ನಿಮ್ಮ ಕಣ್ಣ ನಂದದೀಪಾವೆಂದ
ನಾನು
ನಿಮ್ಮ ಅಸಾರೆಯಲ್ಲಿ ಬದುಕುತಿದ್ದೆ
ಆ ಕ್ಷಣದಿ
ಆಸೆ ಹುಟ್ಟಿಸಿತ್ತು ನಿಮ್ಮ ಪ್ರೀತಿ
ದುರ್ವಿದಿಯಂತೆ ಒದಗಿತು
ನಿಮ್ಮ ಆಗಲಿಕೆ
ಅದರಿಂದ ನೊಂದ ನಾನು
ನೀವೂ ನನ್ನ ಬಳಿ ಇರುವಿರಿ ಎಂದು
ಹುಯೆಯಲ್ಲಿ ಬದುಕುತಿರುವೆ
ಮಾತುಗಳಿಗೊಂದು ಮೌನ ಪೋಣಿಸಿ,
ಬುದ್ದಿಯನ್ನು ಎದೆಹಿಡಿತಕ್ಕೆ ತಾಗಿಸಿ,
ಕುಣಿಯುತ್ತ ಪಿತ ಅಂತಃಕರಣದ ಹೆಣ್ಣು,
ನೀನಾದ ಮೇಲೆ,ಸಂಗೀತ ಶೃತಿಯು ನಾನಾಗಿ
ಹುಣ್ಣಿಮೆಯ ಬಯಲಲ್ಲಿ ತಂಪಾದ ಚಂದಿರನು
ಕಂಪಾದ ಸೊಂಪಾದ ಬೆಳದಿಂಗಳು ಹಾಸಿರಲು,
ಒಮ್ಮೆ ಕೈ ಮಾಡಿ ನೀ ಯನ್ನ ಕರೆಯಬಾರದೇ!
ಕೇಳುವ ಕಿವಿಗಳಿರುವವು , ಓಲೆ ನೀ ಪೋಣಿಸಿರುವೆ,
ಮನದ ಮೃದಂಗವನ್ನೊಮ್ಮೆ ಬಾರಿಸಬಾರದೇ,
ಎದೆಯ ಬಂಧನದ ಬನದೊಳಗೆ ಸದಾ ಪ್ರೇಮದಾ ಅಮಲು ,
ಪ್ರೀತಿಯ ನಶೆ ನೀ ಏರಿಸಬಾರದೇ!
ಬಾನಂಗಳದಿ ಬಾನಾಡಿ ಹಾರಾಡಿ,ಹಾರಾಡಿ,
ಹಕ್ಕಿಗಳು ತಾವಾಗಿಯೇ ಸೇರಿ ರುಜು ಮಾಡುವಂತೆ
ದೇವರು ಹೊಸೆದ ಪ್ರೇಮದಾರವನ್ನೊಮ್ಮೆ ನೀ ನೆನೆಯಬಾರದೇ!
ಒಮ್ಮೆ ಕೈ ಮಾಡಿ ನೀ ಎನ್ನ ಕರೆಯಬಾರದೇ!
ನಾನು ನೋಡ ಹೊರಟಾಗಲೊಮ್ಮೆ ,
ನಿನ್ನ ಮೂಗುತಿಯ ಹೊಳಪು, ಮಿಂಚು ತಾಗಿಸಿ ,
ಹೊಳೆಯುವ ನಕ್ಷತ್ರವೇ ನೀನಾಗಿರಲು ,
ಮನಕೆ ಮಂದಾರವ ನೀ ತೋರಬಾರದೇ!
ಕನಸಿನಲ್ಲೊಮ್ಮೆ ಸ್ವಪ್ನ ನೀನಾಗಿ
ಕಾಮನ ಬಿಲ್ಲಿನಲಿ ಕಂಡ ಏಳು ಬಣ್ಣದ ಚೆಲುವೆ,
ಒಮ್ಮೆ ಕೈ ಮಾಡಿ ನೀ ಯನ್ನ ಕರೆಯಬಾರದೇ!
ನವಿಲು ಕಣ್ಣಿನ ಚೆಲುವೆ ಇಂಪಾದ ಒಲವ ತೋರಿ,
ಚಿತ್ತತಾಳ ಬಾರಿಸಲು ಹೃದಯವೀಣೆಯ ನುಡಿಸಿ,
ಧ್ಯಾನದೊಳಗಿದ್ದ ಮೌನ ಸನ್ಯಾಸಿ ನಾನು,
ಬಿಕ್ಕಳಿಕೆ ಬಾರದ ಬಿಸಿಯಾದ ಏದುಸಿರು ತರಿಸಲು,
ಹಸಿರು ಬಳ್ಳಿಯ ಮೇಲೆ ಹರಡಿರುವ ಹೂ ನೀನಾಗಬಾರದೇ,
ಕೌಸ್ತುಭವ ಹೊರ ಸೂಸಿ ಮಲ್ಲಿಗೆಯ ಬಿರುನಗೆಯ ಬೀರಿ,
ಒಮ್ಮೆ ಕೈ ಮಾಡಿ ನೀ ಎನ್ನ ಕರೆಯಬಾರದೇ!
ಇಂದೆಷ್ಟೋ ನಾಳೆಗಳು ಹಿಂದೆಷ್ಟೋ ಆದವು,
ಸಮ ರಸದ ಸರಸತಿಯು ನೀನಾದ ಮೇಲೆ
ಬ್ರಮರಕ್ಕಿನ್ನೂ ಗಂಟೆ ಜಾಗಟೆಯ ಸದ್ದು ,
ದುಂದುಬಿಯು ನಾವಾಗಿದ್ದೇವೆ; ಎಲ್ಲಿದೆ ಸಂತೃಪ್ತಿ?
ಶಿವನ ಸನ್ನಿಧಾನವು ಇನ್ನೂ ದೂರ, ಬಹುದೂರ,
ಇನ್ನಾದರೂ ಸುರಿಸಬಾರದೇ ನೀನು ಪ್ರೀತಿಯ ರಸ
ತೇರು ಎಳೆಯೋಣ ಬಾ ನಾವು,
ಜತೆ ಸೇರಿದಾಗಲೇ ಪ್ರೀತಿಯ ಸಮರಸ,
ಸೂರ್ಯನೇ ಬಂದಿಹನು,
ಎದೆಯಂಗಳವನ್ನೊಮ್ಮೆ ಹದಮಾಡಿ ಗುಡಿಸಬಾರದೆ,
ಒಮ್ಮೆ ಕೈಮಾಡಿ ನೀ ಎನ್ನ ಕರೆಯಬಾರದೇ!
// ಮೃದಂಗಜ//
ಸುರೇಶ ಜಕಾತಿ.ಜಮಖಂಡಿ
8746086658
Read my thoughts on YourQuote app at https://www.yourquote.in/suresh-jakati-bciz7/quotes/gjl-teeru-elleyoonn-baa-1qovb
ನಾನೊಬ್ಬ ಏಕಾಂಗಿ...
ನನ್ನ ಪ್ರೀತಿಯ ಅರ್ಥ ಮಾಡಿಕೊಳ್ಳಲಿಲ್ಲ ನನ್ನವಳು ಸರಿಯಾಗಿ...
ನಾ ಪಟ್ಟು ಶ್ರಮ ದೇವರಿಗೆ ಗೊತ್ತು ಆ ಪ್ರೀತಿಗಾಗಿ... ಸಾಗುತಿದೆ ದಾರಿ ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗಿ...
ಗೊತ್ತಿಲ್ಲ ಕೊನೆ ಮುಟ್ಟುವುದು ಎಲ್ಲಿಗೆ ಹೋಗಿ...
ಆದರೂ ಮನ ಕಾಯುತಿದೆ ಅವಳು ಬರುವ ದಾರಿಗಾಗಿ.... ಇಂತಿ ಮಲ್ಲ...