Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ ಕಲರವ

ಕನ್ನಡ ಕಲರವವೋ
ಇದು ಸುಂದರ ಲೋಕವೋ
ನೂತನ ಅನುಭವವೋ
ಎಲ್ಲಾ ಕವಿಗಳ ಸ್ವಗ೯ವೋ

ಕನ್ನಡ ಪದವ ಬಳಸಿ
ಕಾವ್ಯ ಸುಧೆಯ ಸುರಿಸಿ
ಕನ್ನಡ ತಾಯಿಯ ಸ್ಮರಿಸಿ
ನುಡಿಯ ನಮನ ಸಲ್ಲಿಸಿ

ಕವಿಗಳ ಮನಸ ಬೆಸೆದು
ಒಂದೆಡೆ ಎಲ್ಲರ ಸೆಳೆದು
ಸ್ನೇಹದ ಬಲೆಯ ಹೆಣೆದು
ಕಾವ್ಯ ಲೋಕದಲಿ ಮಿಂದು

ಕವಿ ಮನ ನಲಿಯುತಿದೆ ಇಂದು
ಕವನ ಮಳೆ ಸುರಿಸುತಲಿ ಬಂದು
ಹೇಳಿದೆ ಕನ್ನಡಿಗರೆಲ್ಲಾ ಒಂದು
ಈಗೆ ಇರಲಿ ಪ್ರೀತಿಯ ಬಂಧನವು
ಕನ್ನಡ ಕಲರವದಲಿ ಎಂದೂ
ಕನ್ನಡ ಕವನದಲಿ ಮುಂದೂ..

- Bhagya Girish

07 Jan 2018, 09:17 am

ಪ್ರೀತಿಯ ಪರಿ....

ನಿನ್ನ ಕಂಡು ಮನವಾಗಿದೆ ಸುಂದರ ಪತಂಗ
ಹರುಷದಿ ಮಿಡಿದಿದೆ ನನ್ನೀ ಭಾವ ತರಂಗ
ಏನೋ ನುಡಿದಿದೆ ಹೃದಯ ಪ್ರೀತಿಯ ಮೃದಂಗ
ಆಗು ಇನಿಯ ನೀ ನಾ ತಿಳಿಯದ ಅಂತರಂಗ
ಮಾತು ಮೌನದ ನಡುವೆ ನಡೆದಿದೆ ಮೌನದ ಚಿತ್ರಾಂಗ

- Jyothi

07 Jan 2018, 06:57 am

ಕನ್ನಡ...

"ಕನ್ನಡ!!!"
ಬರೀ ಮೂರು ಅಕ್ಷರಗಳ ಪದವಾಗಿರಬಹುದು
ಆದರೆ ಎಲ್ಲ ಕನ್ನಡಿಗರ ಉಸಿರಾಗಿರುವುದು.
ಕರ್ನಾಟಕದ ಮಾತೃ ಭಾಷೆ ಇದು
ಕೆಂಪು-ಹಳದಿ ಬಣ್ಣದ ಉಡುಪು ತೊಟ್ಟು ನಿಂತಿರುವುದು.
ಪಂಪ , ರನ್ನರಿಂದ ಹಿಡಿದು ಕುವೆಂಪು, ಬೇಂದ್ರೆಯರ ವರೆಗೆ
ಕವಿತೆ, ಕಾವ್ಯ, ಸಾಹಿತ್ಯದ ಭಂಡಾರ ತಂದಿರುವರು ಇಲ್ಲಿಯವರೆಗೆ.
ವಚನಗಳಿಗೆ ಜನ್ಮ ಕೊಟ್ಟಂತಹ ಭಾಷೆ ಇದು
ಎಂಟು ಬಾರಿ ಜ್ಞಾನಪೀಠ ಪಡೆದ ಸಾಧನೆ ಇದರದ್ದು .
ಈಗ ಕನ್ನಡವು ಎಲ್ಲೂ ಮರೆಯಾಗಿ ಕೂತಿದೆ
ಎಲ್ಲೂ ಒಂದು ಮೂಲೆಯಲಿ ಕಂಬಳಿ ಹೊದ್ದು ಮಲಗಿದೆ .
ಮಲಗಿರುವ ಕನ್ನಡವನ್ನು ಸ್ವಯಂಪೂರಕವಾಗಿ ಎಬ್ಬಿಸುವುದು ಅನ್ವಯ
ಕನ್ನಡ ಎಂಬ ಭಾಷೆ "" ಇತ್ತು ..."" ಎಂದು ಹೇಳುವ ಸಂದರ್ಭ ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಕಾರ್ಯ .
ಇಲ್ಲಿರುವ ಇತರ ಜನರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡೋಣ
" ಕನ್ನಡ್..." ಅಲ್ಲ " ಕನ್ನಡ ..." ಎಂದು ತಿಳಿಸೋಣ .
ಎಲ್ಲರು ಕೂಡಿ ನಮ್ಮ ನಾಡಿನ ಧ್ವಜವ ಹಾರಿಸೋಣ
ನಾವು ಕನ್ನಡಿಗರು ಎಂದು ಹೆಮ್ಮೆ ಇಂದ ಹೇಳೋಣ.

- Priyanka H.S

06 Jan 2018, 09:59 pm

ರೈತನೇ ನಮ್ಮ ದೇವರು

( ರೈತ ನಮ್ಮ ದೇವರು )

ರೈತನೇ ನಮಗೆಲ್ಲ ಅನ್ನದಾತ.
ನಾ ಹೇಳುತ್ತಿರುವೆ ನಿಮಗೆ ಪ್ರೀತಿ ಮಾತ.
ನಾವು ತಿನ್ನುವ ಆಹಾರದಲ್ಲಿ ಇಲ್ಲ
ಅವನ ಹೆಸರು.
ಅವನು ಬೆಳೆದಂತಹ ಪೈರಲಿತ್ತು .ಅವನ ಉಸಿರು.
ಬಡವನಿಗೆ ಗಂಜಿಗೆ ಗತಿ ಇಲ್ಲದಿದ್ದರೂ.
ನಮಗೆ ತಿನ್ನಲು ಅಹಾರ ಓದಗಿಸುವವನೆ ರೈತ. ಅವನೇ ನಮಗೆಲ್ಲ ಜೀವದಾತ.

ಕಾಲ ಕಾಲಕ್ಕೆ ಮಳೆ ಇಲ್ಲದಿದ್ದರೆ. ಬರುತ್ತಿತ್ತು
ಅವನ ಕಣ್ಣಲ್ಲಿ ನೆತ್ತರು.
ಬರಗಾಲದಲ್ಲಿ ಆಗುತ್ತಿತ್ತು ಭೂಮಿಯೆಲ್ಲ ಭಂಜರು .
ಅವನು ನೆತ್ತರು ಸುರಿಸಿ‌. ದಾನ್ಯವನ್ನು ಬೆಳೆಸಿ
ಅನ್ನ ನೀಡುವವನೇ ರೈತ.

ತನ್ನ ಕಣ್ಣಿರನ್ನು ಮರೆತು.
ನಮಗಾಗಿ ಮೈಯೆಲ್ಲ ಬೆವತು .
ಆಹಾರವನ್ನು ಬೆಳೆದ ರೈತನೇ ನಮಗೆಲ್ಲ ದೇವರು. ರೈತನನ್ನು ಗೌರವಿಸಿ.

ರಚನೆ = ( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

06 Jan 2018, 07:05 pm

ಬಂಧನ

ಉದಿಸಿದೆ ನೀ ಉದರದಿಂದ
ಆಯಾಗಿ ಹಾರಾಡುವ ಹಕ್ಕಿಯಂತೆ
ಬೆನ್ನತ್ತಿ ಬರುವುದು ಸಮಾಜದಿಂದ
ಒಂದೊಂದಾಗಿ ಬಂಧನದ ಕಂತೆ ಕಂತೆ

ಮಾಂಸದ ಮುದ್ದೆಯಂತೆ
ನೀ ಬಂದೆ ನನ್ನ ಕಣ್ಣ ಮುಂದೆ
ಈ ಜಗದ ಜನಜಂಗುಳಿಯ
ನೀ ಕಂಡು ಭಯದಿ ಬೆದರಿದೆಯಂತೆ

ನೀನಿಂದು ಸ್ವಚ್ಛಂದ ಆಗಸದಂತೆ
ನೀನಿಂದು ಶ್ವೇತ ಫಲಕದಂತೆ
ನೀನಾಗು ಕಡಲೊಳಗಿನ ಮುತ್ತಂತೆ
ನೀನಾಗು ಕುಸುಮದೊಳಗಿನ ಗಂಧದಂತೆ

ಆಸರೆಯ ವರವಾಗಿ
ನೀ ಬರುವೆ ಎಂದಿದ್ದರು
ಮನೆ ಬೆಳಗೊ ವಧುವಾಗಿ
ನೀ ಬಂದು ಎಲ್ಲರ ಆಲಿಂಗಿಸಿದೆ

ಬೇಡವೆಂದರು ಬೆನ್ನಟ್ಟೀತೆ
ಗಂಡೆಂಬ ಆ ಗುಮ್ಮ
ಯಾರು ಬಲ್ಲರು ?
ನೀನಾಗಬಹುದು ಈ ಜಗದಮ್ಮ




ಶಾರಧ

- ಶಕುಂತಲಾ

06 Jan 2018, 06:52 pm

ಕಳೆದು ಹೋದೆ ನಿನ್ನ ಕಂಡು

ನಿದಿರೆ ಬರದು ನನಗೆ ಇನ್ನೂ
ಕಾಡಿದೆ ನೀ ನನಗೆ ನನ್ನೊಳಗೆ ನೀನಾಗಿ

ಲೋಕವೆ ನಾಚುವ ಸೌಂದರ್ಯ ಗಣಿಯಾಗಿ
ತಣಿಸಿದೆ ನನ್ನ ಮನವ ಜೇನಿನ ಮಾತಲ್ಲಿ
ಕಣ್ಣತುಂಬುವಂತೆ ಮೋಡಿಯ ನೀ ಮಾಡಿ

ಆಕಾಶ ಚುಕ್ಕಿಗಳೆ ನಿನ್ನ ಮುಡಿಗೆ ಹೂವಾಗಿ
ಸೂರ್ಯ ಚಂದ್ರರೆ ಇನ್ನೂ ನಿನ್ನಯ ನಯನವಾಗಿ
ನನ್ನ ಉಸಿರಲ್ಲಿ ನೀನು ನೀನೆ ಉಸಿರಾಗಿ

ನಾಚಿದೆ ಕೆಂಗುಲಾಬಿ ನಿನ್ನ ನಗುವ ಕಂಡು
ನಿನ್ನಯ ವಯ್ಯಾರಕೆ ಸರಿಸಾಟಿ ಬೇರೆ ಏನು
ಮರೆತೋಯಿತು ನಾಟ್ಯವ ನವಿಲು ನಿನ್ನ ಕಂಡು

ಏಳು ಸಾಗರ ದಾಟೋ ಧೈರ್ಯವು ನನ್ನದಾಯಿತು
ಜಗವ ಗೆಲ್ಲುವ ಛಲವು ನನ್ನಲಿ ಮೂಡಿಯಾಯಿತು
ನೀ ಜೊತೆಗಿದ್ದರೆ ಬೇರೆ ಏನು ಬೇಡವಾಯಿತು...

- Irayya Mathad

06 Jan 2018, 12:45 pm

ಮಂಜು ನಂಜಾಯಿತೆ

( ಮಂಜು ನಂಜಾಯಿತು)
ಮುಂಗುರುಳ ಮುಂಜಾನೆಯ
ಮಂಜನ್ನು ಇಷ್ಟ ಪಟ್ಟ ಮಂದಾರದ ಹೂವೆ.
ಮರೆಯಬಾರದೀ ಮಂಜ ಹನಿಯನ್ನು.
ನಿನ್ನ ಹೆಸಳಿನಿಂದ ಜಾರಿ‌ ಬೀಳುವವರೆಗೂ.
ನನ್ನ ನೆನಪಂತೆ ನಿನ್ನನ್ನೆ ಹಿಂಬಾಲಿಸುವ ನನ್ನ ಮನಸ್ಸಿನಂತೆ.

ನಾ ನಡೆಯುವ ದಾರಿಯಲ್ಲಿ ನಿನ್ನ
ಕಣ್ಣೀರಿನ ಓಂದು ಹನಿಯು ಬೀಳಬಾರದೆಂಬ ಶ್ರಮದಲ್ಲಿ ನಿ‌ನ್ನ ಸೇರುವ ದಾರಿ ನನಗೆ ತಪ್ಪಿ ಹೊಯಿತು.
ಅರ್ದದಲ್ಲಿ ಮುರಿದುಬಿದ್ದ ಹಗಲು ಕನಸ್ಸಂತೆ ನಮ್ಮಿಬ್ಬರ ಪ್ರೀತಿ‌.
ನನ್ನಿಂದ ನೀ‌ಅಗಲಲು ಕವಲೊಡೆದ ದಾರಿಯಂತಾಗಿದೆ ನನ್ನ ಈ ಬದುಕು

(ನೆನಪಿನ ನಾವಿಕ ಸಂತೋಷ್)

- ಸಂತೋಷ್//ಜೀತು

06 Jan 2018, 10:08 am

ಕಳೆದ ಹೃದಯ

ನಿನ್ನನು ಕಂಡು ಮೊದಲು
ಉಸಿರು ಕೂಡ ಆಗಿದೆ ತೊದಲು
ಮಾಡಲೇ ಹೃದಯ ಅದಲು ಬದಲು
ಒಪ್ಪಿಸಿ ನನ್ನ ಹರಿಸುವೇ ಪ್ರೀತಿಯ ಹೊನಲು
ಎಲ್ಲೇಲೂ ನಿನ್ನದೇ ಅಮಲು ಅಮಲು ಅಮಲು....

- Jyothi

06 Jan 2018, 01:07 am

ಹುಡುಕಾಟ

ಬಾನಲಿ ಆ ಸೂರ್ಯನ ಉದಯ
ನಿನ್ನ ಸೇರಲು ಕಾದಿಹೆ ಸಮಯ
ಹೇಳೇ ನೀನೇ ನನ್ನ ಕಾಡುವ ಹೃದಯ
ಎಂದು ನೀ ನನರಿವೆ ನನ್ನ ಪ್ರೀತಿಯ ಪರಿಯ


ಸೂರ್ಯ ಚಂದ್ರರೇ ಕೇಳಿ ಇದು ಕಳುವಾಗಿರೋ ಕುತುಹಲದ ಕನಸು
ಭೂಮಿ ಬಾನಿಗೂ ತಿಳಿಯದು ಎಂದು ಅವಳೇ ನನ್ನ ಸಿಹಿ ಮುನಿಸು
ನೀನೇ ಬಂದು ಪ್ರೀತಿಯ ಸೆರೆ ಬಿಡಿಸು
ನಿನ್ನ ನಗುವಿನ ಹೊನಲನು ಹರಿಸು
ಎಂದೂ ಸಿಗದಿರೋ ಪ್ರಶ್ನೆಗೆ ಒಲವಿನ ಉತ್ತರಿಸು... ನೀನೇ ಪರಿಹರಿಸು....


ನಿನ್ನ ನಗುವಿನ ಹಾಡು ಕೇಳಿದೆ ಇಂಪನ
ಹೃದಯದಿ ಆಗಿದೆ ತಿಳಿಯದ ಕಿರು ಕಂಪನ
ನಿನ್ನನು ಕಾಯುತ್ತಾ ಮುದವಾಗಿ ಏರಿದೆ ಮಂಪನ
ಕನಸಲಿ ನಡೆದಿದೆ ಮಾತು ಮೌನಗಳ ಮಂಥನ
ಓ ಪ್ರೀತಿಯೇ ಏನೀ ಹುಡುಗಾಟ
ನಿನಗಾಗಿಯೇ ನಾನಿನ್ನೂ ಹುಡುಕಾಟ.....

- Jyothi

04 Jan 2018, 11:42 pm

ಕನವರಿಕೆ 

ಕುಂಟು ನೆಪಕೆ 
ಕೆಂಪೇರುವ ನಿನ್ನ ಕೆನ್ನೆಯಾಣೆ 
ಕೆಂಪೇರಿದಷ್ಟು ಅರಳುವ 
ಆ ಮುದ್ದು ಕಂಗಳ ಆಣೆ 
ಪಿಸುಮಾತಿನ ನಿನ್ನ ಬೈಗುಳ 
ಹಾಡಿದಂತೆ ಕಿವಿಯಲಿ ಜೋಗುಳ 
ಜೊತೆಯಲ್ಲಿ ಬಾಳುವ ಕನಸು 
ನೆನೆದರೇ ಪ್ರತಿ ಕ್ಷಣ ಸೊಗಸು 

ಮುದ್ದು ಗೆಳತಿಯೇ 
ಮನದ ಒಡತಿಯೇ 
ನಿನ್ನ ಹುಸಿಮುನಿಸೇ 
ನನಗೆ ಸಿಹಿತಿನಿಸು 

- ಚಿದಾನಂದ

04 Jan 2018, 10:35 pm