Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪತ್ರಕತ೯ರ ಲೇಖನಿ

ಪತ್ರಕತ೯ರ ಲೇಖನಿಯದು
ಖಡ್ಗಕ್ಕಿಂತಲೂ ಬಲೂ ಚೂಪು
ಪ್ರತಿಯೊಂದು ಪದಗಳಲೂ ಮೂಡಿಸುವುದದು ಸಮಾಜೀಕ
ಕಳಕಳಿಯ ಚಾಪೂ..

ಲೇಖನಿಯಲ್ಲಡಗಿಹುದು ಅಗೋಚರ ಶಕ್ತಿ
ಬರವಣಿಗೆಯ ಶೈಲಿಯಲ್ಲಡಗಿದೆ ಅದರ ಯುಕ್ತಿ
ಕೊಡಿಸುವುದದು ಎಲ್ಲಾ ಜನಗಳಿಗೆ ದಬ್ಬಾಳಿಕೆಯಿಂದ ಮುಕ್ತಿ
ಲೇಖನಿ ಮೂಡಿಸುವುದು ಜನ ಮಾನಸದಲಿ
ದೇಶ ಭಕ್ತಿ

ಸತ್ಯದಿಂದ ಆಸತ್ಯವ ಕೊಂದು
ಧಮ೯ದಿಂದ ಅಧಮ೯ವ ಕೊಂದು
ಸಂಸ್ಕೃತಿಯಿಂದ ಸಾಹಿತ್ಯ ತಂದು
ದೇಶದ ಜನ ಮನಗಳ ನ್ಯಾಯ ಕಾಯುವ ಲೇಖನಿಯದು
ದೇಶ ಕಾಯುವ ವೀರ ಸೈನಿಕನಂತೆ
ಪತ್ರಕತ೯ರ ಲೇಖನಿಯದು

ಯಾವ ಆಸೆ ಆಮಿಷಗಳಿಗೂ ಲೇಖನಿಯ ತಲೆ ಕೊಡದಿರಿ
ಅದನ್ನು ಯಾರ ಯಾವುದರ ಗುಲಾಮರನ್ನಾಗಿಯೂ ಮಾಡದಿರಿ
ಸತ್ಯವ ಎತ್ತಿ ಹಿಡಿಯುವ ಸತ್ವಯುತ
ಖಡ್ಗವೆಂದೆ ಭಾವಿಸಿರಿ
ಅದು ದೇಶದ ಐದನೇ ಆಧಾರ ಸ್ತಂಭವೆಂಬುದ ಮರೆಯದಿರಿ

- Bhagya Girish

19 Jan 2018, 12:53 pm

ಕರುನಾಡು ನನ್ನ ಉಸಿರ ಗೂಡು

ಕರುನಾಡಿನ ಕಣ್ಮಣಿಗಳೇ
ನಾಡದೇವಿಯ ಒಡಲ ಕುಡಿಗಳೇ
ಹಾಡಿ ಐಕ್ಯತೆಯ ಹಾಡ
ಐಕ್ಯತೆಯಲಿ ಬಲವಿದೆ ನೋಡ

ಯಾವ ಭಾಷೆಯು ಬಂದರು
ನಾಡ ನುಡಿಯು ನಲುಗದು
ಯಾರೇ ಕತ್ತಿ ಮಸೆದರು
ನಾಡ ಪ್ರೇಮ ಬಗ್ಗದು

ಎಲ್ಲಿ ನೋಡಿದರಲ್ಲಿ ಚೆಲುವು
ಕೈಬೀಸಿ ಕರೆಯುವ ಒಡನಾಡಿಗಳ ಸ್ನೇಹವೂ
ಜಾತಿ ಧಮ೯ವ ಸುಟ್ಟು ಬಂದಿಹ
ನಾಡ ಪ್ರೇಮದ ಕುಸುಮವು
ಹಿರಿಯ ಕಿರಿಯರೆನ್ನದೆ
ಪ್ರೀತಿ ತೋರುವ ತಾಯ್ ನೆಲವು

ನನ್ನ ನಾಡು ಕರುಣೆಯ ಬೀಡು
ನಾಡಿನ ತುಂಬಾ ಒಲವಿದೆ ನೋಡು
ಕನ್ನಡ ನುಡಿಯ ಸವಿಯನು ಉಂಡು
ತಾಯ್ನಾಡಿನಲ್ಲಿ ಹರಿಯುವ ನದಿಗಳ ಸಂಭ್ರಮ ಕಂಡು
ನೀನು ಅಚ್ಚರಿ ಪಡುವೆ ಏನು
ಕನ್ನಡವದುವೇ ಸವಿಜೇನು

ಹಚ್ಚ ಹಸಿರಿನ ವನರಾಶಿ
ನಡುವೆ ಕುಳಿತರೆ ಪರಿಮಳ ಸೂಸಿ
ಪರಿಶುದ್ದ ಗಾಳಿಯು ಬರುವುದು
ನಿನ್ನನ್ನೆ ಹರಸಿ
ಹೇಳುತಾ ಎಂದೂ ಕನ್ನಡ ಬಳಸಿ
ಎಂದೂ ಕನ್ನಡ ಉಳಿಸಿ

- Bhagya Girish

19 Jan 2018, 12:09 pm

ಕಾಲದೊಂದಿಗೆ ನನ್ನವಳು..

ಮುಂಜಾನೆಯ ಮುಸುಕಿನಲಿ
ಅರುಣೋದಯದ ವೇಳೆಯಲಿ
ನೆನಪಾಗುವಳು ಅವಳು..
ರವಿಮಾಮನ ತಿಳಿಕಿರಣದಲಿ
ಎಲೆಯ ಮೇಲೆ ಕುಳಿತು
ಕೈಜಾರಿ ಹೋದ ಮಂಜಿನಂತೆ..!
ಆ ಇಬ್ಬನಿಯಂತೆ..!

ಮಧ್ಯಾಹ್ನದ ಹೂತ್ತಿನಲಿ
ಸುಡುಬಿಸಿಲ ಬೇಗೆಯಲಿ
ನೆನಪಾಗುವಳು ಅವಳು..
ಅಲೆದಾಡಿ, ತಿರುಗಾಡಿ
ಬಳಲಿ ಬೆಂಡಾಗಿ ಬಾಯಾರಿದ ಮನಕೆ
ದಾಹ ನೀಗಿಸಲು ಬಂದ ಗಂಗೆಯಂತೆ..!
ನಮ್ ತುಂಗೆಯಂತೆ..!

ಸೂರ್ಯಾಸ್ತದ ಸಮಯದಲ್ಲಿ
ಇಳಿಬಿಸಿಲ ಹೊತ್ತಿನಲಿ
ನೆನಪಾಗುವಳು ಅವಳು..
ಹೆಂಡ ಕುಡಿದ ಹುಚ್ಚು ಕುದುರೆಯಂತೆ
ಬೀದಿ ಬೀದಿಯಲಿ ತಿರುಗಿ ದಣಿದ ದೇಹಕೆ
ಮುದ ನೀಡಲು ಬೀಸುವ ಗಾಳಿಯಂತೆ..!
ತಂಗಾಳಿಯಂತೆ..!

ಹುಣ್ಣಿಮೆಯ ರಾತ್ರಿಯಲಿ
ತಿಳಿಹಾಲ ಬೆಳಕಿನಲಿ
ನೆನಪಾಗುವಳು ಅವಳು..
ಹಠ ಮಾಡಿ ಅಳುತಿರುವ
ಕರುಳ ಬಳ್ಳಿಗೆ
ಚಂದ ಮಾಮನ ತೋರಿಸುತ
ಲಾಲಿಯನು ಹಾಡುತಾ
ಕೈತುತ್ತು ತಿನಿಸುತ್ತಾ
ರಮಿಸುವ ಆ ತಾಯಿಯಂತೆ...!
ಮಹಾ ಮಾಯಿಯಂತೆ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

19 Jan 2018, 12:07 pm

ಭಗೀರಥ ತಂದ ಗಂಗೆ

ಆಕಾಶ ಗಂಗೆಯನ್ನು
ಶಿವನ ಮುಡಿಗೆ ಬರುವಂತೆ ಮಾಡಿ
ಶಿವನ ಜಡೆಯಿಂದ ಭುವಿಗೆ ಬರಮಾಡಿ
ತನ್ನ ಬಂಧು ಭಾಂಧವರನ್ನುಳಿಸಿಕೊಂಡ ಭಗೀರಥ ತನ್ನ ಪರಿಶ್ರಮದ ಫಲವಾಗಿ
ಗಂಗೆಯ ಪಾವಿತ್ರ್ಯತೆಯ ಸಲುವಾಗಿ

ಆದರೆ ಅದೇ ಗಂಗೆ ಹರಿಯುತ್ತಿರುವಳು
ಕಲ್ಮಷ ತುಂಬಿದ ನೀರಿನ ಸೆಲೆಯಾಗಿ ಇಂದು
ರೋಗ ರುಜುನೆಗಳ ಹೋತ್ತು ತಂದು
ಸತ್ತ ಶವಗಳ ಸಂಸ್ಕಾರಕ್ಕೆಂದು ಬಂದು
ಜನಗಳೆಲ್ಲಾ ನಿತ್ಯ ಬಂದು ಮಿಂದು
ಗಂಗೆಯ ಕಲುಷಿತ ಮಾಡುವ ಜನಗಳ ಕಂಡು
ಮರುಗುತಿದೆ ಭಾರತಾಂಬೆಯ ಮನ
ಗಂಗೆಯ ವಾಸ್ತವ ಸ್ಥಿತಿಯ ಮನಗಂಡು

ಗಂಗೆಯ ಪಾವಿತ್ರ್ಯವನ್ನೂಳಿಸಲು ಶ್ರಮಿಸಬೇಕಿದೆ
ಮತ್ತೆ ಭಗೀರಥರಂತೆ ಪ್ರಯತ್ನಿಸಬೇಕಿದೆ
ಭಾರತ ಮಾತೆಯ ಮಕ್ಕಳಾಗಿ
ಸ್ವಚ್ಛತೆಯೋಂದಿಗೆ ಹೆಜ್ಜೆಯ ಹಾಕಬೇಕಿದೆ
ಗಂಗೆ ಪರಿಶುದ್ದವಾಗಿ ಹರಿಯುವಂತಹ
ಕೆಲಸಗಳ ಮಾಡಬೇಕಿದೆ
ಒಟ್ಟಾಗಿ ದೃಢ ವಿಶ್ವಾಸದಿ ದುಡಿಯಬೇಕಿದೆ
ಮತ್ತೋಮ್ಮೆ ದೇವಗಂಗೆಯ ಉಳಿಸಬೇಕಿದೆ

- Bhagya Girish

19 Jan 2018, 11:40 am

ಕಾಶೀ ವಿಧಿವಶ..

ಯಾತ್ರೆ ಮುಗಿಯಿತು, ಕಾಶೀ ನಿನ್ನದು..
ನೆನಪು ಮಾತ್ರ ಹಾಗೆ ಉಳಿಯಿತು..

ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ನೀನು..
ಏಕೆ, ಅರ್ಪಿಸಿದೆ ಚಿತ್ರರಂಗಕ್ಕೆ ನಿನ್ನನ್ನು..

ಇದು ಜೀವನವ ! ಜೀವನದ ಸತ್ಯವ ! ಸತ್ಯ ಘಟನೆ ಯ ಪ್ರತಿಬಿಂಬವ !

ಕಾಶೀ ನಿಮ್ಮ ವಿಧಿವಶ..
ಯಾರಿಗೆ ತಾನೇ ಸಂತೋಷ...

ಏಕೆ ಮೌನ ತಾಳಿದೆ, ಹೀಗೇಕೆ ಮೌನ ತಾಳಿದೆ..
ಆರೋಗ್ಯ ಸಮಸ್ಯೆಯನ್ನು ನೀವು ಯಾರಿಗೂ ತಿಳಿಸದೆ..
ನೀವೇಕೆ ಇಷ್ಟು ಬೇಗ ನಮ್ಮನ್ನ ಬಿಟ್ಟು ಇಹಲೋಕ ತ್ಯಜಿಸಿ ದೆ..


ಹೇ ಕಾಶೀನಾಥ..ನಿಜಕ್ಕೂ ನೀನೇ ಮನ್ಮಥ..
ನಟನೆಯಲ್ಲಿ ಹಾಸ್ಯ ತುಂಬಿ ನಟಿಸಿದ ಪರಿಣಿತ..

ಏಕೆ ಕಣ್ಮರೆಯಾದೆ ; ನೆನಪುಗಳನ್ನ ಮಾರ್ಗ ಮಧ್ಯೆ ಬಿಟ್ಟು ಹೋದೆ..

ಹುಟ್ಟಿ ಬಾ.. ಹುಟ್ಟಿ ಬಾ..
ಮತ್ತೊಮ್ಮೆ ಹುಟ್ಟಿ ಬಾ !
ಕರುನಾಡಲ್ಲಿ ಹುಟ್ಟಿ ಬಾ..ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸು ಬಾ!

ಕಳಚಿತು ಕಾಶೀ ಎಂಬ ದೊಡ್ಡ ಕಲೆಯ ಕೊಂಡಿ..
ಯಾರನ್ನೂ ಬಿಟ್ಟಿಲ್ಲ ಸಾವು ಎಂಬ ಬದುಕಿನ ಜಟಕಾ ಬಂಡಿ..

ಸಂತು..8197072636

- ಸಂತೋಷ್ ಹೆಚ್ ಆರ್

19 Jan 2018, 10:39 am

ಮನವೆಂಬ ಹಾದರಗಿತ್ತಿ..

ಮನವೆಂಬ ಹಾದರಗಿತ್ತಿಯೇ
ನಿಲ್ಲಿಸು ನಿನ್ನ ಹೊಲಸು ಚಾಳಿ
ಭವ ಬಂಧನಗಳಲಿಯೂ ಸೊಕ್ಕಿ
ಹೋಗಿರುವೆ ನೀ ಯಾರ ಮಾತ ಕೇಳಿ..?!

ಕಂಡ ಕಂಡ ಆಸೆ ಗಂಡರಿಗೆ
ಏಕೆ ನೀ ಸೆರುಗು ಹಾಸತಿ
ನಾನು ನನ್ನದು ನನ್ನಿಂದ ಎನ್ನುವ
ಅಂಹಮಿನ ಜೊತೆಜೊತೆಗೆ ನಿನ್ನ ದೊಸತಿ..!

ಮೋಹ ಮಿಂಡರೊಡಗೂಡಿ
ಬಂಡೆದ್ದು ಹೋಗಿದ್ದು ಯಾಕೆ..?
ತನವು ಅಳಿದು ಕಳೆಯ ಕಳೆದು
ತಮವೂ ಹರಿದು ಮಣ್ಣ ಮೆಟ್ಟುವೆ ಜೋಕೆ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

19 Jan 2018, 09:56 am

ನೆನಪುಗಳ ಬುತ್ತಿ

ಮನದಾಳದ ಭಾವಗಳು
ಮದುರ ಆ ನೆನೆಪುಗಳು
ಸಿಹಿ ಕಹಿಯ ಸಮ್ಮಿಲನದ
ಜೀವನದ ತಿರುವುಗಳು
ಕಾಡುತಿದೆ ಮನವನ್ನು
ಮರುಕಳಿಸಿ ನೆನಪುಗಳು

ಅನುಭವಿಸಿದ ನೋವುಗಳ
ಕಳೆದ ಸಂತೋಷದ ಕ್ಷಣಗಳ
ಕೈ ಜಾರಿದ ಕನಸ್ಸುಗಳ
ಕೈ ಹಿಡಿದ ಮನಸ್ಸುಗಳ
ಕಳೆದುಕೊಂಡದ್ದನ್ನ
ಪಡೆದು ಕೊಂಡದ್ದನ್ನ
ತನ್ನದೇ ಜೀವನದಲಿ ಬಂದು ಹೋದವರ
ನೆನೆದು ಮನ ನೋಂದು ಬಿಕ್ಕುತ್ತಿದೆ
ಕಣ್ಣಂಚಲಿ ಕಂಬನಿಯು ತಾ ಬಂದು
ಇಣುಕುತಿದೆ

ನೋವು ನಲಿವುಗಳೆಲ್ಲಾ..
ಒಟ್ಟಾಗಿ ಗುಟ್ಟಾಗಿ ಮನಮುಟ್ಟುವಂತಾಗಿ
ಬಿಡನೆಂದರೂ ಬೆಂಬಿಡದೆ,
ಗತ ಕಾಲದ ಜೀವನದ ಚಿತ್ರಪಟಗಳ
ಮತ್ತೋಮ್ಮೆ ಮನದಲ್ಲಿ ಮೂಡಿಸಲು
ನೆನಪಿನ ಅಲೆಗಳು ಜೀವನದ ಬುತ್ತಿಯ
ಹೋತ್ತು ತರುತಲಿವೆ
ಜೀವನವೆಂಬ ಈ ಕಡಲಿನ ಯಾನದಲಿ
ಬದುಕಿರುವೆನು ನಾ ನೆನಪುಗಳ ಜೋತೆಯಲಿ
ಒಬ್ಬಂಟಿಯಾಗಿ ಸಾಗುತಾ..ಈ ಬಾಳ ನೌಕೆಯಲಿ

- Bhagya Girish

19 Jan 2018, 09:56 am

ಓ ಮುದ್ದು ಗೊಂಬೆ

ನಿನ್ನ ಮೊಗದ ಅಂದ ನೋಡಲು ಬಲು ಚೆಂದ
ನೀ ನಗಲು ಬೀಳುವ ಆ ಗುಳಿ ನೋಡಲು ಬಲು ಚಂದ
ಓ ಮುದ್ದು ಗೊಂಬೆ ನೀನಿರಲು ಜೊತೆಯಲ್ಲಿ
ಗೆಲುವಿರುವುದು ಸದಾ ಜೊತೆಯಲ್ಲಿ
ನಿನ್ನ ಒಲವೆ ನನಗೆ ಜೇನ ಸಿಹಿಯು

- ರಘು

18 Jan 2018, 08:21 pm

ನನ್ನಾಸೆಯ ಕೂಸು......

ಓ ಪುಟ್ಟ ಕಂದ
ನಿನ್ನದೊಂದು ನಗುವೆ ಸಾಕು
ತನ್ನಲ್ಲ ನೋವ ಮರೆಯೊಕೆ
ಆ ನಗುವ ಕದ್ದು ಚಂದ್ರಲೋಕಕ್ಕೆ
ಕಳಿಸಿಬಿಡಲೇನೋ ಕಂದ ಬೆಳದಿಂಗಳಲ್ಲಿ
ಬೆಳಕೊಂದ ಚುಮ್ಮಿ ಅಂಗಳವೆಲ್ಲ ಸಿಂಗಾರ ಮಾಡಬೆಕಂತೆ.......
ಓ ಮುದ್ದು ಕಂದ
ನೀನ್ನ ತೊದಲು ಮಾತಿಗೆ
ಅಮ್ಮನೆದೆ ಆತುರಿಯುತಿದೆ
ಆ ಮುದ್ದಾದ ಮಾತೋಂದ
ಹಾರಾಡೋ ಹಕ್ಕಿಗಳೂರಿಗೆ
ಕಳಿಸಿಬಿಡಲೆನು ಅವುಗಳಿಗು
ನಿನ್ನಂತೆ ಮಾತಾಡುವ ಬಯಕೆಯಂತೆ.........
ಓ ಅಂದದ ಬಂಗಾರಿ
ನಿನ್ನ ತುಂಟಾಟ ಅಮ್ಮನಿಗೆ ಅದುವೆ
ಕೈತುಂಬ ಕೆಲಸ ನಿನ್ನ ತುಂಟಾಟವ
ದೇವಲೋಕಕ್ಕೆ ಕಳಿಸಿ ಬಿಡಲೇನು
ದೆವತೆಗಳಿಗೆ ಮಾಡಲು ಕೆಲಸಬೆಕಂತೆ..........
ಓ ಅಂದದ ಸಿಂಗಾರಿ
ನಿನ್ನ ಆಟ ಪಾಠಕ್ಕೆ ಅಮ್ಮನುಸಿರು
ಕಾಯುತಿದೆ ನಿನ್ನ ಆಟಪಾಠವ ಹೂವಗಳ
ಲೋಕಕ್ಕೆ ಕಳಿಸಿಬಿಡಲೆನು ಅವುಗಳಿಗೆ
ಆಟಪಾಠ ಕಲಿಯುವ ಆಸೆಯಂತೆ.......
ಓ ಚಿನ್ನಿ ವೈಯ್ಯಾರಿ
ನನ್ನಾಸೆಯೆ ಕೂಸು ನೀ ನಿನ್ನೆಲ್ಲ ಒಲವು
ನಿನ್ನಮ್ಮನಿಗು ಹೆಳಿಕೋಡುವೆಯ
ಅವಳಿಗು ನಿನ್ನಂತೆ ಆಗುವ ಬಯಕೆಯಂತೆ....

- ರಾಗಸಿರಿ....

18 Jan 2018, 12:47 pm

ನಿನ್ನ ತುಂಟಾಟ....

ಬೆಳಗಾಗುವ ತನಕ ಕಾದೆ ನಾ,,
ಕನಸಿನಲ್ಲಿ ನಿನ್ನ ತುಂಟತನ್ನವನ್ನು ಕಾಣಲು,
ಆದರೆ ನಿನ್ನ ನೆನಪುಗಳಲ್ಲಿ ನಾ ಜೊತೆಗೂಡಿ,
ಮಲಾಗುವುದೇ ಮರೆತೇ ನಾನು.....

- Abhilash M Ramesh

18 Jan 2018, 10:20 am