ಹೃದಯದ ಅಂತರಾಳದ
ಮಾತಾಡಿದ ಸಿಹಿ ನೆನಪು...
ಮರತೇನೇನು? ಸಂಗಾತಿ...
ನೋಡುವ ತವಕ...
ನನ್ನಮನದಾಳದಲಿ ಮೂಡಿದೆ..
ನನ್ನಲಿ ನನ್ನಲಿ..ನನ್ನ ಕನಸಲಿ
ನನ್ನ ಬದುಕು ಬಾಳಲಿ ನೀನೇ
ಶೃಂಗಾರ ಶೃಂಗಾರ....
ರಂಬೆ ಮೇನಕೆ ಅವರ್ಯಾರು
ನಿನನಗೇಕೆ ಹೋಲಿಕೆ...
ಅವರಿಗಿಂತ ಅಪ್ಸರೆ...
ಭೂಮಿಗೆ ಇಳಿದ
ಬಂಗಾರದ ಗೊಂಬೆ...ll
ಕಾಮನಬಿಲ್ಲು... ಮೂಡಿದೆ
ನನ್ನೆದೆಯ ತೋಟದಲಿ
ಪ್ರೀತಿಯ ಕಾರಂಜಿ ಹರಿಸು
ನನ್ನೆದೆಯ ತೋಟದಲಿ..
ಅಂದದ ಮೊಗಸಿರಿ.. ಚಲುವೆ
ಚಂದಿರನ ಬೀಳುಪೆ ಒಲವೇ
ಮಾತು ಮರೆಯಲಾಗದ...
ಜೊತೆಗೆ ಪಯಣದ...
ನೆನಪು ನನ್ನಲಿ ನನ್ನಲಿ..
ನನ್ನ ಹೃದಯದ ಗೂಡಲಿ
ಚಂದಿರನನ್ನು ನಾಚಿಸುವ ನಗು ನಿಮ್ಮದು!!
ಅದನ್ನು ಹೊಗಳುವ ಕೆಲಸ ನನ್ನದು?
ತಾರೆಯರಲ್ಲಿ ಉಂಟಾಗಿದೆ ನಿನ್ನ ಮೇಲೆ ಮುನಿಸೊಂದು....
ಆ ಚಂದಿರನನ್ನು ನೀನು ಕದ್ದೆಯೆಂದು!!
ಹುಡುಕುತ್ತ ಬಂದ ನನಿಗೆ ಅಂದು ಆ
ಚಂದಿರ ಕಂಡ ನಿಮ್ಮ ಗುಳಿ ಕೆನ್ನೆ ಯಲ್ಲಿ ಇಂದು!!❤️❤️
ಶಾಲೆಯೊಂದು ದೇಗುಲ
ಮಕ್ಕಳೇ ದೇವರು
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಸಮವಸ್ತ್ರದ ಚಿಂತೆ ಇಲ್ಲ
ಶೂ-ಸಾಕ್ಸ್ ಕೊಡ್ತಾರಲ್ಲ
ಶುಲ್ಕ ಪಾವತಿ ಇಲ್ಲವೇ ಇಲ್ಲ
ಖಚಿತ-ಉಚಿತ ಶಿಕ್ಷಣ ಯಾವುದು ಚಿಂತೆ ಇಲ್ಲ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಉಚಿತ ಪ್ರವಾಸ ಕರ್ನಾಟಕ ದರ್ಶನ
ಕಲಿಕಾ ಪ್ರಗತಿಗೆ ಲಭ್ಯವಿದೆ ಶಿಷ್ಯವೇತನ
ಶಿಸ್ತು ಸಂಸ್ಕಾರದ ಗುಣಾತ್ಮಕ ಶಿಕ್ಷಣ
ಇಲ್ಲಿ ಓದಿ,ಆಡಿ ಬೆಳೆದ ಕಾಲವೇ ಮಧುರ ಕ್ಷಣ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಬಡವ ಬಲ್ಲಿದ ಎಂಬ ಭೇದ ಭಾವ ಇಲ್ಲಿ ಇಲ್ಲ
ಆಟ, ಪಾಠ ,ಊಟ ಯಾವುದೂ ಕೊರತೆ ಇಲ್ಲ
ಪ್ರತಿ ವರ್ಷ ಮಾಡುವರು ಆರೋಗ್ಯ ತಪಾಸನೆ ಅದರಿಂದ ಮಕ್ಕಳಿಗೆ ರೋಗದಿಂದ ರಕ್ಷಣೆ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ
ಶುಚಿ-ರುಚಿ ಬಿಸಿಯೂಟ
ಬಗೆ ಬಗೆಯ ಆಟ ಪಾಠ
ಹಾಲು ,ಹಣ್ಣು ,ರಾಗಿ ಮಾಲ್ಟ್ ದಿನಾಲು ಒಂದು ಕೋಳಿ ಮೊಟ್ಟೆ
ಪೋಷಕಾಂಶ ಸವಿದ ಮಕ್ಕಳ ರಟ್ಟಿ ಬಲುಗಟ್ಟಿ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಶಿಕ್ಷಕರ ಕೊರತೆ ಇಲ್ಲ
ಅತಿಥಿ ಶಿಕ್ಷಕರು ಇರುವರಲ್ಲ
ಕ್ರಿಯಾಶೀಲ, ಸೃಜನಶೀಲ ಶಿಕ್ಷಕರ ವೃಂದ
ಅವರೊಂದಿಗೆ ಪ್ರತಿದಿನ ಊಟ,ಪಾಠ ಬಲು ಚೆಂದ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ಕೊಡುವರಿಲ್ಲಿ ಕುವರಿಯರಿಗೆ ಕರಾಟೆ ತರಬೇತಿ
ಬಾಳಿನಲ್ಲಿ ಬಾರದು ಎಂದಿಗೂ ಭಯದ ಭೀತಿ
ಕಳಿಯುವರು ಮಕ್ಕಳಿಲ್ಲಿ ಒಳ್ಳೆಯ ರೀತಿ-ನೀತಿ
ನೂರಕ್ಕೆ ನೂರು ಪ್ರತಿ ದಿನ ಹಾಜರಾತಿ
ಉಳಿಸೋಣ ಬೆಳೆಸೋಣ
ಸರ್ಕಾರಿ ಶಾಲೆಯನ್ನ||
ರಚನೆ:
ಎಸ್, ಬಿ,ನಿಡಗುಂದಿ
ಪ್ರಭಾರಿ ಮುಖ್ಯೋಪಾಧ್ಯಾಯರು
ಸರ್ಕಾರಿ ಪ್ರೌಢಶಾಲೆ ನರೇಗಲ್ಲ
ಮನೆಯ ಆಧಾರವಾಗಿದ್ದ ಅವನು,
ತನ್ನ ವಯಸ್ಸಿಗಿಂತ ದೊಡ್ಡ ಜವಾಬ್ದಾರಿಗಳನ್ನು ಹೊತ್ತ ಮಧ್ಯಮ ವರ್ಗದ ಹುಡುಗ…
ತನ್ನ ಕನಸುಗಳನ್ನು ಬೆನ್ನಟ್ಟುವ ಮುಂಚೆ,
ಕುಟುಂಬದ ಕನಸುಗಳಿಗೆ ತನ್ನ ಆಸೆಗಳನ್ನು ತ್ಯಾಗ ಮಾಡೋದು ಕಲಿತಿದ್ದ…
ಆದರೂ ಆ ಹೋರಾಟಗಳ ಮಧ್ಯೆ,
ಒಂದು ಹುಡುಗಿಯ ಮೇಲೆ ಅವನ ಹೃದಯ ಮೌನವಾಗಿ ಪ್ರೀತಿಗೆ ಬಿದ್ದಿತ್ತು…
ಅವಳಿಗೆ ತನ್ನ ಪ್ರೀತಿ ಹೇಳಬೇಕು ಅನ್ನಿಸುತ್ತಿತ್ತು,
ಆದರೆ ಅವನ ಭಾವನೆಗಳಿಗಿಂತ
ಜವಾಬ್ದಾರಿಗಳ ಶಬ್ದವೇ ಜಾಸ್ತಿಯಾಗಿತ್ತು…
ಹೀಗಾಗಿ ದೂರದಲ್ಲೇ ನಿಂತು,
ಯಾವ ಪ್ರತಿಫಲದ ನಿರೀಕ್ಷೆಯಿಲ್ಲದೆ ಅವಳನ್ನು ಪ್ರೀತಿಸುತ್ತಿದ್ದ…
ಅವನ ಗೊಂದಲದ ಬದುಕಿನಲ್ಲಿ
ಅವಳ ನಗುವೇ ಅವನಿಗೆ ಸಿಕ್ಕ ಏಕೈಕ ನೆಮ್ಮದಿ…
ಅವಳ ಕಣ್ಣಲ್ಲಿ ಸ್ವಲ್ಪ ನೋವು ಕಾಣಿಸಿದರೂ,
ಅವನ ಹೃದಯ ಮೌನವಾಗಿ ಒಡೆದು ಹೋಗುತ್ತಿತ್ತು…
ಜೀವನ ಪ್ರತಿದಿನ ಅವನನ್ನು ನೋಯಿಸುತ್ತಿತ್ತು —
ಸಮಸ್ಯೆಗಳು, ಹೊರೆಗಳು, ಮುಗಿಯದ ಚಿಂತೆಗಳು…
ಆದರೆ ಅವಳ ಒಂದು ನಗು ಸಾಕಾಗುತ್ತಿತ್ತು,
ಅವನ ಎಲ್ಲಾ ನೋವುಗಳನ್ನು ಕ್ಷಣದಲ್ಲೇ ಮರೆಯಿಸಲು…
ತನ್ನ ಕಣ್ಣೀರನ್ನು ನಕಲಿ ನಗುವಿನ ಹಿಂದೆ ಮರೆಮಾಚಿ,
ಭಾವನೆಗಳನ್ನು ಹೃದಯದೊಳಗೆ ಬಂದಿಸಿಟ್ಟು,
ಒಬ್ಬನೇ ಬದುಕಿನ ಜೊತೆ ಹೋರಾಡುತ್ತಿದ್ದ…
ಯಾಕಂದ್ರೆ ಕೆಲ ಮಧ್ಯಮ ವರ್ಗದ ಹುಡುಗರು
ದುಬಾರಿ ಉಡುಗೊರೆಗಳಿಂದ ಅಥವಾ ದೊಡ್ಡ ಮಾತುಗಳಿಂದ ಪ್ರೀತಿಸುವುದಿಲ್ಲ…
ಅವರು ತ್ಯಾಗಗಳಿಂದ, ಮೌನದ ಕಾಳಜಿಯಿಂದ, ಹೇಳದ ಪ್ರಾರ್ಥನೆಗಳಿಂದ ಪ್ರೀತಿಸುತ್ತಾರೆ…
ಕೆಲವೊಮ್ಮೆ,
ಜೀವನದ ಅತಿ ಆಳವಾದ ಪ್ರೇಮಕಥೆಗಳು
ಯಾವತ್ತೂ ಹೇಳಲಾಗದೆ ಉಳಿದುಬಿಡುತ್ತವೆ… ?
ನನಗಾಗಿ ಬದುಕಿದ್ದಕ್ಕಿಂತ
ನಿನಗಾಗಿ ಬದುಕಿದ್ದೇ ಹೆಚ್ಚು
ಸಂತೋಷಕ್ಕೂ ನೀನೆ,
ದುಃಖದಲ್ಲೂ ನೀನೆ,
ಕಡೆಗೆ ಕಾಡುವ ಬೇಸರಕ್ಕೂ,
ಸುಡುವ ಏಕಾಂತಕ್ಕೂ,
ಬೇಡುವ ಬಯಕೆಗೂ,
ಎಲ್ಲದಕ್ಕೂ ನಿನ್ನದೇ ನೆನಪು.!
ಬಹುಶಃ ಬದುಕಿನೂದ್ದಕ್ಕಷ್ಟೆ ಅಲ್ಲ,
ಬದುಕಿನಾಚೆಗೂ ನಿನ್ನ ನೆನಪುಗಳು
ನನ್ನ ಹಿಂಬಾಲಿಸಿಬಿಟ್ಟರೂ
ಅಚ್ಚರಿಯಿಲ್ಲ ಬಿಡು.
ಯಾಕಂದ್ರೆ,
ನೀನು ಜನ್ಮಕ್ಕಂಟಿದವಳಲ್ಲ
ಆತ್ಮಕ್ಕಂಟಿದವಳು..
ರಾಕ್ಷಸ ಇವ..
ಸಾಗರದ ಅಲೆಗಳಿಗಿಂತ ಜೋರಾಗಿ ಓಡುವ ಜನಗಳ ಮಧ್ಯೆ ಒಂದಿಷ್ಟು ನೆಮ್ಮದಿಯ ಹುಡುಕಾಟ....
ಸಾಗುವ ದಾರಿಯ ಆಯಾ ತಪ್ಪಿ ಮತ್ತೆಲ್ಲೋ ಓಗಿ ಸೇರುವ ಜನಗಳ ಮಧ್ಯೆ ಒಂದಿಷ್ಟು ನೆಮ್ಮದಿಯ ಹುಡುಕಾಟ...
ತೇಲುವ ಗಾಳಿಯ ಪ್ರಶ್ನಿಸುವ... ಉರಿಯುವ ಬೆಂಕಿಯ ಕಾವಿರಿಸುವ.. ಹರಿಯುವ ನೀರನ್ನು ತಡೆಯುವ ಜನಗಳ ಮಧ್ಯೆ.... ಒಂದಿಷ್ಟು ನೆಮ್ಮದಿಯ ಹುಡುಕಾಟ.....