ಧಾನ್ಯಗಳು ರಾಶಿರಾಶಿ ಜೀವನವು ಖುಷಿಖುಷಿ
ಈ ಭೂತಾಯಿಯ ವರದಿಂದ ಈ ರೈತನ ಬೆವರಿಂದ..
ತೂಗಿದರೆ ಚಿನ್ನದ ತೆನೆಯಿಂದ ಹೊಲ
ಬೆಳಗುವುದು ನಮ್ಮ ಬಾಳು ನೂರುಕಾಲ..
ಕೈಕಟ್ಟಿ ಕುಳಿತರೆ ರೈತ ಯಾರಿಗೂ ಸಿಗದು ಸುಖಶಾಂತಿ
ಕಾಳು ಬೆಳೆದು ಕೊಟ್ಟರೆ ರೈತ ಪ್ರತಿ ಮನೆಮನೆಯಲ್ಲೂ ಸಂಕ್ರಾಂತಿ..
ಹರುಷದಿ ಹಂಚೋಣ ಎಳ್ಳುಬೆಲ್ಲ
ಪ್ರೀತಿ ಸ್ನೇಹದಿ ಬಾಳೋಣ ಬದುಕೆಲ್ಲ..
ಬಿಡಿಸೋಣ ಒಲವಿನ ಬಣ್ಣದ ರಂಗೋಲಿ ಮನೆಅಂಗಳದಲಿ
ಬೆಳಗೋಣ ಸೂರ್ಯನ ಹಾಗೆ ನಾವೆಲ್ಲ ಈ ಜಗದಲಿ..
ಸಡಗರದಿಂದ ಕುಣಿದು ಕುಪ್ಪಳಿಸೋಣ
ಭೂತಾಯಿಯ ಭಕ್ತಿಯಿಂದ ಭಜಿಸೋಣ..
ಹಸಿವಿಗೆ ಅನ್ನದ ಆಸೆ
ಬಸರಿಗೆ ತವರಿನ ಆಸೆ
ಹೆಣ್ಣಿಗೆ ತಾಯಿಯಾಗುವ ಆಸೆ
ಅದಕ್ಕೆ ಬ್ರಹ್ಮ ಬರೆದಿಟ್ಟ
ಉಸಿರಿನಲ್ಲಿ ಮಮತೆಯ ಇಟ್ಟು
ತ್ಯಾಗದ ಪಣತೊಟ್ಟು ಮಾಡಿದ ಮೂರ್ತಿಯೇ ಅಮ್ಮ
ಎ. ಜಿ. ಶರಣ್
ಭರತ ಖಂಡದ ವೀರಸಂನ್ಯಾಸಿ ಸ್ವಾಮಿ ವಿವೇಕಾನಂದ
ನಿನಗೆ ನಮಿಸುವೆ ನಾ ಆನಂದದಿಂದ..
ಜಗ ಮೆಚ್ಚಿದ ಮಹಾಜಗದ್ಗುರು ನೀನಯ್ಯ
ವಿಶ್ವವ ಬೆಳಗಿದ ಜ್ಞಾನದ ಜ್ಯೋತಿ ನೀನಯ್ಯ..||ಪ||
ನರೇಂದ್ರನಾಥ ನಿನ್ನ ನಿಜ ಹೆಸರಯ್ಯ
ಭರತಮಾತ ನಿನ್ನ ಜೀವದ ಉಸಿರಯ್ಯ..
ರಾಮಕೃಷ್ಣ ನಿನ್ನ ಗುರುದೇವನಯ್ಯ
ಗುರುವಿನ ಗುರಿ ಮುಟ್ಟಿದ ಆ ಮಹಾದೇವ ನೀನಯ್ಯ..
ರಾಮಕೃಷ್ಣಮಠ ಎಂಬ ಜ್ಞಾನದ ತೇರನು ಏರಿ
ಮೂಢನಂಬಿಕೆಗಳ ವಿರುದ್ಧ ಸಮರ ಸಾರುತ
ಜನಮನದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುತ
ಜನರೇ ದೇವರೆಂದು ಜನಸೇವೆ ಮಾಡುತ
ಮಹಾನ್ ಸಮಾಜ ಸುಧಾರಕ ನೀನಾದೆನಯ್ಯ..
ಯುವಶಕ್ತಿ ಎಂಬ ಪ್ರಗತಿರಥವೇರಿ
ಏಳಿಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ ಎಂದು ಘೋಷಿಸುತ
ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದು ಎಚ್ಚರಿಸುತ
ಯುಗಯುಗದಲೂ ಯುವಜನರ ಸ್ಫೂರ್ತಿಪಥ ನೀನಾದೆನಯ್ಯ..
ವಿಶ್ವಧರ್ಮ ಸಮ್ಮೇಳನ ಎಂಬ ಅಹಂಮನಗಳ ತುಳಿದು
ವೀರಕೇಸರಿಯಂತೆ ಮಾತಿನ ಘರ್ಜನೆ ಮಾಡುತ
ಹಿಂದೂಸಂಸ್ಕೃತಿ ಶ್ರೇಷ್ಠತೆ ಜಗಕೆ ಸಾರುತ
ಸರ್ವಧರ್ಮ ಸಮನ್ವಯ ತತ್ವ ಬಿತ್ತುತ
ಮಹಾನ್ ವಿಶ್ವಮಾನವ ಎಂಬ ಕೀರ್ತೀ ಪಡೆದಿರುವವ ನೀನಯ್ಯ..
ನೀ ಬಿಟ್ಟೊದ ಮೇಲೆ
ನಿನ್ನ ನೆನಪುಗಳು ಕೂಡ
ಬಿಟ್ಟೋಗುತ್ತವೆ ಎಂದು ಕೊಂಡೆ
ಹಾಗಾಗಲಿಲ್ಲ ಅದು
ನಾನೆ ಆ ನೆನಪುಗಳು ಸುಟ್ಟಾಕಬೇಕು
ಅಂದುಕೊಂಡೆ ಆದರೆ
ಆ ನೆನಪುಗಳೇ ಯಾರನ್ನು
ನಂಬಬಾರದೆಂದು ಪಾಠಕಲಿಸಿದವು
ಕಲಿತ ಪಾಠಕ್ಕೆ ಬೆಲೆ ಕೊಡಬೇಕೆಂದು
ಆ ನಿನ್ನ ನೆನಪುಗಳು ಇನ್ನು
ಜೀವಂತವಾಗಿವೆ, ಬೆಳ್ಳಂಬೆಳಗ್ಗೆ
ಮೌನಿಗೆ ನೀ ನೆನಪಾದೆ
ಆ ನೆನಪಿಗೆ ಮೌನಿ ಬರೆದನು ಈ ಕವಿತೆ
##ಮೌನಿ##