Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ

ಅಮ್ಮ ನಿನಗೆ ಮುತ್ತು-ರತ್ನಗಳನ್ನು ನೀಡುವೆ
ನೀನು ನನಗೆ ತೋರಿದ ಪ್ರೀತಿ-ವಾತ್ಸಲ್ಯಕ್ಕೆ
ಅಮ್ಮ ನಿನಗೆ ವಜ್ರ-ವ್ಯೆಢರ್ಯಗಳನ್ನು ನೀಡುವೆ
ನೀನು ನನಗೆ ಕಲಿಸಿದ ಮೌಲ್ಯಗಳಿಗೆ
ಅಮ್ಮ ನಿನಗೆ ಮಾಣಿಕ್ಯ-ಗೋಮೇಧಿಕಳನ್ನು ನೀಡುವೆ
ನೀನು ನನಗೆ ಕಲಿಸಿದ ಒಳ್ಳೆಯ ನಾಗರಿಕತೆಗೆ
ಅಮ್ಮ ನಿನಗೆ ನೀಲ-ಪಚ್ಚೆ-ಹವಳಗಳನ್ನು ನೀಡುವೆ
ನೀನು ನನ್ನಲ್ಲಿ ತುಂಬಿದ ಧೈರ್ಯ-ಶಕ್ತಿಗಳಿಗೆ
ಅಮ್ಮ ನಿನಗೆ ಪುಷ್ಪರಾಗ-ನವರತ್ನಗಳನ್ನು ನೀಡುವೆ
ನಿನ್ನಲ್ಲಿರುವ ಹೃದರವಂತಿಕೆಗೆ
ಅಮ್ಮ ನಿನಗೆ ಸರ್ವವನ್ನೂ ಧಾರೆ ಎರೆಯುವೆ
ನೀನು ನನಗಾಗಿ ಮಾಡಿದ ತ್ಯಾಗ-ಬಲಿದಾನಗಳಿಗೆ

- Jayanthi

10 Jul 2017, 06:18 am

ರಸ ಹೃದಯದಲ್ಲಿ ಪಾರಿಜಾತ

ಜಿನುಗುತ್ತಿರಲು ಪ್ರೀಯು ರಸ ಹೃದಯದಲ್ಲಿ
ಸ್ವರ ಗೀತೆಗಳು ಕಿವಿಗೆ ಕೇಳಿಸಿತು ಕಾವ್ಯರಾಗದ
ರೀತಿಯಲಿ....
ಪರಿಪರಿಯಾಗಿ ಬಿಚ್ಚಿಡುತ್ತಿದೆ ನನ್ನ ಹೃದಯದಲ್ಲಿ...


ರಸ ಗಳಿಗೆಯಲಿ ಮೌನ ತಾಳಿದವು ಮೋಹಗಳು
ಲಾವಣ್ಯ ತೋರಿ ನಿಂತಳು ಎದುರಲಿ....
ಜೀನುಗುತ್ತಿರುವುದು ಆಸೆ
ಪ್ರೀತಿಯ ರಸ ಬಾವನೆಗಳಲ್ಲಿ...

ಸೌಂದಯ೯ ಒಂದು ದೈವ ರಹಸ್ಯ ಸೃಷ್ಟಿಯಲಿ
ಪ್ಪೀತಿಯ ರಹಸ್ಯ ಬಯಲಾಗುವುದು
ಕಣ್ಣಿನ ನೋಟದಲ್ಲಿ....
ಚೆಂದದ ತಾವರೆಯು ವಿವಿದ ಸೌಂದಯ೯
ಆಕಷ೯ಣೆಯಲಿ....

ದೖವದ ಸೃಷ್ಟಿಯಲಿ ಕಲೆಗಾರನ ಕೃಷಿ
ಕವಿ ಮಾಡುವ ರಸ ಕವಿತೆಗಳ ಸೃಷ್ಟಿ
ಅವಳ ಕಂಡು ಬುಸುಗುಡುತೕಿದೆ ಹೃದಯ....
ಪಾರಿಜಾತವನ್ನು ಕೖಯಲ್ಲಿ ಇಡಿಯುವ ಬಯಕೆ....

- ak

09 Jul 2017, 10:01 pm

ಹೇ ಹೃದಯಾ

ಮರೆಯೋಕ್ಕಾಗದಷ್ಟು ಪ್ರೀತಿಸಿ
ಮರೆಯಲಾಗದೆ
ಕಣ್ಣೀರಿಟ್ಟು ಮರುಗುತ್ತಿದೆ ಜೀವ ...
ಎಷ್ಟು ಕಣ್ಣೀರಿಟ್ಟರು
ಕಣ್ಣೀರೆ ಸಾಲುತ್ತಿಲ್ಲವೆಂದು
ಆ ದೇವರ ಬಳಿ ಕಣ್ಣೀರ
ಸಾಲ ಕೇಳುತ್ತಿದೆ,
ಈ ನೊಂದ ಜೀವ ...!!

- shankarpaschapur@gmail.com

09 Jul 2017, 08:35 pm

ಹುಡುಕಾಟ

ಓ ತಾಯೆ ನೀನೆಲ್ಲಿರುವೆ
ಕಾಣುವ ಕಾತರದಿ ನಾನಿರುವೆ!

ಮುಂಜಾನೆ ಮಂಜಿನಲಿ
ಮಡಿಯುಟ್ಟು ಗುಡಿಯಲಿ
ಭಜಿಸಲು ನಿನ್ನ ದರ್ಶನ ಸಾಧ್ಯವೆ
ಓ ತಾಯೆ ನೀ ಬಾರೆಯ!

ನನ್ನೆಲ್ಲ ಮನದ ಮಾತ ಉಸುರುವೆ
ನೀ ಆಲಿಸುತಿರುವೆ ಎಂದರಿತು
ಮಂದಹಾಸದಿ ಮೂಡಿರುವ
ಚಿತ್ರಪಟದ ಮುಂದೆ ನಿಂತು
ಓ ತಾಯೆ ನೀನೆಂದುಬರುವೆ!

ಕಂಡ - ಕಂಡ ಗುಡಿಯಲ್ಲು
ನೀನೆ ಇರುವೆಯೆಂದು
ಭಯದಿ ನೂರು ಬಾರಿ ಭಜಿಸುತ್ತ
ಭಕ್ತಿಯಲಿ ಹರಕೆ ಹೊರುತಿರುವೆನಿಂದು
ಓ ತಾಯೆ ಮೊಗವ ತೋರೆಯ!

ಇಹಲೋಕದ ಪುಣ್ಯ ಕ್ಷೇತ್ರಗಳಲ್ಲಿ
ಪಾಪ ತೊಳೆವ ಪವಿತ್ರ ನದಿಗಳಲ್ಲಿ
ನಿತ್ಯ ನಿನ್ನ ಪಠಿಸುವ ಆರವರಲ್ಲಿ
ನೀನಿರುವೆಯ ಓ ತಾಯೆ ಹೇಳೆಯ!

ನರರು ನಿರ್ಮಿಸಿದ ಕಟಕಟೆಯಲ್ಲಿ
ಶಿಲ್ಪಿ ಬೆವರ ಸುರಿಸಿ ಕೆತ್ತಿದ ಕಲ್ಲಿನಲ್ಲಿ
ಕಲ್ಮಶಭರಿತ ಮಂತ್ರಗಳ ಪಠಣೆಯಲ್ಲಿ
ಎಲ್ಲಿರುವೆ ನೀ ? ಓ ತಾಯೆ ಕಾಣೆಯ!

ಓ ತಾಯೆ ನೀನೆಲ್ಲಿರುವೆ
ಕಾಣುವ ಕಾತರದಿ ನಾನಿರುವೆ!

- ಶಕುಂತಲಾ

09 Jul 2017, 06:29 pm

ಒಲವಿನ ಒರತೆ..

ತಿರುಗೋ
ಈ ಭೂಮಿಯಲ್ಲಿ
ಬೊಗಸೆ ಪ್ರೀತಿಗಾಗಿ
ಅಲೆಮಾರಿಯಂತೆ
ಅಲೆದಾಡುತ್ತಿರುವ
ನನಗೆ..ನೀ ಬಂದೆ
ಚೈತ್ರ ಮಾಸದಿ
ಎಲೆಯುದುರಿ
ಹೊಸ ಚಿಗುರ
ಪಡೆದ ಮರದಂತೆ...

ಬಳಲಿ ಬಸವಳಿದ
ಈ ಹೃದಯಕ್ಕೆ
ನೀ ಬಂದೆ..
ಮರುಭೂಮಿಯಲ್ಲಿ
ತಿಳಿ ನೀರಿನ
ಒರತೆಯಂತೆ..
ಒಲವಿನಾ ಕೊರತೆಯ
ನೀಗಿಸಲು..

ವರುಷದಿ
ಹರುಷವನೆಲ್ಲಾವಾ ಕಂಡು..
ಹುಸಿ ಮುನಿಸುಗಳ
ತಾಪದಿ ಬೆಂದು....
ಒಡಲಾಲದಲ್ಲಿ
ನಾ ಬಲು ಮೊಹಗೊಂಡು..
ನಾನಾದೇ ಗೆಳತಿ
ಕಾಮನ ಬಿಲ್ಲಿಗಿಂತಾ ಬೆಂಡು...

ಸವಿದೆವು ಬೇವು-ಬೆಲ್ಲವನೆಲ್ಲವಾ
ಹರುಷದಿ-ಹೊಸ-ವರುಷದಿ..
ಪ್ರೇಮ-ಪಲ್ಲವಿ ನೀನಾಗಿ
ಚರಣ ನಾನಾಗಿ...
ಭಂದಿಯಾದೆವು
ಪ್ರೇಮ-ಬಂಧನದಲಿ...

ಹಿಂದಿನ ಚೈತ್ರ ಮಾಸದಿ
ಮರದ ರೆಂಬೆ-ಕೊಂಬೆಗಳಲ್ಲಿ
ಹೊಸ ಚಿಗುರಿನಿಂದ
ನಳ-ನಳಿಸಿದ
ಈ ಪ್ರೀತಿಯೆಂಬ
ಮರಕ್ಕೆ..ಇಂದಿನ
ಚೈತ್ರ ಮಾಸಕೂ
ಮುನ್ನವೇ
ಈ ಪ್ರೀತಿಯೆಂಬ ಮರದ
ರೆಂಬೆ-ಕೊಂಬೆಗಳಲ್ಲಿ
ಎಲೆಯುದುರುತ್ತಿರುವ ಅನುಭವ..

ಇದು ಚೈತ್ರ ಮಾಸಕೂ ಮುನ್ನವೇ
ನಡೆಯುವ ಸಹಜ ಪ್ರಕ್ರಿಯೆಯೂ...?
ಅಥವಾ ಈ ಪ್ರೀತಿಯೆಂಬ ಮರ
ಬರಡಾಗುತ್ತಿರುವ
ವಿನಾಶದ ಸೂಚನೆಯೂ...?
ಉತ್ತರವ ನೀನೇ ಹೇಳು ಗೆಳತಿ..

ಪ್ರೀತಿಯಿಂದ..
ವಿಜಯಾನಂದ..
9741940305

- ವಿಜಯಾನಂದ

09 Jul 2017, 06:07 pm

ನನ್ನೆದೆಯ

ನನ್ನೆದೆಯಾ
ಒಲುಮೆಯೆಂಬ
ಕುಲುಮೆಯಲ್ಲಿ......
ಪ್ರೀತಿಯೆಂಬ
ಓಯಾಸಿಸ್ ನ
ಚಿಲುಮೆಯ
ಚಿಮ್ಮಿದಾ ಸಖಿ ನೀನು...
ನೀ ಮೀಟಿದ ರಾಗಕೆ ... .
ನಿನಗೆಂದಿಗೂ ಅಭಾರಿ ನಾನು...

ಪ್ರೀತಿಯಿಂದ.. ವಿಜಯಾನಂದ
9741940305

- ವಿಜಯಾನಂದ

09 Jul 2017, 05:48 pm

ಮರೆಯಾಗುವೆ............?

ಸತ್ತೋದ ಮನಸಿಗೆ ಮತ್ತೆ ನೂರು ಆಸೆಗಳೊತ್ತು ನಗುವ ಹಠವೇಕೋ ತಿಳುಯುತಿಲ್ಲ ನನಗೆ....

ಈ ಸ್ವಾರ್ಥಪರರ ಜಗತ್ತಿನಲ್ಲಿ ನೀತಿ ಸಂಹಿತೆಗಳನ್ನು ಅಚ್ಚುಕಟ್ಟಾಗಿ ಆಚರಿಸುತ್ತಿದ್ದೇನೆ ದಡ್ಡಿಯಂತೆ ಎಲ್ಲರೂ ನನ್ನವರೆಂದು ನೆನೆದು.............

ಮರೆಯಾಗಿಸೋ ಆಸೆ ನನಗೆ ನನ್ನನ್ನು ನನ್ನಲ್ಲಿ ಯಾರ ಕೈಯಿಗೂ ನನ್ನ ನೆರಳು ಕೂಡ ಸಿಗದಂತೆ ಅದಕ್ಕೂ ನೋವಾಗದಂತೆ...............

- ಚುಕ್ಕಿ

09 Jul 2017, 05:24 pm

ಕರುನಾಡ ಕಡಲು

ಕರುನಾಡ ಕಡಲಿನಲಿ
ಈಜುವ ಮೀನಾಗಿ
ರೂಪುಗೊಂಡಿಹುದು
ಈ ನನ್ನ ಬದುಕು!!

ಆಡುತಲೇ ನಾ ಕಲಿತ
ತೊದಲ ನುಡಿ ಕನ್ನಡವು
ಬೆರೆತು ಹೋಯಿತು
ನನ್ನ ಬದುಕಿನೊಡನೆ!!

ಶಿತಿಲವಾಗಿಹ ನನ್ನ
ತನುವ ನೆತ್ತರ ಗಡಿಗೆ
ಮಿಡಿದು ಹೇಳುವುದೊಂದೆ
ಕನ್ನಡವು ನನದೆಂದೇ!!

ಬಿಸಿಯುಸಿರು ತಂಪಾಗಿ
ಕಡಲಿನೊಳು ಮುತ್ತಾಗಿ
ಹೊರಬರಲಿ‌ ಕನ್ನಡದ
ಸಿರಿ ಘನತೆಯಾಗಿ!!

- ಪಿ.ಜಿ.ಜ್ಯೋತಿ

09 Jul 2017, 04:19 pm

ಹೇ ಹೃದಯಾ

ದಿನಗಳು ಕಳೆದವು ಕಾರಣವಿಲ್ಲದೆ,
ಆದರೆ ರಾತ್ರಿ ಮಾತ್ರ ನೋವಿನಿಂದ ತುಂಬಿದ ಸಂತೆ.
ನೋವುಗಳು ಸಮಯದೊಂದಿಗೆ ಸರಿಯಾದವು,
ಆದರೆ ಗುರುತನ್ನು ಶಾಶ್ವತವಾಗಿಸಿದವು.
ಹಾಸಿಗೆ ಮೇಲೆ ಇರದ ವಿಶ್ರಾಂತಿ,
ಚಿತ-ಪಟ, ನಿದ್ರಿಸಲು ಮಾಡಿದ ಪ್ರಯತ್ನಗಳು ಹಲವಾರು.
ಆದರೆ ಚಿಂತೆಗಳು ತೆಲೆಹಿಂಡಿದವು.
ಆಳವಾದ ವಿಚಾರಗಳು ಮನಸ್ಸಿನಲ್ಲಿ,
ಆದರೆ ನೆನಪು ತನ್ನ ಬೆಳಕಿನ ಕಿರಣಗಳನ್ನು ಎಲ್ಲೆಡೆ ಚಲ್ಲಿದವು.
ಕಲಿಸಿದವು,ಅಳಿಸಿದವು,ಉಳಿಸಿದವು.
ಆದರೆ ನೆನಪಿನ ಕತ್ತಲು ಈ ಕತ್ತಲಲ್ಲೇ ಕಾಣತೊಡಗಿತು.
ಈಗ ಈ ಕತ್ತಲಿಗೆ ಧ್ವನಿ ನೀಡಬೇಕು.
ನನ್ನ ಹೃದಯದ ಜೋತೆ ಮಾತನಾಡಬೇಕು.......!!!

- shankarpaschapur@gmail.com

09 Jul 2017, 12:59 pm

ಪರಿಶುದ್ಧ ಪ್ರೀತಿ

ಕಾದು ಕುಳಿತಿರುವ ಸ್ನೇಹಕ್ಕೆ
ಮೋಸ ಮಾಡದಿರು...

ನೊಂದ ಮನಸಿಗೆ ನೋವಿಸದಿರು...

ಗಾಳಿಯ ಹಾಗೆ ಪರಿಶುದ್ಧ ಪ್ರೀತಿ
ನನ್ನದು....

ತಿಳಿದು ತಿಳಿಯದ ಮುನ್ನ ನನ್ನನಿಂದ
ದೂರವದೆ....

ನೀ ನೋಡದ ಪ್ರೀತಿಯ ಬಗ್ಗೆ ನಿನಗೆಗೆ
ತಿಳಿಸೋದು ಗೆಳೆಯ ....

ಇಂತಿ ನಿನ್ನ ಮುಗ ಮನಸು
ಆಂಜನೇಯ ಪುತ್ರಿ ಅಂಜಲಿ...

- ಅಂಜಲಿ

09 Jul 2017, 10:47 am