ಕಣ್ಣೊಳಗೆ ಅವಿತು ಇಣುಕುತಿದೆ
ಕಂಬನಿಯ ಸಾಲೋಂದು
ಮನಸೋಳಗೆ ಅವಿತು ಮನೆ
ಮಾಡಿಬಿಟ್ಟಿದೆ ಮನೆಯ ತುಂಬೆಲ್ಲ
ನೊವೂಗಳ ಹೋಳೆಯೊಂದು
ತಾನು ಅಲ್ಲಿ ಇರಲಾಗದೆ
ಹೊರಗೆ ಬರಲೆ ಎಂದು
ಇಣುಕಿ ಇಣುಕಿ ನೋಡುತಿದೆ
ನನ್ನ ಕಣ್ಣಲ್ಲಿ ನಾ ಹೇಳಬೆಕೆಂದಿದೆ
ಒಂದೆ ಒಂದು ಮಾತೆಂದು
ಬಂದು ಬಿಡೂ ಹೊರಗೆ ಎಂದು.....
ನನಗಲ್ಲಿ ಜಾಗವಿಲ್ಲ ಹೋರಗಿನ ಲೋಕಕ್ಕೆ
ನಾ ಬಂದು ಬಿದ್ದು ಬಿಡಲೆ ಎಂದು
ಕಣ್ಣಲ್ಲೆ ತಿವಿಯುತಿದೆ......ಕಣ್ಣೋಳಗಿನ
ಕಂಬನಿಯೊಂದು.......
ಬಿಂದು ಬಿಂದು ಮಳೆ ಬಿದ್ದು ಭೂಮಿ ಆಯ್ತು ಬಂಗಾರ...
ಬಾನು ಭೂಮಿಯ ಮುತ್ತಿಡಲು ಮಳೆ ಒಂದೇ ಆಕಾರ..
ಎಷ್ಟು ಚಂದ ಮಣ್ಣು ವಾಸನೆ
ಮಳೆ ಹನಿ ಬಿದ್ದೊಡನೆ..
ಎಂತಾ ಸೆಳೆತ ಧರೆಯ ನರ್ತನೆ
ಮಳೆ ನೀರು ಕಂಡೊಡನೆ.....
####ಕೆ.ಜೆ.ಎಸ್.ಗೌಡ್ರು.ಹುಣಸೂರು.
ಅಮ್ಮ ಅಮ್ಮ ನನ್ನಮ್ಮ
ನಾನು ಉಸಿರಾಡುವ ಉಸಿರು ನೀನು..
ಅಮ್ಮ ಅಮ್ಮ ನನ್ನಮ್ಮ
ನಾನು ಪೂಜಿಸುವ ದೇವರು ನೀನು..
ಕೋಟಿ ಜನ್ಮ ಪಡೆದರೂ
ನಿನ್ನ ತ್ಯಾಗ ಮರೆಯೋಕ್ಕಾಗಲ್ಲ..
ಮುಕ್ಕೋಟಿ ದೇವರಲ್ಲಾ
ನಿನ್ನ ಪ್ರೀತಿಗೆ ಬೆರಗಾಗಿ ಕೈಮುಗಿದು ನಿಂತರಲ್ಲ..
ಬಾಳಲ್ಲಿ ಆಗಸದಷ್ಟು ನೋವು ಕಂಡರೂ ನೀನು
ನನ್ನಲ್ಲಿ ತೀರದಷ್ಟು ಸಂತಸ ತಂದೆ ನೀನು..
ಅತ್ತಾಗ ಲಾಲಿಜೋ ಎಂದು
ದಿನಪೂರ್ತಿ ಹಾಡಿದೆ ನೀನು..
ಸೋತಾಗ ಗೆದ್ದೇಗೆಲ್ಲುವೆ ಎಂದು
ಜೀವನಸ್ಫೂರ್ತಿ ತುಂಬಿದೆ ನೀನು..
ನಿನ್ನೆದೆಯ ಹಾಲಲಿ ಪ್ರೇಮಾಮೃತವ ಬೆರೆಸಿದೆ ನೀನು
ನಿನಗಾಗಿ ಈದೇಹದ ರಕ್ತ ಎಷ್ಟು ಹರಿಸಿದರೂ ತೀರದು ನಾನು..
ನಿನ್ನ ಬೇಕುಬೇಡವೆಲ್ಲ ನನಗಾಗಿ ಮುಡಿಪಾಗಿಟ್ಟೆ ನೀನು
ನಿನ್ನ ನಗುವಿಗಾಗಿ ಪ್ರಾಣ ಕೊಟ್ಟರೂ ಸಾಲದು ನಾನು..
ನಿನ್ನ ಕರುಣಾಸಾಗರದಲ್ಲಿ ತೇಲಿದ
ನಾನೇ ಕೋಟಿ ಕೋಟಿ ಸಿರಿವಂತ..
ನಿನ್ನ ಮಮತೆಯ ಮುಗಿಲಲಿ ಮಿನುಗಿದ
ನನಗೆ ಬೇಡ ಇನ್ಯಾವ ಭಗವಂತ..
ಕೋಟಿ ನಕ್ಷತ್ರಗಳ ಬೆಳಕು ಅಮ್ಮ
ಜೀವಕೋಟಿಗೆ ಬಂಗಾರದ ಬದುಕು ನೀಡುವಳು ಅಮ್ಮ..
ಕಂದನು ಎಂತವನಾಗಿರಲಿ,ಎಲ್ಲೆ ಇರಲಿ
ಅಮ್ಮನ ಪ್ರೀತಿ ಬದಲಾಗದು ಈ ಜಗದಲ್ಲಿ..
ಈ ಭೂಮಿ ಆಗಿರುವುದು ನಾಕ
ಈ ಅಮ್ಮ ಇರುವ ತನಕ
ಈ ಅಮ್ಮ ಇರುವ ತನಕ...
ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..
ಹೇಗೆ ಕಳೆಯಲಿ ನಿನ್ನ ಸನಿಹವಿಲ್ಲದ ಈ ಸಂಜೆಯ
ಬಿರಿದ ಮನದಲಿ ಒಮ್ಮೆ ಬಂದು ನೆಲೆಸೆಯಾ
ಕಣ್ಣಲಿ ಬಚ್ಚಿಟ್ಟು ಕಾಪಿಡುವೆ ಒಮ್ಮೆ ಬಾರೆಯಾ
ಕೇಳೆ ಚೆಲುವೆ, ನಿನ್ನ ಜೊತೆಗೆ ಇರುವೆ ಎಂದಿಗೂ ಎಂದೆಂದಿಗೂ
ಕಣ್ಣಿನ ರೆಪ್ಪೆಯು ಸೋತಿದೆ ಕನಿಕರಿಸೆಯಾ
ಇರುಳೆಲ್ಲ ಹಗಲಾಗಿದೆ ಕೇಳುತ ನಿನ್ನ ಕನವರಿಕೆಯಾ
ಹಾಡಿದೆ ನಿನ್ನಯ ಒಲವಿನ ಕವಿತೆಗೆ ಈ ಹೃದಯ
ಬಾ ಒಲವೇ ಈ ಮನದಿ ಕಟ್ಟಿರುವೆ ನಿನಗಾಗಿ ಗುಡಿಯಾ..
ಕಾರಣ ತಿಳಿಸದೆ ಒಪ್ಪಿದೆ ಈ ಹೃದಯ
ಕಾದಿರುವೆ ಕಣ್ಮುಚ್ಚದೆ ನೀ ಬರುವ ದಾರಿಯ
ಬರುವೆಯಾ ಓ ಜೀವವೇ ನೀನೇ ನನ್ನ ಒಲವು
ನಡೆಸುತ ಸವೆಸುತ ಸಾಗುವ ಈ ಬಾಳ ಹಾದಿಯ..
ಬದಲಿ ಹೃದಯ ಬೇಕು ನನಗೆ
ನೀನು ಬಿಟ್ಟು ಹೋದ ಸಲಿಗೆ
ಕೊನೆಯ ಮನೆಯ ಅಂಗಳದಲ್ಲಿ
ಒಲವ ಬಯಸೋ ಪಾಪಿ ನಾನು.....
ನಕಲಿ ಕನಸ ಕಂಡು ಮನಸು
ಅಸಲಿ ಹೆಸರ ಮರೆತೇ ಹೋಯ್ತು
ಚಿಗುರು ಮರದ ಎಲೆಗಳ ಊರಲೀ
ನಗುವ ತೊರೆದ ದಾಸ ನಾನು.....
###ಕೆ.ಜೆ.ಎಸ್.ಗೌಡ್ರು.ಹುಣಸೂರು.
ಅಪ್ರತಿಮ ದೇಶಪ್ರೇಮಿ
ನಮ್ಮ ಸುಭಾಷ್ ಚಂದ್ರ ಬೋಸ್..
ರಣವಿಕ್ರಮ ವೀರ ಸೇನಾನಿ
ನಮ್ಮ ಸುಭಾಷ್ ಚಂದ್ರ ಬೋಸ್..
ಅಗ್ರಗಣ್ಯ ಕ್ರಾಂತಿಕಾರಿ
ನಮ್ಮ ಸುಭಾಷ್ ಚಂದ್ರ ಬೋಸ್..
ಜನಮಾನ್ಯ ನೇತಾಜಿ
ನಮ್ಮ ಸುಭಾಷ್ ಚಂದ್ರ ಬೋಸ್.." ಪ "
ದೇಶದ ಮುಂದೆ ಐಸಿಎಸ್ ಹುದ್ದೆ ಕೇವಲ ಎಂದು
ದೇಶ ಸೇವೆ ನನಗೆ ಸಕಲ ಎಂದು..
ಕಣ್ಣಲ್ಲಿ ಸ್ವಾತಂತ್ರ್ಯದ ಕನಸು ಕಂಡು
ಗಾಂಧಿಯವರ ಅಹಿಂಸಾ ತತ್ವ ಬೇಡ ಎಂದು..
ಮನದಲ್ಲಿ ದೇಶಭಕ್ತಿ ತುಂಬಿ ಕೊಂಡು
ಸ್ವಾತಂತ್ರ್ಯಕ್ಕಾಗಿ ಸಂಘರ್ಷ ತತ್ವ ಅಸ್ತ್ರ ಮಾಡಿಕೊಂಡು..
ಸಿಂಹ ಸ್ವಪ್ನವಾಗಿ ಬ್ರಿಟಿಷ್ರ ಹುಟ್ಟಡಗಿಸಲು ಹುಟ್ಟಿ ಬಂದರೋ.....""
ಬ್ರಿಟಿಷ್ರ ಬಂಧನದಿಂದ ತಪ್ಪಿಸಿಕೊಂಡು
ದೇಶವಿದೇಶಗಳ ಸಹಾಯ ಪಡೆದುಕೊಂಡು..
ಐಎನ್ಎ ಸೈನ್ಯದ ನಾಯಕತ್ವ ವಹಿಸಿಕೊಂಡು
ದೆಹಲಿ ಚಲೋ ಎಂದು ಗರ್ಜಿಸಿ ಕೊಂಡು..
ಹೆಬ್ಬುಲಿಯಂತೆ ಮತ್ತೆ ನುಗ್ಗಿ ಬಂದರೋ
ಬಿಳಿಯ ದೊರೆಗಳ ಎದೆಯಲ್ಲಿ ಭಯವ ತಂದರೋ..." "
ನರನಾಡಿಯಲ್ಲಿ ಹೋರಾಡುವ ಹುಮ್ಮಸ್ಸು ತುಂಬಿ ಕೊಂಡು..
ರಕ್ತ ಕೊಡು ನನಗೆ ನೀನು ಎಂದು
ಸ್ವಾತಂತ್ರ್ಯ ಕೊಡುತ್ತೇನೆ ನಿನಗೆ ನಾನು ಎಂದು..
ಜೈಹಿಂದ್ ಎಂದು ಘೋಷಣೆ ಮೊಳಗಿಸಿಕೊಂಡು
ಬಿಳಿಯರ ರುಂಡ ಚೆಂಡಾಡಿದರು ನೋಡು..
ಮಾತೃಭೂಮಿಯಲ್ಲಿ ತ್ರಿವರ್ಣ ಧ್ವಜವ ಹಾರಿಸಿದರು ನೋಡು
ಭಾರತಿಯರ ಹೃದಯದಲ್ಲಿ ಅಮರರಾದರೂ ನೋಡು..." "