Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಮಯ ಪಾಲಕ.....

ಆ ಸೂರ್ಯನೆದ್ದು ಬಂದಾನ
ಜಗದ ಅಂದಕಾವರ ತೊಳೆದು
ತನ್ನ ಬೆಳಕನ್ನ ಚೆಲ್ಲುತ್ತಾ.....
ಹಾಲಿನ ಕಡಲಲ್ಲಿ ಮಿಂದು
ಎದ್ದು ಬರುತಿರವ ಅವ
ಬಂದು ಪಳ ಪಳನೆ
ಕಣ್ಣು ಹೋಡೆಯುವ ಮನ್ನ
ಎದ್ದು ಬಿಡಿರೆ ಮುದ್ದು ಮನಸುಗಳೆ...
ಮುಂಜಾನೆಯಲಿ ಕನಸೊಂದು
ಬಂದಿರಲು ನನಸ ಮಾಡಲೆಂದೆ
ಬರುವ ಅವನೋಬ್ಬ ಸಮಯ ಪಾಲಕ
ನೋಡಿ.............
ಅವನೋಬ್ಬ ಇದ್ದರೆ
ಜಗವೆ ಎಚ್ಚೆತ್ತು ಕೋಳ್ಳುವುದು ನೋಡಿ...

- ರಾಗಸಿರಿ....

05 Dec 2017, 06:18 am

ಕದ್ದುಮುಚ್ಚಿ...

ಕಂಣ್ಗಳಲ್ಲಿ ಮೆಚ್ಚಿ
ಹೇಳಲಾರದೆ ಬಿಚ್ಚಿ
ಈ ಮನದಿ ಮುಚ್ಚಿ
ಹಾರುತಿಹುದು ಮನಸೆಂಬ ಗುಬ್ಬಚ್ಚಿ
ಸದಾ ನಿನ್ನ ಸುತ್ತಮುತ್ತ ಕದ್ದುಮುಚ್ಚಿ...

- Spb...@#

05 Dec 2017, 12:19 am

ಓ ಮನಸ್ಸೇ

ಓ ಮನಸ್ಸೇ ಅತ್ತು ಬಿಡು
ಒಮ್ಮೆ ಜೋರಾಗಿ
ಮನದಲ್ಲಿರುವ ನೋವೆಲ್ಲ
ಕಣ್ಣಿರಂತೆ ಹೊರಹಾಕಿ ಬಿಡು....

ಏಕೆ ನೋವಿನಿಂದ ಮರುಗುವೆ
ನಿನ್ನ ನೊಂದ ಮಾತು
ಪ್ರೀತಿಸುವ ಮನಕೇ ಉಸಿರು
ಕಟ್ಟಿ ದಂತಾಗಿದೆ......

ನಿನ್ನ ಒಂದು ನಗುವಿಗಾಗಿ ಕಾಯುತ್ತಿದೆ
ಈ ನಿನ್ನ ಮನಸ್ಸು ಒರಟು ಮಾತಿನಿಂದ
ನನ್ನ ಕೊಲ್ಲವ ಬದಲು ಮೌನವಾಗಿ
ಇದ್ದು ಬಿಡು ಸುಮ್ಮನೇ ಮೌನದಿಂದಲೇ
ಉತ್ತರಿಸು ಒಮ್ಮೆಲೇ ಅತ್ತು ಬಿಡು ಮನಸ್ಸೇ....

- sparsha surya

04 Dec 2017, 09:20 pm

ಬಯಕೆ ಹರಕೆ.....

ನೋಂದ ಮನಕ್ಕೆ
ಕಣ್ಣಿರಿನ ಬಯಕೆ
ನಲಿವ ಮನಕೆ
ನಗುವಿನ ಹರಕೆ
ತೀರಿಸುವುದಾದರು ಹೇಗೆ....
ಈ ನೋವಿನ ಬಯಕೆಗೆ
ಬೇಕಿದೆ ಹರಕೆ ಹೋತ್ತ ನಗುವಿನ
ಕೈಗಳ ಹಾರೈಕೆ ಆದರೆ
ಹರಕೆ ಹೊತ್ತ ಕೈಗಳಿಗೇ ಕಣ್ಣಿರಿನ
ಬೇಡಿ ಬಿದ್ದಿದೆ ಬಿಡಿಸುವ
ಮನಸು ಅದಕ್ಕಿದ್ದರು
ಕೈ ಲಾಗದೆ ಸುಮ್ಮನೆ ಕೂತಿದೆ.....

- ರಾಗಸಿರಿ....

04 Dec 2017, 05:01 pm

ನೆಪ

ಕಾಡುವ ನೆನಪುಗಳಲ್ಲಿ
ಅವಳದು ದೊಡ್ಡ ಪಾತ್ರ
ನೆನಪಿರದ ಹಾಗೆ ಬದುಕುವುದು
ನೆಪ ಮಾತ್ರ

- ಕೌರವ

04 Dec 2017, 09:31 am

ಮಸಣದ ಹೂವು

ಅರಳಿರುವುದೊಂದು ಹೂವು
ಅರಿಯದೆಲೆ ಮಸಣದಲಿ,
ಬದುಕಿಹುದು ಹೇಗೋ ತಿಳಿಯದೆ
ಪರಿ ಪರಿಯ ನೋವುಗಳ ಪೊರೆದುಕೊಂಡು.

ಎತ್ತೆತ್ತ ನೋಡಿದರೂ
ಸತ್ತ ಹೆಣಗಳ ಸುಡುಗಾಡು
ಕೆಟ್ಟ ಕೊಳಕು ವಾಸನೆಯಲಿ
ಮರೆಯಾಯ್ತೆ ಪರಿಮಳವು.

ಅರಳಿರುವ ಕುಸುಮಕ್ಕೆ
ಇರಿಯುತಿಹರು ಹೃದಯಕ್ಕೆ
ಹುಟ್ಟಿದ ಜಾಗ ಕಸಿದುಕೊಂಡಿದೆ ಬೆಲೆಯ
ಕಂಡುಕೊಳ್ಳಲಾಗದೆ ನರಳಿಹುದು ಹೂವು
ಸೂಕ್ತ ನೆಲೆಯ..

ಯಾರದೋ ತಪ್ಪಿಗೆ
ಎಳೆ ಹೂವಿಗೇತಕೆ ಶಿಕ್ಷೆ ?
ಹೆಣ ತಿನ್ನುವ ರಣ ಹದ್ದುಗಳಿಂದ
ಸಿಗಲಾರದೆ ಹೆಣ್ಣಿಗೆ ರಕ್ಷೆ ?

- ಶ್ರೀಗೋ.

03 Dec 2017, 09:11 pm

ಮೌನ ಭಂಗುರ

ನನ್ನ ನಲ್ಲೆಯ ಮುನಿಸು
ಮುಂಜಾನೆ ಹಸುರಡರಿ
ಮುತ್ತಂತೆ ಥಳ ಥಳಿಸೋ
ಹಿಮ ಬಿಂದುಗಳ ಸಾಲು
ಕೊಂಚ ಹರ್ಷದ ಬಿಸಿಲು
ವರ್ಷಿಸಲು ಮರೆಯಾಯ್ತು
ಸಂಚು ಅರಿಯದ ಮೊಗದಿ
ಸಂತಸದ ಹೊನಲು
ಮಾತಿನ ಮಾಟದಲಿ
ಹಮ್ಮು ಬಿಮ್ಮುಗಳಿಲ್ಲ
ಕೌತುಕದ ಕಂಗಳಲ್ಲಿ
ಆಹಮಿಕೆ ಇನಿತಿಲ್ಲ
ಲಜ್ಜೆಯ ಕದಪದೊಳು
ಉದಯಾಸ್ತ ರವಿ ರಂಗು
ಗೆಜ್ಜೆ ಬಳೆಗಳ ಧನಿಯೋ
ಕರ್ಣ ಸೆಳೆಯುವ ಗುಂಗು
ಬಚ್ಚಿಟ್ಟ ಭಾವಗಳ
ಬಿಚ್ಚಿ ಬಯಲಿಗೆ ತೂರಿ
ಹಚ್ಚಿದಳ ಎನ್ನೊಳಗೆ
ಹೊಸತನರಸುವ ದಾರಿ
ಆಗದೆಂಬ ಆಲ್ಪಮತಿ
ಅಂಜಿಕೆ ಕೊನೆಗೊಳಿಸಿ
ಸಾಧಕರ ಸಾಲಿನಲ್ಲಿ
ನಿಲ್ಲಿಸಿದಳೆನ್ನೆರಸಿ

- ಯು.ರಾಮು ಸಿರಿಗೆರೆ

03 Dec 2017, 09:11 pm

ನಗು....

ಮನದೋಳಗೆ ಮುಳುಗಿ
ಸಾಯುವಷ್ಠು ನೋವಿದ್ದರು
ಕನಸೋಳಗೆ ನಡುಗಿ ಕರಗೋದರು
ಬದುಕೆಲ್ಲ ಬೆದರಿ ಮರುಭೂಮಿ ಆದರು

ಹೆದರಿ ಹಿಂದೆ ಸರಿಯದಿರಲಿ ಎಂದು
ಮುಖದ ಮೇಲಿನ ನಗು
ನಗವೋಂದಿದ್ದರೆ ಜಗವೆ ನಿನ್ನದು....

- ರಾಗಸಿರಿ....

03 Dec 2017, 09:03 pm

ಹುಣ್ಣಿಮೆಯ ದಿಬ್ಬಣ....

ಹುಣ್ಣಿಮೆಯ ಓ ಚಂದಿರನೆ
ಎಲ್ಲಿಂದ ಬಂತು ಈ ಅಂದ ಚಂದ
ನಿನಗೆ ಈ ದಿನ .......

ತಿಳಿನೀರ ಸಾಗರದಲ್ಲಿ ಮಿಂದು
ಗಂಧದ ಹೋಳೆಯಲ್ಲಿ ನಿಂದು
ಮೈಯಲ್ಲ ಅಂದದ ಹೊಂಬಣ್ಣ
ಸವರಿಕೋಂಡು
ಯಾರು ಇಲ್ಲದ ಆ ಆಗಸದಲ್ಲಿ
ಒಬ್ಬನೆ ಮದು ಮಗನಂತೆ
ಕಾಯುತಿರುವೆಯಲ್ಲ.....
ನಿನಗಾಗಿ ಕಾದಿರುವ ಆ ಮದು ಮಗಳ
ಹುಡುಕಿ ತರಲೆಂದೆ ಈ ಅಂದವೆ ನಿನಗೆ.....
ಆ ಮದು ಮಗಳ ಬಂದುಗಳು ನಾವು
ನಮಗು ಅಲ್ಲಿ ಜಾಗ ಕೋಡುವೆಯ
ಬೆಳದಿಂಗಳ ಅಂಗಳದಲ್ಲಿ ಹಸಿರ ಚಪ್ಪರ
ಹಾಕಿ ದಿಬ್ಬಣ ತರಿಸಿ ಮದುವೆಯ ಮಾಡಿ
ಸಡಗರದಿ ನಲಿಯುವೆವು ನಾವು
ಜಗತ್ತನ್ನೆ ನಿನ್ನ ಕೈಯಲ್ಲಿ ಇಟ್ಟು
ಬೆಳಕ ಚೆಲ್ಲುತ್ತಿರುವೆ ನೀನು
ನಿನಗಾಗಿ ನಾವು ಬೆಳದಿಂಗಳಲ್ಲಿ
ಮದುವೆಯ ದಿಬ್ಬಣ ಹೋತ್ತು ತರುವೆವು
ಕಾಯುತಲಿರು ಓ ಚಂದಿರನೆ.......
ಹುಣ್ಣಿಮೆಯ ಅಂಗಳದಲ್ಲಿ ಚಂದಿರನ
ಮದುವೆಯ ಮೆರವಣಿಗೆ ಸಾಗುತಿರಲಿ ಹೀಗೆ......

- ರಾಗಸಿರಿ....

03 Dec 2017, 08:43 pm

ನೀ ನೆನಪಾಗಲು

ಮತ್ತೆ ಯಾಕೋ ನೀ ನೆನಪಾಗಲು

ಕಮರಿ ಹೋದ ಕನಸುಗಳು
ಮತ್ತೆ ಬಂದು ಅಣಕಿಸಿದಂತಾಯಿತು...

ಬತ್ತಿ ಹೋದ ಕಣ್ಣ ಗುಡ್ದೆಗಳಲ್ಲಿ
ಮತ್ತೆ ನೀರಿನ ಆರ್ದ್ರತೆ ಪುಟಿದಂತಾಯಿತು...

ಅರ್ಧ ಕಟ್ಟಿದ್ದ ಕನಸೀಗ
ಕೈ ಬೀಸಿ ಕರೆದಂತಾಯಿತು...

ಅರ್ಧಕ್ಕೆ ನಿಲ್ಲಿಸಿದ ಕವನವೀಗ
ಮತ್ತೆ ಸೆಳೆದಂತಾಯಿತು...

ಒಡೆದು ಚೂರಾದ ಹೃದಯಕ್ಕೆ
ಮತ್ತೆ ಈಟಿಯಿಂದ ತಿವಿದಂತಾಯಿತು...

ಬಯಕೆಗಳೇ ಇಲ್ಲದ ಜೀವಕೆ
ಮತ್ತೆ ಸಾವಿನ ಆಸೆ ಮೂಡಿಸಿದಂತಾಯಿತು

- ಮೌನೇಶ..ಪಿ

03 Dec 2017, 07:27 pm