ಪ್ರೀತಿ,ಕರುಣೆ,ಸ್ನೇಹ,
ಸಂಬಂಧಗಳ ಬಳ್ಳಿಯಲ್ಲಿ
ಆಸೆ, ಅಂತಸ್ತು,ಮೋಹ
ಜೀವನದ ಬಂಡಿಯಲ್ಲಿ
ಕನಸು ಕಣ್ಣಗಳಲ್ಲಿ
ನೆನಪುಗಳು ಮನಸಲ್ಲಿ
ಪ್ರಾಣ ಗಾಳಿಯ ಅಲೆಯಲ್ಲಿ
ಸತ್ತ ದೇಹ ಮಣ್ಣಲ್ಲಿ
ಹುಟ್ಟು ದೇವರ ಮಡಿಲಲ್ಲಿ
ಮರಣ ಭೂತಾಯಿಯ ಮಡಿಲಲ್ಲಿ
ಇಷ್ಟೆ ಜೀವನ
ಆ ತಿಳಿ
ನಗುವ ಮೊಗದಲ್ಲಿ,
ಸಮುದ್ರದ
ಅಲೆಗಳು ರಾಚಲಿ.
ಈ ಖಾಲಿ
ವೇದನೆಯ ಮಠದಲ್ಲಿ,
ನೀನಾಗು ಸ್ವರ
ಸಾಂಗತ್ಯ ನನ್ನಲಿ.
ಈ ಬಾಳ
ಪುಸ್ತಕದ ಪುಟದಲಿ,
ನೂರೆಂಟು ಸಾಲು
ನಿನ್ನದೇ ಜೊತೆಯಲಿ.
ಮಿನುಗೋ
ನಿನ್ನ ಕಣ್ಣಲ್ಲಿ,
ಸ್ಥಾಯಿ ಮಿಂಚು
ಅಬ್ಬರಿಸಿ ನಿಲ್ಲಲಿ.
ರೂಪದರ್ಶಿ
ನೀ ಹೊಳಪಲಿ,
ಹೊಳೆ ಹೊಳೆದು
ನಿಲ್ಲು ನೀ ಈ ಜಗದಲ್ಲಿ.
ಒಂದೇ ದಿನಕ್ಕೆ ಕಮ್ಮಿ ಆಗಬಾರದು ನಮ್ಮೆಲ್ಲರ ಕನ್ನಡ,
ಕನ್ನಡವನ್ನೇ ಮಾತನಾಡಿ ಪ್ರತಿದಿನ ನಮ್ಮ ನಿಮ್ಮ ಸಂಗಡ,
ಎಲ್ಲರೂ ಮರೆಯುವುದಕ್ಕಿಂತ ಮೊದಲೇ ಜಾಗೃತಗೊಳಿಸೋಣ ಬನ್ರಿ ದೌಡ,
ದಯಮಾಡಿ ಸಾರಿ ಸಾರಿ ಹೇಳ್ರಿ ಕನ್ನಡದ ಅಭಿಮಾನ ಐತಿ ರಗಡ,,,,
✍
ಹೆಮ್ಮೆಯಿಂದ ಮಾತನಾಡೋಣ ಕನ್ನಡವನ್ನ,
ಏಳೇಳು ಜನ್ಮಕ್ಕೂ ತೀರಿಸಲಾಗದು ಈ ಮಣ್ಣಿನ ಋಣವನ್ನ,
ಇಲ್ಲಿ ಹುಟ್ಟಿರುವುದಕ್ಕೆ ನಮ್ಮ ಪುಣ್ಯವನ್ನ,
ಇನ್ನೊಂದು ಜನ್ಮವಿದ್ದರೆ ದಯಮಾಡಿ ಇಲ್ಲಿಯೇ ನೀಡನ್ನ,,,,
✍
ನನ್ನ ಮದುವೆ ಮೇಲೆ ಸ್ವರ್ಗದಲ್ಲಿ ಆಗಬಾರದು
ಆ ಸ್ವರ್ಗವೇ ಆವತ್ತು ಭೂಮಿಗಿಳಿದಿರಬೇಕು
ನನ್ನ ಸಹೃದಯಿಗಳಿಗೆ, ಬಂಧುಗಳಿಗೆ, ಮಿತ್ರರಿಗೆ
ಅತಿಥಿಗಳಿಗೆ ಹೃದಯದಾಕಾರದ ದ್ವಾರ
ಸ್ವಾಗತಿಸುತಿರಬೇಕು,
ನನ್ನವಳು ವೇದಿಕೆಗೆ ಬರುವಾಗ
ಗುಲಾಬಿಗಳು ಅರಳುತಿರಬೇಕು, ಮಲ್ಲಿಗೆ
ಸುಗಂಧ ಪಸರಿಸುತಿರಬೇಕು, ತಾರೆಗಳ ಮಳೆ
ಸುರಿತಿರಬೇಕು, ಸರಸ್ವತಿ ವೀಣೆ ಮೀಟುತಿರಬೇಕು,
ನವಿಲುಗಳು ನರ್ತಿಸುತಿರಬೇಕು,
ಅವೆಲ್ಲಾ ದಾಟಿ ಅವಳು ವೇದಿಕೆಗೆ ಬಂದಾಗ
ಅವಳಂದಕೆ ನಾ ಸೋತು ಹೋಗಬೇಕು
ಮೊದಲನೆ ಸಾಲಿನಲ್ಲಿ ನನ್ನ ದಿಕ್ಕರಿಸಿದವರು
ಕುಳಿತಿರಬೇಕು ನನ್ನ ನೋಡಿ ಹೊಟ್ಟೆ ಉರಿತಿರಬೇಕು
ಅದು ನೋಡಿ ನಾ ಖುಷಿ ಪಡಬೇಕು.....
##ರಜನೀಷ##