Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೊಲದಲ್ಲಿ ಮಣ್ಣ ಉತ್ತಿ
ನೆಲದಲ್ಲಿ ಭತ್ತ ಬಿತ್ತಿ
ಹೊನ್ನಿನ ಬೆಳೆ ಬೆಳೆಯುವ
ಬೆಳೆಯುವ ನಾವು ಬೆಳೆಯುವ!!
ಬಾನಿಂದ ಮಳೆಯನಿತ್ತು
ಭೂಮಿಲಿ ಹಸಿರನಿತ್ತ
ಆ ದೇವರ ಇಂದು ನೆನೆಯುವ
ನೆನೆಯುವ ನಾವು ನೆನೆಯುವ!!
ನೆಲದಲ್ಲಿ ಫಲವ ಪಡೆವ
ಭಾಗ್ಯವ ನಮಗೆ ಕೊಟ್ಟ
ಭೂ ತಾಯಿಗೆ ನಾವು ನಮಿಸುವ
ನಮಿಸುವ ನಾವು ನಮಿಸುವ!!
ಸಿರಿ ಸಂಪತ್ತು ತುಂಬಲಿ
ತುಂಬಿ ತುಳುಕಾಡಲಿ
ಸಂತಸದಿ ಕುಣಿದು ನಲಿಯುವ
ನಲಿಯುವ ನಾವು ನಲಿಯುವ!!
ಭತ್ತದ ಗಿಡ ಬೆಳೆದು
ತೆನೆದೂಗಿ ನಲಿವಾಗ
ಸಂತಸದಿ ಪದವ ಹಾಡುವ
ಹಾಡುವ ನಾವು ಹಾಡುವ!!
ಏನಿಲ್ಲ ಯೇಕಿಲ್ಲ
ಎಂಬುದು ನಮಗಿಲ್ಲ
ಶ್ರಮದಿಂದ ಕೂಡಿ ದುಡಿಯುವ
ದುಡಿಯುವ ನಾವು ದುಡಿಯುವ!!
- ಪಿ.ಜಿ.ಜ್ಯೋತಿ
24 Mar 2017, 10:40 am
ಅಯ್ಯೋ ಸೈನಿಕಾ..
ನಿನಗ್ಯಾಕೆ ಬೇಕಿತ್ತು
ಭ್ರಷ್ಟ ತನವ ಜಗ ಜಾಹೀರು ಮಾಡುವ ಕಾಯಕ ?
ಅದನ್ನೇ ತಿಂದು, ಮೆದ್ದು, ಹೊದ್ದು
ಮಲಗಿರುವ ಕೂಳ ಕೂಟ
ಬಿಟ್ಟಾವೆಯೇ ನಿನ್ನ
ದೇಶ ಭಕ್ತಿಯ ಕಂಡು ?
ಎಲವೋ ಪಾಪಿ ಬಡವ
ನೀ ದಂಡಿಗೆ ಸೇರಿದ್ದೇ
ಗುಂಡಿಗೆ ಗುಂಡಿಗೆಯೊಡ್ಡಿ
ಗುಡ್ಡ ಬಂಡೆಗಳ ಮೇಲೆಲ್ಲೋ
ಅನಾಥವಾಗಿ ಸತ್ತು ಮಲಗಲು...
ಆದರೆ...
ಅಯ್ಯೋ ಸಹೋದರನೆ
ನಿನ್ನ ಕೊಂದೇ ಬಿಟ್ಟರೇನೋ ಕಾಣೆ
ನಮ್ಮವರೇ ನಿನ್ನ ಬೆನ್ನಿಗೆ
ಮೋಸದ ಬಂದೂಕನಿಟ್ಟು !
ಅದೇನೂ ಹೊಸದಲ್ಲ ಬಿಡು ಅವರಿಗೆ
ದೇಶ ಭಕ್ತಿಯ ಹೆಸರಲ್ಲಿ ಹರಿಸಿದ ನೆತ್ತರನು
ಲೆಕ್ಕವಿಟ್ಟು ಹಿಡಿದಿಟ್ಟವರಾರು ?
ನಿನ್ನಂತ ಮಗ್ಗುಲ ಮುಳ್ಳು
ತೊಲಗಿದರೇನೇ ಅಲ್ಲವೇ
ಬಣ್ಣದ ದೇಶ ಭಕ್ತಿ ಮುಖವಾಡಕ್ಕೆ ಒಂದು ಬೆಲೆ ?
ಸಮಾಜದ ಕೋರೆ ತಿದ್ದಲು ಹೊರಟ
ಗಂದೆಡೆಯ ಶೂರನೆ...
ನಿನ್ನ ಸಾವಿನ ಸುದ್ದಿ ಸುಳ್ಳಾಗಲಿ..
ನಂಜು ಹುಳುಗಳ ಎದೆಗೆ
ನಿನ್ನ ದೈರ್ಯವೆ ಮುಳ್ಳಾಗಲಿ.
- ಶ್ರೀಗೋ.
24 Mar 2017, 09:57 am
ಚಿಟ್ಟೆಯ ಬೆನ್ನೇರಿ
ಹೋಗುವ ಬಾ ಬಾಲೆ!!
ಹೂ ಮನದ ಪಿಸು ನುಡಿಯ
ಆಲಿಸುವ ನೀ ಬಾರೆ!!
ಚಿಟ್ಟೆಯ ಬೆನ್ನೇರಿ
ಹೋಗುವ ಬಾ ಬಾಲೆ!!
ಆ ಮುಗಿಲಿಗೆ ಸಾಗಿ
ಕಳೆಯುವ ನಮ್ಮ ನಾಳೆ!!
ಹೊಂಬಿಸಿಲಿನಲ್ಲಿ ಪ್ರೀತಿ
ಬೆಸುಗೆಯ ಬೆಸೆಯುವ!!
ಆ ಬಾನಿನೆಡೆಗೆ ಜಿಗಿದು
ತೆಲುತ ನಾವು ಸಾಗುವ!!
ಮೋಡಕೆ ಚುಂಬನವಿತ್ತು
ಮಳೆ ಹನಿಯ ಭೂಮಿಗೆ ಕರೆವ!!
ಮುಗಿಲಿಗೆ ಬಣ್ಣವ ಬಡಿದು
ಕಾಮನ ಬಿಲ್ಲನು ಬರೆವ!!
ತಾರೆಯ ಬಳಗಕೆ ಚಲಿಸಿ
ತಾವರೆಯ ಕನಸನು ನುಡಿವ!!
ಚಂದಿರನ ಲೋಕದಲ್ಲಿ
ಸುಂದರ ಇರುಳನು ಕಳೆವ!!
- ಪಿ.ಜಿ.ಜ್ಯೋತಿ
24 Mar 2017, 09:25 am
ಕುಣಿಯುವ ಹೃದಯವದು
ಕುಣಿದಿದೆ ನಿನ್ನ ಕಂಡು!!
ಮಿಡಿಯುವ ಸ್ವರದಲದು
ಕರೆದಿದೆ ನಿನ್ನನ್ನು ಇಂದು!!
ವಲಿಯುವ ಬಯಕೆಯಲಿ
ವಲಿದು ಬಾ ನನ್ನವಳೇ!!
ಸಂಭಾವನೆ ಇಲ್ಲದ
ದಾಸ ನಾ ನಿನ್ನವನೇ!!
ಮೊದಲನೋಟದಲ್ಲೇ ನೀನು
ಸೆಳೆದುಕೊಂಡೆ ನನ್ನನ್ನು!!
ಕಳೆದು ಹೋದ ನನ್ನನ್ನು ಈಗ
ಹುಡುಕಲಿ ನಾ ಎಲ್ಲಿ!!
ನಿಲ್ಲಲಾರೆ ಭೂಮಿಯ ಮೇಲೆ
ತೇಲಿ ನಡೆವೆ ಗಾಳಿಯ ಮೇಲೆ!!
ಇಲ್ಲ ಹಿಡಿತ ಮನಸಿನ ಮೇಲೆ
ಮರೆತೆ ಇಂದು ನನ್ನನ್ನು ನಾನೇ!!
- ಪಿ.ಜಿ.ಜ್ಯೋತಿ
24 Mar 2017, 09:09 am
ನಿನ್ನ ನೆನಪು ನನ್ನ
ಮೋಡಿ ಮಾಡಿ ಕರೆದದ್ದು ಚೆನ್ನ
ನಿನ್ನ ಮಾತು ನನ್ನ
ಮೌನಿ ಮಾಡಿ ಹೊರಟದ್ದು ಚೆನ್ನ
ನೀ ಬರದೇ ನನ್ನ
ಕಾಡಿದ ಪರಿ ಇನ್ನೂ ಚೆನ್ನ
ಆದರೇ................................
ಕಾರಣವಿಲ್ಲದೇ ನೀ ಏಕೆ
ತೊರೆದು ಹೋದೆ ನನ್ನ...........!!
- ಪಿ.ಜಿ.ಜ್ಯೋತಿ
24 Mar 2017, 08:52 am
ಮುಂಜಾನೆ ಮಂಜಲಿ...
ತಂಗಾಳಿ ತಂಪಲಿ...
ಸುಮಗಳು ಕಿಲ ಕಿಲನೆ ನಗುತಿರಲು...
ಹಕ್ಕಿಗಳ ಚಿಲಿ ಪಿಲಿ ನಾದ ಸ್ವರ ಕೇಳುತಿರಲು...
ಮೂಡನದಿ ಮೂಡಿ ಬಂದನು ನೇಸರ ನಿಗಿ ಕೆಂಡದಂತೆ...
ಕರಗಿ ನೀರಾಗಲು ಮಂಜು
ತಂಗಾಳಿ ಬಿಸಿಯೂಸಿರಿನಂತಾಗಲು...
ಓಡುತಿವೆ ಹಕ್ಕಿಗಳು ತಮ್ಮ ಗೂಡಿನೆಡೆಗೆ...
ಸೂರ್ಯ ದೇವನಿಗೆಕೋ ತುಸು ಬೇಸರ ಮನದಲಿ....
ನಾ ಬರಲು ಮರೆಯಾಗುವರೆಲ್ಲ
ತಪ್ಪು ನನ್ನಲ್ಲಿದೆ ಎಂದು ಜಾರಿದನು ಮೆಲ್ಲನೆ ಪಡುವನದಿ ನೇಸರ...
ಮರಳಿ ಚಂದಿರನಾಗಿ ಬಂದನಾ ನೇಸರ...
ಎಲ್ಲರ ಸಂಭ್ರಮಕ್ಕೆ ಸಾಕ್ಷಿಯಾಗಲು
ಬೆಳದಿಂಗಳ ಚೆಲ್ಲಿ ನಿಂತನಾ....??ಚಂದಿರ...!
- chinmayi
24 Mar 2017, 07:56 am
ಬೆಚ್ಚನೆಯ ಹೊದಿಕೆಯನು
ಬೇಸರದಿ ತೆಗೆದು
ಕಷ್ಟದಿ ಕಣ್ಣುಜ್ಜುತ
ನಿನ್ನ ನಾಮವ ನೆನೆದು
ಜೀವನವೆ ಯಂತ್ರವಾಗಿ
ಸೃಜನಶೀಲತೆ ಮರೆಯಾಗಿ
ಮನಸ್ಸು ಭಾರವಾಗಿ
ತಲೆಯೊಂದು ಚಿಂತೆಗೂಡಾಗಿ
ಮೂಡಣವು ಮೌನವಾಗಿ
ಬೆಳಗುತಲಿದೆ
ತರು-ಲತೆಗಳು ಮುತ್ತಿನಾರದಿ
ಹೊಳೆಯುತಲಿವೆ
ಬಾನಂಗಳಲಿ ಬೆಳ್ಳಕ್ಕಿಯ
ಸಾಲು.…ಸಾಲು....
ಭಾನಿಗೆ ಆರತಿ ಬೆಳಗುತ್ತ
ಸಾಲು....ಸಾಲು....
ಕೋಟಿ ನಾಮವ ಹೊತ್ತ
ನಿನ್ನ ಜಪಿಸುತ್ತ ನಾವು
ಮುಂದಡಿ ಇಡುತ್ತ
ದಿನದ ಆಧಿಯತ್ತ
ಅಕ್ಕರದಿ ಅಡಿಗೆ ಮಾಡುತ್ತ
ಸಕ್ಕರೆಯ ನುಡಿಯನಾಡುತ್ತ
ಮನೆ-ಮನವ ತೊಳೆಯುತ್ತ
ಬೆಳಗುತಿರುವಳು ಅವ್ವಾ....
-ಶಾರದ
- ಶಕುಂತಲಾ
24 Mar 2017, 03:25 am
ತಿರುಗಿ ತಿರುಗಿ ನೀ ನನ್ನ ನೋಡದಿದ್ದರು,
ತಿರುತಿರುಗಿ ನೀ ನನ್ನ ಆಸುಪಾಸಿನಲ್ಲೇ
ನಡೆದಾಡುತ್ತಿರುವೆ
ಏನೆನ್ನುವುದು ಇದಕ್ಕೆ?
ಮನವು ಪ್ರೀತಿ ಎಂದು ನಾಮಕರಣ ಮಾಡಿದೆ
ತಿರಸ್ಕರಿಸುವ ಧೈರ್ಯ ನನಗಿಲ್ಲ.
ನೀ ತುರುಬು ಕಟ್ಟಿ ನೋಡಿದ ನೋಟಕೆ,
ನೀ ಮುಂಗುರುಳ ಸರಿಸಿ ಮಾಡಿದ ಮೋಡಿಗೆ
ಹೃದಯವಿದು ಹುಚ್ಚೆದ್ದು ಕುಣಿದಾಡಿದೆ.
ಬಾವಿಗೆ ಬೀಳುವ ಭಯದಲ್ಲಿ ನಾನಿರುವೆ,
ಆದರೂ ಇಸಿ ಜಯಿಸಬಲ್ಲೆ ಎಂಬ
ಮೊಂಡು ಹಠವೊಂದು ನನ್ನಲ್ಲಿದೆ.
ಹೇಳಬೇಕಿಲ್ಲ ನಿನಗೆ ನಾ ವರ್ಣಿಸಿ ಈ ಕವನಗಳಲ್ಲಿ
ಕೇಳು ಗೆಳತಿ ಒಮ್ಮೆ ನನ್ನ ಮನದ ಬಡಿತ
ನೀನೇ ನಿನ್ನ ಪ್ರೀತಿಸುವಷ್ಟು ಸುಂದರವಾಗಿದೆ
ಈ ನನ್ನ ಹೃದಯದ ಸಂಗೀತ....
- MK Reddy
23 Mar 2017, 09:39 pm
ಕವಿ ಕೋಗಿಲೆಗಳು ಜನಿಸಿದಂತ ನಾಡು ಇದು.
ಹಸಿರಿನಿಂದ ಉಸಿರಾಡುವ ನಾಡು ಇದು.
ಪಾವನ ಕಾವೇರಿ ಹರಿಯುವ ನಾಡು ಇದು.
ಪ್ರೀತಿಯಿಂದ ಎಲ್ಲರನ್ನು ಕಾಣುವ ನಾಡು ಇದು.
ನವ ನವೀನ ಕಲೆಗಳನ್ನು ಹೊಂದಿರುವ ನಾಡು ಇದು.
ದವಸ ಧಾನ್ಯಗಳನ್ನು ಹಿಡಿದು ಚೆಲ್ಲುವ
ನಾಡು ನಮ್ಮದು ಕರುನಾಡು ನಮ್ಮದು.
- ಚುಕ್ಕಿ
23 Mar 2017, 07:32 pm
ಕಣ್ತೆರೆಯದ ಕಂದನನ್ನು
ಮಡಿಲಲ್ಲಿ ಅಡಗಿಟ್ಟು
ಪೃಥ್ವಿಯ ಬಣ್ಣಗಳನ್ನು
ಅದ್ವಿತೀಯವಾಗಿ ಕಣ್ಮುಂದಿಟ್ಟಿರುವೆ.
ನನ್ನ ಬಾಳ ನಂದನ ವನವಾಗಿಸಿ
ನನ್ನ ಬದುಕಿನ ಆಶಾ ಜ್ಯೋತಿಯಾಗಿರುವೆ.
ವಿದ್ಯಾಭ್ಯಾಸದ ದಾರಿ ತೋರುತ್ತಾ
ವಾಗ್ದೇವಿಯಾದೆ.
ವರ್ಣನಾತೀತ ನಿನ್ನ ವಾತ್ಯಲ್ಯ.
ಕ್ಷಣ ಕ್ಷಣವೂ ಕಳೆಯಲಿ ನಿನ್ನ ನೆನಪಲಿ.
ಮಾತಲೂ ಮನದಲೂ ಸ್ಪೂರ್ತಿಯ ತುಂಬಿರುವೆ
ಮುಂದಿಡುವ ಪ್ರತಿ ಹೆಜ್ಜೆಗೂ ಧೈರ್ಯವ ನೀಡಿರುವೆ.
- ಚುಕ್ಕಿ
23 Mar 2017, 07:00 pm