ಅಮಾವಾಸ್ಯೆ ಕಪ್ಪಿಗೆ ಹುಣ್ಣಿಮೆ
ಮುತ್ತನೊಂದು ಆಶಿಸುವ ಹೃದಯ
ಒಡಂಬಡಿಕೆ ಮುರಿಯದ ರಾಗಿಣಿ
ರಾಗ ನೀ ಆಗಬೇಕು
ಪರವಶಳಾಗದ ಒಲವಿನ ರೆಕ್ಕೆಗೆ
ಪುಳಕ ನಾ ಕೊಡುವುದು ಅನಾಮಧೇಯ ಸತ್ಯ
ಟಾರು ದಾರಿಯ ಬೆಳಕ ನೆರಳಿಗೆ
ಇರುವೆಗಳೆರಡು ಗಸ್ತು ತಿರುಗುತ್ತದೆ
ಕೂಲಂಕುಷ ನಡೆಯ ಬಳಿಕ
ಅನಂತ ಪಯಣಕೆ ನನ್ನೊಳಗೆ
ಆವಾಹನೆ ನೀ ಅರಿಯದ ವಿಚಾರ
ಎದೆಯುಬ್ಬಿ ಹೆಸರನ್ನೊಮ್ಮೆ ಉಸುರಿ
ಬಿಡುತ್ತೇನೆ ರೋಮ ಸೆಟೆಯುವುದು
ನಾ ಕಳೆದು ಹೋದ ಸ್ಪಷ್ಟ ನಿದರ್ಶನ
ನೀ ಸೋಕದ ಬಟ್ಟೆಯನ್ನೊಮ್ಮೆ
ತದನಂತರ ಅಣುಕಿಸುತ್ತೇನೆ
ನಿನ್ನ ಹೆಸರ ನೆಪದಿಂದ ಘಮವೊಂದು
ಗಾಳಿಗೆ ಸೇರುವುದು ಗೊತ್ತಾಗದೇ
ಸಾಲ ಸೋಲ ಖಾಲಿಯಾಗಿ
ಮೀಟರ್ ಬಡ್ಡಿ ದುಪ್ಪಟ್ಟಾಗಿ
ದನಕರುಗಳನು ಕಸಾಯಿಖಾನೆ ಗೆ ನೂಕಿ
ನಾಕವೆಲ್ಲ ನರಕವಾಗಿ ಹನಿ ನೀರಿಗೆ ಕಾದಿದೆ
ಇನ್ನು ನಿಮಗೆ ಕೊಡಲು ನನಗೆಲ್ಲಿಂದ ಹಣ ಬರುವುದೇ?
ಮಾನಕಂಜುವ ಮಕ್ಕಳು ನಾವು
ಕಾವ ದೈವಗಳೇ ಮನ್ನಿಸಿರಿ ನೀವು
ಮಳೆಯನು ತರಿಸಿ ವುಳಿಸಿರಿ ಪ್ರಾಣವ
ಮನೆ ಮಾನ ಹರಾಜಿಗಿದೆ ನಡೆಯಿಸಿ ಪವಾಡವ
ಚುನಾವಣೆಗೆ ನಿಂತ ರಾಜಕಾರಣಿಯಂತೆ
ನೀಡದಿರಿ ಪೊಳ್ಳು ಭರವಸೆಯ
ಮಾನವೇ ಹೋಗಿರೆ ಪ್ರಾಣಕೇನು ಬೆಲೆ
ಕಾಯುವವ ಬರದಿರೆ ಕೊಲ್ಲುವವನ ಕರೆಯದೆ ದಾರಿ ಇದೆಯೇ?
ಈಸಬೇಕಂತೆ ಇದ್ದು ಜಯಿಸಬೇಕಂತೆ
ತತ್ವ ಹೇಳುವ ಮಠಾಧೀಶರು ಇಲ್ಲಿ ನೂರುನೂರು.
ಭಾಷಣ ಬಿಗಿಯುವ ಪುಢಾರಿಗಳಿಗೆ ಹೇಳಿಕೊಡಬೇಕೇ ಮೊಸಳೆ ಕಣ್ಣೀರು
ಮುಗ್ಧ ಮಕ್ಕಳ ಬೀದಿಪಾಲು ಮಾಡಿ ಹೋಗಲೇ ಅಯ್ಯೋ ನನ್ನ ಕೈಯಾರೆ ವಿಷ ವುಣಿಸಲೇ
ಮುದ್ದು ಮಡದಿಯೇ ಅಂದು ನಿನ್ನೊಸಲಿಗಿಟ್ಟೆ ಕೆಂಪು ಕುಂಕುಮ
ಇಂದುಣಿಸುತಿರುವೆ ಪಾಷಾಣದ ಉಂಡಿಗೆಯ ಸಂಭ್ರಮ
ಎಂದಿನಂದದಿ ಮಾಧ್ಯಮದಿ ವಿಜೃಂಭಿಸುತಿದೆ ರೈತಕುಟುಂಬ ದುರ್ಮರಣದ ವಿಶೇಷ ಸುದ್ದಿ
ದೌಡಾಯಿಸಿ ಬಂದಿತು ರಾಜಕೀಯದ ಆಶಾಡಭೂತಿ.
ಬದುಕಿದಾಗ ಬೊಬ್ಬೆಇಟ್ಟರೂ ಬಾರದಾ ಇವರು, ಸತ್ತಾಗ ಬಂದು ಸಾಂತ್ವಾನ ಮಾಡುವರು.
ರೈತರ ಸಾವು-ಬದುಕಿನ ಹೋರಾಟ ಇವರಿಗಂತೆ ಚದುರಂಗದಾಟ
ಸತ್ತ ಹೆಣದಮೇಲೆ ಮದಿರೆಯ ಕಾಯಿಸಿ ಮದದಿ ಮೆರೆದಾಡುವ ಮಾನಗೇಡಿಗಳು, ರಾಜಕಾರಣದ ಹೇಸಿಗೆಯಲ್ಲಿ ಹೊರಳಾಡುವ ಜಂತು ಹುಳುಗಳು.
ರೈತರಾಸಾವು ಇವರಿಗೊಂದು ಪ್ರಚಾರದ ಗಿಮಿಕ್ಕು,
ನೀವ್ ಸತ್ತರೆ ಬೆಂಕಿ ಇಡರು ಯಾರು ನಿಮ್ಮ ಹೆಣಕ್ಕೂ
ಪ್ರೀತಿಯಲ್ಲಿ ಕಲಹಗಳು ಸಹಜ ಆದರೆ ಆ ಕಲಹಗಳು ಪ್ರೀತಿಗೆ ಮುಳ್ಳಾಗಬಾರದು,
ಏಕೆಂದರೆ ಉಳಿಪೆಟ್ಟು ಬಿದ್ದಾಗಲೆ ಒಂದು ಕಲ್ಲು ಅದ್ಭುತ ಮೂರ್ತಿಯಾಗುತ್ತದೆ. ಉಳಿಪೆಟ್ಟು ಬಿದ್ದಾಕ್ಷಣ ಕಲ್ಲು ಕುಪಿತಗೊಳ್ಳವುದಿಲ್ಲ, ಸಹನೆಯಿಂದ ಅದು ದೈವ ಸ್ವರೂಪವನ್ನು ಪಡೆಯುತ್ತದೆ. ಹಾಗೆಯೆ ಸಣ್ಣಪುಟ್ಟ ಮನಸ್ತಾಪಗಳನ್ನು ಮೀರಿ ಪ್ರೀತಿಯನ್ನು ಗೆದ್ದು ಪ್ರೇಮ ಮೂರುತಿಯನ್ನು ನಿರ್ಮಿಸಬೇಕು....