ಬಯಸದೆ ಸಿಕ್ಕಿತು ಈ ಕಾಯ
ಅದರೊಳಗೊಂದು ಮನಸೆಂಬ ಮಾಯ
ಕನಸ ಕಂಡು ಕುಪ್ಪಳಿಸುವುದು ಇಲ್ಲದೆ ಲಯ
ಕಣ್ಣೀರ ಸುರಿಸುವುದು ಮಾಡಿಗೊಂಡು ಗಾಯ
ಮಾನವಜನ್ಮ ಸಿಗಲು ಮಾಡಿರಬೇಕಂತೆ ಪುಣ್ಯ
ಎದುರಿಸಿ ಗೆಲಬೇಕಂತೆ ಬಂದರು ಎಂಥದೆ ಕಷ್ಟ ಕಾರ್ಪಣ್ಯ
ಬದುಕಿ ತೋರಿಸಬೇಕು ಕಾಯವಾಗಬೇಕಾದರೆ ಸಾರ್ಥಕ
ನೊಂದು ನೋಯಿಸಿ ಬದುಕಿದರೆ ಜೀವನವು ನಿರರ್ಥಕ
ಮನಸ ಸಂತಸದಿಂದಿರಿಸುವುದಂತೆ ನಿಜ ಬದುಕು
ನಗುವುದೇಗೆ ಮನಸೆ ಮುರಿದು ಆದರೆ ಒಡಕು
ಮತ್ತೆ ಹೇಳಿತು ನೊಂದ ಮನಸು ನಗುವಿಗೆ ಹುಡುಕು ದಾರಿ
ಸಂತಸದಿಂದಿರಲು ಪ್ರಯತ್ನಿಸುತಿರಲೆ ಬೇಕು ಬಾರಿ ಬಾರಿ
ಅವನು ಪಡುವ ನೋವಿನಿಂದ ಆತನನ್ನು ದೂರ ಎಳೆದಷ್ಟು ಆತ ಆ ಯಾತನೆಗೆ ಹತ್ತಿರವಾಗುತ್ತನೆ..ನನ್ನ ಶತ ಪ್ರಯತ್ನ ಸೋಲುತಿದೆ
ಆತನ ನೋವನ್ನು ನಾನು ಕರಗಿಸಿಕೊಳ್ಳಲೂ ಆಗುತ್ತಿಲ್ಲ
ಅವನ,ನೋವನ್ನು ಅವನು ಹೇಗೆ ಜೀರ್ಣಿಸಿಕೊಳ್ತನೋ ಎನ್ನುವುದು ನನ್ನ ಪ್ರತಿ ನಿಮಿಷದ ಕೊರಗು
ಮಾಡಿದಳು ನನ್ನ ಜೊತೆ ಕುಶಲೋಪರಿ,
ಒಣ ಹವೆಯ ಹವಾಮಾನದಲ್ಲೂ
ಆದಳು ಕಣ್ಣೀರ ರುವಾರಿ,
ಹೃದಯವ ಚೂರು ಮಾಡಿದಳು
ಕೊಟ್ಟು ಪ್ರೀತಿಗೆ ಸುಪಾರಿ,
ಕಾರಣ ಕೇಳಿದರೆ ಅವಳಲ್ಲಿಂದ ಪರಾರಿ,
ಆದರೂ ಅವಳೇ ನನ್ನ ಬಂಗಾರಿ,
ಬಿಂಕದ ಸಿಂಗಾರಿ,
ಹ್ರುದಯವೆಂಬ ದೇವಾಲಯಕ್ಕೆ.
ಮೆಟ್ಟಿಲುಗಳು ನಾನಾದೆ.
ನನ್ನ ಹ್ರುದಯದ ಬಡಿತದ ಶಬ್ದಗಳಿಗೆ
ಗುಡಿಗಂಟೆಯಿಂದ ಬರುವ ಸ್ವರ ನೀನಾದೆ.
ಹುಣ್ಣಿಮೆ ಚಂದಿರನಂತೆ ಹೊಳೆಯುವ ನಿನ್ನಯ ಮೊಗಕೆ ಸಿಂಧೂರ ತಿಲಕ ನಾನಾದೆ.
ನನ್ನಯ ಮನದಲ್ಲಿ ಹುಟ್ಟಿದ ಪ್ರೀತಿಯೆಂಬ ಮೊಳಕೆಗೆ ಜೀವವು ನೀನಾದೆ.
ಅದರ ಭಾವವು ನಿನ್ನದೆಂದೆ !!ಸ!!
ನಕ್ಷತ್ರದಂತೆ ಹೊಳೆಯುವ ನಿನ್ನಯ ಕಣ್ಣಿನ ರೆಪ್ಪೆಗಳಿಗೆ ಕಾಡಿಗೆ ಎಂಬ ವರ ನಾನಾದೆ.
ಅಧ್ಬುತ ಕಣ್ಣಿಗೆ ಕುಕ್ಕುವಂತಹ ಶಿಲೆ ನೀನಾದೆ
ಅದನ್ನು ಕೆತ್ತಿದ ಶಿಲ್ಪಿ ನಾನಾದೆ !!ಸ !!
ನನ್ನಯ ಜೀವನದಲ್ಲಿ ಹಂತ ಹಂತವಾಗಿ ಮೇಲೇರಲು ಬೆಂಗಾವಲು ನೀನಾದೆ.
ನಿನ್ನ ಸರ್ವಸ್ವವನ್ನು ನನಗಾಗಿ ಧಾರೆ ಎರೆದೆ.
ನಿನ್ನ ಆಸೆಯನ್ನು ಪೂರೈಸಲು ನಿನ್ನ ಬಾಳಿನ ಬೆಳದಿಂಗಳ ಬೆಳಕು ನಾನಾದೆ.
ನಮ್ಮಿಬ್ಬರ ಜೀವನವೆಂಬ ಪಯಣಕ್ಕೆ ಹ್ರುದಯವೆಂಬ ಅರಮನೆಗೆ ಅದರಲ್ಲಿ ಅಡಗಿರುವ ನಮ್ಮಿಬ್ಬರ ಹ್ರುದಯದ ಮಿಡಿತವೆಂಬ ಮಿಲನಕ್ಕೆ ಸದಾ ನಾನು
ನೀನು ಅದಕ್ಕೆ ಚಿರರುಣಿಯಾಗಿ ಜೀವಿಸೋಣ ನನ್ನಯ ಮನವೇ ಸದಾ..ಸದಾ.ಸದಾ