Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಳಿ ತಪ್ಪಿದ ರೈಲಿನಂತೆ ಜೀವನ...

ಹಳಿತಪ್ಪಿದ ರೈಲಿನಂತಾಗಿದೆ ನನ್ನ ಜೀವನ...
ಎತ್ತ ಸಾಗುತಿದೆ ಎಂದು ತಿಳಿಯದಾಗಿದೆ ಮನ...
ಉಳಿವಿಗಾಗಿ ಮಾಡಬಹುದು ಸಕಲ ಪ್ರಯತ್ನ...
ಅದೃಷ್ಟವಿದ್ದರೆ ನಡೆಸಬಹುದು ಜೀವನ...
ಇಲ್ಲವಾದರೆ ಬದುಕಿಗೆ ಅಂತಿಮ ನಮನ...
✍️ಮಲ್ಲ...

- Mallesh

28 Jan 2020, 02:21 pm

ಬೀಜದೊಳಗಿನ ವೃಕ್ಷ

ಮದ್ದಿನೊಳಗೆ ಅಡಗಿ ಕುಳಿತ ಬೆಂಕಿ,
ಮಣ್ಣು, ಜಲ,ಗಾಳಿ,ಸೂರ್ಯರಶ್ಮಿಯೊಳಗೆ ಅಡಗಿ ಕುಳಿತ ಜೀವ ಸೆಲೆ,
ಬೆಳಕಿನೊಳಗೆ ಅಡಗಿ ಕುಳಿತ ಪರಂಜ್ಯೋತಿ,
ಧ್ವನಿಯೊಳಗೆ ಅಡಗಿ ಕುಳಿತ ಪ್ರಶಾಂತತೆ,
ಬೀಜದೊಳಗೆ ಅಡಗಿ ಕುಳಿತ ವೃಕ್ಷ ದ ಪ್ರತಿಬಿಂಬ,
ಅನಂತಾತೀತದೊಳಗೆ ಲೀನವಾಗಿ ಕುಳಿತ ಜಗದೀಶ್ವರ,
ಶರಣರ ಅಂತರಂಗದಲ್ಲಿ ಅಡಗಿ ಕುಳಿತ ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ನೀವೇ ಪ್ರಮಾಣು.

ರಚಣೆ:ಆರ್ ವೀ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063

- Siddugouda

28 Jan 2020, 12:40 pm

ನೋಡು ಬಾ ಇಂದು

ನಾ ನೆಟ್ಟ ಬೀಜವೊಂದು
ಮೊಳಕೆಯೊಡೆಯುತಿದೆ
ನೋಡು ಬಾ ಇಂದು !

ಅನುಭವವೇ ಆಹಾರವಾಗಿ
ಆಶಯವೇ ರಕ್ಷಣೆಯಾಗಿ
ಬೆಳೆವ ಸಸಿಯ ಸೊಗಸ
ನೋಡು ಬಾ ಇಂದು !

ಯಾವ ತಳಿಯೋ;ಫಲವೋ
ಅರಿಯದೆ ಬೆಳೆಸಿದ
ಸಮೃದ್ಧ ಸಸಿಯ
ನೋಡು ಬಾ ಇಂದು!

ಅಸಮಾನತೆಯ ಸೋಂಕು
ತಗುಲಿ ಅವಸಾನದಂಚಿನಲ್ಲಿದ್ದಾಗ
ಔಷಧ ಸಿಂಪರಿಸಿದ ವೈದ್ಯರ
ನೋಡು ಬಾ ಇಂದು!

ವಕ್ರವಾಗಿ ವಿಸ್ತರಿಸಿದ್ದ
ಸಸಿಯ ಕಸಿ ಮಾಡಿ
ಸರಿದಾರಿ ತೋರಿದ ಗುರುಗಳ
ನೆನೆಯ ಬಾ ಇಂದು!


ಶಾರದ

- ಶಕುಂತಲಾ

28 Jan 2020, 08:21 am

ಏರಿಮೇಲೆ ಏರಿ ಕುಳಿತೆ ನೀನು.

ಅಲೆಗ್ಝಾಂಡರ ಜಗತ್ತೆ ಗೆದ್ದುಬಿಡುವೆ ಎಂದು ಹೊರಟಿದ್ದ ;
ಆದರೆ ಹಾದಿ ಬೀದಿ ಯಲ್ಲಿ ಬಿದ್ದು ಹೆಣವಾಗಿದ್ದ.
ಕೋಟೆ ಕೊತ್ತಲು ಮಹಲು ಅರಮನೆಗಳ ಕಟ್ಟಿ
ಹಾಡು, ನೃತ್ಯ, ವಾದ್ಯ, ತಾಳ-ಮೇಳ, ಬಡಸಿ; ಹೊನ್ನು-ಹೆಣ್ಣು - ಮಣ್ಣು ಗಳ ಮೈ ಕುಣಿಸಿ,
ಏರಿ ಮೇಲೆ ಏರಿ ಕುಳಿತೇ ನೀನು.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ಕೈ ಹಿಡಿದು ಕರೆದಾಗ,
ಕೈ ಝಾಡಿಸಿ ಹೋದ ಮರುಳೆ ನೀ ಹಳೆ ಮರುಳೆ.

ರಚಣೆ: ಆರ್ ವಿ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063

- Siddugouda

27 Jan 2020, 07:11 pm

ಪ್ರಾಣ ಹೋಗುವ ಮುನ್ನ...

ಗೆಳತಿ...
ಮನಸಾರೆ ಪ್ರೀತಿಸಿರುವೆ ನಾ ನಿನ್ನ...
ನೀ ದೂರ ಸರಿಸಿದರೆ ಹೇಗೆ ನನ್ನ...
ಮನದೊಳಗೆ ನೋವು ಕಾಡುತಿದೆ ನನ್ನ...
ತಿಳಿಸಿಬಿಡು ಗೆಳತಿ ನಿನ್ನ ನಿರ್ಧಾರವನ್ನ...
ನನ್ನ ಪ್ರಾಣ ಹೋಗುವ ಮುನ್ನ...
ಇಲ್ಲವಾದರೆ ನಾ ಸೇರುವೆ ಮರಳಿ ಬಾರದ ಲೋಕವನ್ನ...
ಇಂತಿ.... ಮಲ್ಲ....

- Mallesh

27 Jan 2020, 05:36 pm

ನಿನೊಬ್ಬನೆ ಇದ್ದೆಯಲ್ಲ ಇಲ್ಲದಂತೆ!!...

ಬಟ್ಟ ಬಯಲೋಳ್ ಬಯಲಾದ ಬಯಲೇಶ್ವರ ಲಿಂಗವೇ!..
ಬಯಲು ಬಯಲಲೇ ಹಿಂಗಿ, ಬ್ರಹ್ಮಾಂಡವನು ಬಯಲೇ ನುಂಗಿ ನಿನ್ನೋಳ್ಳ ಬಯಲೇ ಅಡಗಿ!..
ನಿನೊಬ್ಬನೇ ಇದ್ದೆಯಲ್ಲ!!..ಇಲ್ಲದಂತೆ.
ಎನ್ನ ಅಂತರಂಗವ, ಪಾಪ ಕರ್ಮ ಗಳನು ಬಯಲಲಿ ಬಯಲ ಮಾಡಯ್ಯ.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.

ರಚಣೆ: ಆರ್ ವೀ ಗೌಡರ.
ಕೃಪೆ: ಎಲ್ಲಾ ಶರಣರು.
Mobil 7892256063

- Siddugouda

27 Jan 2020, 04:09 pm

ಆಶೆಎಂಬ ಮಾಲಗಂಭ

ಮೈತುಂಬಾ ಮೋಹ ಮಧ ಮತ್ಸರ ಎಂಬ ಎಣ್ಣೆ ಬಳೆದುಕೊಂಡು,
ಆಶೆ, ಅಹಂಕಾರವೆಂಬ ಮಾಲಗಂಭ ವೇರುತ್ತಿರಲು;
ತುತ್ತತುದಿಗಿರುವ ಗುರು, ಲಿಂಗ, ಜಂಗಮದೆಡೆಗೆ ಕೈಚಾಚಿದರೆ,
ಮರೆಯಲ್ಲಿ ನಿಂತು ಗುರು ಬಸವಪ್ರಿಯ ರೇವಣಸಿದ್ದೇಶ್ವರ ನಸುನಕ್ಕನಯ್ಯ.

ರಚಣೆ: RV Goudar
ಕೃಪೆ: ಎಲ್ಲ ಶರಣರು.
ಮೊಬೈಲ್: 9008060918

- Siddugouda

27 Jan 2020, 11:36 am

ಅಗ್ನಿ ಈ ಜಗದಲಿ ಇದ್ದು ಇಲ್ಲದಂತಿದೆ.

ಬೆಂಕಿ ಈ ಜಗದಲಿ ಇದ್ದು ಇಲ್ಲದಂತಿದೆ.
ಅದು ಯಾವದರ ಜಾಗವನ್ನು ಸ್ವಯಂ ಪ್ರೆರಿತವಾಗಿ ಆಕ್ರಮಿಸುವುದಿಲ್ಲ.
ಆದರೆ ಘರ್ಷಣೆಯಾದಾಗ ಮಾತ್ರ ಹೊತ್ತಿಕೊಳ್ಳತ್ತದೆ.
ಹಾಗೆಯೇ ಘರ್ಷಣೆ ಇಲ್ಲದಾಗ ಅಲ್ಲಿಯೇ ಅಡಗುತ್ತದೆ.
ಹಾಗೇಯೇ ಗುರು ಲಿಂಗ ಜಂಗಮ ಮತ್ತು ಭಕ್ತರ ತಂಟೆಗೆ ಬಂದರೆ;
ಬಸವ ಪ್ರಿಯ ರೇವಣಸಿದ್ದೇಶ್ವರ ಅಗ್ನಿಯ ಜಾಗದಲ್ಲಿ ಬಂದುನಿಲ್ಲುವನು ನೋಡಾ.

ರಚಣೆ: RV Goudar
ಕೃಪೆ: ಎಲ್ಲ ಶರಣರು
Mobil: 7892256063

- Siddugouda

27 Jan 2020, 11:23 am

ಆಶೆಎಂಬ ಮಾಲಗಂಭ

ಮೈತುಂಬಾ ಮೋಹ ಮಧ ಮತ್ಸರ ಎಂಬ ಎಣ್ಣೆ ಬಳೆದುಕೊಂಡು,
ಆಶೆ, ಅಹಂಕಾರವೆಂಬ ಮಾಲಗಂಭ ವೇರುತ್ತಿರಲು;
ತುತ್ತತುದಿಗಿರುವ ಗುರು, ಲಿಂಗ, ಜಂಗಮದೆಡೆಗೆ ಕೈಚಾಚಿದರೆ,
ಮರೆಯಲ್ಲಿ ನಿಂತು ಗುರು ಬಸವಪ್ರಿಯ ರೇವಣಸಿದ್ದೇಶ್ವರ ನಸುನಕ್ಕನಯ್ಯ.

ರಚಣೆ: RV Goudar
ಕೃಪೆ: ಎಲ್ಲ ಶರಣರು.
ಮೊಬೈಲ್: 9008060918

- Siddugouda

27 Jan 2020, 11:05 am

ಬೆಳಗು ಕವಿತೆ( ದೇವನ ಬೆಳಕು)

*ಬೆಳಗು ಕವಿತೆ*


// ದೇವನ ಬೆಳಕು //
---------------------
ನೂರಾರು ದೇಶಗಳ ಸಾವಿರಾರು
ಭಾಷೆಗಳ ಮೆರಗು!
ಸತ್ಯ ಸೌರಭ
ದೇವನ ಬೆಳಕಾಗಿ
ಮೂಡಿತು;ದೇಶ,ಕಾಲ,
ಜನಾಂಗಗಳನ್ನೂ ಮೀರಿ.

ಅರಳುವ ಹೂವಿಗಿಲ್ಲ
ಬೇಧ ಭಾವದ ಹಣೆಪಟ್ಟಿ
ತಿಪ್ಪೆಯ ಮೇಲೆ ಉಪ್ಪರಿಗೆ
ಸಾಮ್ರಾಜ್ಯ ಕಟ್ಟುವುದು.
ಎಲ್ಲಿ ನೋಡಿದಲ್ಲೆಲ್ಲಾ ಮಲ್ಲಿಗೆಯ ಹೂಗಳು.

ಅಧಿಷ್ಟಾನ ತಿಪ್ಪೆಯಾದರೂ ಮೇಲೆ
ಸುಗುಂಧ,ಸುವಾಸನೆ;
ಸೌಂದರ್ಯದ ಉಪಾಸನೆ ಅದಕ್ಕೆ
ಅಗಮ್ಯ,ಅಗೋಚರ,ಅಪ್ರತಿಮ.

ಕಲಿತವರು,ಕಲಿಯದವರು
ಉಳ್ಳವರು,ಇಲ್ಲದವರು; ಯಾರು ನೋಡಿದರೂ
ಮನಸು ವಿಕಾಸಗೊಳ್ಳುವುದು
ಆನಂದದ ಸುವಾಸನೆ
ಕಣ್ಣುಗಳು ಅರಳಿ.

ಸಂತರ ಹಾಡಾಗುವುದು
ಗಿಡದ ಒಂದು ಬೇರು
"ಯಾವ ದೇಶದಲ್ಲಿ ಸಂತರಿಲ್ಲ,
ಇನ್ನಾವ ದೇಶದಲ್ಲಿ ಮಹಂತರಿಲ್ಲ!"
ಯಾವುದು ಅಮೇರಿಕಾ,ಯಾವುದು ಚೀನಾ?
ಇನ್ನಾವುದೇ ಭಾರತವಿರಲಿ
ದೇಶ ಕೋಶ ಎಲ್ಲವೂ ಭೂಮಂಡಲ.

// ಮೃದಂಗಜ//
ಸುರೇಶ ಜಕಾತಿ. ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

27 Jan 2020, 07:32 am