Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಂಬನಿ..........

ಕಣ್ಣೊಳಗೆ ಅವಿತು ಇಣುಕುತಿದೆ
ಕಂಬನಿಯ ಸಾಲೋಂದು
ಮನಸೋಳಗೆ ಅವಿತು ಮನೆ
ಮಾಡಿಬಿಟ್ಟಿದೆ ಮನೆಯ ತುಂಬೆಲ್ಲ
ನೊವೂಗಳ ಹೋಳೆಯೊಂದು
ತಾನು ಅಲ್ಲಿ ಇರಲಾಗದೆ
ಹೊರಗೆ ಬರಲೆ ಎಂದು
ಇಣುಕಿ ಇಣುಕಿ ನೋಡುತಿದೆ
ನನ್ನ ಕಣ್ಣಲ್ಲಿ ನಾ ಹೇಳಬೆಕೆಂದಿದೆ
ಒಂದೆ ಒಂದು ಮಾತೆಂದು
ಬಂದು ಬಿಡೂ ಹೊರಗೆ ಎಂದು.....
ನನಗಲ್ಲಿ ಜಾಗವಿಲ್ಲ ಹೋರಗಿನ ಲೋಕಕ್ಕೆ
ನಾ ಬಂದು ಬಿದ್ದು ಬಿಡಲೆ ಎಂದು
ಕಣ್ಣಲ್ಲೆ ತಿವಿಯುತಿದೆ......ಕಣ್ಣೋಳಗಿನ
ಕಂಬನಿಯೊಂದು.......

- ರಾಗಸಿರಿ....

09 Feb 2018, 09:21 pm

ಮಳೆ....

ಬಿಂದು ಬಿಂದು ಮಳೆ ಬಿದ್ದು ಭೂಮಿ ಆಯ್ತು ಬಂಗಾರ...
ಬಾನು ಭೂಮಿಯ ಮುತ್ತಿಡಲು ಮಳೆ ಒಂದೇ ಆಕಾರ..
ಎಷ್ಟು ಚಂದ ಮಣ್ಣು ವಾಸನೆ
ಮಳೆ ಹನಿ ಬಿದ್ದೊಡನೆ..
ಎಂತಾ ಸೆಳೆತ ಧರೆಯ ನರ್ತನೆ
ಮಳೆ ನೀರು ಕಂಡೊಡನೆ.....
####ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

09 Feb 2018, 05:34 pm

ಅಮ್ಮ ಅಮ್ಮ ನನ್ನಮ್ಮ

ಅಮ್ಮ ಅಮ್ಮ ನನ್ನಮ್ಮ
ನಾನು ಉಸಿರಾಡುವ ಉಸಿರು ನೀನು..
ಅಮ್ಮ ಅಮ್ಮ ನನ್ನಮ್ಮ
ನಾನು ಪೂಜಿಸುವ ದೇವರು ನೀನು..
ಕೋಟಿ ಜನ್ಮ ಪಡೆದರೂ
ನಿನ್ನ ತ್ಯಾಗ ಮರೆಯೋಕ್ಕಾಗಲ್ಲ..
ಮುಕ್ಕೋಟಿ ದೇವರಲ್ಲಾ
ನಿನ್ನ ಪ್ರೀತಿಗೆ ಬೆರಗಾಗಿ ಕೈಮುಗಿದು ನಿಂತರಲ್ಲ..


ಬಾಳಲ್ಲಿ ಆಗಸದಷ್ಟು ನೋವು ಕಂಡರೂ ನೀನು
ನನ್ನಲ್ಲಿ ತೀರದಷ್ಟು ಸಂತಸ ತಂದೆ ನೀನು..
ಅತ್ತಾಗ ಲಾಲಿಜೋ ಎಂದು
ದಿನಪೂರ್ತಿ ಹಾಡಿದೆ ನೀನು..
ಸೋತಾಗ ಗೆದ್ದೇಗೆಲ್ಲುವೆ ಎಂದು
ಜೀವನಸ್ಫೂರ್ತಿ ತುಂಬಿದೆ ನೀನು..
ನಿನ್ನೆದೆಯ ಹಾಲಲಿ ಪ್ರೇಮಾಮೃತವ ಬೆರೆಸಿದೆ ನೀನು
ನಿನಗಾಗಿ ಈದೇಹದ ರಕ್ತ ಎಷ್ಟು ಹರಿಸಿದರೂ ತೀರದು ನಾನು..
ನಿನ್ನ ಬೇಕುಬೇಡವೆಲ್ಲ ನನಗಾಗಿ ಮುಡಿಪಾಗಿಟ್ಟೆ ನೀನು
ನಿನ್ನ ನಗುವಿಗಾಗಿ ಪ್ರಾಣ ಕೊಟ್ಟರೂ ಸಾಲದು ನಾನು..

ನಿನ್ನ ಕರುಣಾಸಾಗರದಲ್ಲಿ ತೇಲಿದ
ನಾನೇ ಕೋಟಿ ಕೋಟಿ ಸಿರಿವಂತ..
ನಿನ್ನ ಮಮತೆಯ ಮುಗಿಲಲಿ ಮಿನುಗಿದ
ನನಗೆ ಬೇಡ ಇನ್ಯಾವ ಭಗವಂತ..
ಕೋಟಿ ನಕ್ಷತ್ರಗಳ ಬೆಳಕು ಅಮ್ಮ
ಜೀವಕೋಟಿಗೆ ಬಂಗಾರದ ಬದುಕು ನೀಡುವಳು ಅಮ್ಮ..
ಕಂದನು ಎಂತವನಾಗಿರಲಿ,ಎಲ್ಲೆ ಇರಲಿ
ಅಮ್ಮನ ಪ್ರೀತಿ ಬದಲಾಗದು ಈ ಜಗದಲ್ಲಿ..
ಈ ಭೂಮಿ ಆಗಿರುವುದು ನಾಕ
ಈ ಅಮ್ಮ ಇರುವ ತನಕ
ಈ ಅಮ್ಮ ಇರುವ ತನಕ...

- ಸುರೇಶ್ ಟಿ ವಿ

09 Feb 2018, 08:39 am

ಒಪ್ಪಿದ ಹೃದಯ

ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..

ಹೇಗೆ ಕಳೆಯಲಿ ನಿನ್ನ ಸನಿಹವಿಲ್ಲದ ಈ ಸಂಜೆಯ
ಬಿರಿದ ಮನದಲಿ ಒಮ್ಮೆ ಬಂದು ನೆಲೆಸೆಯಾ
ಕಣ್ಣಲಿ ಬಚ್ಚಿಟ್ಟು ಕಾಪಿಡುವೆ ಒಮ್ಮೆ ಬಾರೆಯಾ
ಕೇಳೆ ಚೆಲುವೆ, ನಿನ್ನ ಜೊತೆಗೆ ಇರುವೆ ಎಂದಿಗೂ ಎಂದೆಂದಿಗೂ

ಕಣ್ಣಿನ ರೆಪ್ಪೆಯು ಸೋತಿದೆ ಕನಿಕರಿಸೆಯಾ
ಇರುಳೆಲ್ಲ ಹಗಲಾಗಿದೆ ಕೇಳುತ ನಿನ್ನ ಕನವರಿಕೆಯಾ
ಹಾಡಿದೆ ನಿನ್ನಯ ಒಲವಿನ ಕವಿತೆಗೆ ಈ ಹೃದಯ
ಬಾ ಒಲವೇ ಈ ಮನದಿ ಕಟ್ಟಿರುವೆ ನಿನಗಾಗಿ ಗುಡಿಯಾ..

ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..

-ಲಕ್ಷ್ಮೀಕಾಂತ್

- ಲಕ್ಷ್ಮೀಕಾಂತ್ ಎಲ್ ವಿ

08 Feb 2018, 10:22 pm

ಮಿಂಚುಳ್ಳಿಯ ಮಿಂಚು

ಕತ್ತಲೊಳಗೊಂದು ಮಿಂಚುಳ್ಳಿ
ಬಂದು ಬೆಳಕೊಂದ ಬಿರುತ್ತ
ನಾನೆ ಬೆಳದಿಂಗಳು ಎಂದು
ಬಾನೆಲ್ಲ ಹಾರಾಡುತ್ತಿದೆ ರೆಕ್ಕೆ ಬಿಚ್ಚಿ

ಬೊಗಸೆಯಲ್ಲಿ ಹಿಡಿದು ಬಚ್ಚಿಟ್ಟರೆ
ಬೆಳಂದಿಗಳ ಅಂದವು ಮರೆಯಾಗಿ
ಕತ್ತಲು ಮುಡುವುದೆನೂ
ಚಂದ್ರನ ಅಂದವು ಮರೆಯಾಗುವುದೆನು

ಪುಟ್ಟ ಮಿಂಚುಳ್ಳಿಯ ಸಣ್ಣದೊಂದು
ಇಡೆರದ ಬಯಕೆ ಇಡೆರಿಸುವ
ಮನಸೆಕೋ ಬೆಳಂದಿಗಳಿಗೆ ಇಲ್ಲ

ಮಿಚುಳ್ಳಿಯ ಮಿಂಚು ಮಿನು ಮಿನುಗುತ
ಹಾರಾಡುತಿದೆ ನಮ್ಮನೆ ಅಂಗಳದಲ್ಲಿ
ಆ ಬೆಳಂದಿಗಳ ಅಂದಕೆ ತಾನೆನು ಸರಿ ಸಾಟಿ ಎಂದು...................

- ರಾಗಸಿರಿ....

08 Feb 2018, 09:34 pm

ಮೌನ ರಾಗ

ಬದಲಿ ಹೃದಯ ಬೇಕು ನನಗೆ
ನೀನು ಬಿಟ್ಟು ಹೋದ ಸಲಿಗೆ
ಕೊನೆಯ ಮನೆಯ ಅಂಗಳದಲ್ಲಿ
ಒಲವ ಬಯಸೋ ಪಾಪಿ ನಾನು.....
ನಕಲಿ ಕನಸ ಕಂಡು ಮನಸು
ಅಸಲಿ ಹೆಸರ ಮರೆತೇ ಹೋಯ್ತು
ಚಿಗುರು ಮರದ ಎಲೆಗಳ ಊರಲೀ
ನಗುವ ತೊರೆದ ದಾಸ ನಾನು.....
###ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

08 Feb 2018, 08:37 am

ಅಮ್ಮ

ನೀನೆಷ್ಟೇ ಕಲಿತರು
ನಮಗೆಂದೆ ಮೀಸಲು
ಇಹುದೊಂದು ಕಾಯಕವು
ಪಾಕಶಾಲೆಯ ಹೊಣೆಗಾರಿಕೆಯು
ಎನ್ನಲು ನನ್ನವ್ವನಂದು
ಕುದಿಯಿತು ನನ್ನೊಳಗಿನ ರಕ್ತವು
ಆ ಅಬಲೆಯ ವೇದನೆ
ಹರಿಯದೆ ಮಾಡಿದೆನೆ
ಬಂದೀಖಾನೆಯಿಂದ ವಿಮುಕ್ತಳಾಗುವ ಶಪಥ
ನನ್ನೀ ಪಯಣದಲ್ಲಿ
ಕಣ್ಣೀರ ಕಡಲಿನಲ್ಲಿ
ಏನಾಗಿಹೆನೆಂದು ಚಿಂತಿಸಲಿಲ್ಲಿ
ತಿಳಿಯಿತು ತಡವಾಗಿಂದು
ನಾನೊಂದು ಕೈಗೊಂಬೆಯೆಂದು

ಜಪಿಸುತಿದ್ದೆನು ನಾನಂದು
ಉದ್ದರಿಸುವೆನು ಜಗವನೆಂದು
ಕಂಡ ಕಂಡ ದೈವಗಳಿಗೆ
ಆಸರೆ ನಾನಾಗುವೆನೆಂದು
ಶತಕೋಟಿ ಜೀವರಾಶಿಗಳಿಗೆ
ಆಶ್ರಯ ನೀಡಿ ಆದರಿಸುವ ದೇವನಿಗೆ
ನಾನಾಸರೆಯೇ............?

- ಶಕುಂತಲಾ

07 Feb 2018, 04:43 pm

ನಮ್ಮ ಸುಭಾಷ್ ಚಂದ್ರ ಬೋಸ್

ಅಪ್ರತಿಮ ದೇಶಪ್ರೇಮಿ
ನಮ್ಮ ಸುಭಾಷ್ ಚಂದ್ರ ಬೋಸ್..
ರಣವಿಕ್ರಮ ವೀರ ಸೇನಾನಿ
ನಮ್ಮ ಸುಭಾಷ್ ಚಂದ್ರ ಬೋಸ್..
ಅಗ್ರಗಣ್ಯ ಕ್ರಾಂತಿಕಾರಿ
ನಮ್ಮ ಸುಭಾಷ್ ಚಂದ್ರ ಬೋಸ್..
ಜನಮಾನ್ಯ ನೇತಾಜಿ
ನಮ್ಮ ಸುಭಾಷ್ ಚಂದ್ರ ಬೋಸ್.." ಪ "

ದೇಶದ ಮುಂದೆ ಐಸಿಎಸ್ ಹುದ್ದೆ ಕೇವಲ ಎಂದು
ದೇಶ ಸೇವೆ ನನಗೆ ಸಕಲ ಎಂದು..
ಕಣ್ಣಲ್ಲಿ ಸ್ವಾತಂತ್ರ್ಯದ ಕನಸು ಕಂಡು
ಗಾಂಧಿಯವರ ಅಹಿಂಸಾ ತತ್ವ ಬೇಡ ಎಂದು..
ಮನದಲ್ಲಿ ದೇಶಭಕ್ತಿ ತುಂಬಿ ಕೊಂಡು
ಸ್ವಾತಂತ್ರ್ಯಕ್ಕಾಗಿ ಸಂಘರ್ಷ ತತ್ವ ಅಸ್ತ್ರ ಮಾಡಿಕೊಂಡು..
ಸಿಂಹ ಸ್ವಪ್ನವಾಗಿ ಬ್ರಿಟಿಷ್ರ ಹುಟ್ಟಡಗಿಸಲು ಹುಟ್ಟಿ ಬಂದರೋ.....""

ಬ್ರಿಟಿಷ್ರ ಬಂಧನದಿಂದ ತಪ್ಪಿಸಿಕೊಂಡು
ದೇಶವಿದೇಶಗಳ ಸಹಾಯ ಪಡೆದುಕೊಂಡು..
ಐಎನ್ಎ ಸೈನ್ಯದ ನಾಯಕತ್ವ ವಹಿಸಿಕೊಂಡು
ದೆಹಲಿ ಚಲೋ ಎಂದು ಗರ್ಜಿಸಿ ಕೊಂಡು..
ಹೆಬ್ಬುಲಿಯಂತೆ ಮತ್ತೆ ನುಗ್ಗಿ ಬಂದರೋ
ಬಿಳಿಯ ದೊರೆಗಳ ಎದೆಯಲ್ಲಿ ಭಯವ ತಂದರೋ..." "

ನರನಾಡಿಯಲ್ಲಿ ಹೋರಾಡುವ ಹುಮ್ಮಸ್ಸು ತುಂಬಿ ಕೊಂಡು..
ರಕ್ತ ಕೊಡು ನನಗೆ ನೀನು ಎಂದು
ಸ್ವಾತಂತ್ರ್ಯ ಕೊಡುತ್ತೇನೆ ನಿನಗೆ ನಾನು ಎಂದು..
ಜೈಹಿಂದ್ ಎಂದು ಘೋಷಣೆ ಮೊಳಗಿಸಿಕೊಂಡು
ಬಿಳಿಯರ ರುಂಡ ಚೆಂಡಾಡಿದರು ನೋಡು..
ಮಾತೃಭೂಮಿಯಲ್ಲಿ ತ್ರಿವರ್ಣ ಧ್ವಜವ ಹಾರಿಸಿದರು ನೋಡು
ಭಾರತಿಯರ ಹೃದಯದಲ್ಲಿ ಅಮರರಾದರೂ ನೋಡು..." "

- ಸುರೇಶ್ ಟಿ ವಿ

07 Feb 2018, 09:11 am

ಅಮ‌ರ‌ ಪ್ರೇಮ‌ದ‌.....

ಹಕ್ಕಿಯೊಂದು ಹಾರಿ ಬಂದು ಎದೆಯ‌ ಮೇಲೆ ಕುಳಿತು ಹಾಡಿತು ಒಲ‌ವಿನ‌ ರಾಗ‌ದ‌ಲಿ
"ನೀನೆ ನ‌ನ್ನ‌ ಒಲ‌ವಿನ‌ ತಾರೆ
ನ‌ನ್ನ‌ ಚ‌ಲುವಿನ‌ ಒಲ‌ವ‌ ಧಾರೆ
ಮಿನುಗುವ‌ ದೀಪ‌ದ‌ ಹೊಳೆವ‌ ಜ್ವಾಲೆ
ಎಂದು ಮುಗಿಯ‌ದ‌ ಕಾವ್ಯ‌ ಮಾಲೆ
ಕ‌ಡ‌ಲ‌ ಅಲೆಯ‌ ಮೇಲ‌ರ‌ಳಿದ‌ ಚಿತ್ತಾರ ಕ‌ಲೆ
ನಾ ನಿನ‌ಗೆ ನೀ ನ‌ನ‌ಗೆ
ನ‌ಮ‌ದೆಂದು ಅಳಿಯದ ಗಂದ‌ರ್ವ‌ಗಾನ‌ದ‌
ಸ‌ಖೀಗೀತೆಯ‌ ಸುಖ‌ದ‌ ಅಮ‌ರ‌ ಪ್ರೇಮ‌ದ‌ ಕ‌ಥನ"
ಒಮ್ಮೆ ಹಾಗೇನುತ‌ ಒಮ್ಮೆ ಹೀಗೆನುತ
ಒಮ್ಮೆ ಮೇಲೇರಿ ಮ‌ತ್ತೋಮ್ಮೆ ಕೆಳ‌ಗಿಳಿದು
ಅತ್ತ‌ ಇತ್ತ‌  ಸುತ್ತ‌ ಮುತ್ತ‌ ಮೇರೆ ಮೀರುವ‌
ಸ‌ರಿಸಾಟಿಯಿಲ್ಲ‌ದ‌ ಹಾರಾಟ‌ದ‌ ಕ‌ನ‌ಸು ನಿನ‌ದು
ನೋವೊ ನ‌ಲಿವೊ ಕ‌ಷ್ಟ‌ವೊ ನ‌ಷ್ಟ‌ವೊ
ಇಷ್ಟ‌ಪ‌ಟ್ಟು ಕ‌ಟ್ಟಿಕೊಂಡ‌ ಬ‌ದುಕು ನ‌ನ‌ದು
ನೀನೊ ಪ್ರ‌ಕ‌ೃತಿಯ ‌ಸು‍ಂದ‌ರ‌ ಕ‌ನ‌ಸು
ನ‌ನ‌ದೊ ಸುಡುಭೂಮಿಯ‌ ಕ‌ಡುಮುನಿಸು
ನ‌ಮ‌ದಲ್ಲ‌ ಅಮ‌ರ‌ ಪ್ರೇಮ‌ದ‌ ಕ‌ಥೆ
ನ‌ಮ‌ದೆಂದು ನ‌ಲ್ಮೆಯ‌ ಸ್ನೆಹ‌ದ‌ ವ್ಯ‌ಥೆ

- ಶಶಿಧರ ಹೆಚ್ ಎನ್

06 Feb 2018, 10:53 pm

ದಿನ ನಿತ್ಯದ ಜಂಜಾಟ

ನಿಂತಲ್ಲಿ-ಕುಂತಲ್ಲಿ ಚಿಂತೆ.!
ಹೋದಲ್ಲಿ-ಬಂದಲ್ಲಿ ಗಾಬರಿ.!!
ಎದ್ದಲ್ಲಿ-ಬಿದ್ದಲ್ಲಿ ಆಲಸ್ಯ.!!!
ಗೆದ್ದಲ್ಲಿ-ಕದ್ದಲ್ಲಿ ತೋರ್ಪಡಿಕೆ.!!!!

ಒಂದರಗಳಿಗೆಯ ಸಿಟ್ಟು.!
ಒಂಚೂರಿಲ್ಲದ ತಾಳ್ಮೆ.!!
ತಟಗಿಲ್ಲದ ಸಹನೆ.!!!
ತಡಬಡಿಕೆಯ ಮೌನ.!!!!

ಮುಗುಚಿದ ಮನಸ್ಸು.!
ತೇದಕಿದ ಬುದ್ಧಿ.!!
ಮಿದುಕಿನ ಹೃದಯ.!!!
ಕೆದಕುವ ವಿಚಾರ.!!!!

- ಆರ್ ಎಸ್ ಸುಗ್ಗಿ.

06 Feb 2018, 08:21 pm