Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರಳಿ ಬಾ......:(

ಮನಸ್ಸಿನಲ್ಲಿರೊ ನೋವು ಹೇಳಲಾಗುತ್ತಿಲ್ಲ
ಕಣ್ಣಂಚಿನ ನೀರು ನಿಲ್ಲುತ್ತಿಲ್ಲ
ನಿನ್ನ ಮರೆಯಲಾಗುತ್ತಿಲ್ಲ
ನಿನ್ನ ನೆನಪನ್ನು ಸಾಯಿಸಲು ಆಗುತ್ತಿಲ್ಲ
ನಿನ್ನ ನೆನಪು ನನ್ನನು ಪದೇ ಪದೇ ಸಾಯಿಸುತ್ತಿದೆ

ಯಾಕೆ ನೀ ನನ್ನಿಂದ ದೂರ ಇರುವೆ
ಯಾವುದೋ ಸಣ್ಣ ತಪ್ಪಿಗೆ ....
ಚಂದ್ರ ಇಲ್ಲದೆ ಆಕಾಶ ಇಲ್ಲ
ಕಣ್ಣು ಇಲ್ಲದೆ ರೆಪ್ಪೆ ಇಲ್ಲ
ಹೃದಯ ಇಲ್ಲದೆ ಬಡಿತ ಇಲ್ಲ
ನೀ ಇಲ್ಲದೆ ನಾ ಇಲ್ಲ

ಕ್ಷಮಿಸು ನನ್ನ ಮರಳಿ ಬಾ ......

- Shilpa

20 Dec 2017, 05:07 pm

ಜೀವನ

ಜೀವನವೇ ಅಲ್ಪ ಕಣೋ
ಮನದಲ್ಲಿ ಸಂತೋಷ ಕಾಣೋ
ಎಲ್ಲರನ್ನು ಪ್ರೀತಿ ಮಾಡು
ನೆಮ್ಮದಿಯ ಬಾಳ್ವೆ ಮಾಡು

ಇರೋದೆ ನಾಲ್ಕೇ ದಿನವೇ
ಕೇಳೆ ನನ್ನ ಒಲವೇ
ಮನುಜ ಜನ್ಮ ಶ್ರೇಷ್ಠವೇ
ಅದ ತಿಳಿದು ನಡೆ ಮನವೇ

ಏನ ಗಳಿಸಿದರೇನು,
ನೀ ಹೋತ್ತು ಹೋಯ್ಯೂವೆಯೇನು
ನೀ ಇಲ್ಲೇ ಇರುವೆಯೇನು
ವಿದಿ ಕರೆದಾಗ ಹೋಗಬೇಕು ನೀನು

ನೀ ಮಾಡಿದ ದಾನ
ಅದುವೆ ದೇವರ ದ್ಯಾನ
ತ್ಯಾಗಮಾಡುವ ಜೀವನ
ಸಾಥ೯ಕ ಬದುಕದು ಪಾವನ..
ಧಮ೯ದಿ ಬದುಕು ಮಾನವ
ಜೀವನ ದೇವರು ಕೊಟ್ಟ ವರದಾನ..

- Bhagya Girish

20 Dec 2017, 01:56 pm

ಒಲವಿನ ಕವಿತೆ

ಕೈಯಲ್ಲಿ ಹಿಡಿದ ಲೇಖನಿ ಕವಿತೆಯನು
ಬರಿಯೆಂದರೆ ನಿನ್ನ ವರ್ಣನೆ ಮಾಡುತ್ತಿದೆ
ನನಗೆ ತಿಳಿಯದೆನೆ!!

ನಾ ಬರೆದ ನೂರಾರು ಕವಿತೆ ಏತಕ್ಕೆ
ನೀ ಇಂದು ಓದುತ್ತಾ ಕುಳಿತೆ,
ಕನ್ನಡಿಯ ಮುಂದೆ ನಿಂತು ನೋಡು
ನಿನ್ನ ಒಂದೇ ಪ್ರತಿಬಿಂಬ ಆ ನೂರು ಕವಿತೆಗಳಲ್ಲಿ
ನಿನಗೆ ಕಾಣಲಿಲ್ಲವೇನು ಒಲವೇ!!

- ಚುಕ್ಕಿ

20 Dec 2017, 12:53 pm

""ಚಲುವೆ""

ಕೈ ಚಾಚ್ಚಿ ನಿಂತಿರುವೆ ಚಲುವೆ
ನಿನ್ನ ಕೈ ಹಿಡಿದು ಬಾಳ ಬಂಡಿ ನೆಡೆಸಲು
ಈ ನನ್ನ ಬಾಳಿಗೆ ನೀನೇ ಬೆಳದಿಂಗಳ ದೀಪ
ನಾ ಎಷ್ಟೇ ವರ್ಣಿಸಿದರು ಮುಗಿಯಾದು
ನನ್ನ ಹೃದಯದ ಚಲುವೆ.

"ಮರೆತರು ಮರೆಯಲಾಗದು ಚಲುವೆ
ನಿನ್ನ ನೆನಪು ಈ ಹೃದಯ
ಅರಿತರು ಅರಿಯಲಾಗದು ಚಲುವೆ
ನಿನ್ನ ಒಲವು ಈ ಮನಸ್ಸು
ಹೆಂಗೆ ಮರೆಯಲಿ ಹೇಳು ಚಲುವೆ
ಈ ಹೃದಯಕ್ಕೆ, ಮನಸ್ಸಿಗೆ,
ನೀನೇ ಜೀವಾ ಕಣ್ಣೇ ಚಲುವೆ.

"ನೀ ಎಂದು ಬರುವೆ ಚಲುವೆ
ಈ ನಿನ್ನ ಗೆಳೆಯನ ಬಾಳಿನಲ್ಲಿ
ನೀ ಎಂದು ತರುವೆ ಹರುಷವ
ಈ ನಿನ್ನ ಗೆಳೆಯನ ಮನಸ್ಸಿನಲ್ಲಿ

ನೀ ಎಂದೆಂದಿಗೂ ಸಿಗದ ನಕ್ಷತ್ರವಾದರು
ಆ ನಕ್ಷತ್ರನ ಪ್ರೀತಿಸೋ ಹುಚ್ಚು ಪ್ರೇಮಿ ನಾ,
ನೀ ನೋಟಕ್ಕೆ ದೂರವಾದರು
ಆ ನಿನ್ನ ಮುದ್ದಾದ ಪ್ರತಿಬಿಂಬ
ನನ್ನ ಕಣ್ಣಗಳಲಿ ಮೀನುಗುತಿರು ಚಲುವೆ

***ರಾಜು ಗುಡಿ***ಹಾಸನ

- ರಾಜು ಹಾಸನ

20 Dec 2017, 01:46 am

ನೀನೇ ನನ್ನ ಜೀವಾ.......

ಪ್ರೀತಿ ಅರ್ಥ ತಿಳಿಯದ ನನಗೆ ,ಪ್ರೀತಿ ಅರ್ಥ ತಿಳಿಸಿದವ ನೀನು .

ಇಂದು ನನಾಗಿ ಪ್ರೀತಿಸುವಾಗ ನೀನೇಕೋ ದೂರಾಗುವ ಮಾತನಿಟ್ಟೆ .

ಈ ಹೃದಯದ ಬಡಿತ ನಿನಗೆ ಕೇಳಿಸಲೇ ಇಲ್ವಾ ?ಪ್ರತಿ ದಿನ, ಪ್ರತಿ ಕ್ಷಣ ನೀನೇ ಬೇಕು ,ನೀನೇ ಬೇಕು ಎನ್ನುವ ಹುಚ್ಚು ಹಂಬಲಕ್ಕೆ ಒಳಗಾಗಿದೆ .

ನೀನಾಡ ಬೇಡ ತಮಾಷೆಗೂ ನೀ ನನ್ನಿಂದ ದೂರಾಗುವ ಕಲ್ಪನೆ ಕೂಡ ಕಲ್ಪಿಸಲು ಅಸಾದ್ಯವೇನಿಸಿದೆ ಈ ಮನಸ್ಸಿಗೆ ...ಇಂದು ನೀನೇ ಹೇಳುವೆಯಾ ಸಾಂತ್ವನದ ಮಾತಿಗಾಗಿ ಕಾಯುತ್ತಿದೆ ಮನಸು....

ನನ್ನ ಕಲ್ಪನೆಗೂ ಮೀರಿದಷ್ಟು ನಾ ನಿನ್ನನ್ನೇ ಹಚ್ಚಿಕೊಂಡು ,ಮನಸಾರೆ ಪ್ರೀತಿಸುತ್ತಿರುವೆ .........ಹೇಳಲಾಗದಷ್ಟು ,ಬೆಟ್ಟದಷ್ಟು ಈ ಹೃದಯದಲ್ಲಿ ಪ್ರೀತಿ ಮುಡಿಸಿದವನು ನೀನೇ ಆಗಿರುವಾಗ ,,, ಈ ಹೃದಯದ ಅರಮನೆಗೆ ನೀನೇ ಒಡೆಯ ಅಲ್ವನೋ ........

ಇಂದು ,ಎಂದೂ ನೀನೇ ಈ ಜೀವಕ್ಕೆ ಉಸಿರಾಗಿರುವಾಗ ನಾ ಬಿಟ್ಟು ಹೋಗೋ ಮಾತಾದರು ಎಲ್ಲಿದೆ ? ಗೆಳೆಯ

- Acchu love

19 Dec 2017, 08:34 pm

ಮುಗುಳು ನಗೆ..!!!

ಮುಗುಳು ನಗೆಯೇ
ನೀನಿರುವುದು ಹೀಗೆಯೇ?
ನೀನೊಂದು ಮಾಯೆಯೆ
ಮೊಗದ ಮೇಲೆ ನೀನಿದ್ದರೆ ಬಲು ಸವಿಯೇ
ನೋವಿಗೂ ಸುಳಿವುದು ಆ ಕ್ಷಣ ಸಾವಿನ ಛಾಯೆಯೆ

ಏನು ನಿನ್ನ ರೀತಿ ನೀತಿ
ಮನಸೊಳಗಿದ್ದರು ಸಾವಿರ ಭೀತಿ
ನೀ ಕಂಡರೇನೆ ಮೊಗದ ಮೇಲೆ ಎಲ್ಲರಿಗೂ ಪ್ರೀತಿ
ನಗುವಾಗ ಮನದೊಳಗಿರದಿರುವುದೆ ಪಜೀತಿ
ನಿನ್ನ ವ್ಯಾಪ್ತಿಗೆ ಇಲ್ಲದಾಗಿದೆ ಪರಿಮಿತಿ
ನಿನ್ನಗನಿಸದೆ ನಿನ್ನಾದಾಯಿತು ಕೊಂಚ ಅತಿ

ಹುಡುಕಿ ಬರುವರು ಎಲ್ಲರೂ ನಿನ್ನ
ನೀ ಬಂದು ಮನಸಿಗಳಿಗಾಕುವೆ ಕನ್ನ
ನೀನಿದ್ದರಂತೂ ಎಲ್ಲರಿಗೂ ನೋಡಲು ಚೆನ್ನ
ಏನೇ ನೋವಿದ್ದರು ನೀ ಬರುವ ಮುನ್ನ
ಬಂದಮೇಲೆ ಬೇಸರಕೂ ಹೇಳಬೇಕು ಹೊರಡು ನೀನಿನ್ನ
ಬೇಕೊ ಬೇಡವೊ ತಿಳಿಯೆ ಆದರೂ ನಾನಗುವೆ ಮತ್ತೆ ನೀ ಬರುವ ಮುನ್ನ

ಪ್ರೀತಂ

- basavarajsirnayakpreethu

19 Dec 2017, 05:11 pm

ತಿರುಗಿ ನೋಡಲಾರದವ..

ಚೆಂದದ ಪ್ರೀತಿಯರಮನೆಯ ಎದೆಯೊಳಗೆ ಕಟ್ಟಿದವ ನೀನು
ಹರೆಯದ ಕನಸುಗಳ ಮೂಟೆಗಳ ಹೊತ್ತು ತಂದವ ನೀನು‌

ಇರುಳ ಚಂದಮನ ಬೆಳಕು ಸಾಟಿಯಲ್ಲ ನಿನ್ನ ಪ್ರೀತಿಗೆಂದು
ಈ ಕತ್ತಲೊಳಗೆ ನನ್ನ ಒಂಟಿ ಮಾಡಿ ಕಾಣದಾದವ ನೀನು

ಮುಂಗುರುಳ ಮುತ್ತಿಗೆ ರಂಗೇರಿದ ಕೆನ್ನೆಯ‌ ಕಂಡು ಆ ರಂಗಿಗೊಡೆಯ
ನಾನೆಂದು ಮುಂಗುರುಳ ಗದರಿಸಿ ಸರಿಸಿ ಮರೆಯಾದವ ನೀನು

ಕೈ ಕೈ ಬೆಸೆದು, ಬಾಳ ಕನಸುಗಳ ಜೊತೆಗೆ ಹೆಗ್ಗಿಲ್ಲದೆ ಹೆಣೆದು
ನೆನಪುಗಳ ಉಡುಗೊರೆ ಕೊಟ್ಟು ಅನಾಮಿಕನಾದವ ನೀನು

ನಗುವಾಗ ಕಾಣುವ ಕಣ್ಬೆಳಕಿಗಾಗಿ ಕಾಯುವ ಪ್ರೇಮಿ ಎಂದು
ಕಣ್ಣೀರ‌ ಕಡಲೊಳಗೆ ಈಜಲಾಗದ ನನ್ನ ನೂಕಿ ಹೋದವ ನೀನು

ಹೃದಯದ ಕದವ ಮಾತಿನಲೆ ತಟ್ಟಿ ತೆರೆದು ಒಳ ಸೇರಿ
ಮಾತಿನಲೆ ಕೊಂದು, ನಗುತಲೇ ಹೊರ ನಡೆದವ ನೀನು

ಒಬ್ಬಂಟಿಯಾಗಿ ನಾ ಕಣ್ಣ ಹನಿಗಳ ಪ್ರೇಮಿಸಿ, ರಮಿಸಿ
ಮುದ್ದಾಡಿದರೂ ಈ ಕಾವ್ಯಳ ತಿರುಗಿ ನೋಡದಾಗಿರುವವ ನೀನು

- ಶ್ರೀಕಾವ್ಯ

19 Dec 2017, 01:32 pm

ಬಾಲ್ಯ ವಿವಾಹ

ಪಾಠಿ ಪುಸ್ತಕ ಹಿಡಿದ ಬೆರಳಿನ್ನು
ಬರೆಯುವುದು ಕಲಿತಿಲ್ಲ ಸರಿಯಾಗಿ,
ಬಂಧನದ ಬಲಿ ಏತಕೆ ಬಡವಿಯಾದ
ಕಾರಣಕ್ಕೆ ಮದುವೆ ಎಂಬ
ಜೀವಿತಾವಧಿಯ ಸೆರೆಮನೆಯಲ್ಲಿ?

ಮೊಡವೆಯು ಮೂಡಿಲ್ಲ
ಮುಖದ ಅಂದವ ಹೆಚ್ಚಿಸಲಿಂದು
ಮೂಗುತಿ ಏಕೆ ಸಂಪ್ರದಾಯದ ಹೆಸರಿನಲ್ಲಿ ,
ಬೆಳ್ಳಿ ಕಾಲುಂಗುರದ ಬೆಲೆಯೂ ತಿಳಿದಿಲ್ಲ
ಕಟ್ಟಿ ಹಾಕುವಿರಿ ಏತಕೆ ಸವಿ ಬಾಲ್ಯವ
ಸಾಯಿಸಿ ಇಂದು?

ಗುರುತು ತಿಳಿಯದ ಸರಿ ಸುಮಾರು
ವಯಸ್ಕನ ಪರಿಚಯ ಏತಕೆ ನನಗೆ
ಅವನ ಕಟುವಾದ ಕಣ್ಣ ಕೆಳಗೆ
ಹೂವಿನಂತೆ ಬಾಡಿ ಹೋಗಲಿಂದು,
ವಿದ್ಯೆ ನನ್ನ ಹಕ್ಕು ಎಂದು ತಿಳಿಯದ ತಂದೆ - ತಾಯಿ
ಅವರು ಹೆತ್ತ ಕಾರಣಕ್ಕೆ ಕಟ್ಟಿ ಹಾಕಿ ಕಳಿಸುವರು
ಮೂರು ಗಂಟು ನೇಣಿನಂತೆ
ಊರ ಮಂದಿ ಎದುರಿಗೆ ಮೀಸೆ ತಿರುವಿ ಗರ್ವದಿ.

ಪರಿಚಯವೇ ಇಲ್ಲದ ಪಾಮರರಿಂದು
ತನ್ನ ಮನೆ ಆಳಿನಂತೆ ನೋಡುವರು,
ಅತ್ತೆ-ಮಾವಂದಿರರು ನಾದಿನಿ-ಮೈದುನರು,
ಹೆಜ್ಜೆ ಸದ್ದು ಆದಿತೆಂದರೆ ಬೈಯುವಳು ಅತ್ತೆವ್ವ
ಎಂತ ಬುದ್ದಿ ಕಲಿಸಿರುವಳು ನಿನ್ನ ಹೆತ್ತವಳೆಂದು,
ಎಲ್ಲಿ ಕಲಿಸಿದವಳು ಬುದ್ದಿ
ನನಗೆ ತಿಳುವಳಿಕೆ ಬರುವಷ್ಟರಲ್ಲೇ
ಹಣದ ಆಸೆ ತೋರಿ ಅವರಿಗೆ ಕೊಂಡುಕೊಂಡರಲ್ಲ
ನನ್ನ ವಯಸ್ಸಾದ ನಿಮ್ಮ ಮಗನಿಗೆ ವಧುವಾಗಿ.

ಇರುವಳೊಬ್ಬಳು ಸೊಸೆ
ಹಡೆದಿರುವಳು ಒಂದು ವಂಶೋದ್ದಾರಕನನ್ನ
ಎಂದು ಹೇಳಿಕೊಳ್ಳಲು ಹೆಮ್ಮೆಯಿಂದ
ತಮ್ಮ ಮಗನು ಗಂಡು ಎಂದು,
ನನ್ನ ದೇಹ ರಚನೆ ಪೂರ್ತಿಯಾಗುವ ಅಷ್ಟರಲ್ಲಿ
ದಾರುಣವಾಗಿ ನನ್ನ ಮೇಲೆ ಹಲ್ಲೆ ನಡೆಸಿ
ಚಿತ್ರವದೆಯ ಕೊಡುವಿರಾ?

ಆಡಿದರೆ ಮಾತೊಂದು
ಮತ್ತೆಲ್ಲಿ ತಮ್ಮ ಪಾಪ ಹೊರ ಬೀಳುವುದೆಂದು,
ನನ್ನ ಬಾಯಿಗೆ ಬೀಗ ಹಾಕಿ
ಹೆಣ್ಣು ಹೆಚ್ಚು ಮಾತನಾಡಬಾರದೆಂದು
ಸೆರಗಿನಿಂದ ನನ್ನ ಸರಪಳಿಯಲ್ಲಿ ಕಟ್ಟಿ ಹಾಕುವಿರಾ?

ಬಾಲ್ಯ ನನ್ನ ಸುಂದರ ಕನಸು,
ಹೆಣ್ಣೆಂದು ಮುರಿಯದಿರಿ ಅದನ್ನ
ಬಾಲ್ಯ ವಿವಾಹದ ಕಾರಣಕ್ಕೆ ಇಂದು,
ಅಂಗಲಾಚಿ ಬೇಡುತಿರುವೆ ನಿಮ್ಮನ್ನ
ನಾನಿಂದು ಅರಿತು ನಡೆಯಿರಿ
ನಾನು ಒಂದು ಉಸಿರಾಡುವ ಜೀವವೆಂದು......

- ಚುಕ್ಕಿ

19 Dec 2017, 12:06 pm

""ತಾಯಿ ಭೂ ತಾಯಿ""

"ಜೀವಕ್ಕೆ ಉಸಿರು
ದೇಹಕ್ಕೆ ಪ್ರಾಣ
ಸೋತಾಗ ಸಮಾಧಾನ
ಗೆದ್ದಾಗ ಪ್ರೋತ್ಸಾಹ
ದಣಿದಾಗ ಮೃಷ್ಟಾನ
ಸತ್ತಾಗ ಕಂಬನಿಯ
ಮಹಾಪುರ ಸುರಿಸುವ
ನನ್ನ "ತಾಯಿ" ನಿನಗೆ
ನಾ ಚಿರಋಣಿ.

"ಜೀವಕ್ಕೆ ಜೀವ
ಪ್ರಾಣಕ್ಕೆ ಪ್ರಾಣ
ಪ್ರೀತಿಗೆ ಪ್ರೀತಿನಾ
ಇದ್ದಾಗ
ಯಾರಿಗೂ ಕೊಡದಿದ್ದರೂ
ಸತ್ತಾಗ
ಭೂ ತಾಯಿಗೆ ಕೊಟ್ಟೆ ಕೊಡ್ತೀವಿ
ಏಕೆಂದರೆ
ಈ ಜೀವ,ದೇಹ,ಪ್ರೀತಿ,ಮನಸ್ಸು. ಕೊಟ್ಟಿದು
ಈ ನನ್ನ "ಭೂ" ತಾಯಿ.


***ರಾಜು ಗುಡಿ***ಹಾಸನ

- ರಾಜು ಹಾಸನ

19 Dec 2017, 11:44 am

ಪ್ರೀತಿಯೇ ಇರಲಿಲ್ಲ

ಹೇಳುತ್ತಿದ್ದಳು ಅವಳು ನನಗೆ ನೀನು ತುಂಬಾ ಇಷ್ಟ ಎಂದು,
ಆದರೆ ಅವಳ ಮನಸ್ಸಲ್ಲಿ ಪ್ರೀತಿಯೇ ಇರಲಿಲ್ಲ.

ದಿನವೆಲ್ಲ ಕಾದೆ ಅವಳ ಕರೆಗಾಗಿ,
ಆದರೆ ಎಲ್ಲಿಯೂ ಅವಳ ಧ್ವನಿಯೇ ಇರಲಿಲ್ಲ.

ಕನಸಲ್ಲಾದರು ಅವಳನ್ನು ಭೇಟಿಯಗೊಣ ಅಂದುಕೊಂಡೆ,
ಆದರೆ ರಾತ್ರಿಯೆಲ್ಲ ಕಣ್ಣಿಗೆ ನಿದ್ದೆಯೇ ಇರಲಿಲ್ಲ.

ಸಾಕಷ್ಟು ಅತ್ತೆ ನಾನು ಅವಳಿಗಾಗಿ,
ಆದರೆ ಕಣ್ಣೀರಿಗೆ ಅರ್ಥವೇ ಇರಲಿಲ್ಲ.

ಕೇಳಿದ್ದೆ ನಾನು ಮನಸಿದ್ದಲ್ಲಿ ಮಾರ್ಗ ಎಂದು,
ಆದರೆ ಅವಳಿಗೆ ಮನಸ್ಸೇ ಇರಲಿಲ್ಲ.

ಇಂದಿಗೂ ಬಹಳ ನೋವಾಗುತ್ತೆ ನನ್ನ ಹೃದಯಕ್ಕೆ,
ಏಕೆಂದರೆ ಅವಳಿಗೆ ನನ್ನ ಮೇಲೆ ಪ್ರೀಘಿಯೇ ಇರಲಿಲ್ಲ.

- gataksingh

19 Dec 2017, 06:24 am