Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಅರಿಯದ ಸ್ನೇಹ
ಮರೆಯದ ಪ್ರೀತಿ
ಹರಿದು ಹೋಗುವ ಹಾಳೆಯ ಮೇಲೆ
ಏನೆಂದು ಬರೆಯಲಿ ಹೇಳು
ಗೆಳತಿ..........

- krishna

23 Aug 2017, 06:51 pm

ಚಿರವಾಗಲಿ ಈ ಸ್ನೇಹ

ಮೊಗ್ಗಾಗಿ ಬಂದ ಸ್ನೇಹ ,ಹೂವಾಗಿ ಅರಳಲಿ
ಹನಿಯಾಗಿ ಬಂದ ಪ್ರೀತಿ ,ಹೊಳೆಯಾಗಿ ಹರಿಯಲಿ
ಅರಿಯದೆ ಬಂದ ಸ್ನೇಹ ಮರೆಯದೆ ಚಿರವಾಗಿ ಉಳಿಯಲಿ..............

- Acchu love

23 Aug 2017, 01:53 pm

ನಂಬಿಕೆ

ಪ್ರಪಂಚದಲ್ಲಿ ಅತಿ ದುಬಾರಿ
ವಸ್ತು ಅಂದ್ರೆ ನಂಬಿಕೆ ಅದನ್ನು
ಗಳಿಸಲು ಎಷ್ಟೋ ವರ್ಷಗಳೇ
ಬೇಕು.ಆದರೆ ಅದನ್ನು
ನಾಶಗೊಳಿಸಲು ಕೆಲವೇ ಕ್ಷಣ
ಸಾಕು....

- ಅಂಜಲಿ

23 Aug 2017, 12:23 pm

ಹೇಳುವುದಾದರು ಏನು ಎಂಬುದು?????

ಮನಸಿನ ತುಂಬಾ ಕಷ್ಟಗಳ ಸುರಿಮಳೆ ತುಂಬಿರುವಾಗ..... ನಗು ಮುಖವ ನಾ ಹೇಗೆ ದರಿಸಲಿ......
ಈ ಕಂಗಳಲ್ಲಿ ಕನಸುಗಳ ಬದಲು ಕಣ್ಣೀರೆ ತುಂಬಿರುವಾಗ ....ನಾ ಇನ್ನು ಹೇಳುವುದಾದರು ಏನು........

- Acchu love

23 Aug 2017, 11:47 am

ಪ್ರೇಮದ ಬಯಕೆ

ಒಂಟಿ ಜನುಮಕೆ ತೀರದು
ಈ ನಮ್ಮ‌ ಪ್ರೇಮದ ಬಯಕೆಯು!!
ನೂರು ಜನುಮವು ಸಾಲದು
ಈ ಜೋಡಿ ಬದುಕು ಸಾಗಲು!!

ಕ್ಷಣ ಮಾತ್ರಕೆ ನೀ ಮರೆಯಾದರೂ
ಏನೋ ತಲ್ಲಣ ಈ ‌ನನ್ನ ಜೀವಕೆ!!
ನೀನು ಬಳಿಯೇ ಇದ್ದರೂ
ಸನಿಹ ಸಾಲದು ಈ ತನುವಿಗೆ!!

ನಾನು ನಿನ್ನನು ಕಂಡ ಆ ದಿನ
ನನನ್ನೇ ನಾ ಮರೆತಿರುವ ಸುದಿನ!!
ನಿನ್ನ‌ಒಡನೆ ಬೆರೆತರೂ ಕಡಿಮೆಯೇ
ಸಾಲದೂ ಈ ಜೀವಕೆ!!

ನೀನು ಇಲ್ಲದ ಈ ಜೀವನ
ನಾನು ನೇನೆಯೆನೂ ಅರೆ ಕ್ಷಣವೂ!!.
ಓ ಜೀವದ ಸಂಗಾತಿಯೇ
ನನ್ನ ದೇಹಕೆ ನೀ ಪ್ರಾಣವು!!

- ಪಿ.ಜಿ.ಜ್ಯೋತಿ

23 Aug 2017, 10:43 am

ಮೇಘದೂತನ ಪ್ರೀತಿ ಹಾಳೆ

ಮೇಘದೂತ ತಂದುಕೊಟ್ಟ
ಪ್ರೀತಿ ಎಂಬ ಹಾಳೆ ಮೇಲೆ
ನಿನ್ನ ಹೆಸೆರ‌ ನಾನು ಬರೆಯಲೇ
ಈ ಪ್ರೀತಿಯನ್ನು ಜಗಕೆ ಸಾರಲೇ!!

ಈ ಗುಡುಗು ಈ ಮಿಂಚು
ತಂದಂತ ಮಳೆ ಹನಿಯು
ನನ್ನೋಳಗೆ ಜಿನುಗಿ ಜಿನುಗಿ
ಹಿತವಾಗಿ ತಂಪು ನೀಡಿದೆ!!

ಎದೆಯೊಳಗೆ ಮಿಡಿದು ಮಿಡಿದು
ಮನದೊಳಗೆ ಹಾರಿ ಕುಣಿದು
ಹೊಸದಾದ ಭಾವವೊಂದು
ಜೀವ ಎತ್ತು ನಗುತ ಕುಳಿತಿದೆ!!

ನನ್ನೊಳಗೆ ಚಿಗುರಿ ಕುಳಿತ
ಆಸೆ ಇಂದು ಭಾರವಾಗಿ
ನನ್ನನ್ನು ಮೌನಗೊಳಿಸಿ
ನಿನ್ನನ್ನು ಸೇರು ಎಂದಿದೆ!!

- ಪಿ.ಜಿ.ಜ್ಯೋತಿ

23 Aug 2017, 10:06 am

ಮುಂಜಾನೇ ಮಾತು

- Gopal

23 Aug 2017, 10:02 am

ಅದ್ಭುತ ಸುಂದರಿ...

ಹುಣ್ಣಿಮೆಯ ಚಂದಿರನಿಗೆಕೋ
ಬೆಳದಿಂಗಳ ಕೊರತೆಯಿದೆಯಂತೆ,
ಮೊಗದ ಅಂದವ ಸಾಲ ಕೊಡುವೆಯಾ ಗೆಳತಿ,
ಮರುಪಾವತಿಗೆ ಚಂದಿರನೇ ಬಂದು ನಿನ್ನ ಮನೆಮುಂದಿನ ಬೀದಿದೀಪವಾಗುವನಂತೆ...

ಸಾಗರದ ಅಲೆಗಳಿಗೆಕೋ ಸರದಿಯ ದ್ವಂದ್ವವಿದೆಯಂತೆ,
ಶಾಂತತೆಯ ಕಳಿಸಿ ಕೊಡುವೆಯಾ ಗೆಳತಿ,
ದಿನವೆಲ್ಲವೂ ನಿನ್ನ ಮುಂಗುರುಳ ತುದಿಯಲ್ಲೇ ಅವಿತು ಮೊಗದ ಮೇಲೆ ಹರಿಯುವವಂತೆ..

ಮುತ್ತುರತ್ನಗಳ ಹೊಳಪೆಲ್ಲವೂ ಕಳೇಗುಂದಿದೆಯಂತೆ,
ನಿನ್ನ ಮಾತುಗಳನ್ನೇ ಧಾರೆಯೆರೆಯುವೆಯಾ ಗೆಳತಿ,
ಮರುಉತ್ತರಿಸದೆ ಬಿಂಕಬಿಟ್ಟು ನೀ ನಡೆವ ದಾರಿಗೆ ಹಾಸಾಗಿ ಸಾಲ ತೀರಿಸುವುದಂತೆ..

ಬೆಟ್ಟ ಶಿಕರಗಳಿಗೆಕೋ ಮೌನದ ದೂಷವಿದೆಯಂತೆ,
ಮೌನದ ಅಂಚನ್ನು ತುಸು ನೀಡುವೆಯಾ ಗೆಳತಿ,
ಈ ಕಾಣಿಕೆ ಅರಿತು ನೀ ಎಲ್ಲೇ ಹೋದರು ತಂಗಾಳಿ ಬೀಸಿ,ನೆರಳು ಧನ್ಯವಾದ ತಿಳಿಸುವುದಂತೆ...

ನದಿ ಕಲ್ಯಾಣಿಗಳಿಗೆಕೋ ಪವಿತ್ರತೆಯ ದೋಷವಿದೆಯಂತೆ,
ನಿನ್ನ ಪಾದದ ದನಿಯ ಸ್ಪರ್ಶಿಸುವೆಯಾ ಗೆಳತಿ,
ಪ್ರತಿಯಾಗಿ ನೀ ಎಲ್ಲೇ ನಡೆದರು ಪಾದ ತೊಳೆದು ಸತ್ಕರಿಸುವುದಂತೆ....

ಭುವಿಯ ಗುಣಗಳಿಗೆಕೋ ಕ್ಷಮೆಯ ಮರೆವಿದೆಯಂತೆ,
ನಿನ್ನ ಕ್ಷಮೆಯ ಕಣವನು ಉದಿರಿಸೆ ಗೆಳತಿ,
ನಿನ್ನ ಕ್ಷಮೆಯ ಉದಾರತೆಗೆ ತನ್ನ ಸ್ಥಾನ ಮರೆತ ಭುವಿ ವಂದಿಸುವುದಂತೆ...

ಎಲ್ಲಾ ದೇವರುಗಳಿಗೆಕೋ ನಂಬಿಕೆಯ ಕೊರತೆಯಿದೆಯಂತೆ,
ಒಂದು ದಿನದ ನಂಬಿಕೆಯ ಪಾಠ ಹೇಳುವೆಯಾ ಗೆಳತಿ,
ನಿನ್ನ ಪಾಠಕ್ಕೆ ನಂಬಿಕೆಯ ಪದಕ್ಕೆ ನಿನ್ನ ಹೆಸರನ್ನೇ ಅನುಮೋದಿಸಲು ಆಜ್ಞೆ ಮಾಡುತ್ತವಂತೆ.

ತಾರೆ ಪ್ರಕೃತಿ ಮಳೆ ಸಿರಿಯು ಕೋರಿಕೆಯನ್ನು ನೀ ನೀಗಿಸ ಬೇಕಂತೆ ಗೆಳತಿ,
ಸರದಿಯಲ್ಲಿ ನಿಂತು ಕೈ ಮುಗಿದು ಬೇಡುತ್ತವಂತೆ ನೀ ಎಂದೂ ನಗು ಹೊತ್ತ ಮೊಗದಲ್ಲಿ ಸುಮ್ಮನೆ ನಡೆದಾಡ ಬಾರದಂತೆ...

-ಅರೆಯೂರು ಚಿ.ಸುರೇಶ್

- ಅರೆಯೂರು ಚಿ. ಸುರೇಶ್

23 Aug 2017, 09:53 am

ಅಂಬರದಲ್ಲಿ ಚಂದಿರ

ಚಂದಿರನೋರ್ವನು
ಅಂಬರದಲ್ಲಿ
ಹುಣ್ಣಿಮೆ ನಗು ಚೆಲ್ಲಿ!!

ಬೆಳಕನು ಬೀರಿದ
ಬಾನಿನ ತುಂಬ
ರಾತ್ರಿಯ ತಂಪಲ್ಲಿ!!

ಇರುಳನ ಹಂಗನು
ತೊರೆಯುವ ಚಂದಿರ
ಮೂಡಿದ ಬಾನಲ್ಲಿ!!

ರಾತ್ರಿಯ ಕಳೆಯಲು
ನೇಸರ ಉದಿಸಲು
ಚಂದಿರನ ಸುಳಿವೆಲ್ಲಿ!!

- ಪಿ.ಜಿ.ಜ್ಯೋತಿ

23 Aug 2017, 09:35 am

ಜ್ಞಾನ ದೇಗುಲದೊಳು

ಜ್ಞಾನ ದೇಗುಲದೊಳು ಅಜ್ಞಾನ ನೀಗಿಸಿ
ಹರಸು ನಮ್ಮ ಶಾರದಮ್ಮ!!
ಲೋಕ ಮಾತೆ ಪೂಜ್ಯ ಧಾತೆ
ನಮ್ಮನೆಲ್ಲ ಹರಸುವಾತೆ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ಗಂಗೆ ತುಂಗೆ ತೀರದಲ್ಲಿ
ತಾಯಿ ಶಾರದೆ ಪಾಠವಿಲ್ಲಿ!!
ವೇದ ಮಂತ್ರದ ಬೋಧನೆಯನ್ನು
ಆಲಿಸಿ ಕಲಿತ ಹರುಷವಿಲ್ಲಿ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ವಿದ್ಯೆ ಎಂಬ ದಾರಿಯಲ್ಲಿ
ಕೈಯ ಹಿಡಿದು ನಡೆಸುವಾಕೆ!!
ನಮ್ಮ ಮನದ ಶ್ರದ್ಧೆಯಲ್ಲಿ
ತಾನೇ ಬಂದು ನೆಲೆಸುವಾಕೆ!!
!!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

ವಿದ್ಯೆಯಲ್ಲಿ ಜ್ಞಾನ ಇಟ್ಟು
ಅಜ್ಞಾನವನ್ನು ಕಳೆಯುವವಳು!!
ಸುಜ್ಞಾನದ ದೀಪ ಹಚ್ಚಿ
ನಮ್ಮ ಬದುಕ ಬೆಳಗುವವಳು!!
‌‌‌ ‌‌ !!ಜ್ಞಾನ ದೇಗುಲದೊಳು ತಾಯಿ
ಜ್ಞಾನ ದೇಗುಲದೊಳು!!

- ಪಿ.ಜಿ.ಜ್ಯೋತಿ

23 Aug 2017, 09:18 am