ಹಗಲು ಇರಳು ಏನ್ನದೇ
ನೆನದು ಮಾಡುವ ಕರ್ತವ್ಯ
ಹಣದ ಮುಂದೆ ಏಲ್ಲವೂ ವಿಸ್ಮಯ
ಸತ್ಯ ಕಾಣದ ವಿಚಲಿತ ನಾದವ
ದ್ವೇಶ ಅಸೊಯೇ ಏಲ್ಲವ ಮರೆತು
ಸೇವೆಯೊಂದೇ ಸದಾ ಶಿಷ್ಠಚಾರ
ಮಾಡಿದ ಪಾಪ ಪುಣ್ಯಗಳ ಅನ್ವಷಣೆ
ಕಾಡುತಲಿದೆ ಮನುಷ್ಯನಲಿ
ಇಂದಿಗೂ ಏಂದೆಂದಿಗೂ ಸಂದೇಹ
ಮಧುಸೂಧನ ಗೌಡ
ನೀನೆಂದರೆ ನನಗೆ
ಮಳೆ ನಿಂತರೂ ತೊಟ್ಟಿಕ್ಕುವ
ಮರದೆಲೆಯ ಪಟಪಟ ನೀರ ಹನಿ,
ಇಂಪಾಗಿ ಅಡರುವುದು ಹೆಣ್ಣೇ
ನಿನ್ನೆದೆಯ ಪ್ರೇಮದ ಮಧುರ ದನಿ.
ಹ್ಯಾಗೆ ಮರೆತೇನೇ ಚೆಲುವಿ..
ನೀನಿತ್ತ ತಾಯಿ ಪ್ರೇಮದ ಕೈ ತುತ್ತ !
ಕೆನ್ನೆಗಿತ್ತ ನಿನ್ನ ಕೆಂದುಟಿಗಳ ಸಿಹಿ ಮುತ್ತ,
ಭುಜಕ್ಕೆ ಒರಗಿ ಕುಳಿತು
ಮಗಳಾಗಿ ನೀ ಕೊಟ್ಟ ಸ್ವಲ್ಪ ಹೊತ್ತ !
ನಮ್ಮ ನಡುವೆ ನಡೆದಾವು
ನೂರಾರು ವಿನಾಕಾರಣದ ಹುಸಿ ಜಗಳ,
ಅದರೂನು ಒಡೆಯಲಾರದು ಎಂದಿಗೂ
ಕೂಡಿರುವ ಎರಡು ಗಟ್ಟಿ ಮನಸುಗಳ.
ತೊರೆದೆಯಾದರೆ ಹುಡುಗಿ ನೀನೆನ್ನ ಸಂಗ,
ಖಾಲಿ ತೊಟ್ಟಿಲಾಗುವುದು ಮನಸು
ಮಗುವು ಇಳಿದು ಹೊರಟು ಹೋದ ಹಾಂಗ!
ಬೇರ್ಪಡಿಸಲಾದೀತೆ ಹೇಳು ಹುಡುಗಿ,
ನೀರಿನಿಂದ ಆಮ್ಲಜನಕ, ಜಲಜನಕ ?
ಅಂತೆಯೇ ಕೂಡಿರುವುದು ನಮ್ಮ ಮನ
ಈ ಜೀವನ ಕಳೆಯುವ ತನಕ !
ಎಲ್ಲೆಲ್ಲೊ ನೋಡಿದರೂ ಇವರದೇ ಕೀತಿ೯
ಸದಾ ಮನದಲ್ಲಿ ತುಂಬಿರುವುದು ಪ್ರೀತಿ
ಎಲ್ಲರಿಗೂ ಮಾದರಿ ಇವರು ಜೀವಿಸುವ ರೀತಿ
ಸರಳತೆಯು ಇವರ ಬಾಳ್ವೆಗೆ ಸ್ಪೂತಿ೯
ರಾತ್ರಿ ಹಗಲೆನ್ನದೇ ರೋಗಿಗಳಿಗೆ
ಆರೖೆಕೆ ಮಾಡುವ ತ್ಯಾಗಮೂತಿ೯ಯೂ
ಸಂಕಷ್ಟ ಪರಿಸ್ಥಿಯಲ್ಲೂ ಆತ್ಮಿಯತೆ ತೋರುವ ಮಮತಾ ಮಯಿಯು
ಅಗಾದವಾದ್ದು ಇವಳು ಸೇವೆ ಸಲ್ಲಿಸುವ ರೀತಿಯು
ಇವರೆಂದು ರೋಗಿಗಳ ಬಾಳಿನ ಭಾಗ್ಯಜ್ಯೋತಿಯು
ಸಹೋದರಿಯಾಗಿ ಕಷ್ಟಗಳಲ್ಲಿ
ಸಹಕರಿಸುವ ಸದ್ಗುಣವಂತಳು
ತಾಯಿಯಾಗಿ ನೋವುಗಳಿಗೆ
ಸ್ಪಂದಿಸುವ ಮಮತೆಯ ನೆಲೆ ಇವಳು
ನಗುವಿನೊಂದಿಗೆ ಎಲ್ಲಾ ರೋಗಿಗಳಿಗೆ
ಔಷದಿ ನೀಡುವ ಅಮೃತದ ಸೆಲೆ ಇವಳು
ಸೇವೆಯಲ್ಲಿ ಸವೊ೯ತ್ತಮಳು
ಇವಳು ದೇವತೆಯಂತೆ ಕಂಗೋಳಿಸುತಹಳು
ದೇವತೆಯೇ ಶೂಶ್ರೂಷಕಿಯಾಗಿ
ಧರೆಗಿಳಿದು ಬಂದಿಹಳು.....
ಹಕ್ಕಿಗಳೆಲ್ಲ ಜಿಲಿಪಿಲಿ ಸದ್ದು
ಮಾಡುತ್ತ ಕಾಳು ಕಡಿಗಾಗಿ
ಗೂಡು ಬಿಟ್ಟು ಹೋರಟಾಯ್ತು.........
ಗಿಡಮರಗಳೆಲ್ಲ ನಮಗಾಗಿ
ಮುಂಜಾನೆಯೆ ಎಂದ್ದು ತಂಪಾದ
ಗಾಳಿ ಬಿಸಲು ಎದ್ದು ಸದ್ದು ಮಾಡಲು
ಬಂದಯ್ತು.........
ದೇವತೆಗಳೆಲ್ಲ ಮನೆಯ ಮುಂದೆ ರಂಗೋಲಿ
ನೋಡಿ ಬಂದು ಬಾಗಿಲಲ್ಲಿ ನಿಂತಿಹರು
ಎದ್ದು ಸ್ವಾಗತಿಸಿ ಅವರನ್ನೆಲ್ಲ
ಬಂದು ಮನೆಬಾಗಿಲಲ್ಲಿ ನಿಂತಾಯ್ತು.......
......ಶುಭೋದಯದ ಸವಿ ನುಡಿಗಳು.........