Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳ ರೂಪ..

ಶಿವ್ನೆ ಅಂತ ದೇವರ ಗುಡಿಗೆ
ಕೈ ಮುಕ್ಕೊಂಡು ಹೋದೆ..!
ಕಣ್ಮಚ್ಕೊಂಡು ಧ್ಯಾನಕ್ಕುಂತ್ರು
ದೇವ್ರ ಬದ್ಲು ಅವಳ್ನೇ ನೋಡ್ದೆ..!
ತಪ್ಪಾಯ್ತಂತ ದೇವ್ರ ಮುಂದೆ
ಹಚ್ಚಿದೆ ತುಪ್ಪದ ದೀಪ..!
ಬೆಳಗೋ ದೀಪದ ಒಳಗೂ
ಕಾಣ್ತು, ನನ್ನ ಚಿನ್ನಿಯ ರೂಪ..!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

28 Jan 2018, 05:49 pm

ರೈತ ಈ ಮಣ್ಣಿನ ಮೊದಲ ಸುತ

ರೈತ ಈ ಮಣ್ಣಿನ ಮೊದಲ ಸುತ
ಜಗವೇ ಸಾಗದು ಇವನ ನಿಮಿತ್ತ.‌.
ಜೀವಕೋಟಿಗೆ ಇವನೇ ಅನ್ನದಾತ
ಮುಕ್ಕೋಟಿ ದೇವರಿಗಿಂತ ಹೆಸರಾಂತ.‌.
ಸ್ನೇಹಪ್ರೀತಿ ಉಸಿರಾಗಿಸಿಕೊಂಡ ಸಿರಿವಂತ
ದೇಶದ ಶಕ್ತಿ ಎನಿಸಿಕೊಂಡ ಮಹಾಸಂತ .‌. "ಪ"

ಈ ಭೂಮಿಯ ಹಸಿರ ಸಾಗರ ಮಾಡಿದ
ಮನೆಮನೆಯಲಿ ಹರುಷದ ಬಂಗಾರ ಬೆಳಗಿದ..
ಈ ರೈತ ಹುಟ್ಟಿ ಬಂದ ನಮಗಂತ
ಈ ರೈತ ಬಾಳಲಿ ನಗುನಗುತ..

ದುಡಿಮೆಯಲಿ ಸುರಿಯುವ ರೈತನ ಬೆವರು
ಮುಗಿಲೇತ್ತರ ಕುಣಿಯುವ ಹಸಿರಿನ ಪೈರು
ನಮ್ಮ ಬದುಕಿನ ಪ್ರಗತಿಯ ತೇರು..
ಅಸೂರ್ಯನ ಶಕ್ತಿ, ಈ ಭೂತಾಯಿಯ ಪ್ರೀತಿ ತುಂಬುವ ಈ ರೈತನೇ ನಮ್ಮ ನಿಜ ದೇವರು
ನಮಿಸಿರಿ ಈ ದೇವನಿಗೆ ಎಲ್ಲರು..

ಸ್ವರ್ಗಲೋಕ ನಿಜವಾಗಲೂ ಈ ರೈತ ನಡೆದಾಡುವ ಜಾಗ..
ರಾಜವೈಭೋಗ ಎಲ್ಲೆಲ್ಲೂ ಈ ರೈತ ದುಡಿಯಲು ನಿಂತಾಗ..
ಈ ವಿಜ್ಞಾನಿಯ ಯಾಗಕೆ ಆ ರವಿ ಕೂಡ ಸೋಜಿಗ
ತಂತ್ರಜ್ಞಾನದ ಓಟದಲಿ ಬೇಸಾಯ ಬಿಟ್ಟರೆ ಈ
ರೈತ
ಅವಸಾನ ಹತ್ತಿರದಲಿ ಈ ಜಗಕೆ ಖಂಡಿತ..

- ಸುರೇಶ್ ಟಿ ವಿ

27 Jan 2018, 06:21 pm

ಹೆಜ್ಜೆ ನಿನ್ನೊಂದಿಗೆ...

ಹೆಜ್ಜೆ ಮೇಲೆ ಹೆಜ್ಜೆ ಇಡುತ
ಸಾಗುವೆ ನಿನ್ನಿಂದೆ
ಜೀವಕೆ ಉಸಿರೆ ನೀನೆಂದೆ
ಬಾ ಒಲವೆ ಸಾಗುವ ಪ್ರೇಮಲೋಕಕೆ
ಹಾಕುತ ಹೆಜ್ಜೆ ಒಂದೊಂದೆ...

ಮೊಗದಿ ತುಂಬ ಕಿರುಲಜ್ಜೆ
ಸದ್ದು ಮಾಡಿದೆ ಕಾಲ್ಗೆಜ್ಜೆ
ಇರಲಿ ನಮ್ಮ ಅನುಬಂಧ ಹೀಗೆ
ಸಾಗುತ ಇಡುತಾ ಇಬ್ಬರೂ ಹೆಜ್ಜೆ

ಮೌನ ಮನದ ಉಸಿರಾದೆ
ಕಂಡ ಒಡನೆ ಸೆರೆಯಾದೆ
ಕಾಯುತಿರುವೆ ಹೃದಯದಿ
ಒಮ್ಮೆ ನೀನು ಬರಬಾರದೆ

ಪ್ರೀತಿ ಪದಗಳ ಕೂಗಿಬಿಡಲೆ
ಹೃದಯ ಕರೆಗೆ ಹಾರಿಬರಲೆ
ನಿನ್ನ ಹೆಜ್ಜೆಗೆ ನನ್ನ ಹೆಜ್ಜೆಯ
ಮುತ್ತು ಮಳೆಯ ಸುರಿಸಿಬಿಡಲೆ

ಹೆಜ್ಜೆ ಮೇಲೆ ಹೆಜ್ಜೆ ಇಡುತ
ಸಾಗುವೆ ನಿನ್ನಿಂದೆ
ಜೀವಕೆ ಉಸಿರೆ ನೀನೆಂದೆ
ಬಾ ಒಲವೆ ಸಾಗುವ ಪ್ರೇಮಲೋಕಕೆ
ಹಾಕುತ ಹೆಜ್ಜೆ ಒಂದೊಂದೆ...

- ಲಕ್ಷ್ಮೀಕಾಂತ್ ಎಲ್ ವಿ

27 Jan 2018, 03:07 pm

ಜನ್ಮ ಜನ್ಮದ ಬಂದ....

ಕಣ್ಣೆದುರು ಇದ್ದ ಒಂದೋಂದು
ನಗೆ ಮಲ್ಲಿಗೆಯನ್ನು ಪೊಣಿಸಿ
ಬಿಡು ನಿನ್ನುಸಿರ ದಾರದೋಳಗೆ
ನನ್ನೋಡೆಯ ಆ ಉಸಿರಿನ ಹಾರವ
ಎಂದು ಹರಿದೋಗದ ಹಾಗೆ
ಕಾಪಾಡಿಕೊಂಡು ಬಿಡುವೆ
ನನ್ನುಸಿರು ಇರುವ ವರೆಗೂ
ಒಂದೆ ಒಂದೂ ಮಾತು ಕೊಟ್ಟು
ಬಿಡು ನನ್ನರಸ ಎಳೆಳು ಜನ್ಮಕ್ಕು
ಜೊತೆಜೊತೆಗೆ ಹುಟ್ಟಿ ಬದುಕಿ
ಬಿಡೋಣ ಜಗವೆ ನಾಚುವ ಹಾಗೆ...........

- ರಾಗಸಿರಿ....

27 Jan 2018, 11:19 am

ರೈತ ರೈತ ರೈತ

ರೈತ ರೈತ ರೈತ
ಅನ್ನ ನೀಡುವ ಭಗವಂತ
ರೈತ ರೈತ ರೈತ
ಬಾಳು ಬೆಳಗುವ ಭಾಗ್ಯದಾತ
ರೈತ ರೈತ ರೈತ
ಪ್ರೀತಿ ಹಂಚುವ ಸ್ನೇಹಿತ "ಪ"

ಮಳೆರಾಯ ಜಿಗಿದು ಬಂದರೆ
ಹರುಷದಲಿ ಹಾಡುತ ಕುಣಿಯುವನು..
ನೇಗಿಲ ಹಿಡಿದು ನಿಂತರೆ
ಹೊಲದಲಿ ಹೊನ್ನಿನ ಬಿತ್ತನೆ ಮಾಡುವನು..
ಭೂತಾಯಿಯ ಮೊಗವ ಕಂಡರೆ
ನಿತ್ಯವೂ ಮುತ್ತಿನ ವಂದನೆ ಮಾಡುವನು..
ಬಾನೇತ್ತರ ಕುಣಿದು ಬಾಳಿನ ತೆನೆ ಬೆಳಗಿದರೆ
ಮನಸಲಿ ನಗುವಿನ ಸೋನೆ ಸರಿಸುವನು..

ಪ್ರತಿಫಲ ಏನೇ ಬಂದರೂ
ನಗುತ ಬದುಕಿನ ಬಂಡಿ ನಡೆಸುವನಿವನು..
ದುಡಿಮೆಯೇ ನಿಜ ದೇವರು
ಎಂಬ ಜೀವನ ನುಡಿ ಸಾರುವನಿವನು..
ಏನಾಗಲಿ ಎಲ್ಲರಿಗಾಗಿ ಬೆವರು
ಸುರಿಸಿ ದುಡಿದು ಹಸಿವ ನೀಗುವನಿವನು..
ಎಂದೂ ಸುಖವಾಗಿರಲಿ ಸರ್ವಜನರು
ಎಂದು ಶಕ್ತಿ ತುಂಬುವ ಮಹಾಸಂತನಿವನು..
ಈ ರೈತ ರೈತ ರೈತ

- ಸುರೇಶ್ ಟಿ ವಿ

26 Jan 2018, 04:15 pm

ನೆನಪುಗಳು (ಪ್ರೀತಿಗಾಗಿ)

ಕಣ್ಣ ಹನಿಗಳು ಮರೆತರೂ ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ, ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ, ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು

- Lohith

26 Jan 2018, 02:23 pm

ಕನಸು

ನಿನ್ನ ಕನಸುಗಳಿಲ್ಲದೆ ದಿನ ರಾತ್ರಿ ಪೂರ್ತಿ ಆಗುತ್ತಿಲ್ಲ ...
ನಿನ್ನ ನೆನಪುಗಳಿಲ್ಲದೆ ದಿನ ಆರಂಭ ವಾಗುತಿಲ್ಲ .
ಕಣ್ಣ್ಮುಚ್ಚಿ ಕಣ್ಣ ತೆರೆಯುವ ಮುನ್ನ ..
ಕಲ್ಪನೆಗಳಾಗಿ ಬಳಿ ಸುಳಿದು ..
ಕವಿತೆಗಳ ಬರೆಸುವ ನನ್ನವಳೇ ..
ನೀ ನನ್ನೆದುರು ಬರದೆ ಕವಿತೆಯಲ್ಲೆಕೆ ಅಡಗಿ ಕುಳಿತೆ ....!!

- Lohith

26 Jan 2018, 08:30 am

ಮುದ್ದು ಕಂದಮ್ಮಾ

ಓಡೋಡಿ ಬಾ ನನ್ನ ಮುದ್ದು ಕಂದ .
ನಿನಗಾಗಿ ತಂದೆನು ಬೆಳದಿಂಗಳೂಟ ಉಣಿಸಲು ,ಹಸಿದು ದಣಿದಿರುವೆ ನೀ ಓಡೋಡಿ ಬಾರೋ ನನ್ನ ಮುದ್ದಿನ ಕೂಸೆ ....

ಚಂದಮಾಮನ ಬೆಳದಿಂಗಳ ಊಟ ಉಣಿಸಿ ,ಕಥೆ ಹೇಳುವೆ ನಾ ವೀರ ದೀರರ ಕಥೆ ಹೇಳುವೆ ನಾ .. ಮುದ್ದು ಮೊಗದ ನನ್ನ ಗೊಂಬೆಯೆ ಓಡೋಡಿ ಬಾರೋ ಈ ಅಮ್ಮನ ಕಾಡಿಸದೆ ಬಾರೋ ನನ್ನ ಮುದ್ದು ಕಂದಮ್ಮಾ....

- Acchu love

25 Jan 2018, 11:45 pm

ಬಾಲ ಕಾರ್ಮಿಕ

ಓ ಮುದ್ದು ಬಾಲಕ
ನೀನಾದೆಯಾ ಬಾಲಕಾರ್ಮಿಕ
ತೊರೆದೆಯಾ ಓದುಬರಹದ ಶಾಲಾ ಕಾಯಕ
ನೀನಾದೆಯಾ ಕೂಲಿಗೆ ದುಡಿಯುವ ಕಾರ್ಮಿಕ "ಪ

ಕಿತ್ತುತಿನ್ನುವ ಬಡತನ ಕಿತ್ತಾಡುವ ಜನಮನಕೆ
ಬಲಿಯಾಯಿತೆ ನಿನ್ನ ಸವಿಯಾದ ಎಳೆತನವೇ
ಆಟವಾಡುವ ಕನಸು ಕಾಣುವ ವಯಸಿಗೆ
ನೋವುನುಂಗುವ ದುಡಿದುಸಾಕುವ ಕೊಡುಗೆಯೇ

ಆಟದ ಕಟ್ಟೆಯಲ್ಲಿ ಕುಣಿಯುವ
ಸಂತಸ ಎದೆಯಂಗಳದಲಿ..
ಊಟದ ತಟ್ಟೆಯಲ್ಲಿ ಅನ್ನ ಇಡುವ
ಕೆಲಸ ಹಸಿವಿನ ಕೊಳದಲಿ..
ಅಕ್ಷರ ಕೋಟೆ ಕಟ್ಟುವ
ತವಕ ಮನದಲಿ..
ಹಸಿದ ಹೊಟ್ಟೆ ತುಂಬಿಸುವ
ಕಾಯಕ ಎದುರಲಿ..
ಪೆನ್ನು ಪುಸ್ತಕ ಗೆಳೆಯರ ಬಳಗ ನೀ ನೋಡಲಿಲ್ಲ..
ಕಿರಾತಕ ಜನರ ಕಾಳಗ ನಿನ್ನ ಬಿಡಲಿಲ್ಲ..

- ಸುರೇಶ್ ಟಿ ವಿ

25 Jan 2018, 07:29 pm

ಅವಳದೇ ನೆನಪು...

ತೇಲುತ್ತಿರುವೆನು ನಾನು
ನನ್ನ ಗೆಳತಿಯ ನೆನಪಿನಲ್ಲಿ
ಕಾಡುತ್ತಿರುವಳು ಅವಳು
ನನ್ನ ನಿದ್ದೆಯ ಸಿಹಿಕನಸಿನಲ್ಲಿ!

ಹೃದಯದ ತುಂಬೆಲ್ಲ ಆವರಿಸಿ
ಕಾರಣವೇ ಇಲ್ಲದೆ ಹುಚ್ಚು ಹಿಡಿಸುತ್ತಾಳೆ
ಮೌನದಲೇ ಎಲ್ಲವ ಉತ್ತರಸಿ
ಮಾತೊಂದನೂ ನೀಡದೆ ಪ್ರಶ್ನೆಯಾಗಿದ್ದಾಳೆ!

ಹುಚ್ಚುಹುಡುಗ ನಾನು, ಅವಳ ಪ್ರೀತಿಯಲ್ಲಿ
ಕಣ್ಣೆದುರು ನಿಲ್ಲದೆ, ಕಾಡಿಸುತ್ತಾಳೆ ನಿರಾಶೆಯಲ್ಲಿ
ಸುಂದರ ಬದುಕು ಕಾದಿದೆ ನಿನಗಿಲ್ಲಿ
ನೀ ಬಂದು ಸೇರಲಾರೆಯ ನನ್ನ ತೋಳಿನಲ್ಲಿ!

- ಪ್ರಿಯಾಂಕ

25 Jan 2018, 04:44 pm