ.." 1 "

ಅಪ್ಪ ಅಮ್ಮನ ಹೃದಯದಲ್ಲಿ
ಕಟ್ಟಬೇಕು ನೀನು ನಗುವಿನ ಗಗನ..
ಕಟ್ಟಬೇಕು ಈ ಭೂಮಿಯಲ್ಲಿ
ನೀನು ಪ್ರೀತಿ ಸ್ನೇಹದ ಬಣ..
ಮಾಡಬೇಡ ನೀನು ಯಾರಿಗೂ
ದ್ವೇಷ ಮೋಸದ ಕದನ..
ಉಣಿಸಬೇಕು ನೀನು ಎಲ್ಲರಿಗೂ
ಶಾಂತಿ ಸಹನೆಯ ಭೋಜನ..
ಮೆಚ್ಚಬೇಕು ಜಗವೆಲ್ಲಾ
ನಿನ್ನ ಜೀವನ ವಿಧಾನ..
ಸಾರಬೇಕು ಬಲ್ಲವರೆಲ್ಲಾ
ನಿನ್ನ ಸಾಧನೆಯ ಕಥನ....." 2"

- ಸುರೇಶ್ ಟಿ ವಿ

12 Feb 2018, 05:55 pm

ಇಹಲೋಕವೋ ನಿನಗೆ ಪರಲೂಕವೊ

ಈ ಲೋಕ ನಿನಗೆ ಇಹಲೋಕ
ಪಾಪಕ್ಕೆ ನೀ ಕಡಿವಾಣ ಹಾಕಬೇಕು
ಪುಣ್ಯದ ಚಿಲವ ಮನಿ ಮನಗಳಿಗೆ ನೀ ಹಂಚಬೇಕು
ಕೊನೆಗೆ ಸಾಗುವೆ ನೀ ಪರಲೋಕ...

ದಾರಿಯಲಿ ತುತಾಗಭೂದು ನಿನ್ನ ಪಾಪದ ಚೀಲ
ಪುಣ್ಯದ ಲೆಕ್ಕವು ಹೆಚ್ಚಾದರ ನೀ ಕೆಳ
ಬೆನ್ನಿಗೆ ಬಾರವಲ್ಲ ನಿನ್ನ ಪುಣ್ಯದ ಚೀಲ
ನೀ ಹೂಗುವದಾರಿಯಲಿ ಹೇಳಬ್ಯಾಡ ನೀ ಸುಳ್ಳ....

ಪರಲೋಕದಲ್ಲಿ ಮೆಚ್ಚತಾನ ನಿನ್ನ ಶಿವನು
ಯಾರಿಗು ಮಾಡದಿರು ಮೋಸವನ್ನು
ಮೃತು ಲೋಕಕ್ಕೆ ಕಾಲಿಟ್ಟರ ಬೆಂಕಿ ಹಚ್ಚತಾನ ನಿನಗೆ ಯಮನು
ಪಾಪದ ಲೆಕ್ಕ ತಪ್ಪಲಾರ ಎಂದಿಗು ಅವನು...

ಮಾಡದಿರು ಮೂಸವ ಮನುಜ ನೀ ಹುಟ್ಟಿದ ಜಗಜಂತುಗಳಿಗೆ
ಪ್ರೀತಿ ಪ್ರೇಮದಿಂದ ಪುಣ್ಯದಲೆಕ್ಕ ಹೆಚ್ಚಿಸು ನಿನ್ನ ಅಣು ಅಣುವಿನೂಳಗು
ಹೆಚ್ಚೆಚ್ಚು ಪ್ರೀತಿ ಕಳೆಯುವದು ದ್ವೇಷದಾ ಭೀತಿ ನಿನ್ನದ ಈ ಜಗದೊಳಗೆ....

ಮಾಡದಿರು ಮನುಜ ನೀ ಮೂಸವ
ಹುಟ್ಟಿದ ಜಗಜಂತುಗಳಿಗೆ.........✍ಈಶ್ವರ್ ಬಿ....

- ishwar

12 Feb 2018, 06:31 am

ಹುಟ್ಟು ಹಬ್ಬದ ಹರಕೆ

ಹುಟ್ಟು ಹಬ್ಬದ ಹರಕೆ
ಆತ್ಮ ಬಂಧುವೆ ನಿನಗೆ
ಕೊಟ್ಟು ಹರಸುವೆನು ಮುತ್ತ
ಪ್ರೀತಿಯಲಿ ನೆತ್ತಿ ತುದಿಯಲಿ ಇವತ್ತ.

ಜೀವನದಲಿ ನೂರು ನೋವುಗಳಿದ್ದರೇನು
ಎಲ್ಲವನು ಬದಿಗಿರಿಸಿ ನಡೆ ಮುಂದೆ ನೀನು
ಜೇನ್ನೊಣಗಳ ಅಂಬು ಚುಚ್ಚಿ ಕೊಟ್ಟರೂ ನೋವು
ಕಷ್ಟ ಪಟ್ಟರೇನೇ ಸಿಗುವುದು ಸಿಹಿಯಾದ ಜೇನು.

ಸಿರಿ ಇಲ್ಲದಿದ್ದರೇನಂತೆ ಮನೆಯಲ್ಲಿ
ಸೆರೆಯಾಗದಿದ್ದರಷ್ಟೇ ಸಾಕಲ್ಲವೇ..
ಅದರೂನೂ ಪಾಪದ ಕುಸುಮಗಳಿಗೆ
ಮನೆಯೇ ಮಮತೆಯಿಲ್ಲದ ನರಕವಂತೆ.

ಕೆಸರಿನಲೆ ಹುಟ್ಟುವುದು
ನಗು ಮೊಗದ ಹಿರಿ ಕಮಲ,
ನೋವುಗಳನು ಮೆಟ್ಟುವುದು
ನಗು ಮೊಗದಲಿ ಇರಲಿ ಛಲ.

ಮುಳ್ಳಾಗು ಮನವ ಕುಕ್ಕುವ
ಮೃಗ ಪಕ್ಷಿ ಜಂತುಗಳಿಗೆ,
ಮುಳ್ಳಲ್ಲೇ ಅರಳಿ ಕಂಪು ಬೀರುವ
ಜಾಜಿ ಮಲ್ಲಿಗೆಯಾಗು
ನಿನ್ನಾತ್ಮಾಭಿಮಾನಕೆ ಗೌರವ ಕೊಡುವ
ಸಜ್ಜನ ಸ್ನೇಹಿ ಹಿತೈಷಿಗಳಿಗೆ.

ಸದಾ ನಿನ್ನೊಂದಿಗಿರಲಿ ಹುಡುಗಿ
ಎಡಗೈಲಿ ಖಡ್ಗ, ಬಲಗೈಲಿ ಲೇಖನಿ,
ಆತ್ಮ ರಕ್ಷಣೆಗೆ ಒಂದು,
ಆತ್ಮ ನಿವೇದನೆಗೆ ಮತ್ತೊಂದು..
ತುಟಿಯಲ್ಲಿ ಹಂಚುತ್ತಿರು ಮಂದಹಾಸವ
ಮರೆಯದೆಲೆ ನೀನು ಮುಂದೆ ಎಂದೆಂದೂ..

ನಿನ್ನ ಬಾಳ ಕತ್ತಲ ದಾರಿಯಲ್ಲಿ
ನಾನೆಂದಿಗೂ ಬರುವೆ ಕಿರು ದೊಂದಿಯಾಗಿ
ನೀನಿಡುವ ಪ್ರತಿ ಹೆಜ್ಜೆಗಳ ಕೆಳಗೆ ಕೈಯಿಟ್ಟು
ಕಾಪಾಡುವೆ ನಿನ್ನ ಮೃದು ಪಾದ ಮನಸುಗಳ
ದುರ್ಗಮ ದಾರಿಯ ಕಲ್ಮುಳ್ಳು ಚುಚ್ಚದಿರಲೆಂದು.

ಅನುದಿನವೂ ಉಣಿಸಿದೆ ನೀನೆನಗೆ,
ಪ್ರೀತಿ ವಾತ್ಸಲ್ಯದ ಅಮೃತ ಸುಧೆ,
ಅವ್ವ ಕೊಟ್ಟಂತೆ ರುಚಿಯ ಕೈತುತ್ತು
ಆತ್ಮೀಯ ಗೆಳತಿಯ ಸಿಹಿ ಹೊತ್ತು
ನಿನ್ನ ನಗುವಲ್ಲೇ ಕಳೆದು ಹೋದೆ
ನಾನು ಮೂರು ಹೊತ್ತು.

ತೊರೆಯಲೆಂತು ಹೆಣ್ಣೇ ನಿನ್ನೊಲವಿನ ಒಡನಾಟ
ಆಡಿ ನಲಿದೆವಲ್ಲೇ ಹುಡುಗಿ ಮೈ ಮರೆತು ಮಂಗನಾಟ
ಸಾಗುತಿರಲಿ ಹೀಗೆಯೇ ನಮ್ಮ ಪ್ರೀತಿಯ ಕೂಟ
ನೋವುಗಳ ಮರೆಸಿ ಕಿರುನಗೆಯ ಮೂಡಿಸುವ
ಚೆಲುವಿನಾಟ.

- ಶ್ರೀಗೋ.

12 Feb 2018, 12:13 am

ಕೊಂಡು ಹೋದೆಯಲ್ಲೆ ಕಣ್ಣಿರ

ಪ್ರೀತಿಯ ತೋರಿ ಮನವ
ಕೊಳ್ಳೆ ಹೊಡೆದು
ದುಖಃವ ಮರೆಸಿ
ನಗುವ ಕಲಿಸಿ
ಇಂದು ನನ್ನ
ಬಿಟ್ಟು
ಕಣ್ಣಿರ ಕೊಂಡು ಹೋದೆಯಲ್ಲೆ ಗೆಳತಿ
ನೀ ಬಾರದಿದ್ದರು ನನ್ನ ಕಣ್ಣಿರ
ಮರುಕಳಿಸು ಗೆಳತಿ
ನಿನ್ನ ನೆನಪಲ್ಲೆ ಅತ್ತುಅತ್ತು ಸಾಯುವೆ ಗೆಳತಿ
ಕಣ್ಣಿರ ಮರುಕಳಿಸು

- Ananthkumar Ananth

11 Feb 2018, 10:53 am

ಅವನು ಯಾರ

ಇಂಬು ನೀಡಿ ಮನಕ
ಸಂಭ್ರಮದ ಪ್ರೀತಿನ
ತುಂಬಿ ಹೋದ ಅವನು ಯಾರ!!
ನಿನ್ನೆ ಮೊನ್ನೆಯವರೆಗೆ
ಕೂಡಿಟ್ಟ ನನ್ನ ಕನಸ
ಹೊತ್ತು ಒಯ್ದ ಹೈದನು ಯಾರ!!

ನಾ ಮುಂದು ತಾ ಮುಂದು
ಎಂದಿದ್ದ ದಿನವಂದು
ಹಿಂದೆ ನೂಕಿದ ಬೆಳಕು ಯಾರ!!
ನನ್ನವರು ತನ್ನವರು
ಎಲ್ಲರಿಂದ ದೂರೆಳೆದು
ಒಂಟಿತನವ ತಂದೆರೆದವನು ಯಾರ!!

ಮಾತಾಡುವ ಮುನ್ನ
ಮೌನದ ಸೆರೆಯಲ್ಲಿ
ಕೂಡಿಟ್ಟು ಮರೆಯಾದವನು ಯಾರ!!
ಚೆಹರೆ ತೋರುವ ಮುನ್ನ
ಮುಸುಕ ಹೊದ್ದಿಸಿ ನನ್ನ
ಇರುಳಿಗೆ ನೂಕಿ ಹೋದವನು ಯಾರ!!

- ಪಿ.ಜಿ.ಜ್ಯೋತಿ

10 Feb 2018, 04:45 pm

ಅಪ್ಸರೆ...

ತುಟಿಯು ನುಡಿಸಿದೆ ಎದೆಯ,ಹೃದಯ ವೀಣೆಯ..
ನಯನ ಸೆಳೆದಿದೆ ನೊರೆಯ,ತೆರೆಯ ಝರಿಯ..
ಹೂ ಅಂಗಡಿ ಕುಣಿದಾಡಿದೆ
ಹೂಗಾರ ನಾ ಕಳೆದೋದೆನು..
ಶೃಂಗಾರವು ತುಸುನಾಚಿದೆ
ಸಂಭಾಷಣೆ ಮರೆತೋದೆನು...
ಕಡಲ ಊರಿನಲ್ಲಿ ಮತ್ಸ್ಯಕನ್ಯೆಯಂತೆ
ನಿನ್ನ ಮುಂದೆ ಅವಳು ಕರಗಿ ಹೋದಳಂತೆ.
ಇಂದ್ರನ ಮಗಳು ಇಂದ್ರಜಳಂತೆ
ನೀನಿರುವಾಗ ಇನ್ಯಾರು.? ರೂಪವಂತೆ.
ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

10 Feb 2018, 03:37 pm

ನನ್ನ ನಮನ

ಅಂಜಿಕೆಗೂ ಹೆದರಿಕೆ ಆಗುವಂತೆ ನೂರು
ಪಾಠ ಕಲಿಸಿದ ಜೀವನ ಶಾಲೆಗೆ ನನ್ನ ನಮನ.

ಗಮನಾರ್ಹ ನಾ ಸಲ್ಲಿಸಿದ ರೊಕ್ಕ
ಕಣ್ಣೀರಾದುದು ವಿಷಾದ,ಆದರುನೂ ಚಿಂತೆ ಇಲ್ಲ ಚಿತೆ ಸೇರುವವರೆಗೂ ನಾ ಈ ಮಿತ್ಯ ಲೋಕದ ಪಾಠಗಳನ್ನು ಮರೆಯುವುದಿಲ್ಲ.

ಕೆಟ್ಟದೊಂದು ಕಾಲ ಒಳ್ಳೆಯ ಘಳಿಗೆ
ಬರುವುದು ಬಹು ವಿರಾಳ, ಇತ್ತೀಚೆಗೆ ಈ ಜಗತ್ತಿನಲ್ಲಿ ಜೀವಿಸುವ ಜನರಿಗೆ ನಟಿಸಿವುದು
ಬಲು ಸರಳ.

ನಾ ಕೊಟ್ಟ ಮಾತುಗಳಿಗೆ ಬದ್ಧಳಾಗಿ ಬದುಕಬೇಕೆಂದು ಬಯಸುವವರು ತಾವು ಇತ್ತ ಭಾಷೆಗೆ ಗಡಿದಾಟದೆ ವ್ಯವಹರಿಸುವುದು ಮುಖ್ಯವೆಂದು ಮರೆಯಬಾರದೆಂದಿಗೂ!!

ಅನುಭವ ಇತ್ತ ಕಹಿ ತುತ್ತು ವಯಸ್ಸು
ತಿಳಿಯಲು ಇನ್ನು ಉಳಿದಿರುವ ಸಹಿ ತುತ್ತು ,
ಇನ್ನು ಬಾಕಿ ಇವೆ ಸಾವಿರಾರು ಗಮ್ಮತ್ತು ,
ಕಣ್ಣು ಕಾಣದ ಅಮಲು
ಕಾರ್ಮೋಡ ಕವಿದ ಮುಗಿಲು
ನೋಡಲು ಕಾಯುತ್ತಿರುವ ಒಡಲು
ಸಲ್ಲಿಸುತ್ತಿದೆ ಒಂದು ನಮನ
ಬೇಡವೆಂದರೂ ಜರುರಾಗಿ ಹಾಜರಿರುವ ಪ್ರತಿದಿನದ ಮುಂಜಾವಿಗೆ.

- ಚುಕ್ಕಿ

10 Feb 2018, 03:02 am

ದೃಷ್ಠಿ

               .

ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಹೇಗೆ ?
ನೋಡಿದರೆ ನನ್ನದೇ ಪ್ರತಿಬಿ೦ಬ ನೀನು
ಜಗವ ಜಯಸಿದ ನಾನು ನಿನಗೆ ಸೋಲುವೇನೆ?

ಅಪ್ಪ ಅಮ್ಮನ ಕೈ ತುತ್ತು ,ಪ್ರೀತೀಯ ಮುತ್ತುಗಳ
ಮೇಲಿನ ಹಕ್ಕಿಗೆ ಕದನ ಕಾಳಗ ಕತ್ತಿವರಸೆ
ಆಟ ಹೊಡೆದಾಟಗಳ ಕೈಚಳಕ ನೆನದರೆ
ಈಗಲೂ ಪುಳಕ ರೋಮಾಂಚನ ಮೈಮನಕೆ
ಬಾವನೆಗಳ ಝಳಕ ಹೃದಯಕೆ


ತಾಯಿಯ ಮಡಿಲು ತಂದೆಯ ಬಿಸಿಯಪ್ಪುಗೆಯ
ಸಿಕ್ಕು ಹಂಚಿಕೊಂಡವನಲ್ಲವೇ? ಸುಖದ ನಿದ್ದೆ
ಸಿಹಿ ಕನಸು ಭವ್ಯ ಭವಿತ್ವದ ವಾರಸುದಾರನಲ್ಲವೆ
ಒಡಹುಟ್ಟಿದವ


ಒಡಲ ಶಾಪಕೋ ,ಮನದ ಕೋಪಕೋ
ಕಣ್ಣೇರೋಡೆದು ಕತ್ತಲಾವರಿಸುತಿದೆ ನನಗೆ
ನಿನ್ನ ದಿವ್ಯ ಮೌನಕೆ ಪ್ರಖರ ಕಾ೦ತಿಗೆ
ನಿನ್ನ ನಿಸ್ವಾರ್ಥ ನಿಷ್ಕಲ್ಮಶ ಪ್ರೀತಿಗೆ

- ಶಶಿಧರ ಹೆಚ್ ಎನ್

09 Feb 2018, 11:17 pm