Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೇಗುದಿ

ನಾವು ನಾವಾಗಲೇ ಇಲ್ಲ
ಜೀವಜಗದ ಪರಿಧಿಯೊಳಗೆ

ಸರಕು ಸಂಸ್ಕೃತಿಗೆ ಒಡ್ಡಿಕೊಂಡು
ಕಂಡಕಂಡಲ್ಲೆಲ್ಲ ಬೊಗಸೆಯೊಡ್ಡಿ ನಿಂತಿದ್ದೇವೆ
ಬೈ ಒನ್ ಗೆಟ್ ಒನ್್ ಆಗಿದ್ದೇವೆ...

ನಮ್ಮವು ಒರಟಾದ ಕೈಗಳು
ಹಾಗೆ ಉಳಿದಿವೆ ಸುಕ್ಕುಗಟ್ಟಿದ ಚರ್ಮ
ಅವು ದಬ್ಬಾಳಿಕೆಗೆ ಅಂಜಿ
ಬೂಟು ನೆಕ್ಕಿವೆ;
ಒಳಗಿನ ಬೇಗುದಿಯನ್ನೂ ಸಹಿಸಿ
ನಕ್ಕು ಸುಮ್ಮನಾಗಿವೆ

ಸುಟ್ಟೇಬಿಟ್ಟರು ನಮ್ಮತನವ
ಥೇಟು ಪರಂಗಿಗಳಂತೆ!
ನಮ್ಮಲ್ಲಿಯೇ ಇರುವರು
ಬೆನ್ನ ಹಿಂದೆಯೇ ನಿಂತು

ಈಗ ಮುಂದಿದ್ದಾರೆ ಅವರು
ನಮ್ಮದೇ ನೆಲ
ನಮ್ಮದೇ ಗಾಳಿ
ನಮ್ಮದೇ ಅನ್ನ
ನಮ್ಮದೇ ಉಸಿರು
ಕಸಿದುಕೊಂಡು

ಕೊಳ್ಳುವವರ ಸಾಲಿನಲ್ಲಿ
ನಾವಿದ್ದೇವೆ
ನಮ್ಮತನವ ಮಾರಿಕೊಂಡು...

ಈಗಿಲ್ಲಿ ನಿತ್ಯಸಂತೆ
ಹರಾಜಿಗಿಟ್ಟ ಪಶುಗಳು ನಾವು

- ram purshi

30 Mar 2017, 08:55 pm

ಅಂದು-ಇಂದು

ಅಂದು ಪ್ರೀತಿ
ತೂಗುತ್ತಿದ್ದ ಗೂಡಲ್ಲಿ
ತೆರೆದುಕೊಂಡ
ನೂರಾರು ಹಕ್ಕಿಗಳು
ಮುಗಿಲು ಚುಂಬಿಸುವ
ತವಕದಲ್ಲಿದ್ದವು

ಚುಂಬಿಸಿ, ಸಂಭ್ರಮಿಸಿದವು
ತನ್ಮಯತೆಯಿಂದ

ಇಂದು ಪ್ರೀತಿ
ಮುಚ್ಚಿಟ್ಟಿದ್ದ ಗೂಡಲ್ಲಿ
ತೆರೆದುಕೊಂಡ
ಹಳೆ ಸಾಮಾನುಗಳು
ಗುಜರಿ ಅಂಗಡಿಯ
ತೂಗುಗತ್ತಿಯಲ್ಲಿ ನೇತಾಡುತ್ತಿವೆ

ತುಕ್ಕಿಡಿದ ಸಾಮಾನುಗಳು 
ಮಾರಲ್ಪಟ್ಟು ಮಗದೊಂದು 
ಸಾಮಾನು ಮನೆಯ ಅಟ್ಟದಲ್ಲಡಗಿದೆ

- ram purshi

30 Mar 2017, 08:54 pm

ಮುಂಜಾವು

ಈ ಮುಂಜಾವು ಮಲ್ಲೆ ಹೊನ್ನೆ
ವಿವಿದ ಹೂವ ಹಾಸಿ ಪ್ರೀತಿ ಹಾಡ
ಹಾಡುತಿದೆ
ಆ , ಚೈತ್ರ ನನಗೆ ಬಯಕೆ ಮೂಡಿಸಿ
ನನ, ಮನಸಿಗೆ ತರುಣಿ ಕನಸಿಗೆ
ಕೆರಳಿಸಿದ ಪಲ್ಲವನ ಪುಳಕಕೆ
ಕವಿ ಗೀತಕಾರನಾದ

- kasturi pattar

30 Mar 2017, 01:29 pm

ನನ್ನವಳ ಸೌಂದರ್ಯ

ಹೇ ಪ್ರಿಯ ಹೃದಯವೇ ..!!
ಚಂದಿರನಿಗೊಂದು ಸವಾಲನ್ನ
ಹಾಕಿ...ನಿನಗಿಂತ ಚೆಂದ ನನ್ನ ಹೃದಯ
ದೇವತೆಯೆಂದೆ...?
ಅದೊಂದು ದಿನ ತುಂಬು ಹೊಳಪಿಂದ
ಬಾನಂಗಳಕೆ ಬಂದ..!
ಕೇಳಿದರೇ...ಹುಣ್ಣಿಮೆಯೆಂದ...!!
ಒಂದು ಕ್ಷಣ..ನನ್ನವಳ ಸೌಂದರ್ಯ
ನೋಡಿ...ಮೋಡದ ಮರೆಯಲ್ಲೆಲ್ಲೋ
ಬಚ್ಚಿಟ್ಟುಕೊಂಡ..?
ಕೇಳಿದರೇ...ಮಳೆಗಾಲವೆಂದ...!!
ನಾ..ಅಂದು ಕೊಂಡೆ...?
ಬಹುಶಃ ಎಲ್ಲೋ ಹೊಟ್ಟೆ
ಕಿಚ್ಚಿರಬೇಕೇನೋ ಅಂತ...!!

- basavarajsirnayakpreethu

30 Mar 2017, 08:37 am

ಯುಗಾದಿ

ವರುಷವೆಲ್ಲ ಹರುಷವಿಲ್ಲ
ನೂರು ನೋವು ಸಂಕಟ
ದಿನವು ದಿನವು ದಣಿದು ಮನದಿ
ಮನಕೆ ಸಿಗದು ಹರುಷ

ಬಂಧು ಬಳಗ ದೂರವಾದ್ರು
ಕೂಡಿ ಮಾಡೊ ಯುಗಾದಿ ಹಬ್ಬ
ಹೊಸತು ಚಿಗುರಿ ಹಸಿರು ಉಸಿರು
ಅರಳಿ ನಗುವ ವಸಂತವು

ಹಬ್ಬ ತಂದ ಸಡಗರ
ಹೊಸಿಲು ಹಸಿರು ರುಚಿಸೊ ಸಿಹಿ ಹೂರಣ
ಬಣ್ಣ ಬಣ್ಣ ಉಡುಗೆ ತೊಟ್ಟ
ವಿವಿಧ ಆಟ ಸಂಭ್ರಮ

ಮುಗಿಲ ಮರೆಯ ಚಂದ್ರ ಹುಡುಕಿ
ಹಿರಿಯರ ಪಾದ ಪೂಜೆ ಗೌರವ
ಸಾಗಿ ಬಂದ ನಮ್ಮ ಹಬ್ಬ ಯುಗಾದಿ
ಹೊಸ ವರುಷವು ನಮಗೆ ಇಂದು
ಹರುಷ ಕೊಡುವ ಯುಗಾದಿ ಹಬ್ಬ

- gtr

29 Mar 2017, 08:54 pm

ಕರಗುವ ಮುನ್ನ ಈ ಕ್ಷಣ

ಕರಗುವ ಮುನ್ನ ಈ ಕ್ಷಣ
ಕಳೆದುಬಿಡುವೆ ನನ್ನ ಪೂರ್ತಿ ಜೀವನ
ಶಿಲೆಯಾಗುಳಿವ ನನ್ನೀ ಹೃದಯದಾಣೆಗೂ.

ಕಣ್ಣುಗಳಾಗಿವೆ ಸಾಗರ
ಕನಸುಗಳಾಗಿ ಹುಕ್ಕುತ್ತಿದೆ ಅವಳ ಜ್ಞಾಪಕ
ಕನಸೇ ಇಂದು ಕಣ್ಣೀರಾಗಿ ಕಡಲ ಸೇರಲು.

ಓಟಕೆ ಇಳಿದು ಸುಸ್ತಾದ ಒಂದು ನದಿ ನಾನು
ಯಾವ ಸಣ್ಣ ತೀರಕೊ ಹತ್ತಿರವಾಗದೇ ಹೋದೆನು
ನಿದ್ರೆಯ ದಾಟಿ ಮುನ್ನಡೆದ ಒಂದು ಕನಸು ನಾನು
ಯಾವ ಕಣ್ಣ ಕನ್ನಡಿಯಲೂ ಪ್ರತಿಬಿಂಬವಾಗದೇ ಹೂದೆನು.

ನನ್ನ ಪ್ರೀತಿಯೇ ಇಂದು ಸ್ನೇಹವಾಗಿ ಹೋಯ್ತೆ?
ನನ್ನ ಬದುಕೇ ಒಂದು ಪ್ರಶ್ನೆಯಾಗಿ ಹೋಯ್ತೆ?

ಇಂದು ಈ ಸಂಬಂಧಕೆ ಒಂದು ಹೆಸರಿದೆಯೇ?
ಈ ಗುಟ್ಟನು ಬಿಡಿಸಲು ಸಾಧ್ಯವಿದೆಯೇ?

--(ತೆಲುಗು ಚಿತ್ರಗೀತೆಯೊಂದರ ಅನುವಾದ)

- ಅಕವಿ

29 Mar 2017, 08:39 pm

ಹೇಳದ ಕವನ ...!

ಒಂಟಿ ಮರದ ಮೇಲೆ ಜಂಟಿಯಾಗಿ ಮೂಡಿದ ಹೆಸರು ಕೆತ್ತನೆ ಹೇಳದ ಕವನ...!!
ನಿನ್ನ ಹೊರತು ಬೇರೇ ಏನನ್ನು ಯೋಚಿಸದೆ ನರಳಾಟವೇ ಹೇಳದ ಕವನ ...!!
ಪ್ರೆಯಸಿಯ ಹೆಸರು ಸುವರ್ಣಾಕ್ಷರ ಹಚ್ಚೆಯ ರೂಪದಲ್ಲಿ ಹಾಕಿಸಿದ ನೋವೇ ಹೇಳದ ಕವನ ...!!
ಬಂಡೆ ಗಲ್ಲು ತಾಳ್ಮೆ ಮುರಿದು ಕೇತ್ತಿಸಿಕೋಂಡು ಅವಳ ಹೆಸರು ಹೇಳದ ಕವನ ... !!
ಬಸ್ಸಿನ ಸೀಟಿಗೆ ಗೊತ್ತಾಗಿ ಅವಳಿಗೆ ತಿಳಿಯದೆ ಹೋದ ಆ ಅಕ್ಷರ ಹೇಳದ ಕವನ ...!!
ಸಾವಿರ ರೂಪಾಯಿ ನೋಟಿನ ಮೇಲೆ ಬರೆದ ಬೆಲೆ ಕಟ್ಟಲಾಗದ ಪ್ರತಿಯ ಮಾತು ಹೇಳದ ಕವನ ...!!

ಇದು ಹೇಳದ ಕವನ ಹೇಳಲಾಗದ ಕವನ ...!!!

- Shiva.S.M...!

29 Mar 2017, 07:09 pm

ತಂದೆ ತಾಯಿಯೇ ಮೊದಲ ದೇವರು ....!

ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲಾ ...
ಒಂದು ವಾರ ಒಂದೇ ಒಂದು ವಾರ ನಿನ್ನ ಮನೆಯ ಖರ್ಚುಗಳೆಲ್ಲಾ ನೀನೇ ಜವಾಬ್ದಾರಿ ವಹಿಸಿಕೊ ನಿನ್ನ ತಂದೆ ತಾಯಿ ನಿನಗೆ ದೇವರಾಗಿ ಕಾಣುವರು ....!!!

- Shiva.S.M...!

29 Mar 2017, 06:58 pm

ಶೋಧ

ಶೋಧಿಸುತಿರುವೆ ಹೃದಯದಲ್ಲಿಳಿದು ನೀನು ನೆಲೆಸಿದ ಕುರುಹು ಬಸಿದು ಬಸಿದು
ಮಾಸಿದ ನೆನಪಿನ ಕಲೆಗಳು ಮನದಿಂದ ಹೊರಬಿದ್ದವು ಬಣ್ಣ ಬಳಿದುಕೊಳ್ಳುತ್ತಾ

ನಿನಗೆ ಅಪರಂಜಿಯ ಪಟ್ಟಕೊಟ್ಟು ನಾನು ಜನರಿಗೆ ಅಪಹಾಸ್ಯನಾದೆ ನನಗೆ ನಾನೇ ಪ್ರಶ್ನೆಯಾದೆ ಬದುಕಿನ ಆದಿ ಅಂತ್ಯ ಅರಿಯದೆ

ನದಿಯೂಁಚಿಂತಿಸುತ್ತಿದೆ ನಾನು ಯಾವಾಗ ಹೇಗೆ ಮುಳುಗುವೆ ಎಂದು ದೋಣಿ ಸಜ್ಜಾಗಿದೆ ಲಗಾಮು ಮರೆತು ಲಂಗರಿಲ್ಲದ ಕಡೆ ಸಾಗಲು

ಯಾರೊ ಗೀಚಿದ ಅಮರಪ್ರೇಮದ ಸಾಲು ಅಮ್ರತವೆಣಿಸಿ ಹೃದಯಕಿಳಿಸಿ ಖಚಿತ ಉಡುಗೊರೆ ಪಡೆದು ಶೋದನೆ ಮುಗಿಸಿ ಶೋಕಸಾಗರದಲ್ಲಿ ನನ್ನವರನು ಅದ್ದಿದೆ..
✍ಆದಿಲ್ ಕೋಟೇಶ್ವರ

- adilsha

29 Mar 2017, 02:16 pm

ನಲಿವಿನ ನಡುವೆ ....

ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವವು "ನಿನ್ನೆಗೆ"
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ "ಸಂಜ್ಞೆಗೆ"

- *RS*

29 Mar 2017, 11:28 am