ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಲೀಲೆಯ ನವ ಧಾರೆ ಧಾರೆ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಕಾಲ ಪಥದ ತಿರುವಿನಲ್ಲಿ
ನಮ್ಮದೊಂದು ನಿಲುವ ತಾಣ
ನಮ್ಮ ಆಟ ಹೊಸದೆನಿಸುವ
ಬಗೆಯದೊಂದು ಹೊಸದೆ ಪಯಣ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ನಮ್ಮ ಮನೆ ನಮ್ಮ ಒಲುಮೆ
ನಮ್ಮ ಕರುಳ ಕುಡಿಗಳು
ಮನದ ತುಂಬಾ ಹಾಡು ಗುನುಗಿ
ಹರುಷ ತಂದ ಕ್ಷಣಗಳು
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಹೊಸ ಚಿಗುರಿನ ಉಲ್ಲಾಸಕೆ
ಬೇರಿಗೇನೋ ಸಂಭ್ರಮ
ಮೇಲೊಗಿದಿವೆ ಹೂಗೊಂಚಲು
ಬಯಲ ಬೆರಗು ಘಮಘಮ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಇಗೋ ನಾವು ಹಳಬರು
ಅದೇ ಚಂದ್ರ ಅದೇ ತಾರೆ
ಬರುವರಿನ್ನು ಹೊಸಬರು
ಆ ದೇವರ ಬಳಿ ಜನನದ ಭಿಕ್ಷೆ
ತಾಯಿಯ ಬಳಿ ಜೀವದ ಭಿಕ್ಷೆ
ತಂದೆಯ ಬಳಿ ಬದುಕಿನ ಭಿಕ್ಷೆ
ಗುರುವಿನ ಬಳಿ ವಿದ್ಯೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಕೇಳಲೆಂಗೆ
ಬೆಡಲೆಂಗೆ ನಿಡುವ ಭಿಕ್ಷೆಯನು
ತಂಗಾಳಿಯ ಬಳಿ ಹುಸಿರಿನ ಭಿಕ್ಷೆ
ನೀರಿನ ಬಳಿ ದಾಹದ ಭಿಕ್ಷೆ
ಉದಕದ ಬಳಿ ಹಸಿವಿನ ಭಿಕ್ಷೆ
ಮರದ ಬಳಿ ನೇರಳಿನ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೇಂಗೇ ನಿಡುವ ಭಿಕ್ಷಯನು
ಗೇಳೆಯರ ಬಳಿ ಗೇಳೆತನದ ಭಿಕ್ಷೆ
ಪ್ರೇಯಸಿಯ ಬಳಿ ಪ್ರೀತಿಯ ಭಿಕ್ಷೆ
ಪುರೋಹಿತರ ಬಳಿ ಮಾಂಗಲ್ಯದಾರಣೆ
ಯ ಭಿಕ್ಷೆ ಬಂಧುಭಾಂದವರ ಬಳಿ
ಹಾರ್ಸಿವಾದ ಮತ್ತು ಉಡುಗೊರೆಯ ಭಿಕ್ಷೆ
ತಿರಸ್ಕರಿಸಿರಿಸಲೇಂಗೆ ಮೌಲ್ಯದ ಭಿಕ್ಷಯನು
ಸಿರಿವಂತನ ಬಳಿ ಸಾಲದ ಭಿಕ್ಷೆ
ಕಾರ್ಯದಲ್ಲಿ ಸಂಬಳದ ಭಿಕ್ಷೆ
ಮಡದಿಯ ಬಳಿ ಸಂತಾನ ಭಿಕ್ಷೆ
ನಂತರ ಮಕ್ಕಳ ಆರೈಕೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೆಂಗೆ ನಿಡದ ಭಿಕ್ಷಯನು
ಮಕ್ಕಳ ಬಳಿ ನಿಷ್ಪ್ರಯೋಜಕನೇಂಬ
ಭಿಕ್ಷೆಯ ಪಡೆದು ಭಂದುಭಾದವರಿಂದ
ಎಳ್ಳು ನೀರುಎಂಬ ಭಿಕ್ಷೆಯ ಪಡೆದು
ಬೊಮಿತಾಯಿಯ ಬಳಿ ಆರಡಿ ಮುರಡಿ
ನೇಲ ಮಾಳಿಗೆಯ ಭಿಕ್ಷೆ ನಾನೊಬ್ಬ ಭಿಕ್ಷುಕ
ಬೇಡಲೆಂಗೆ ಕೇಳಲೆಂಗೆ ನಿಡುವ ಭಿಕ್ಷಯನು
ಪ್ರೀತಿಯ ಮಾತು ಮೌನವಾಯಿತು
ಕಂಗಳ ನೋಟ ಮಂಕಾಯಿತು
ಹೆಂಗೆ ಮರೆಯಲಿ ನಿನ್ನ
ಎಂಗೆ ಇರಲಿ ನಿನ್ನಗಲಿ ನಾನು
ಹೃದಯ ಭಾರವಾಯಿತು
ನಿಟ್ಟಸಿರೊಂದು ಹೊರಬಿತ್ತು ಅಗ್ಗಳಿಕೆಯನೆನೆದು...
ತಿರುಗಿ ನೋಡಿದೆ ನಿನ್ನ
ಮುಗುಳ್ನಗೆಒಂದು ಮೂಡಿಬಂತು
ಹೃದಯ ಸಂತಸದ ಗೂಡಾಯಿತು
ಹೊಸ ಚೈತನ್ಯ ಕೂಡಿಬಂತು
ಕಂಗಳು ಹೊಳಪಾಯಿತು
ಮಾತು ಹರಿವ ನೀರಾಯಿತು
ಮತ್ತೆ ಬದುಕು ರಂಗ್ ಕಂಡಿತು
ನಗರಿ ಇದು ಮಾಯಾನಗರಿ
ಯುವಜನರ ನೆಚ್ಚಿನ ಬಿಡು..
ಟೆಕ್ಕಿಗಳ ಮೂಲಸ್ಥಾನ
ಕೈತುಂಬ ಕಾಂಚನ
ಲಾಲ್ಬಾಗ್ ವಿಧಾನಸೌಧ ಮುಕುಟದ ಗರಿ
ಪಬ್ ಡಾನ್ಸ್ ಬಾರ್ ಮೋಜಿನ ಗುರಿ
ಕರೆಸಿಕೊಳಲು ಕನ್ನಡ ದ ರಾಜಧಾನಿ
ತಮಿಳು ತೆಲುಗು ಮಲಯಾಳಂ
ಇವರದೇ ಕಾರುಬಾರು..
ಎಲ್ಲಾ ಜನರ ಆಶ್ರಯತಾಣ
ಆಮೆಗತಿಯ ಸಂಚಾರ ಗೂಡು
ಐ ಟೆಕ್ ಬಸ್ ಮೆಟ್ರೋ ನಮ್ಮ ಹೆಮ್ಮೆ
ಉಬೆರ್ ಆಟೋ ನಿತ್ಯ ಸಂಗತಿ
ಇದುವೇ ಬೆಂಗಳೂರು
ನಮ್ಮ ಬೆಂಗಳೂರು...
ಶಾಂತ ಸಾಗರ ರೊಚ್ಚಿಗೆದ್ದಿದೆ
ಅಲೆಗಳ ಆಭರ ಜೋರಾಗಿದೆ
ಆಗಸದ ಎತ್ತರದ ಅಲೆಗಳು
ಕಬಳಿಸುತ್ತಿದೇ ದಡವನ್ನು
ರುದ್ರನರ್ತನ ವ ಕಂಡು
ಶರಣಾಗಿದೆ ಮರಗಳು ನೆಲಕುರುಳಿ
ಸಮಾಧಾನಿಸು ಸಮುದ್ರರಾಜ
ಮನ್ನಿಸು ಮಾನವಕುಲದ ಪಾಪಗಳ..