Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನ

ಸಾವಿನ ಶವಯಾತ್ರೆಯಲ್ಲಿ
ನೆನಪುಗಳ ಮೆರವಣಿಗೆ
ಕಂಬನಿಯ ಮಿಡಿತ
ನನ್ನವರು ಜಗವ ತೊರೆದರು
ಏನೂ ಹೇಳದೆ ಹೊರಟೆ ಮೌನಿಯಾಗಿ.

ಎ ಜಿ ಶರಣ್

- ಎ ಜಿ ಶರಣ್

04 Jul 2019, 08:14 am

ತಲ್ಲಣ ಲ್ಲ

ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಲೀಲೆಯ ನವ ಧಾರೆ ಧಾರೆ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ

ಕಾಲ ಪಥದ ತಿರುವಿನಲ್ಲಿ
ನಮ್ಮದೊಂದು ನಿಲುವ ತಾಣ
ನಮ್ಮ ಆಟ ಹೊಸದೆನಿಸುವ
ಬಗೆಯದೊಂದು ಹೊಸದೆ ಪಯಣ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ

ನಮ್ಮ ಮನೆ ನಮ್ಮ ಒಲುಮೆ
ನಮ್ಮ ಕರುಳ ಕುಡಿಗಳು
ಮನದ ತುಂಬಾ ಹಾಡು ಗುನುಗಿ
ಹರುಷ ತಂದ ಕ್ಷಣಗಳು
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ

ಹೊಸ ಚಿಗುರಿನ ಉಲ್ಲಾಸಕೆ
ಬೇರಿಗೇನೋ ಸಂಭ್ರಮ
ಮೇಲೊಗಿದಿವೆ ಹೂಗೊಂಚಲು
ಬಯಲ ಬೆರಗು ಘಮಘಮ
ಅದೇ ಚಂದ್ರ ಅದೇ ತಾರೆ
ನಾವು ಮಾತ್ರ ಬೇರೆ ಬೇರೆ
ಅದೇ ಬಾನು ಅದೇ ಭೂಮಿ
ಇಗೋ ನಾವು ಹಳಬರು
ಅದೇ ಚಂದ್ರ ಅದೇ ತಾರೆ
ಬರುವರಿನ್ನು ಹೊಸಬರು

- Radhika Narasimha

03 Jul 2019, 09:39 pm

ಪುಸ್ತಕ

ಕೆಲವೊಮ್ಮೆ,
ನಾವು ಓದಲು ಬಯಸಿದ
ಪುಟಗಳಲ್ಲೇ ಉತ್ತರ
ಅರಸುತ್ತಾ ಇರುತ್ತವೆ....

- Radhika Narasimha

03 Jul 2019, 08:27 pm

ನಾನೊಬ್ಬ ಭಿಕ್ಷುಕ

ಆ ದೇವರ ಬಳಿ ಜನನದ ಭಿಕ್ಷೆ
ತಾಯಿಯ ಬಳಿ ಜೀವದ ಭಿಕ್ಷೆ
ತಂದೆಯ ಬಳಿ ಬದುಕಿನ ಭಿಕ್ಷೆ
ಗುರುವಿನ ಬಳಿ ವಿದ್ಯೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಕೇಳಲೆಂಗೆ
ಬೆಡಲೆಂಗೆ ನಿಡುವ ಭಿಕ್ಷೆಯನು

ತಂಗಾಳಿಯ ಬಳಿ ಹುಸಿರಿನ ಭಿಕ್ಷೆ
ನೀರಿನ ಬಳಿ ದಾಹದ ಭಿಕ್ಷೆ
ಉದಕದ ಬಳಿ ಹಸಿವಿನ ಭಿಕ್ಷೆ
ಮರದ ಬಳಿ ನೇರಳಿನ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೇಂಗೇ ನಿಡುವ ಭಿಕ್ಷಯನು

ಗೇಳೆಯರ ಬಳಿ ಗೇಳೆತನದ ಭಿಕ್ಷೆ
ಪ್ರೇಯಸಿಯ ಬಳಿ ಪ್ರೀತಿಯ ಭಿಕ್ಷೆ
ಪುರೋಹಿತರ ಬಳಿ ಮಾಂಗಲ್ಯದಾರಣೆ
ಯ ಭಿಕ್ಷೆ ಬಂಧುಭಾಂದವರ ಬಳಿ
ಹಾರ್ಸಿವಾದ ಮತ್ತು ಉಡುಗೊರೆಯ ಭಿಕ್ಷೆ
ತಿರಸ್ಕರಿಸಿರಿಸಲೇಂಗೆ ಮೌಲ್ಯದ ಭಿಕ್ಷಯನು

ಸಿರಿವಂತನ ಬಳಿ ಸಾಲದ ಭಿಕ್ಷೆ
ಕಾರ್ಯದಲ್ಲಿ ಸಂಬಳದ ಭಿಕ್ಷೆ
ಮಡದಿಯ ಬಳಿ ಸಂತಾನ ಭಿಕ್ಷೆ
ನಂತರ ಮಕ್ಕಳ ಆರೈಕೆಯ ಭಿಕ್ಷೆ
ನಾನೊಬ್ಬ ಭಿಕ್ಷುಕ ಬೇಡಲೆಂಗೆ
ಕೇಳಲೆಂಗೆ ನಿಡದ ಭಿಕ್ಷಯನು

ಮಕ್ಕಳ ಬಳಿ ನಿಷ್ಪ್ರಯೋಜಕನೇಂಬ
ಭಿಕ್ಷೆಯ ಪಡೆದು ಭಂದುಭಾದವರಿಂದ
ಎಳ್ಳು ನೀರುಎಂಬ ಭಿಕ್ಷೆಯ ಪಡೆದು
ಬೊಮಿತಾಯಿಯ ಬಳಿ ಆರಡಿ ಮುರಡಿ
ನೇಲ ಮಾಳಿಗೆಯ ಭಿಕ್ಷೆ ನಾನೊಬ್ಬ ಭಿಕ್ಷುಕ
ಬೇಡಲೆಂಗೆ ಕೇಳಲೆಂಗೆ ನಿಡುವ ಭಿಕ್ಷಯನು

- Vinod Naik Vinod Naik

03 Jul 2019, 02:12 am

ನೆನಪು

ಆ ಕಂಗಳ ಬೆಳದಿಂಗಳ 

ನೆನಪಿಂದು ಮೂಡಿದೆ ...

ಮರೆಯಾದ ಆ ಕಿರುನಗೆಯನ್ನು ನೆನೆದು

ಮನನೊಂದು ಹಾಡಿದೆ


ಆ ಊರು ಆ ಬೀದಿ ಆ ಮನೆ

ಆ ಮನೆಯ ಹಿತ್ತಿಲು

ಆ ಬೇಲಿ ಆ ಪೊದೆ ಆ ಮರ

ಆ ಕವಿದ ಕತ್ತಲು

ಗುಟ್ಟಾಗಿ ಪ್ರತಿಸಂಜೆ ನನಗಾಗಿ ಅಲ್ಲಿ 

ಕಾಯುತ್ತಿತ್ತು ಒಂದು ಜೀವಾ ...

ಸಿಹಿಮಾತಿನಿಂದ ಸವಿಸನಿಹದಿಂದ

ಕಳೆಯುತ್ತಿತ್ತು ಎಲ್ಲ ನೋವಾ  ... 


ಕಿಣಿ ಕಿಣಿ ಬಳೆಗಳ ನಿಲುನಾದ          

ಮೂಗುತಿಯ ಮೆರುಗು  

ತುರುವಿನ ಮಲ್ಲಿಗೆ ನರುಗಂಪು  

ನಾಚಿಕೆಯ ಸೆರಗು  ... 

ಆ ಸ್ಪರ್ಶ ಆ ಹರ್ಷ ರೋಮಾಂಚನ 

ಆ ನಗೆ ಬೆಳದಿಂಗಳು  

ಕನಸಂತೆ ಕರಗಿ ವಾಸ್ತವತೆ ಎರಗಿ 

ಈಗಿಲ್ಲಿ ಬಿರು ಬಿಸಿಲು


ಆ ಕಂಗಳ ಬೆಳದಿಂಗಳ 

ನೆನಪಿಂದು ಮೂಡಿದೆ ...

ಮರೆಯಾದ ಆ ಕಿರುನಗೆಯನ್ನು ನೆನೆದು

ಮನನೊಂದು ಹಾಡಿದೆ ... ... ... 

- Radhika Narasimha

02 Jul 2019, 08:45 pm

ಪ್ರೀತಿ ಮತ್ತೆ ಮುಂದುವರಿದಾಗ

ಪ್ರೀತಿಯ ಮಾತು ಮೌನವಾಯಿತು
ಕಂಗಳ ನೋಟ ಮಂಕಾಯಿತು
ಹೆಂಗೆ ಮರೆಯಲಿ ನಿನ್ನ
ಎಂಗೆ ಇರಲಿ ನಿನ್ನಗಲಿ ನಾನು
ಹೃದಯ ಭಾರವಾಯಿತು
ನಿಟ್ಟಸಿರೊಂದು ಹೊರಬಿತ್ತು ಅಗ್ಗಳಿಕೆಯನೆನೆದು...
ತಿರುಗಿ ನೋಡಿದೆ ನಿನ್ನ
ಮುಗುಳ್ನಗೆಒಂದು ಮೂಡಿಬಂತು
ಹೃದಯ ಸಂತಸದ ಗೂಡಾಯಿತು
ಹೊಸ ಚೈತನ್ಯ ಕೂಡಿಬಂತು
ಕಂಗಳು ಹೊಳಪಾಯಿತು
ಮಾತು ಹರಿವ ನೀರಾಯಿತು
ಮತ್ತೆ ಬದುಕು ರಂಗ್ ಕಂಡಿತು

- santhoshkumar

01 Jul 2019, 09:51 pm

ಮನದ ಮಾತು

ಕಾಣದ ಮನಸಿನ ಕಚಗುಳಿಯಿಂದ
ಹಿತವಾಗುತಿದೆ ಮನಕೆ.
ಕಚಗುಳಿಯುಟ್ಟ ಕಾಣದ ಮನವ
ಹುಡುಕಾಡುತಿದೆ ಎನ್ನ ಮನ.

- Radhika Narasimha

01 Jul 2019, 04:44 pm

ಮೌನ ರಾಗ

ಅಕ್ಷರಗಳೆಲ್ಲಾ ಸೇರಿ ಆಗೋದು ಪದ,
ಪದಗಳೆಲ್ಲಾ ಸೇರಿ ಆಗೋದು ವಾಕ್ಯ,
ವಾಕ್ಯಗಳೆಲ್ಲಾ ಸೇರಿ ಹುಟ್ಟೋದು
ಒಂದು ಮಧುರ ಬಾಂಧವ್ಯ...

- Radhika Narasimha

01 Jul 2019, 04:36 pm

ನಮ್ಮ ಬೆಂಗಳೂರು

ನಗರಿ ಇದು ಮಾಯಾನಗರಿ
ಯುವಜನರ ನೆಚ್ಚಿನ ಬಿಡು..
ಟೆಕ್ಕಿಗಳ ಮೂಲಸ್ಥಾನ
ಕೈತುಂಬ ಕಾಂಚನ
ಲಾಲ್ಬಾಗ್ ವಿಧಾನಸೌಧ ಮುಕುಟದ ಗರಿ
ಪಬ್ ಡಾನ್ಸ್ ಬಾರ್ ಮೋಜಿನ ಗುರಿ
ಕರೆಸಿಕೊಳಲು ಕನ್ನಡ ದ ರಾಜಧಾನಿ
ತಮಿಳು ತೆಲುಗು ಮಲಯಾಳಂ
ಇವರದೇ ಕಾರುಬಾರು..
ಎಲ್ಲಾ ಜನರ ಆಶ್ರಯತಾಣ
ಆಮೆಗತಿಯ ಸಂಚಾರ ಗೂಡು
ಐ ಟೆಕ್ ಬಸ್ ಮೆಟ್ರೋ ನಮ್ಮ ಹೆಮ್ಮೆ
ಉಬೆರ್ ಆಟೋ ನಿತ್ಯ ಸಂಗತಿ
ಇದುವೇ ಬೆಂಗಳೂರು
ನಮ್ಮ ಬೆಂಗಳೂರು...

- santhoshkumar

01 Jul 2019, 10:19 am

ಸಾಗರ

ಶಾಂತ ಸಾಗರ ರೊಚ್ಚಿಗೆದ್ದಿದೆ
ಅಲೆಗಳ ಆಭರ ಜೋರಾಗಿದೆ
ಆಗಸದ ಎತ್ತರದ ಅಲೆಗಳು
ಕಬಳಿಸುತ್ತಿದೇ ದಡವನ್ನು
ರುದ್ರನರ್ತನ ವ ಕಂಡು
ಶರಣಾಗಿದೆ ಮರಗಳು ನೆಲಕುರುಳಿ
ಸಮಾಧಾನಿಸು ಸಮುದ್ರರಾಜ
ಮನ್ನಿಸು ಮಾನವಕುಲದ ಪಾಪಗಳ..

- santhoshkumar

30 Jun 2019, 08:53 pm