Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೊನ್ನನ ಕಿರಣವ ಸುರಿಸುತ
ಗಗನಕೆ ಬಂದು ರವಿತೇಜ ನಿಂತ!!
ಹರಿಯುವ ನದಿಯ ಕಲರವ
ಕೇಳಲು ಮನಕೆ ಏನೋ ಆನಂದ!!
ಚಿಲಿ ಪಿಲಿ ಹಕ್ಕಿಯು ಹರುಷದಿ
ನುಡಿಯುತ ಸ್ವಾಗತ ಕೋರಿದೆ ರವಿಗೆ!!
ಇಳೆಯಲಿ ಇಬ್ಬನಿ ತಬ್ಬಿದ ಎಲೆಗಳು
ಹೊಸದಾಗಿ ಆರತಿ ಎತ್ತಿದೆ ಮುಗಿಲಿಗೆ!!
ಬಣ್ಣದದ ಓಕುಳಿ ಚಲ್ಲಿತು ಎದುರಲಿ
ನಿದಿರೆಯಿಂದ ಎದ್ದು ಕಣ್ಣ ತೆರೆದಾಗ!!
ರವಿಯ ಉದಯ ಶಶಿಯ ವಿದಾಯ
ನೋಡುತ ಏಳಲು ಶುಭೋದಯ!!
- ಪಿ.ಜಿ.ಜ್ಯೋತಿ
10 Aug 2017, 08:42 am
ಭಾರತ2 ಇದು ನಮ್ಮ ಭಾರತ ಸ್ವಾತಂತ್ರ್ಯ ಭಾರತ|
ವೀರಧೀರಾಳಿದ ಭಾರತ ಸ್ವಾತಂತ್ರ್ಯ ಭಾರತ||ಪ||
ಬಾಪೂಜಿ,ನೇತಾಜಿ ಬೆಳಗಿದ ಭಾರತ|
ನೆಹರು,ಅಂಬೇಡ್ಕರ್ ಬೆಳಸಿದ ಭಾರತ||
ವಿಶ್ವೇಶ್ವರಯ್ಯ,ರಾಧಾಕೃಷ್ಣನ್ ನಿರ್ಮಿಸಿದ ಭಾರತ|
ವಿವೇಕಾನಂದ, ಅಬ್ದುಲ್ ಕಲಾಂರ ಕನಸ್ಸಿನ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೧||
ಭಗತ್ ಸಿಂಗ್,ಆಜಾದ್ ಉಸಿರುಕೊಟ್ಟ ಭಾರತ|
ರಾಜಾದಿರಾಜ ಭರತನು ಹೆಸರುಕೊಟ್ಟ ಭಾರತ||
ಸುಲ್ತಾನ,ರಜಪೂತರು ಆಳಿದ ಭಾರತ|
ಸರ್ವ ಜಾತಿ-ಧರ್ಮಗಳು ಬಾಳಿದ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೨||
ದೇಶಭಕ್ತರ ರಕ್ತ ಕಣಕಣ ಚೆಲ್ಲಿ ಪಡೆದ ಸ್ವಾತಂತ್ರ್ಯ ಭಾರತ|
ಪಾಶ್ಚಿಮಾತ್ಯರನ್ನು ಹೊರಗಟ್ಟಿ ಮೆಟ್ಟಿನಿಂತ ಭಾರತ||
ನಮ್ಮೆಲ್ಲರಿಗೂ ನೆಮ್ಮದಿಯ ಬದುಕುಕೊಟ್ಟ ಭಾರತ|
ವಿಶ್ವವೇ ತಲೆಬಾಗಿ ವಂದಿಸುವ ಪುಣ್ಯಭೂಮಿ ಭಾರತ||
ಇದೇ ಸ್ವಾತಂತ್ರ್ಯ ಭಾರತ ಇದೇ ನಮ್ಮ ಭಾರತ||೩||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
10 Aug 2017, 06:54 am
ನೀ ಬಿಟ್ಟು ಹೋಗುವಾಗ
ಅಸ್ಪಷ್ಟತಯ ನೋಟ ಕಣ್ಣುಗಳಿಗೆ |
ಕಣ್ಣ ಹನಿಗಳು ನೋಡಲು ನಿನ್ನ ನಿಂತಿವೆ ಹೊರಗೆ
ನೀನೊಮ್ಮೆ ನೋಡು ತಿರುಗಿ |
ಅವಕಾಶ ಕೊಡಲು ಹನಿಯೂ ಜಾರಿ
ನೋಡಲಿ ಕಣ್ಣುಗಳು ಕೊನೆಯ ಬಾರಿ
ನಿನ್ನ ಮೋರೆಯ ನೆನಪಿಸಲು ಸಾರಿ ಸಾರಿ
- harsha
09 Aug 2017, 09:46 pm
ಗಂಧರ್ವ ಲೋಕದಿಂದ
ಬಂದವಳ ಅಂದ ಚಂದ!!
ಆ ಸೂರ್ಯಕಾಂತಿಯಂತೆ
ಅರಳಿರುವ ಮೊಗವು ಚಂದ!!
ಅವನಿಯಲ್ಲಿ ಹೊಂಗಿರಣ ಚಲ್ಲಿ
ನಸು ನಗುವ ಕಳೆಯು ಚಂದ!!
ಹೂ ಬಾಣ ಹೂಡಿ ನನ್ನೆಡೆಗೆ ಬಿಟ್ಟು
ನನ್ನ ಮನ ಸೆಳೆದ ಪರಿ ಚಂದ!!
ತುಸು ದೂರ ನಿಂತು ಬರ ಸೆಳೆದು
ನನ್ನ ಕಾಡಿರುವ ಬಗೆ ಚಂದ!!
ಖುಷಿಯಿಂದ ನಾ ಅವಳ ವರಿಸಿ
ಅವರೊಡನೆ ಬೆರೆತ ಕ್ಷಣ ಚಂದ!!
ತಡ ರಾತ್ರಿಯಲ್ಲಿ ನನ್ನ ನಿದ್ದೆಯಲ್ಲಿ
ಜೊತೆಯಾಗಿ ಬಂದವಳು ಚಂದ!!
ಅವಳ ರಮಿಸಿ ಎದ್ದಾಗ ನೆನಪು
ನಾ ಕಂಡ ಅವಳ ಕನಸದು ಚಂದ!!
- ಪಿ.ಜಿ.ಜ್ಯೋತಿ
09 Aug 2017, 08:21 pm
ತುದಿಗಾಲಿನಲ್ಲಿ ನಿಂತು ನಾ
ಕಾದಿರುವೆನು ನಿನ್ನ ಸೇರಲು!!
ಹೆಜ್ಜೆ ಇಡುವ ಮೊದಲು ಒಮ್ಮೆ
ಬಾ ನೀನು ನನ್ನ ಕಣ್ಣ ಎದುರು!!
ಮನಸು ಕೊಡುವೆ ನಾನು ಆಗಲೇ
ಮೂಡಿರುವುದು ಪ್ರೀತಿ ನನ್ನಲಿ!!
ಜಿಗಿದು ಬರುವೆ ನಾನು ಕೂಡಲೆ
ಕಾಡಿರುವುದು ವಿರಹ ನನ್ನನು!!
ಅರಿವು ಇಲ್ಲದಂತೆ ಸಮಯ
ಓಡಿ ಕಳೆದು ಬಿಡುವುದು ದಿನವ!!
ಹಿತವಾಗಿ ಬದುಕನು ನಡೆಸಲು
ನಿನ್ನ ಜೊತೆಗಾಗಿ ಕಾದಿದೆ ಮನವು!!
ಕಾತುರಕ್ಕೂ ಅವಸರಕ್ಕೂ
ಇರುವುದು ಒಂದೇ ಬಯಕೆಯು!!
ಪ್ರತಿ ಕ್ಷಣವೂ ನಿನ್ನ ಸೇರಿ
ನಲಿಯುವ ಆಸೆ ನನ್ನ ಮನಸಿಗೆ!!
- ಪಿ.ಜಿ.ಜ್ಯೋತಿ
09 Aug 2017, 08:20 pm
ಅಡವಿಯಲಿ ಮೈ ಗೊಡವಿ
ಕಳೆದುಕೊಂಡೆನು ಮನಸ!!
ಹುಡುಕಿದರೂ ಹಿಂತಿರುಗಿ
ಸಿಗುವುದು ಕನಸೇ!!
ಕಡು ರಾತ್ರಿ ಕಾಡಿನಲ್ಲಿ
ಕಾಡ ಮೃಗಗಳ ಬೇಟಿ!!
ಹೆದರಿದರೂ ಹಿಂತಿರುಗಿ
ಬಂದದ್ದು ನಿಜವೇ!!
ನಡು ನೀರಿನಲಿ ಕೈ ತೊಳೆದು
ಅಳಿಸಿದೆನು ನೆನಪುಗಳ!!
ನೆನೆದರೂ ಮರುಕವೇ
ಮರಳದಿರಲಿ ಆ ನೆನಪು!!
ಹೊಸತಾಗಿ ಕಟ್ಟಿದೆನು
ಅರಮನೆಯ ಹೃದಯದಲಿ!!
ಆಳುವವರು ಬಲ್ಲರೇ
ನನ್ನೆದೆಯ ನೋವ!!
ಕೈ ಹಿಡಿದು ನಡೆಸುವವರು
ಯಾರಿಹರು ಜೊತೆಯಲ್ಲಿ!!
ನನಗಾಗಿ ನಾನೊಂದೇ
ಎನ್ನುವುದೇ ಸತ್ಯ!!
- ಪಿ.ಜಿ.ಜ್ಯೋತಿ
09 Aug 2017, 05:34 pm
ಚಂದಿರನ ಊರಿನಲ್ಲಿ
ಚಂದನದ ಗೊಂಬೆಯು!!
ಹುಣ್ಣಿಮೆಯ ರಾತ್ರಿಯಲ್ಲಿ
ಬೆಳದಿಂಗಳ ತಂದಳು!!
ನನ್ನ ಎದೆಯ ಬಾಗಿಲನ್ನು
ಬಡಿಯುತಲಿ ನಿಂತಳು!!
ನಾ ನೋಡುತ ಬೆರಗಾದೆ
ತೆರೆಯದೇ ಬಾಗಿಲು!!
ಅವಳ ಕಣ್ಣ ಸವಿ ನುಡಿಗಳ
ಪರಿ ತಿಳಿಯದೇ ಹೋದೆನು!!
ಮನಸಿಗೆ ಬೀಗ ಜಡಿದು
ಮೌನವಾಗಿ ಕುಳಿತೆನು!!
ಕಾದು ಕಾದು ಸಾಕಾಗಿ
ಅವಳು ತಿರುಗಿ ಹೋದಳು!!
ಎಚ್ಚೆತ್ತ ಮನಸು ಈಗ
ಹೋದವಳಿಗಾಗಿ ಬಯಸಿದೆ!!
- ಪಿ.ಜಿ.ಜ್ಯೋತಿ
09 Aug 2017, 05:30 pm
ಮುಗಿಲಿನ ಅಂಚಿಗೆ ಬಣ್ಣವ ಬಡಿಯುವ
ಕಾಯಕ ದೊರೆಯಿತೇ ಅವನಿಗೆ!!
ದೂರಕೆ ದೂರಕೆ ಹೋದವನು ಅವನು
ಹಿಂದಿರುಗಿ ಬರದಾದನೇ ಮನೆಗೆ!!
ಬಾಗಿಲ ಎದುರಲಿ ಕಾಯುತ ಕುಳಿತೆನು
ಅವನ ಆಗಮನಕ್ಕೆ ನಾನು!!
ಬಲುದೂರದಲಿ ಮುಗಿಲಿನ ಅಂಚು
ಕೊನೆ ಇಲ್ಲದೆಯೇ ಎಲ್ಲೆಡೆ ಹರಡಿದೆ!!
ಕಾಯಕ ಮುಗಿಸಿ ಮರಳುವನು ಎಂಬ
ಬರವಸೆಯ ಗೋಪುರ ಅಳಿಸಿದೆ!!
ಎಷ್ಟೇ ಯತ್ನಿಸಿದರೂ ನಿಲ್ಲದ ಗೋಪುರವ
ಮತ್ತೆ ಮತ್ತೆ ಕಟ್ಟಲು ನಾ ಯತ್ನಿಸಿದೆ!!
- ಪಿ.ಜಿ.ಜ್ಯೋತಿ
09 Aug 2017, 05:29 pm
ಈ ಹಾಡು ನನ್ನದು ಈ ನಾಡು ನನ್ನದು
ಈ ಭಾಷೆ ನನ್ನದು ಎಂಬ ಹಿರಿಮೆ ನನ್ನದು!!
ಈ ಹಾವ ನನ್ನದು ಈ ಭಾವ ನನ್ನದು
ಕರುಣೆಗೆ ಹೆಸರಾಗಿಹ ಕರುನಾಡು ನನ್ನದು!!
ಈ ವೇಷ ನನ್ನದು ಈ ಲಾಸ್ಯ ನನ್ನದು
ಈ ರೀತಿ ನೀತಿ ವಿಧಿ ವಿಧಾನ ಎಲ್ಲ ನನ್ನದು!!
ಈ ಗಾಳಿ ನನ್ನದು ಈ ನೀರು ನನ್ನದು
ಈ ಮಣ್ಣು ನನ್ನದು ಎಂಬ ಗರಿಮೆ ನನ್ನದು!!
ಈ ತನುವು ನನ್ನದು ಈ ಮನವು ನನ್ನದು
ನರ ನಾಡಿಯಲ್ಲಿ ಹರಿಯುತ್ತಿರುವ ರಕ್ತ ನನ್ನದು!!
ಈ ವಿಚಾರ ನನ್ನದು ಈ ಆಚಾರ ನನ್ನದು
ಇಲ್ಲಿ ಹುಟ್ಟಿ ಇಲ್ಲಿ ಬೆಳೆದ ಬದುಕು ನನ್ನದು!!
ಈ ಬರಹ ನನ್ನದು ಈ ಕವಿತೆ ನನ್ನದು
ಈ ಸಾಲಿನಲ್ಲಿ ಬೆರೆತಿರುವ ಅಭಿಮಾನ ನನ್ನದು!!
ಈ ಹಾಡು ನನ್ನದು ಈ ನಾಡು ನನ್ನದು
ಈ ಭಾಷೆ ನನ್ನದು ಎಂಬ ಹಿರಿಮೆ ನನ್ನದು!!
- ಪಿ.ಜಿ.ಜ್ಯೋತಿ
09 Aug 2017, 09:27 am
ಮರಳಿ ಮರಳಿ ಏಕಾಂತ
ನನ್ನನೇ ಹುಡುಕಿ ಬರುತಿದೆ ಏಕೆ!!
ಕೊರಗಿ ಕೊರಗಿ ನಾನಿಲ್ಲಿ
ಕೂರಲು ಅದಕೆ ಸಂತಸವೇ!!
ನಿದಿರೆಯಲ್ಲೂ ಕನಸಿನ ಬಾದೆ
ಒಂಟಿಯಾಗೇ ಕಾಡಿದೆ ನನ್ನ!!
ಹಗಲಿನಲ್ಲೂ ಏಕಾಂತದ ಸಲಿಗೆ
ಅಂತರವಿಲ್ಲದೇ ಅಂಟಿದೆ ನನ್ನ!!
ಮರಳುಗಾಡಿನಲ್ಲಿ ಕಾಲು ಮುರಿದು
ಕುಳಿತವನ ಚಿಂತೆ ಅರಿತವರಾರು!!
ಏಕಾಂತದಲ್ಲಿ ನೊಂದವನಿಗೆ
ಸಾಂತ್ವನ ನೀಡುವವರಾರು!!
ಬೆಂಕಿಗೆ ಆಹುತಿಯಾಗಿ ಕರಗುತ್ತಿರುವ
ಮೇಣದಂತಹ ಬದುಕು ಇದು!!
ಚೂರು ಬೆಳಕ ಕಂಡ ಸಂತಸದಲ್ಲಿ
ಬದುಕನ್ನು ಬಲಿ ಪಡೆಯುತ್ತಿದೆ!!
ಸರಾಗವಾಗಿ ಹರಿಯುತ್ತಿರುವ
ಕಣ್ಣೀರಿಗೇನು ಕೊರತೆ ಕಣ್ಣಲ್ಲಿ!!
ಒಂಟಿಯಾದ ಮನಸಿನ ರೋದನೆ
ಮುಗಿಲಿಗೂ ಮಿಗಿಲಾದ ವೇದನೆ!!
- ಪಿ.ಜಿ.ಜ್ಯೋತಿ
09 Aug 2017, 09:16 am