Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇನಿಯ.....

ಇನಿಯ ನೀನೆಕೆ ಇಷ್ಟು ದೂರ
ಬರಬಾರದೆ ನಿನ್ನ ಜೀವದ ಕಡೆಗೆ
ಹಗಲು ರಾತ್ರಿ ಕಾಯುತಿದೆ ಈ ಜೀವ ನಿನಗಾಗಿ
ನಿನ್ನ ಅಗಲಿ ಅರೆ ಷಣವು ಇರಲಾರೆ ಇನಿಯ
ಒಬ್ಬಳೆ ನಾನು ಇಲ್ಲಿ ಬಯವಾಗಿದೆ ಏಕೂ
ಏನು ಮಾಡಲಿ ಎಲ್ಲಿ ನೂಡಲಿ ಅಲ್ಲಿಯು
ನಿನ್ನ ದೆ ನೆನಪು......
ಕಣ್ಣು ಮುಚ್ಚಿ ದರು ನಿನ್ನ ನಗು
ನನ್ನ ನು ಬಡಿದೆಸಿದೆ......
ಒಬ್ಬಳೆ ಕೂತು ನಿನ್ನ ಮಾತು ಕೆಳಬೇಕಿದೆ
ಬಳಿ ಬಾರೆಏನು.....
ನಿನ್ನ ಮಡಿಲಲ್ಲಿ ಮಗುವಾಗಿ ಮಲಗಬೇಕಿದೆ
ಬಂದು ಬಿಡು ಬೇಗನೆ ....
ನಿನಗಾಗಿ ಕಾಯುತಿಹೆನು ಓ ಇನಿಯ.....

- ರಾಗಸಿರಿ....

30 Oct 2017, 09:53 pm

ಹಿಂತಿರುಗಿ ಬರಲಾರೆಯ

ನೆನಪಲ್ಲಿ ನೋಯುತಿದೆ ಈ‌ ಹೃದಯ
ನೋವಲ್ಲಿಯೇ ಅಳಿಯುತಿದೆ ಹರೆಯ
ನೀನು‌‌ ಕಾಣದಾದೆಯ ಇನಿಯ
ಒಮ್ಮೆ ಹಿಂತಿರುಗಿ ಬರಲಾರೆಯ

ನಿನ್ನಲಿನ್ನೂ ಮನ್ನಿಸಲಾಗದ ಮುನಿಸಿದೆ
ನನ್ನೊಳಗೆ ಇನ್ನೂ ಪ್ರೀತಿಯು ಉಳಿದಿದೆ
ಕಣ್ಣ ನೀರು ಕೆನ್ನೆ ಸೋಕಿ ಮುತ್ತಿಕ್ಕಿದೆ
ಈ‌ ಹೃದಯ ನಿನಗಾಗೆ ಕಾಯುತಿದೆ

ಸುತ್ತಲೂ ಇದ್ದರು ನನಗಾಗಿ ಜೊತೆಗೆ ಎಲ್ಲರೂ
ಬೇಕೆನಿಸುತ್ತಿಲ್ಲ ನಿನ್ನ ಹೊರತು ಇನ್ಯಾರು
ನಿನ್ನ ನೆನಪುಗಳಿಗೆ ಮನಸಾಗಿದೆ ತವರೂರು
ಕೊನೆಯಿಲ್ಲದಾಗಿದೆ ಮರುಗುತಿದೆ ಹೃದಯದೂರು

ಕಳೆದೋಗಲಿ ಇನ್ನೂ ಹತ್ತಾರು ವರುಷ
ಇಲ್ಲದಾಗಲಿ ‌ನನಗೆ ಅಳಿದುಳಿದ ಹರುಷ
ಕಾಯುವೆನು ನಾ‌ ನಿನಗಾಗಿಯೇ ಪ್ರತಿ ನಿಮಿಷ
ಬರುವೆಯಾ ನೀನು ನನ್ನ ಪ್ರೀತಿಯರಿತು ಎನ್ನರಸ

ಕನಸುಗಳು ದಾರಿ‌ ಕಾಣದೆ ಕಳೆದೋಗುವ ಮುನ್ನ
ಕಣ್ಣ ಒಡಲಲಿ ಕಡಲೇ ಹರಿದು ನೀರು ಬತ್ತುವ ಮುನ್ನ
ನಿನಗಾಗಿಯೇ ಕಾದು ನನ್ನುಸಿರು ಹಾರಿ ಹೋಗುವ ಮುನ್ನ
ನೀ ಒಮ್ಮೆ ಹಿಂತಿರುಗಿ ಬಂದು ಸೇರಿಬಿಡು ‌ನನ್ನ

- ಶ್ರೀಕಾವ್ಯ

30 Oct 2017, 09:07 pm

........

ಒಡಲ ನೋವಿಗೆ ಸಂತೆೃಕೆಯೇ ಇರದೆ
ನಾ ಸೋತು ಹೋಗುವ ಮುನ್ನ .....

ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ.....

ಸಾವಿರಾರು ನೊಂದ ಪ್ರೇಮಿಗಳಲ್ಲಿ
ನಾನೋಬ್ಬಳಾಗುವ ಮುನ್ನ .....

ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ಅತ್ತು ನಿದ್ದೆ ಬರುವ ಮುನ್ನ .....

ನೀನೊಮ್ಮೆ ಬರಬಾರದೆ ???
ನಿನಗಾಗಿ ಸಾಯುವವರೆಗು ಕಾಯುವೆ .....

- Shilpa

30 Oct 2017, 06:23 pm

ನಿನ್ನ ನೆನಪು.....

ಕಣ್ಣ ಹನಿಗಳು ಮರೆತರು ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ , ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು.....

- Shilpa

30 Oct 2017, 06:23 pm

ನೆನಪುಗಳ ನಾವೆ

ನಾ ಕಂಡ ಅಂದಿನ ಕನಸು
ಮಿಂಚಿನಾತಾಯಿತು ಇಂದಿನ ನೆನಪು
ನೆನಪುಗಳ ನಾವೆಯಲಿ ಬದುಕಿದೆನು ನಾನು
ಆದರೆ ವಿದಿ ಬರೆಯಿತೋ ಒಂದು ಕಥೆ ಯ
ಆ ಕಥೆಯಲ್ಲಿ ಸಿಡಿಲೋಂದು ಬಡಿದಿತು
ಆ ಸಿಡಿಲೆಂಬ ಅಬ್ಬರಕೆ ಮರೆಯಾಗಿ ಹೂಯಿತು
ನನ್ನ ನೆನಪುಗಳ ನಾವೆ
ಜೀವನದ ಕಥೆಯೆ ಮುರಿದು ಬಿಟ್ಟಿದೆ
ಅದನ್ನು ಸರಿ ಮಾಡುವ ಸೂನೆ ಮಳೆ ಸುರಿಯುವುದಾದರು ಯಾವಗ ನೆನಪುಗಳ ನಾವೆಯಲಿ ಬದುಕುತಿರುವೆ ನಾನು.....

- ರಾಗಸಿರಿ....

30 Oct 2017, 04:38 pm

ನಿಸರ್ಗಾಲಾಪ

-- ನಿಸರ್ಗಾಲಾಪ --

ಮಾನವ...!
ಸೃಷ್ಟಿ ನಾನು ಪವಿತ್ರೆ ನಾನು
ಕೇಳಬೇಕಿದೆ ನಿನ್ನನು
ನಾ ಮಾಡಿದ ತಪ್ಪೇನು?

ಜಗತ್ತನ್ನಾಳಲೆಂದು
ಪಣವಿಟ್ಟದ್ದು ನನ್ನನ್ನೇನು!?
ಎಷ್ಟು ನಂಬಿದ್ದೆನಲ್ಲ...
ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದೇ...!

ವನ ಮಹೋತ್ಸವದಲಿ ಕಂಡ
ಅಪಾರ ಪ್ರೀತಿಗೆ ಮನಸ್ಸೋತಿದ್ದೆ,
ವನ ಮೃಗಗಳಿಂದ ಕೇಳಿ ನಿನ್ನ
ಗುಣಗಾನ; ನನ್ನನ್ನೇ ನಾ ಮರೆತಿದ್ದೆ,

ದುರ್ಮತಿಯ ಮಾತುಕೇಳಿ
ಕೊಡಲಿ ಹಾಕಿದೆಯಲ್ಲವೇ ನನಗೆ!
ನಿನ್ನ ಕಂಡು ಎಷ್ಟು ದುಃಖಿಸಿದೆ ಗೊತ್ತೇ;
ನನಗಾಗಿ ಅಲ್ಲ, ನಿನಗಾಗಿ!

ಬೇಡುವ ಮೊದಲೇ ಜೀವನೀಡಿದೆ,
ಗಳಿಸಿದ ಸಿರಿಯನೆಲ್ಲ ನಿನಗೇ ಧಾರೆಯೆರೆದೆ,
ರಕ್ಷಿಸೆನ್ನಲು ಕೈ ಹಿಡಿದೆ,
ಎಷ್ಟೋ ಕಷ್ಟಗಳಿಂದ ಪಾರುಮಾಡಿದೆ

ನೀ ಬದುಕಲು ನಾ ಬದುಕಬೇಕು,
ನಾ ಸಾಯಲು ನೀ ಸಾಯಲೇಬೇಕು,
ನನಗಾಗಿ ಅಲ್ಲವಾದರೂ,
ನಿನಗಾಗಿ ನನ್ನನು ಉಳಿಸಿಕೊ!

ಕಾಡಲಿಲ್ಲ,
ಬೇಡಲಿಲ್ಲ,
ಇನ್ನೂ ಏನನ್ನೂ ಕೇಳುವುದಿಲ್ಲ,
ಒತ್ತಾಯವೂ ಮಾಡುವುದಿಲ್ಲ!

-- ಕೊಟ್ರೇಶ ಭೂತಿ

- Kotresh Bhuti

30 Oct 2017, 02:36 pm

ತಾಯಿ

ತಾಯ ಮಡಿಲು ಪ್ರೀತಿ ಕಡಲು
ಉಣಿಸಿ ಎದೆಯ ಹಾಲು
ತಣಿಸಿದಳು ಕಂದನ ಒಡಲು
ಅದುವೇ ಅಮೃತಕೂ ಮಿಗಿಲು

ಅವಳು‌ ಕೊಟ್ಟ ತುತ್ತು ಮುತ್ತು
ಭರವಸೆ ತುಂಬುವ ಪ್ರೀತಿ ಮಾತು
ಬೆಲೆ ಕಟ್ಟಲಾಗದ ಸ್ವಾತಿ ಮುತ್ತು
ಬಾಳಲಿ ಎಲ್ಲಕೂ ಮಿಗಿಲಾದ ಸ್ವತ್ತು

ಹೊತ್ತು ಹೆತ್ತಳು ಕುಡಿಯ ನವಮಾಸ
ಕಂದನ ಬಿಟ್ಟು ಬೇಡ ಇನ್ಯಾರ ಸಹವಾಸ
ಅವಳ ಒಡಲೇ ಇದ್ದರೂ ಉಪವಾಸ
ಕೊಡುವಳು ಕೂಸಿಗೆ ಇನ್ನಿಲ್ಲದ ಹರುಷ

ಅವಳೇ ಬಾಳಿನ‌ ನಿಜ ಅರಿವು
ದಾರಿ ತೋರೊ ಮೊದಲ ಗುರುವು
ಬೆಳಗುವಳು ಕಂದನ ಬಾಳ ದಾರಿ
ಜೢಾನದ‌ ದೀವಿಗೆಯ ಹಚ್ಚಿ ಬೆಳಕ ತೋರಿ

ಸ್ವಾರ್ಥವಿರದ ತಾಯ ಜೀವ
ಕಂಡರೂ ತನ್ನ ನಗುವಿನದೇ ‌ಸಾವ
ಬಯಸಳು ಕರುಳ ಕುಡಿಗೆ ನೋವ
ಅವಳೆ ಈ ಲೋಕದಲಿ ನಿಜ‌ ದೈವ

- ಶ್ರೀಕಾವ್ಯ

30 Oct 2017, 02:20 pm

ಕಾಡು ಮತ್ತು ಮಾನವ

ಮಾನವ ಹೊತ್ತು ಉರಿಯುತಿದೆ ಧರೆ
ಇದು ನಿನ್ನ ಜೀವಕ್ಕಿದ್ದ ಮೂಲ ಆಸರೆ
ಕಳಚು ಇಂದೇ ನಿನ್ನ ಬುದ್ದಿಗಂಟಿರುವ ಪೊರೆ
ನೀನಿಡುವ ಮುನ್ನ ಬದುಕಿಗಾಗಿ ಸಹಾಯದ ಮೊರೆ

ತಲೆಗೇರಿದೆ ಆಧುನಿಕ ಐಷಾರಾಮಿ ಜೀವನದ ನಿಶಾ
ಮಾಡುತಿದೆ ಅದು ಇಡೀ ಮಾನವ ಸಂಕುಲವ ನಾಶ
ನಿನ್ನ ದುರ್ಮಾರ್ಗವಾಗಿದೆ ಇತರೆ ಜೀವಿಗಳಿಗೂ ಪಾಶ
ಎಚ್ಚೆತ್ತುಕೊ ಭೂ‌ ಸಂಕುಲವೇ ತಲುಪುವ ಮುನ್ನ ವಿನಾಶ

ನಾಡು ಕಟ್ಟುವೆನೆಂದು ಮಾಡಿರುವೆ ಕಾಡುಗಳ‌‌ ಹರಣ
ಕಡಿದ ಕಾಡು ಜೊತೆಗೆ ಸೆಳೆದು ಹೋಯ್ತು ಜೀವಿಗಳ ಪ್ರಾಣ
ಹಿಂದೆ ನಿಂತು ಕಾಪಾಡಿದ್ದ ಜೀವಿಗಳ ಸಾವು ಮಾಡಿದೆ ನಿನ್ನ ನಿತ್ರಾಣ
ಉಳಿಸವುಗಳ ನೀನು ಕೂಡ ಹೊಂದುವ ಮೊದಲೆ ಮರಣ

ಎಷ್ಟು ತುಂಬಿಟ್ಟಿದ್ದರೂ ನೀನು ಧನ ಕನಕ
ತಂದುಕೊಡುವುದಿಲ್ಲ ಉಸಿರಾಡಲು ಆಮ್ಲಜನಕ
ಎಲ್ಲಿ ನೋಡಿದರು ತಲೆ ಎತ್ತಿದೆ ಕಾಂಕ್ರೀಟ್ ಕಾಡು
ಮುಂದೆ ನಿನಗಿದೆ ನರಕ್ಕಿಂತಲೂ ಕೆಟ್ಟದಾದ ಪಾಡು

ಹನಿ ನೀರಿರದೆ ಒಡಲ ಬಿರಿದು ಭುವಿ ತಬ್ಬಿರುವಳು ನೋವ
ಇನ್ನೆಲ್ಲೋ ನಿಲ್ಲದೆ ಧೋ ಎಂದು ಸುರಿದು ಮಳೆ ತಂದಿದೆ ಸಾವ
ಅತ್ತೆಲ್ಲೋ ಜೀವ ಹೊತ್ತೊಯ್ಯುವ ರವಿ ಬೀಸಿ ಬಿಸಿಲ ಚಾಟಿ
ಈ ನೋವು ಸಾವಿನ ಕೃತ್ಯಕ್ಕೆಲ್ಲ ನೀನೇನೆ ಮೂಲ ಮೇಟಿ

ಕರಗುತ್ತಿದೆ ಮಂಜು ಹನಿಯ ರೂಪ ತಾಳಿ
ಹನಿ ಸೇರಿದೆ ಕಡಲ ಕೊಲ್ಲಲು ನಿನ್ನ, ಅಹಂಕಾರವ ಸೀಳಿ
ನಿಸರ್ಗ ವಿಕೋಪಗಳು ತೋರುವ ಮುನ್ನ ತಮ್ಮ ಪ್ರತಾಪ
ತಣಿಸು ನೀನು ಈ ಧರೆಯ ವಾತಾವರಣದ ಬಿಸಿಯ ತಾಪ

ನಿನಗಿಲ್ಲ ಉಳಿವು ನೀನೊಬ್ಬನೆ ಬದುಕಿದರೆ ಭೂಮಿ‌ ಮೇಲೆ
ನಿನಗುಳಿವು ಇರವುದು ಉಳಿದರೇನೆ ಎಲ್ಲ ಜೀವ ಸೆಲೆ
ನಿನ್ನ ಸಾವಿನ ಮನೆಗೆ ನೀನೆ ತೋಡುತ್ತಿರುವೆ ಹಳ್ಳ
ತಿಳಿ ನೀ‌ನಂಬಿ ಹೊರಟ ಬಾಳ ದಾರಿಯಲಿ ತುಂಬಿರೋ ಜೊಳ್ಳ

ನೀನೇನೆ ಸೃಷ್ಟಿಸೂ ಪ್ರಕೃತಿಯ ವಿರುದ್ಧ ಅದೆಂದಿಗೂ ಕೃತಕ
ನಿನ್ನುಳಿಸಲು ಅವುಗಳ ಉಳಿವು ಅತೀ ಕ್ಷಣಿಕ
ಕೊಡಲಾರವು ಪ್ರಾಕೃತಿಕ ಸಮತೋಲನಕ್ಕೆ ಬೇಕಿರುವ ತೂಕ‌
ಈಗಲಾದರೂ ನಿನ್ನ ನೀನು ಕಾಪಾಡಿಕೋ‌ ಕಾಡ ಬೆಳೆಸಿ ಉಳಿಸುವ ಮೂಲಕ

- ಶ್ರೀಕಾವ್ಯ

29 Oct 2017, 10:50 pm

ನಿದ್ರಾದೇವಿ

ಕತ್ತಲು ಕವಿಯುತ್ತಿದ್ದಂತೆ ಕುಂಟು
ನೆಪವ ತೋರಿ ಕಣ್ತುಂಬಿಕೊಂಡ
ನಿದ್ರಾದೇವಿಯು ತನ್ನ ಕಿಸೆಯಿಂದ
ಸವಿಗನಸ ನೀಡುವಳೋ ಕಹಿಗನಸ
ನೀಡುವಳೋ ಕಂಡವರಾರು ಇಲ್ಲಿ
ಕನಸ ಮರೆಸಿ ಮರೆಯಾಗುವಳು
ಕಣ್ತೆರೆಯುವಷ್ಟರಲ್ಲಿ
ಮೆಚ್ಚುತ ಮತ್ತೇ ಮುಚ್ಚಿದರೆ ಕಣ್ಣಾಲಿ
ಅವಳೇ ಇರುವುದಿಲ್ಲವಲ್ಲಿ.

- ಅಕವಿ

29 Oct 2017, 08:50 pm

ಖಾಲಿ ಕಾಗದ

ಮರೆತು ಹೋದ ಸಾಲೊಂದು ನೆನಪಾಗಿದೆ
ಆ ಕವಿತೆಯ ಸಾಲಲ್ಲಿ ಬಂದ ಕನವರಿಕೆ ನಿನ್ನದಾಗಿದೆ.
ಖಾಲಿ ಕಾಗದ ಮೇಲೆ ಏನೆಂದು ಗೀಚಲಿ ನಿನ್ನೀ ನೆನಪಲಿ,
ನನ್ನ ಖಾಲಿ ತಲೆಯಲ್ಲಿ ಕವನ ಸಾಲೊಂದು ಬಂತು
ಅದರಲಿ ಮೊದಲು ನೆನಪಾಯಿತು ಆ ನಿನ್ನ ತೊದಲ ಮಾತು.
ಆ ನಿನ್ನ ಸ್ನೇಹದ ಬಿಗಿದಪ್ಪಿದ ಅಪ್ಪುಗೆಯ ಬಿಸಿ ಗಾಳಿಯಲಿ
ನನ್ನ ಮನಸಲಿ ನಿನ್ನ ನೆನಪು ಕದಲಿಸಿತು ತುಸು ತಾಳಿ.
ನನ್ನ ಮನವೆಂಬ ಮರ್ಕಟಕ್ಕೆ ನಿನ್ನ ನೆನಪೇ ಲಗಾಮು,
ನನಗೆ ಯಾಕೋ ಗೊತ್ತಿಲ್ಲ ಈ ನಿನ್ನ ನೆನಪಿನ ತಾಲೀಮು.

- ಉಮೇಶ್.

- Umesh

29 Oct 2017, 08:46 pm