Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಣದಿರುವ ನಕ್ಷತ್ರ

ನಿಮ್ಮ ಕಣ್ಣ ನಂದದೀಪಾವೆಂದ
ನಾನು
ನಿಮ್ಮ ಅಸಾರೆಯಲ್ಲಿ ಬದುಕುತಿದ್ದೆ
ಆ ಕ್ಷಣದಿ
ಆಸೆ ಹುಟ್ಟಿಸಿತ್ತು ನಿಮ್ಮ ಪ್ರೀತಿ
ದುರ್ವಿದಿಯಂತೆ ಒದಗಿತು
ನಿಮ್ಮ ಆಗಲಿಕೆ
ಅದರಿಂದ ನೊಂದ ನಾನು
ನೀವೂ ನನ್ನ ಬಳಿ ಇರುವಿರಿ ಎಂದು
ಹುಯೆಯಲ್ಲಿ ಬದುಕುತಿರುವೆ


ನೊಂದ ಹೃದಯ

- ನಂದಿನಿ ದಾವಣಗೆರೆ

23 Jan 2020, 08:43 am

ಸಹನೆ ನಿನ್ನದಾದರೆ

ಸಹನೆ
ನಿನ್ನದಾದರೆ ಸಕಲವೂ ನಿನ್ನದೇ
ವಿನಯ
ನಿನ್ನದಾದರೆ ವಿಜಯವೂ ನಿನ್ನದೇ

✍️ PJ. PAVAN

- Pavankumar Honawad

23 Jan 2020, 08:18 am

ಗಜಲ್( ಋಣ)

ಗಜಲ್ ( ಋಣ)
_______________

ದಿನ ಬಿಡದೇ ಸಾಗುತಿವೆ ನೆನಪುಗಳ ಪಯಣ
ನೀ ಬರದ ನೆನಪುಗಳು, ಕಡಿದ ಕಾಡುಗಳ ತೀರಿಸಲಾಗದ ಋಣ.

ಎದೆ ಅಳತೆಗೇನು ಸಾಟಿ ? ಬೇರೆ ಹೆಣ್ಣುಗಳಲಿ ನಾ ಕಾಣೆ
ನನ್ನ ನೆನಪಿಗೆ ನೀನೆ ಸರಿಸಾಟಿ ; ನನ್ನಲ್ಲಿರು ನೀ ದೇವರಾಣೆ.

ತೆರೆದ ಬಾಯ್ದೆಂಜಲವ ಮರೆತು,ಉಗಿ ನುಂಗುವ ತುಡಿತ
ನಾಕಕಿನ್ನೂ ನೂರು ಗೇನು ಸಾಗೋಣ ಬಾ ವಿರಸ ಮರೆತು.

ಸಂಬಂಧಗಳ ಎದೆಗೆ ತಾಗಿದ ಸ್ನೇಹ ಸಹವಾಸದ ಎಸಳು
ಹಿಡಿದು ಕಟ್ಟಿ ಹಾಕುವೆನು; ಅಂತರಂಗದಲ್ಲಿ ನೀ ನುಸುಳು.

ಮಾಮರದ ರೆಂಬೆಯಲಿ ಚಿಗುರು ಕಚ್ಚುವ ಕೋಗಿಲೆ
ನಿನ್ನಂತೆ ದನಿಯಿಂಪು; ಹೋಗಬೇಡ ನೀ ದೂರ ಹಾಡು ಹೇಳದಲೆ.

ಬುದ್ಧ ನಕ್ಕಿದ್ದು ನಾ ಕಾಣೆ ಗೆಳತಿ ನೀ ನಕ್ಕ ಹಾಲ್ಗೆಣ್ಣೆ
ಸೂರ್ಯ ನಗುವುದನ್ನು ನೋಡು ಪ್ರೇಮ ಗದ್ದುಗೆಯ ಮೇಲೆ .


‌‌‌‌‌‌‌‌‌ // ಮೃದಂಗಜ//

‌ ಸುರೇಶ ಜಕಾತಿ. ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

21 Jan 2020, 03:34 pm

ಗಜಲ್( ತೇರು ಎಳೆಯೋಣ ಬಾ)

"ಗಜಲ್ " (ತೇರು ಎಳೆಯೋಣ )
-------------------------------------------------------

ಮಾತುಗಳಿಗೊಂದು ಮೌನ ಪೋಣಿಸಿ,
ಬುದ್ದಿಯನ್ನು ಎದೆಹಿಡಿತಕ್ಕೆ ತಾಗಿಸಿ,
ಕುಣಿಯುತ್ತ ಪಿತ ಅಂತಃಕರಣದ ಹೆಣ್ಣು,
ನೀನಾದ ಮೇಲೆ,ಸಂಗೀತ ಶೃತಿಯು ನಾನಾಗಿ
ಹುಣ್ಣಿಮೆಯ ಬಯಲಲ್ಲಿ ತಂಪಾದ ಚಂದಿರನು
ಕಂಪಾದ ಸೊಂಪಾದ ಬೆಳದಿಂಗಳು ಹಾಸಿರಲು,
ಒಮ್ಮೆ ಕೈ ಮಾಡಿ ನೀ ಯನ್ನ ಕರೆಯಬಾರದೇ!

ಕೇಳುವ ಕಿವಿಗಳಿರುವವು , ಓಲೆ ನೀ ಪೋಣಿಸಿರುವೆ,
ಮನದ ಮೃದಂಗವನ್ನೊಮ್ಮೆ ಬಾರಿಸಬಾರದೇ,
ಎದೆಯ ಬಂಧನದ ಬನದೊಳಗೆ ಸದಾ ಪ್ರೇಮದಾ ಅಮಲು ,
ಪ್ರೀತಿಯ ನಶೆ ನೀ ಏರಿಸಬಾರದೇ!
ಬಾನಂಗಳದಿ ಬಾನಾಡಿ ಹಾರಾಡಿ,ಹಾರಾಡಿ,
ಹಕ್ಕಿಗಳು ತಾವಾಗಿಯೇ ಸೇರಿ ರುಜು ಮಾಡುವಂತೆ
ದೇವರು ಹೊಸೆದ ಪ್ರೇಮದಾರವನ್ನೊಮ್ಮೆ ನೀ ನೆನೆಯಬಾರದೇ!
ಒಮ್ಮೆ ಕೈ ಮಾಡಿ ನೀ ಎನ್ನ ಕರೆಯಬಾರದೇ!

ನಾನು ನೋಡ ಹೊರಟಾಗಲೊಮ್ಮೆ ,
ನಿನ್ನ ಮೂಗುತಿಯ ಹೊಳಪು, ಮಿಂಚು ತಾಗಿಸಿ ,
ಹೊಳೆಯುವ ನಕ್ಷತ್ರವೇ ನೀನಾಗಿರಲು ,
ಮನಕೆ ಮಂದಾರವ ನೀ ತೋರಬಾರದೇ!
ಕನಸಿನಲ್ಲೊಮ್ಮೆ ಸ್ವಪ್ನ ನೀನಾಗಿ
ಕಾಮನ ಬಿಲ್ಲಿನಲಿ ಕಂಡ ಏಳು ಬಣ್ಣದ ಚೆಲುವೆ,
ಒಮ್ಮೆ ಕೈ ಮಾಡಿ ನೀ ಯನ್ನ ಕರೆಯಬಾರದೇ!

ನವಿಲು ಕಣ್ಣಿನ ಚೆಲುವೆ ಇಂಪಾದ ಒಲವ ತೋರಿ,
ಚಿತ್ತತಾಳ ಬಾರಿಸಲು ಹೃದಯವೀಣೆಯ ನುಡಿಸಿ,
ಧ್ಯಾನದೊಳಗಿದ್ದ ಮೌನ ಸನ್ಯಾಸಿ ನಾನು,
ಬಿಕ್ಕಳಿಕೆ ಬಾರದ ಬಿಸಿಯಾದ ಏದುಸಿರು ತರಿಸಲು,
ಹಸಿರು ಬಳ್ಳಿಯ ಮೇಲೆ ಹರಡಿರುವ ಹೂ ನೀನಾಗಬಾರದೇ,
ಕೌಸ್ತುಭವ ಹೊರ ಸೂಸಿ ಮಲ್ಲಿಗೆಯ ಬಿರುನಗೆಯ ಬೀರಿ,
ಒಮ್ಮೆ ಕೈ ಮಾಡಿ ನೀ ಎನ್ನ ಕರೆಯಬಾರದೇ!

ಇಂದೆಷ್ಟೋ ನಾಳೆಗಳು ಹಿಂದೆಷ್ಟೋ ಆದವು,
ಸಮ ರಸದ ಸರಸತಿಯು ನೀನಾದ ಮೇಲೆ
ಬ್ರಮರಕ್ಕಿನ್ನೂ ಗಂಟೆ ಜಾಗಟೆಯ ಸದ್ದು ,
ದುಂದುಬಿಯು ನಾವಾಗಿದ್ದೇವೆ; ಎಲ್ಲಿದೆ ಸಂತೃಪ್ತಿ?
ಶಿವನ ಸನ್ನಿಧಾನವು ಇನ್ನೂ ದೂರ, ಬಹುದೂರ,
ಇನ್ನಾದರೂ ಸುರಿಸಬಾರದೇ ನೀನು ಪ್ರೀತಿಯ ರಸ
ತೇರು ಎಳೆಯೋಣ ಬಾ ನಾವು,
ಜತೆ ಸೇರಿದಾಗಲೇ ಪ್ರೀತಿಯ ಸಮರಸ,
ಸೂರ್ಯನೇ ಬಂದಿಹನು,
ಎದೆಯಂಗಳವನ್ನೊಮ್ಮೆ ಹದಮಾಡಿ ಗುಡಿಸಬಾರದೆ,
ಒಮ್ಮೆ ಕೈಮಾಡಿ ನೀ ಎನ್ನ ಕರೆಯಬಾರದೇ!


// ಮೃದಂಗಜ//
ಸುರೇಶ ಜಕಾತಿ.ಜಮಖಂಡಿ
8746086658

Read my thoughts on YourQuote app at https://www.yourquote.in/suresh-jakati-bciz7/quotes/gjl-teeru-elleyoonn-baa-1qovb

- ಸುರೇಶ ಜಕಾತಿ.ಜಮಖಂಡಿ

20 Jan 2020, 08:33 pm

ಅರಿವಾಗಲೇ ಇಲ್ಲ.

ಬಂಜೆಯೆಂದು ಅಣಕಿಸುವ
ಅವಳಿಗೆ ಅರಿವಾಗಲೇ ಇಲ್ಲ
ಮಗು ಇದ್ದು ಕೂಡ
ಮಗುವಿನ ಮಹತ್ವ

ಅನಾಥನೆಂದು ಅಣಕಿಸುವ
ಅವನಿಗೆ ಅರಿವಾಗಲೇ ಇಲ್ಲ
ಹೆತ್ತವರು ಇದ್ದು ಕೂಡ
ಹೆತ್ತವರ ಮಹತ್ವ

ಭಿಕ್ಷುಕನೆಂದು ಅಣಕಿಸುವ
ಅವನಿಗೆ ಅರಿವಾಗಲೇ ಇಲ್ಲ
ಮೈ ತುಂಬಾ ಸಾಲು ಇದ್ದು ಕೂಡ
ಬೇಡುವವನ ನೋವು

ಪರರ ಅಣಕಿಸುವ
ಅವನಿಗೆ ಅರಿವಾಗಲೇ ಇಲ್ಲ
ಪರರಂತೆ ತಾನು ಕೂಡ
ಬದುಕುತ್ತಿರುವುದು ಎಂದು

- ಅಕ್ಷತ

19 Jan 2020, 10:39 am

ನನ್ನವಳು

ಬರೆಯಲೆಂದು ಕುಳಿತರೆ...
ಆಕೆಯದ್ದೆನೇನಪು. ...ಆಕೆಯದ್ದೆ  ನಗು..
ಅವಳಿಗಾಗಿ ಹುಟ್ಟುವ ಪದಗಳು...
ಅದೇ ಗುಂಗಿನಲ್ಲಿ ಮತ್ತೆಲ್ಲದರ ಮರೆವು...

ನನ್ನವಳು ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸುವವಳು
ನನ್ನವಳು ಕಡಲ ಬಿಳಿ ಬಿಳಿ ನೊರೆಯಂತೆ  ನಾಜೂಕು
ಆದರೆ ಅವಳ ಪ್ರೇಮ ತೂಫಾನಿನಷ್ಟೇ ತೀವ್ರ!

ನನ್ನವಳ ರೂಪ ಇರುಳ
ಬಾನ ಬೆಳಗುವ ಪೂರ್ವ ಚಂದಿರ.
ಅವಳ ಹೃದಯ ನನ್ನ ಜೀವನದ
ಕಷ್ಟಗಳ ಮರೆಸೊ ಮಂದಿರ.

ನನ್ನವಳು ತಣ್ಣನೆಯ ತಂಗಾಳಿ
ಮಚ್ಚಿನಂತೆ ಹರಿತವಾದ ಸೌಂದರ್ಯ
ಕನಸ ಕುಸುರಿಯನ ಕಟ್ಟಿದಂತ ಕಣ್ಣಿನ ಮಾತು

DATTU

- Dattatreyabhat

19 Jan 2020, 08:38 am

ನಾ ಬರೆದ ಕವಿತೆ

ನಾ ಬರೆದ ಕವಿತೆಯೊಂದು ನೆನಪಾಯಿತು ಇಂದು
ನಿನಗಾಗಿ ಹೇಳುತಿರುವೇ ಕೇಳು ಬಾ ಇಂದು|

ನೆನಪಿನ ನೆನಪಲ್ಲಿ ನೆನಪಾದ ನೆನಪನು
ಹೇಳುತ್ತಿರುವೆ ಕೇಳಿ೦ದು ಹೇ ನನ್ನ ಹೃದಯವೇ|

ನನ್ನ ಕನಸಲೀ ಕನಸಾಗಿ ಬಂದೆ
ನನಸಾಗದೆ ಹೋದೆಯ ಇಂದು ನೀನು|

ಅಂದು ನೀನು ಕೊಟ್ಟ ಪ್ರೀತಿ
ಇಂದು ನನಗೆ ಬೇಕು
ಒಮ್ಮೆ ನೀ ಬಂದುಬಿಡು ನನ್ನ ಬಳಿಗೆ ಇಂದು||

ಆಕ್ಷಣಕೆ ನಾ ಬದುಕಿರುವೆನು ಕಾತುರದಿ ಇಂದು
ಹೇ ನನ್ನ ಹೃದಯವೇ|

ನಿನ್ನ ಹೃದಯ ಮಿಡಿತವನ್ನು ಕೇಳುವ ಚಪಲ ಮೂಡಿ|
ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ಚಿತ್ರ ನೋಡಿ|

ನನ್ನ ಕಣ್ಣೀರಿನಿಂದ ನಿನ್ನ ಮನವು ಕರಗಿ|

ನನ್ನ ಪ್ರೀತಿ ಎಂದಿಗೂ ನಿನಗೆ
ಬೇಗ ಬಾ ಬೆಡಗಿ
ಅತೀ ಬೇಗ ಬಾ ಬೆಡಗಿ

- Chandan V

18 Jan 2020, 11:24 am

ರೈತ

ಉಳುವ ಯೋಗಿಯ ನೋಡು ಎಂದವನೊಬ್ಬ ,
ಉಳುವ ಯೋಗಿ ಭೂಮಿಯಲ್ಲಿ ಅಂದ ಇನ್ನೊಬ್ಬ .
ಆಳಾಗಿ ದುಡಿಯುವ ಯೋಗಿ ಹೊಲದಲ್ಲಿ ,
ಅವನನ್ನು ಆಳುವ ಭೋಗಿ ಕುರ್ಚಿಯಲಿ ಅಬ್ಬಾಬ್ಬ .....
ಕಿತ್ತು ತಿನ್ನುವ ಭೋಗಿ ಸುಖ- ಸಾಗರದಲ್ಲಿ ,
ಒತ್ತು, ಬಿತ್ತು , ಬೆಳೆತೆತ್ತ ಯೋಗಿ ಉರಿಗೇರಿದ ಆ ಮರದಲ್ಲಿ....
ಅದನ್ನು ಕಂಡು ನೊಂದು ನೋಡದವನೊಬ್ಬ .......

✍️ವೇಣು ಸಿ ಎ✍️

- VenuCA

18 Jan 2020, 11:11 am

ಏಕಾಂಗಿ

ನಾನೊಬ್ಬ ಏಕಾಂಗಿ...
ನನ್ನ ಪ್ರೀತಿಯ ಅರ್ಥ ಮಾಡಿಕೊಳ್ಳಲಿಲ್ಲ ನನ್ನವಳು ಸರಿಯಾಗಿ...
ನಾ ಪಟ್ಟು ಶ್ರಮ ದೇವರಿಗೆ ಗೊತ್ತು ಆ ಪ್ರೀತಿಗಾಗಿ... ಸಾಗುತಿದೆ ದಾರಿ ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗಿ...
ಗೊತ್ತಿಲ್ಲ ಕೊನೆ ಮುಟ್ಟುವುದು ಎಲ್ಲಿಗೆ ಹೋಗಿ...
ಆದರೂ ಮನ ಕಾಯುತಿದೆ ಅವಳು ಬರುವ ದಾರಿಗಾಗಿ.... ಇಂತಿ ಮಲ್ಲ...

- Mallesh

17 Jan 2020, 11:06 pm

ಬೊಟ್ಟು

ನೀನು ಇಟ್ಟ ಬೊಟ್ಟು...
ಕಡಲ ತೀರದ ಮುತ್ತು ...
ಹೇಳುತ್ತಾರೆ ಹೆಣ್ಣಿಗೆ ಚಿನ್ನ ಅಂದ...
ನಿನಗೆ ಬೊಟ್ಟೆ ಚಂದ...

- Dit-o boys

17 Jan 2020, 05:28 pm