ಅಮ್ಮ ನಿನಗೆ ಮುತ್ತು-ರತ್ನಗಳನ್ನು ನೀಡುವೆ
ನೀನು ನನಗೆ ತೋರಿದ ಪ್ರೀತಿ-ವಾತ್ಸಲ್ಯಕ್ಕೆ
ಅಮ್ಮ ನಿನಗೆ ವಜ್ರ-ವ್ಯೆಢರ್ಯಗಳನ್ನು ನೀಡುವೆ
ನೀನು ನನಗೆ ಕಲಿಸಿದ ಮೌಲ್ಯಗಳಿಗೆ
ಅಮ್ಮ ನಿನಗೆ ಮಾಣಿಕ್ಯ-ಗೋಮೇಧಿಕಳನ್ನು ನೀಡುವೆ
ನೀನು ನನಗೆ ಕಲಿಸಿದ ಒಳ್ಳೆಯ ನಾಗರಿಕತೆಗೆ
ಅಮ್ಮ ನಿನಗೆ ನೀಲ-ಪಚ್ಚೆ-ಹವಳಗಳನ್ನು ನೀಡುವೆ
ನೀನು ನನ್ನಲ್ಲಿ ತುಂಬಿದ ಧೈರ್ಯ-ಶಕ್ತಿಗಳಿಗೆ
ಅಮ್ಮ ನಿನಗೆ ಪುಷ್ಪರಾಗ-ನವರತ್ನಗಳನ್ನು ನೀಡುವೆ
ನಿನ್ನಲ್ಲಿರುವ ಹೃದರವಂತಿಕೆಗೆ
ಅಮ್ಮ ನಿನಗೆ ಸರ್ವವನ್ನೂ ಧಾರೆ ಎರೆಯುವೆ
ನೀನು ನನಗಾಗಿ ಮಾಡಿದ ತ್ಯಾಗ-ಬಲಿದಾನಗಳಿಗೆ
ಮರೆಯೋಕ್ಕಾಗದಷ್ಟು ಪ್ರೀತಿಸಿ
ಮರೆಯಲಾಗದೆ
ಕಣ್ಣೀರಿಟ್ಟು ಮರುಗುತ್ತಿದೆ ಜೀವ ...
ಎಷ್ಟು ಕಣ್ಣೀರಿಟ್ಟರು
ಕಣ್ಣೀರೆ ಸಾಲುತ್ತಿಲ್ಲವೆಂದು
ಆ ದೇವರ ಬಳಿ ಕಣ್ಣೀರ
ಸಾಲ ಕೇಳುತ್ತಿದೆ,
ಈ ನೊಂದ ಜೀವ ...!!
ಹಿಂದಿನ ಚೈತ್ರ ಮಾಸದಿ
ಮರದ ರೆಂಬೆ-ಕೊಂಬೆಗಳಲ್ಲಿ
ಹೊಸ ಚಿಗುರಿನಿಂದ
ನಳ-ನಳಿಸಿದ
ಈ ಪ್ರೀತಿಯೆಂಬ
ಮರಕ್ಕೆ..ಇಂದಿನ
ಚೈತ್ರ ಮಾಸಕೂ
ಮುನ್ನವೇ
ಈ ಪ್ರೀತಿಯೆಂಬ ಮರದ
ರೆಂಬೆ-ಕೊಂಬೆಗಳಲ್ಲಿ
ಎಲೆಯುದುರುತ್ತಿರುವ ಅನುಭವ..
ಇದು ಚೈತ್ರ ಮಾಸಕೂ ಮುನ್ನವೇ
ನಡೆಯುವ ಸಹಜ ಪ್ರಕ್ರಿಯೆಯೂ...?
ಅಥವಾ ಈ ಪ್ರೀತಿಯೆಂಬ ಮರ
ಬರಡಾಗುತ್ತಿರುವ
ವಿನಾಶದ ಸೂಚನೆಯೂ...?
ಉತ್ತರವ ನೀನೇ ಹೇಳು ಗೆಳತಿ..
ದಿನಗಳು ಕಳೆದವು ಕಾರಣವಿಲ್ಲದೆ,
ಆದರೆ ರಾತ್ರಿ ಮಾತ್ರ ನೋವಿನಿಂದ ತುಂಬಿದ ಸಂತೆ.
ನೋವುಗಳು ಸಮಯದೊಂದಿಗೆ ಸರಿಯಾದವು,
ಆದರೆ ಗುರುತನ್ನು ಶಾಶ್ವತವಾಗಿಸಿದವು.
ಹಾಸಿಗೆ ಮೇಲೆ ಇರದ ವಿಶ್ರಾಂತಿ,
ಚಿತ-ಪಟ, ನಿದ್ರಿಸಲು ಮಾಡಿದ ಪ್ರಯತ್ನಗಳು ಹಲವಾರು.
ಆದರೆ ಚಿಂತೆಗಳು ತೆಲೆಹಿಂಡಿದವು.
ಆಳವಾದ ವಿಚಾರಗಳು ಮನಸ್ಸಿನಲ್ಲಿ,
ಆದರೆ ನೆನಪು ತನ್ನ ಬೆಳಕಿನ ಕಿರಣಗಳನ್ನು ಎಲ್ಲೆಡೆ ಚಲ್ಲಿದವು.
ಕಲಿಸಿದವು,ಅಳಿಸಿದವು,ಉಳಿಸಿದವು.
ಆದರೆ ನೆನಪಿನ ಕತ್ತಲು ಈ ಕತ್ತಲಲ್ಲೇ ಕಾಣತೊಡಗಿತು.
ಈಗ ಈ ಕತ್ತಲಿಗೆ ಧ್ವನಿ ನೀಡಬೇಕು.
ನನ್ನ ಹೃದಯದ ಜೋತೆ ಮಾತನಾಡಬೇಕು.......!!!