ಬೆಪ್ಪುತಕ್ಕಡಿ ಬೆಪ್ಪುತಕ್ಕಡಿ ...
ಏನು ಮಾಡುತಿರುವೆ ಎಂದು ಕೇಳಿತು ಕಪ್ಪು ಕರಡಿ...
ನನಗಿದೆ ದೊಡ್ಡ ಸರಕಾರಿ ಹುದ್ದೆ
ಭ್ರಷ್ಟರ ಮೈಯನ್ನೆಲ ಮಾಡಿಬಿಡುವೆನು ಒದ್ದೆ
ನಾ ದೇಶ ಕಾಯುವೆನು
ಬಡತನವ ತೊಲಗಿಸುವೆನು
ಜಾತಿ ಮತ ಧರ್ಮ ಮೀರಿ ಸಮಾಜ ಕಟ್ಟುವೆನು
ಎಲ್ಲರ ನೋವುಗಳ ನಿರ್ಮೂಲನೆ ಮಾಡುವೆನು
ಎಂದಿತು ಬೀಗುತ ಅಭಿಮಾನದಲಿ ಬೆಪ್ಪುತಕ್ಕಡಿ
ಬೆಪ್ಪುತಕ್ಕಡಿ ಮಾತಕೇಳಿ ಗಹಗಹಿಸಿ ಹೇಳಿತು ಕಪ್ಪು ಕರಡಿ..
ಈ ಸರಕಾರ ನನ್ನದು
ವೋಟು ಹಾಕುವವರೆಗಷ್ಟೆ ಜನರು ನಾಯಕರು
ಆಮೇಲೆನಿದ್ದರು ನಮಗವರು ಸೇವಕರು
ನಾನೆಳಿದ್ದ ಕೇಳಬೇಕದವನು ನೀನು
ಸಾರ್ವಭೌಮನು ಈ ಸರಕಾರಕ್ಕೆ ನಾನು
ಮಾತು ಕೇಳದಿದ್ದರೆ ನೀನು, ಮಾಡುವೆನು ಊರಿಂದೂರಿಗೆ ಎತ್ತಂಗಡಿ
ಆಗಲು ಜಗ್ಗದಿದ್ದರೆ ನಿನಗೆಲ್ಲಿರುವುದು ಭೂಮಿಯ ಮೇಲೆ ಜಾಗ ಬೆಪ್ಪುತಕ್ಕಡಿ
ಭ್ರಷ್ಟತನವೆ ಮೈಯಲೆಲ್ಲ ತುಂಬಿ ನಾನಾಗಿರುವೆನು ಕಪ್ಪುಕರಡಿ
ಮೋಸ ಮಾಡಿ ಟೋಪಿ ಹಾಕಿ ದುಡ್ಡು ಮಾಡಿ ಅನ್ಯರ ಕಾಡಿ ಮೋಜು ಮಾಡಲು ರಾಜಕೀಯವೆ ದೊಡ್ಡ ಗರಡಿ
ಯಾರು ಹಾಕುವರು ಈ ನಾಗಲೋಟಕೆ ಲಗಾಮು ಆಗಲೆ ದೇಶವನೆ ಆಕ್ರಮಿಸಾಗಿದೆ ನಮ್ಮಂತವರೆ ಎಲ್ಲೆಲ್ಲೂ ಹರಡಿ
ಸುಮ್ಮನೆ ಹೇಳಿದಷ್ಟು ಕೇಳಬೇಕು, ಹೇಳಿದಷ್ಟು ಮಾಡಬೇಕು ಸಂಬಳ ಪಡೆಯಬೇಕು, ಕೆಲಸವಿಲ್ಲದಿದ್ದರೆ ಕೈ ಕಟ್ಟಿ ಕುಳಿತಿರಬೇಕು ಛಾವಣಿಯ ಅಡಿ
ನನ್ನವಳ ಹ್ರುದಯದ ಪಿಸು ಮಾತಿನ ಸ್ವರಗಳ ಶಬ್ದಕ್ಕೆ ಸ್ತಬ್ದವಾಗಿದೆ ನನ್ನ ಕಿವಿಗಳ ತಮಟೆಗಳು.
ನಿನ್ನ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು
ನನ್ನ ಕಣ್ಣಲ್ಲಿ ಅಡಗಿರುವ ಪಾಪೆಗಳು
ತನ್ನ ರೆಪ್ಪೆಗಳಲ್ಲಿ ಮ್ರುದಂಗದ ರಾಗ ಸಂಯೊಜನೆ ಗೊಳಿಸುತ ನಿನಗಾಗಿ ಕಾದಿವೆ .
ನಿನ್ನ ಸೌಂದರ್ಯವನ್ನು ವರ್ಣಿಸಲು ನನ್ನ ನಾಲಿಗೆಯಲ್ಲಿ ಪದಗಳೆ ಹೊರಡದೆ
ನನ್ನ ತುಟಿಗಳು ಬರಡಾಗಿ ಬಂಜರು ಭೂಮಿಯಾಗಿ
ನಿನ್ನ ತುಟಿಯಲ್ಲಿ ಓಮ್ಮೆ ನನ್ನ ನೆನೆದರೆ ಸಾಕು
ಬರಡಾಗಿರುವ ತುಟಿಯು ಚಿಗೊರೆಡೆದ ಗರಿಕೆಯ ಹಾಗೆ ಕಂಗೊಳಿಸುವುದು ಮನವೆ
ಬೆಳಿಗ್ಗೆ 5 ರೂಗೆ ತಿಂಡಿ.
ಇದು ಸಿದ್ದರಾಮಯ್ಯನ ಭಾಗ್ಯ..
ಮದ್ಯಾಹ್ನ 10 ರೂಗೆ ಮುದ್ದೆ ಊಟ. ಇದು ದೇವೇಗೌಡ ಕ್ಯಾಂಟೀನ್ ಭಾಗ್ಯ.
ಇನ್ನು ಉಳಿದಿರೋದು ಯೆಡ್ಡಿ ಮಾತ್ರ..
ಇವರೇನಾದ್ರು ಯೋಚನೆ ಮಾಡಿ ರಾತ್ರಿ ಎಣ್ಣೆಗೆ ವ್ಯವಸ್ಥೆ ಮಾಡ್ಬಿಟ್ರೆ....ಸುಖೀ ರಾಜ್ಯ ಕರ್ನಾಟಕ.....