Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದುಂಡಾದ ದೋಣಿ ಬಿಟ್ಟು...

ದುಂಡಾದ ದೋಣಿ ಬಿಟ್ಟು
ಅದರೊಳಗೆ ಜೀವಿಗಳಿಟ್ಟು
ಉಸಿರಾಡೋ ಗಾಳಿ ನೀರನಿಟ್ಟು
ನದಿ ಸಾಗರ ಸಮುದ್ರ ಗಳಿಟ್ಟು
ಅವುಗಳಿಗೆ ಅಸಿವನಿಟ್ಟು..
ಪಶು ಪಕ್ಷಿ ಪ್ರಾಣಿಗಳನಿಟ್ಟು
ಶಿವನ ಅಂಕುಶದೊಳ್
ಆಟವಾಡುತಾನೋ ಶಿವನು....

ಹೂ ಹಣ್ಣು ಮಾಡಿಬಿಟ್ಟೆ ಸಿಹಿಕಹಿ ತುಂಬಿದೆ
ದೊಡ್ಡ ಕಾನನ ದೊಡ್ಡ ಪ್ರಾಣಿಗಳ ತುಂಬಿದೆ
ಮನದೊಳಗೆ ಅಸೆಯ ಹುಚ್ಚು ತುಂಬಿದೆ
ಬೆಳ್ಳಿ ಬಂಗಾರ ಮಾಡಿಬಿಟ್ಟೆ ಅಸೆ ತುಂಬಿದೆ
ಇವೆಲ್ಲವನ್ನೂ ಮೇಲೆ ನೋಡುತ..ಶಿವನು
ಚಂದದೊಂದು ಆಟವಾಡುತಾನೋ

ಮಾನವನ ಸೃಷ್ಟಿ ಮಾಡಿದ ಮಹಾದೇವ
ಮಾನವನಿಗೆ ಬುದ್ದಿ ಬಲವ ನೀಡಿ ದೇವ
ಸಾವು ನೋವು ಚಿಂತೆ ಸೃಷ್ಟಿದೆ ದೇವ
ಬೆಟ್ಟಕೆ ಹೋಗಿ ತಂದ ಕಲ್ಲಿge ಪ್ರಾರ್ಥನೆ
ದೋಪ ನೈವೇದ್ಯ ಪೂಜೆಯ ಪ್ರಾರ್ಥನೆ
ಹಣವೆಂಬ ಮಾಯಯ ಮಾಡಿದೆ ದೇವ
ವ್ಯಾಪಾರ ಅಸೆ ದುರಾಸೆ ಹಚ್ಚಿದೆ ದೇವ
ಇದೇಲ್ಲವನ್ನು ಮೇಲೆ ನಿಂತು ನೋಡುವ
ಚಂದದೊಂದು ಶಿವ ಆಟವಾಡುತಾನೋ.....

✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ



- Veereshappa v khairawadagi

01 Jul 2026, 09:55 pm

ನೀಲಿ ಆಕಾಶದೊಳಗೆ ಬರುವ ಚಂದಿರ

ನೀಲಿ ಆಕಾಶದೊಳಗೆ. ಬರುವ ಚಂದಿರ
ಅವನೇ ಸುಂದರ..
ಕಪ್ಪುನೆ ಮೋಡದೊಳಗೆ ಬರುವ ಚಂದಿರ
ಅವನೇ ಸುಂದರ
ಬೆಳ್ಳಿ ಬೆಳದಿಂಗಳಲಿ ತೆಲಿ ಬರುವ ಚಂದಿರ
ಅವನೇ ಸುಂದರ

ಮಿನುಗುವ ಮಿನುಗುವ ತಾರೆಗಳ ನಡುವೆ
ಬರುವ ಚಂದಿರ ಅವನೇ ಸುಂದರ

ಸುಂದರ ಕಾಡಿನ ಬೆಟ್ಟಗಳ ನಡುವೆ
ಬರುವ ಚಂದಿರ ಅವನೇ ಸುಂದರ

ನಕ್ಷತ್ರ ನಡುವೆ ನಗುವ ಮಗುವಿನಂತೆ
ಚಂದಿರ ಎಲ್ಲೆಲ್ಲೂ ಕಾಣುವ ಸುಂದರ
ಹಸಿರ ತುಂಬಿದ ಈ ಭೂಮಿ ಅಂದ
ಸಾಗರ ಸಮುದ್ರ ಈ ಅಲೆಯು ಚಂದ
ಚಂದ್ರನ ಹುಣ್ಣಿಮೆಯಲಿ ಪ್ರಕೃತಿಯೇ
ಅಂದದ ವಯ್ಯಾರ ಚಂದದ ವಯ್ಯಾರ


✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

01 Jul 2026, 12:43 pm

ನಲ್ಲೆ ನಲ್ಲೆ ನಿನ್ನ ಮನವ ಬಲ್ಲೆ (ನಾಟಕದ ಗೀತೆ )

ಗಂಡು : ನಲ್ಲೆ ನಲ್ಲೆ ನನ್ನ ನಿನ್ನ ಮನವ ಬಲ್ಲೆ.
ನಿನ್ನ ನೋಡುವ ಆಸೆ ಹೊತ್ತು ಬಂದೆ ನಲ್ಲೆ
ನಿನ್ನ ಆತ್ಮದ ಹೃದಯದ ಪ್ರೀತಿ ನಾ ಬಲ್ಲೆ
ಓ ಓ...ನನ್ನ ಹೃದಯವೇ ನಿನಗಾಗಿ ಕಾಣಿಕೆ..
ಕಟ್ಟಿರುವೆ ಇಟ್ಟಿರುವೆ ನಿನಗಾಗಿ ಓ ನಲ್ಲೆ

ಹೆಣ್ಣು : ನನ್ನ ಪ್ರೇಮದ ಗೋಪುರ
ಎಂದೆಂದಿಗೂ ನಿನಗೋಸ್ಕರ...
ಕಾದಿರುವೆ ನಿನಗಾಗಿ..
ಮೂಡಿ ಇಡುವೇ ನಿನಗಾಗಿ
ಈ ಪ್ರೀತಿ ಸುಳ್ಳಲ್ಲ ನಂಬು ನೀ ನನ್ನ ನಲ್ಲಾ

ಗಂಡು : ಗೆಳತಿ ನಾ ಸೋತಿರುವೆ ನಿನಗಾಗಿ
ಕಾದಿರುವೆ ಬಾ ನಲ್ಲೆ ನನ್ನ ಹೃದಯದ ತೋಟಕೆ
ಈ ಪ್ರೀತಿ ಎಂದೆಂದಿಗೂ ನೀನಾಗಿ ಮೀಸಲು

ಹೆಣ್ಣು :ಹೊಂಗಿರಣ ನೇಸರ ಬಣ್ಣ ನಾ
ನಿನ್ನಲಿ ಕಂಡೆ ಓ ಪ್ರೀತಿ ನನ್ನ ನನ್ನೊಡೇಯ
ನಾನೇದೆಂದಿಗೂ ನಿನ್ನವಳೇ ರಾಜನೇ
ರವಿತೇಜನೆ ಪ್ರೀತಿಯ ಮಹಾರಾಜನೆ..

ಗಂಡು : ನನ್ನುಸಿರೊಳಗೆ ನೀನೇ ಬೇರೆತೆ
ನನಗಿಲ್ಲ ಯಾವುದು ಚಿಂತೆ..
ಬಾ ನನ್ನ ಹೃದಯವ ಬೆಳಗೋ ದೇವತೆ
ಬಾ ನನ್ನ ಹೃದಯವ ಬೆಳಗೋ ದೇವತೆ

✍️ವೀರೇಶ್ ವಿ ಕುಂಬಾರ ಖೈರವಾಡಗಿ

- Veereshappa v khairawadagi

30 Jun 2026, 01:23 pm

ಕನ್ನಡ ಪದವೇ ನುಡಿದ ನಾಲಿಗೆ ಚಂದ

ಕನ್ನಡ ಪದವೇ ನುಡಿದ ನಾಲಿಗೆ ಚಂದ
ಕನ್ನಡಪದದೊಳ್ ಮಾತೆಗೆ ಆನಂದ
ಕನ್ನಡನಾಡಿನಲಿ ಇರುವುದೇ ಚಂದದ ಶ್ರೀಗಂಧ

ಕಸ್ತೂರಿ ಪರಿಮಳ ಸೂಸುತ
ಮಲ್ಲಿಗೆ ಕಂಪನು ಬಿರುತ
ಮಲ್ಲಿಗೆ ಹೂ ಮಾಲೆ ಮೂಡಿದ ಚಾಮುಂಡೇಶ್ವರಿ
ನೆಲೆಸಿರುವ ಮೈಸೂರ ಸುಂದರ
ಈ ಕನ್ನಡ ನಾಡನ ವೈಭವವೇ ಚಂದದ ಚಿತ್ತಾರ

. ಕನ್ನಡ ಪದವೇ ನುಡಿದ ನಾಲಿಗೆ ಚಂದ

ನಾಗರಹೊಳೆ ಈ ನಾಡ ಸೌಂದರ್ಯದ ಕಳೆ
ಇಲ್ಲಿ ಬರುವವದು ಜೇನಿನ ಸುರಿಮಳೆ
ಹಸಿರ ಹಾಸಿದ ಚಲುವಿನ ಹಸಿರತೋರಣ
. ಸವಿಯಾದ ಸವಿ ಸವಿದ ಹೂ ಮನ
ಆಕಾಶದಲಕ್ಕೂ ಎತ್ತರ ಮರವೇ ಹಂದರ
ನವಿಲುಗಳ ನರ್ತನ ಈ ಕಾನನ ಸುಂದರ

. ಕನ್ನಡ ಪದವೇ ನುಡಿದ ನಾಲಿಗೆ ಚಂದ

ಆನೆಗಳ ಹಿಂಡು ಜಿಂಕೆಯಾದಂಡು ನೋಡುವ
. ಈ ಕನ್ನಡಮ್ಮನ ದೇಗುಲವ ನೋಡುವ
ಚಂದಕ್ಕಿಂತ ಚಂದ ನೋಡುದೇ ಆನಂದ..
ನಾಡ ಮಣ್ಣಲಿ ಈ ಸೀಮೆಯೇ ಸೌಗಂಧ....

ಕನ್ನಡ ಪದವೇ ನುಡಿದ ನಾಲಿಗೆಚಂದ

✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

29 Jun 2026, 07:24 am

ಜೀವನ

ಓದುವುದು ಮುಗಿಯಬಹುದು
ಆದರೆ
ಕಲಿಯುವುದು ಮುಗಿಯುವುದಿಲ್ಲ
ನೆನಪಿರಲಿ..

- Mahesh Mahi

28 Jun 2026, 08:51 pm

ಹೂ ಬಳ್ಳಿಯಂಗ ಹಬ್ಬಿಯಾದ ನೋಡ

ಹೂ ಬಳ್ಳಿಯಂಗ ಹಬ್ಬಿಯಾದ ನೋಡ
ಅದುವೇ ನನ್ನೂರು...ಅದುವೇ ನಮ್ಮೂರ
ಹುಬ್ಬಳ್ಳಿ ನಗರ ಹುಬ್ಬಳ್ಳಿ ನಗರ...
ಶಹಾರ್ ದೊಳಗೊಂದು ಶಹಾರ್ ಅದುವೇ ಹುಬ್ಬಳ್ಳಿ ಶಹಾರ್ ನಮ್ಮೂರ
ನಮ್ಮೂರ ಹುಬ್ಬಳ್ಳಿ ನಗರ..

ಸಿದ್ದಿ ಪುರುಷ ಸಿದ್ದರೂಡರು ಇರುವ ಊರ
ಅದುವೇ ನನ್ನೂರು ಅದುವೇ ನಮ್ಮೂರ
ಹುಬ್ಬಳ್ಳಿ ನಗರ..ಹೂ ಬಳ್ಳಿ ನಗರ..
ಅಂದ ಮಕ್ಕಳಿಗೆ ಸಂಗೀತ ಕಳಿಸಿ.. ಬೆಳಸಿದ
ಬೆಳದಿಂಗಳಲಿ ಹುಣ್ಣಿಮೆ ಬೆಳದಿಂಗಳಲಿ
ತೆಲಿಸಿ ಗನಾಯೋಗಿ ಪುಟ್ಟರಾಜರ ಊರು
ಗದಗ ಸುಂದರ ಗದಗ ಸಂಗೀತ ನಾಡಿದು
ಗಾನ ಗಂಧರ್ವರ ನಾಡು ನನ್ನೂರು..
ಅದುವೇ ನಮ್ಮೂರು ಸಂಗೀತ ತವರೂರು

ಹೂ ಬಳ್ಳಿಯಂಗ ಹಬ್ಬಿ ಯಾದ ನೋಡ

ಶಿಕ್ಷಣಕ್ಕಾಗಿ ಕೈ ಬಿಸಿ ಕರೆವಾ ಅದುವೇ ನನ್ನೂರು ಅದುವೇ ನಮ್ಮೂರ ಹವಳಿ ನಗರ ಹುಬ್ಬಳ್ಳಿ ಧಾರವಾಡ...ಹುಬ್ಬಳ್ಳಿ ಧಾರವಾಡ...
ಸಂಗೀತ ಸರೋವರ ಸಂಗೀತ ಸರೋವರ
ಬಂಗಾರದಂಗೆ ಮಾತು ಮುತ್ತು
ತಾಜ್ ಬೆಣ್ಣಯಂತೆ ಸೊಗಸು....
ನೀಲಿ ಆಕಾಶದ ಹೊಳಪು....


ಹೂ ಬಳ್ಳಿಯಂಗ ಹಬ್ಬಿಯಾದ ನೋಡ...

✍️ ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

27 Jun 2026, 12:26 pm

ಶ್ರೀ ಕೃಷ್ಣದೇವರಾಯ...

ಶ್ರೀಕೃಷ್ಣದೇವರಾಯ..
ಶ್ರೀಕೃಷ್ಣದೇವರಾಯ..
ವಿಜಯನಗರದ ಸೌಂದರ್ಯ...
ವಿಜಯನಗರದ ಸೌಂದರ್ಯ..

ತುಂಗೆಭದ್ರೆ ದಡದಲಿ ಉದಯಿಸಿದ ನಾಡು
ವಿದ್ಯಾರಣ್ಯರು ಸ್ಥಾಪನೆಗೈದ ಹಂಪೆಯನಾಡು
ಸಂಗೀತ ಶಿಲ್ಪ ಕಲೆಗಳ ವೈಭೋಗಸಿರಿನಾಡು
ಕರ್ನಾಟಕದ ಹೆಮ್ಮೆಯ ನಮ್ಮಯ ನಾಡು
ಒಂದಾಗಿ ಹಾಡೋಣ.
ಒಂದಾಗಿ ಕುಣಿಯೋಣ

ಈ ನೆಲೆಯ ಶೃಂಗಾರ ಸೀಮೆಯೋ
ಈ ನೆಲ ಬಂಗಾರ ಭೂರಮೆಯೋ
ಕೀರ್ತಿಯ ಹಬ್ಬಿಸೋಣ.
ಕಲೆಗೆ ತಲೆ ಬಾಗೋಣ
ಬಣ್ಣಿಸಲಾಗದ ಈ ನೆಲ
ಬಂಗಾರ ಕಡಲು ಈ ಜಲ
ಶಿಲ್ಪ ಕಲೆಯ ಸಂಗೀತ ನೆಲೆಸಿರುವ
ಆಲಯ ಈ ನಮ್ಮ ದೇವಾಲಯವು

ವಿಜಯನಗರ ಸೌಂದರ್ಯ
ದೇವಾಲಯ...
ಕಣ್ಣಿನ ಹಬ್ಬದ ಶಿವಾಲಯ
ವಿಜಯನಗರ ಸೌಂದರ್ಯ
ಕಣ್ಣಿಗೆ ಹಬ್ಬದ ಶಿವಾಲಯ
ದೇವಾಲಯ..
ಎಲ್ಲೆಲ್ಲೂ ಶಿಲ್ಪಕಲೆ ಮಾಧುರ್ಯ..
ತುಂಬಿದ ದೇವಾಲಯ..

✍️ವೀರೇಶಪ್ಪ ವಿ ಖೈರವಾಡಗಿ














- Veereshappa v khairawadagi

25 Jun 2026, 11:27 am

ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು

ಬೆಳ್ಳಿ ಮುಗಿಲು ಬೆಳ್ಳೆಕ್ಕಿ ಸಾಲು...ಓ ಓ
ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು... ಓ ಓ
ಆ ಚಲುವೆ ಮೊಗವು ಸುಂದರ ನಗುವು
ಕೆಂದಾವರೆ ಹರಳಿದ ಹಾಗೆ ಸುಮವು

ಚಂದವಾ ನೋಡು ಆಯಾಗಿ ಹಾಡು
ಆಯಾಗಿ ಹಾಡುತ ನೇಸರ ನೋಡು...
ಬಂಗಾರ ಬಣ್ಣದ ನೇಸರ ನೋಡು
ಮನೋಲ್ಲಾಸದಿ ಸಂತೋಷದಿ ಹಾಡು

ಗಾಳಿಯ ವೇಗದಿ ಮರಗಿಡ ತೂಗುಯ್ಯಾಲೆ
ತಂಪಾದ ನೆರಳಲಿ ತೂಗುಯ್ಯಾಲೆ
ಕರಿ ಮುಗಿಲು ಆ ಸಾಗರದ ಕಡಲು.
ಕರೀಮುಗಿಲು ಆ ಸಾಗರದ ಕಡಲು
ಚಂದಾಗಿ ಒಂದಾಗಿ ನಿಂತು ನಗಲು
ಮಳೆಗೆ ಭೂತಾಯಿ ಕಾದಿದೆ ಒಡಲು ಹೊ...

✍️ವೀರೇಶಪ್ಪ ವಿ ಖೈರವಾಡಗಿ





- Veereshappa v khairawadagi

24 Jun 2026, 03:18 pm

ಇದು ನಿನ್ನ ಜೀವನ So ನಿನಗಾಗಿ ನೀನು ಬದುಕಿ‌ದರೆ ಸಾಕು , ಅದನ್ನು ಬಿಟ್ಟು ನಿನ್ನ So Called Friends ತರಹ ನಟಿಸುವವರನ್ನು ಮೆಚ್ಚಿಸುವ ಅವಶ್ಯಕತೆ ಇಲ್ಲ... ಹಾಗೂ ನಿನ್ನ ಅವಶ್ಯಕತೆ ಇಲ್ಲದ ಕಡೆ ತಲೆಯನ್ನು ಬಾಗಿಸುವ ಅಗತ್ಯನೂ‌‌ ಇಲ್ಲ...!!!

- ನಮಿತ ಗಟ್ಟಿ

23 Jun 2026, 09:53 pm

ಕವಿಯು ನಾನು ಕಲ್ಪನೆ ನೀನು

ಕವಿಯು ನಾನು ಓ ಚಲುವೆ ಓ ಓ ಓ
ಕವಿಯು ನಾನು ಓ ಚಲುವೆ ಓ ಓ ಓ
ಕಲ್ಪನೆ ನೀನು...
ಕಲ್ಪನೆ ನೀನು...
ಅಂತರರಂಗವು ನಾನು .
ಅಡಗಿರುವ ಹೂ ನೀನು
ಓ ಚಲುವೆ... ಓ ಚಲುವೆ...

ನಿನ್ನ ಈ ಕಣ್ಣೋಟ..
ಅಂದದ ಮೈ ಮಾಟ
ನನ್ನ ಹೃದಯದ ಅರಸಿ ನೀ..
ನನ್ನ ಹೃದಯದ ರೂಪಸಿ ನೀ
ಚಂದುಳ್ಳ ಚಲುವೆ ನೀನು
ರಾಣಿ ನೀ ನೀನು
ಮಹಾರಾಣಿ ನೀನು
ನಿನಗೆ ಮನಸೋತು ಬಂದ..
ರಾಜನು ನಾನು
ಮಹಾರಾಜನು ನಾನು
ನಿನ್ನ ಸುತ್ತ ಸುಳಿಯುವ
ಸುಂದರ ನಾನು
ನನ್ನ ಮನದೊಳ್
ಸುಂದರಿ ನೀನು

ಮಂದಾರ ಮಲ್ಲಿಗೆ ನೀನು
ಮಳೆ ಸುರಿಸೋ ಮಳೆ ನಾನು
ಚಲುವಾದ ಹೂವಾದೇ ಪ್ರೇಯಸಿ
ನಾ ಹೂ ದುಂಬಿಯಾದೆ ಮಾನಸಿ
✍️ ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

23 Jun 2026, 09:35 am