Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಹೃದಯ......

ಓ ಹೃದಯ ಅವಳ
ಕಣ್ಣ ನೋಡಿ ಬಿಡು ಒಮ್ಮೆ
ಅವಳಿಗಾಗಿ ಹುಡುಕುತಿದೆ
ಈ ಹೃದಯ.................
ಓ ಹೃದಯ ಅವಳ ನೀನು
ನೋಡಿದೆಯ ಅವಳ ಮನಸ್ಸು
ತಿಳಿದಿಕೋಂಡೆಯ ಆ ಮನಸಿಗಾಗಿ
ಚಡಪಡಿಸುತಿದ ಈ ಮನಸ್ಸು........
ಓ ಹೃದಯ ಆವಳ ನೀನು
ಕೇಳು ನನ್ನ ಪ್ರೀತಿಯ ತಿಳಿಸಿ
ಕರೆದು ತರುವೆಯ ಅವಳಿಗಾಗಿ
ಕಾಯುತಿದೆ ನನ್ನ ಪ್ರೀತಿ..........
ಓ ಹೃದಯ ಅವಳ ಕನಸನು
ಕಾಣುವೆಯ ನನ್ನ ಆ ಕನಸಲ್ಲಿ
ಬೇಟಿ ಮಾಡಿಬಿಡು ಅವಳ ನೊಡಲು
ಕಾಯುತಿದೆ ಈ ಕನಸು..........
ಓ ಹೃದಯ ಅವಳ
ಕರೆದು ತರುವೆ ನನ್ನ
ಬಳಿಗೆ ಕಾಯತಲಿದೆ ಈ ಹೃದಯ
ಅವಳಿಗಾಗಿ ಓ ಹೃದಯ..........

- ರಾಗಸಿರಿ....

14 Nov 2017, 05:12 pm

ಅಪ್ಪ-ಅಮ್ಮ

ಕರುಳಿನ ಬಳ್ಳಿಯ ಸುಖಕ್ಕಾಗಿ
ಬಾಳ ಬಂಡಿಯ ಒಳಿತಿಗಾಗಿ
ಹಗಲಿರುಳು ದುಡಿಯುವವರು||೧||

ಬಡತನದ ಬೇನೆಯಲ್ಲಿ ಬೆಂದು
ನೂರಾರು ನೋವುಗಳನ್ನು ಉಂಡು
ನಾಳಿನ ಕನಸುಗಳನ್ನು ನೆನೆವರು||೨||

ಮೂಕ ಮೌನದಲ್ಲಿ ಹೋರಾಡಿ
ಭಾವ ಬಂಧನದಲ್ಲಿ ಜೊತೆಯಾಗಿ
ಬೆವರು ಹನಿಯ ಸುರಿಸುವವರು||೩||

ಅವರ ನಗುವಿನ ಹೊರತಾಗಿ
ಎಲ್ಲರ ನಗುವಿನ ಸಲುವಾಗಿ
ದಿನವೂ ದುಡಿಯುವವರು ಅಪ್ಪ-ಅಮ್ಮ||೪||

✍ಅನಿಲ್ ಕುಲಕರ್ಣಿ(ಎನ್ಆರ್ಕೆ)

- ಅನಿಲ್ ಕುಲಕರ್ಣಿ

14 Nov 2017, 04:57 pm

ಅಲೆ‌ಮಾರಿ‌

ನಿಲ್ಲದ ಅಲೆಮಾರಿ ಬದುಕು
ಅಲ್ಲಿಂದಿಲ್ಲಿಗೆ ಹೊತ್ತು ಸಾಗು ಸರಕು
ಸಿಕ್ಕ ಸಿಕ್ಕದ್ದೆಲ್ಲ ಮನಸೊಳಗೆ ತುರುಕು
ಮನಸಾದರೆ ಹರಕು ಮುರುಕು
ಆಗದಂತಾಗು ನಗು ಅಳುವುದಕು
ಆಗ ಚಡಪಡಿಸಿ ಮನಶಾಂತಿ ಹುಡುಕು
ಸಿಗುವವರೆಗೆ ಬಿಡದೆ ಎಲ್ಲೆಡೆ ತಡಕು
ಸಿಕ್ಕಮೇಲೆ ಮತ್ತೆ ಶುರು ಇನ್ನೇನೊ ಹುಡುಕಿ ಅಲೆಮಾರಿ ಬದುಕು

ಎಲ್ಲಿರುವೆಯೇ ಸ್ವಪ್ನ ಸುಂದರಿ
ಕನಸಲೇ ಕಾಡುವ ಚಂದ್ರ ಚಕೋರಿ
ನನ್ನ ಮನಸನೇ ಕದ್ದ ಜಿಂಕೆ ಮರಿ
ನನ್ನೆದಯೊಳಗೆ ನೀ ತಂದ ಕನಸುಗಳಂತು ತರಾವರಿ
ನಿನ್ನ ಹತ್ತಿರವಾಗಲು ನಾ ಮಾಡುತ್ತಿರುವಾಗ ತಯಾರಿ
ನೀನಾಗಿ ಬಿಡುವೆ ನನ್ನ ಕನಸಿನಿಂದಲೇ ಪರಾರಿ
ಪ್ರೀತಿಯಲಿ ಬಿದ್ದಿರುವೆ ನಿನ್ನೊಂದಿಗೆ ಯಾಮಾರಿ
ಬಂದುಬಿಡು ಎದುರಿಗೊಮ್ಮೆ ನಾ ನಿನ್ನ ಹುಡುಕಿಯಾಗುವ ಮುನ್ನ ಅಲೆಮಾರಿ

- ಶ್ರೀಕಾವ್ಯ

14 Nov 2017, 02:19 pm

ಬದಲಾವಣೆ

ಬರುತಿದೆ ಬರುತಿದೆ ‌ನೋಡು!
ಬದಲಾವಣೆಯ ಮಾರುತದ ದಂಡು!

ಹರುಷ ತಂದಿತು ವರುಷದ
ಮಳೆಯು ಇಳೆಗೆ ಆನಂದದ
ಹೊನ್ನ ಮಳೆಗರೆಯಿತು
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!

ಇಳೆಗೆ ಅಂಟಿದ ಕೊಳೆಯ ತೊಳೆದು
ಮಲಿನ ತುಂಬಿದ ಮನವ ಬಳಿದು
ಹೊಸ ಮನ್ವಂತರಕೆ ನಮ್ಮ ಸೆಳೆಯಲು
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!

ಕೊಳೆತು ನಾರುತ ಕೆಸರೆರೆಚಾಟದ
ರಾಜಕೀಯವ ಮೀರಿ ,ಹಾರಿ ಬರುತಿದೆ
ಉಪ್ಪಿಯ ಕೆಪಿಜೆಪಿ ಯು ಮಾಡಲು ಮೋಡಿ
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!



ಶಾರಧ

- ಶಕುಂತಲಾ

14 Nov 2017, 01:02 pm

ಗೆಜ್ಜೆ ನಾದ

ಹೆಜ್ಜೆ ಹೆಜ್ಜೆಗು ಗೆಜ್ಜೆ ನಾದುವು
ನೂಕುತಲಿದೆ ನೆನಪಿನಂಗಳಕೆ|
ನೀ ನನ್ನವಳಾಗಿಹೆ ಕನಸಲಿ
ಎಂಬುದೇ ಮನಕೆ ಚೇತರಿಕೆ!||

ಆ ನಾದದಲಿ ಲೀನೊಧ್ಯಾನ|
ಕಿರುನಗೆಯ ಹುಡುಕುತಿದೆ ಒಲವಿನಾಗಾನ||

•ಪೂರ್ಣಿಮಾತನಯ

- jay(ಪೂರ್ಣಿಮಾತನಯ)

14 Nov 2017, 12:39 pm

ಮಕ್ಕಳ ದಿನಾಚರಣೆ

ಮುದ್ದು ಮಾತಿನ ಪುಟ್ಟ ಪುಟಾಣಿಗಳೆ
ಹೂ ಗಿಡದಲಿ ಅರಳಿದ ಪುಷ್ಪಗಳೆ
ಅಳುತ,ನಗುತ ನೀವಿರಲು
ಕಳೆವುದು ದಿನ ರಾತ್ರಿ ಹಗಲು....

ವರುಷಕೊಮ್ಮೆ ಬರುವುದಂತೆ ಮಕ್ಕಳ ದಿನಾಚರಣೆ
ಹರುಷದಲಿ ನೀವು ನಲಿಯುತಿರಲು ವರುಷವಿಡೀ ನಿಮ್ಮದೆ ದಿನಾಚರಣೆ..

ಮನೆಯ ಮುಂದಿನ ಬೃಂದಾವನದಂತೆ
ನೀವಿಲ್ಲದ ಮನೆ ಬಿಕೋ ಎನುವುದಂತೆ
ನೀವಿರುವ ಮನೆ ದೇಗುಲದಂತೆ
ನೀವು ನಲಿಯುವ ತಾಣವು ನಂದನವನದಂತೆ...

ನಿಮ್ಮಿಂದ ಕಲಿಯಬೇಕು ನಾವು ಕ್ಷಣ ಬುದ್ದಿ
ನಿರೀಕ್ಷೆ ಇರದ ಮಮಕಾರದ ಬುದ್ದಿ
ನೋವು ನಲಿವುಗಳಿಗೆ
ಬಡತನ,ಸಿರಿತನದ ಒಣ ಹಮ್ಮುಗಳಿಲ್ಲದ ನಿಮ್ಮ ಮುಗ್ಧ ಮನದ ಕಿರುನಗುವಿಗೆ
ಸಣ್ಣ ಸಣ್ಣ ಉಡುಗೊರೆಗೂ ಸಂತಸ ಪಡುವ ನಿಷ್ಕಲ್ಮಶ ಮನಸ್ಸಿಗೆ ನಮ್ಮದೊಂದು ಮೆಚ್ಚುಗೆ...

ಪುಟ್ಟ ಮಕ್ಕಳಿಗೆ ತೃಪ್ತಿ ಪಡಿಸಬಹುದಂತೆ ನಿಮಗಿದೆ ಸಿಕ್ಕಿದ್ದರಲ್ಲಿ ಸಂತೃಪ್ತಿ
ದೊಡ್ಡವರಿಗಿಲ್ಲ ತೃಪ್ತಿ
ಕೊಟ್ಟಷ್ಟು ಮತ್ತಷ್ಟು
ಇನ್ನಷ್ಟು ಬೇಕೆಂಬ ಹಪಹಪಿಕೆ,ಊನ ಕಟ್ಟುವ ಬುದ್ದಿ
ಕಲಿಯಬೇಕಿದೆ ನಿಮ್ಮಿಂದ ನಾವು ಸಂತೃಪ್ತಿಯ ವಾಕ್ಯೆ
ಆಗಬೇಕಿದೆ
ನಿಮ್ಮಂತೆ ಕಲ್ಮಶವಿಲ್ಲದ ಮುಗ್ಧ ಮನಸುಗಳು...

- ನಾಗರಾಜ್

14 Nov 2017, 09:45 am

ಬಾಳ ನೌಕೆಯಲ್ಲಿ ನೀನು

ಜೀವ ವೀಣೆ ನುಡಿದಿದೆ ಗೆಳತಿ
ನಿನ್ನ ಸನಿಹ ಸುಳಿದಾಗ,
ಕೊರಡು ಕೊನರಿ ಚಿಗುರೊಡೆಯಿತು
ನಿನ್ನ ಗೆಳೆತನ ದೊರೆತಾಗ.

ಬಾಳ ನೌಕೆ ಹೇಗೋ ಸಾಗಿ,
ಏರು ಗಾಳಿಗೆ ಬಾಗಿ ತೂಗಿ
ದಿಕ್ಕು ದೆಸೆಯು ಇಲ್ಲದಂತೆ
ದೇಶ ಕಾಲ ಮೀರಿ ಹೋಗಿ
ದಡವ ಕಾಣದೆ ನಿಂತಾಗ..

ನೀನು ಬಂದೆ ಅಂಬಿಗನಾಗಿ
ನಾನು ನಿಂದೆ ನಿನಗೆ ಶರಣಾಗಿ
ಪ್ರೀತಿಯೊಂದೇ ನಮ್ಮ ನೀತಿ
ಈಗ ಇಲ್ಲ ಯಾವುದೇ ಭೀತಿ.

ತೋರು ಗೆಳತಿ ಎಂದೂ ಹೀಗೆ
ಮರೆಯದಂತೆ ಸ್ನೇಹ ಸಲುಗೆ
ಬಿರಿಯದಿರಲಿ ನಮ್ಮ ಬೆಸುಗೆ
ಮುರಿಯದಿರಲಿ ಪ್ರೀತಿ ಶಿಲುಬೆ.

- ಶ್ರೀಗೋ.

14 Nov 2017, 02:39 am

ಸುಮ್ಮನೇ ಬಳಿಗೆ ಬಾ

ಸುಮ್ಮನೇ ಬಳಿಗೆ ಬಾ
ಹೆಗಲಿಗೆ ಹೆಗಲೊರಗಿಸು ಬಾ
ಮರೆಯುತ ಜಗವನು
ಕಾಣುವ ಸವಿಗನಸನು

ಉತ್ತರವೇ ಇಲ್ಲದ
ಪ್ರಶ್ನೆಗೆ ಸುಳಿವಾದೆ ನಾ
ಇಂದು ನೀನೊಲಿದ ಈ ಕ್ಷಣ
ತೇಲಾಡಿದೆ ನನ್ನೀ ಮನ

ಬೆಳಕೇ ಬಾರದ
ರಾತ್ರಿಯ ಈ ವೇಳೆಲಿ
ಸೂರ್ಯ ಬರುವ ತನಕ
ನೀನು ನೀಡು ಬೆಳಕ

ಹಕ್ಕಿಗಳೇ ಇಲ್ಲದ
ಮರದಂಚಿನ ಗೂಡಲಿ
ಮೌನವ ಮುರಿದು ಬಾ
ಕಲರವ ನೀನಾಗು ಬಾ

ಮೋಡಗಳೇ ಇಲ್ಲದ
ತಿಳಿನೀಲಿ ಆಕಾಶದಿ
ಮಳೆಯನು ಸುರಿಸು ಬಾ
ನನ್ನೆದೆಯನು ತಣಿಸು ಬಾ

ಅಕ್ಷರಗಳೇ ಇಲ್ಲದ
ಖಾಲಿ ಹಾಳೆಯಲಿ
ಎಲ್ಲಿ ನೀ ಅವಿತೆ
ನೀನೆ ಸುಂದರ ಕವಿತೆ

ಒಂಟೀ ಹಡಗಿನಲಿ
ಭೋರ್ಗರೆವ ಸಮುದ್ರದಿ
ನನಗೆ ದಾರಿಯ ತೋರೆ
ಆಗಿ ನೀ ಧ್ರುವತಾರೆ

ಎತ್ತರದಾ ಶಿಖರದಲಿ
ಉತ್ತರದ ದಿಶೆಯಲಿ
ಸುಂದರ ಹೂವು ನೀ
ನನ್ನ ಪ್ರಾಣ ಉಳಿಸೋ ಸಂಜೀವಿನಿ

ಪ್ರೀತಿಯ ಸಂತೆಯಲಿ
ಕನಸಿನ ಚಿಂತೆಯಲಿ
ನೀ ಸ್ವಪ್ನ ಸುಂದರಿ
ನಾ ನಿನಗೆ ಆಭಾರಿ

ಬಳುಕಿದ ಬಳ್ಳಿಯಲಿ
ಅರಳಿದ ಹೂವಿನಲಿ
ಅಡಗಿರುವ ಮಕರಂದ ನೀ
ಸೌಗಂಧದ ನಿಧಿಯು ನೀ

- ಅಕವಿ

13 Nov 2017, 08:49 pm

ಮತ್ತದೇ ನೀಲಿ ಆಕಾಶ

ಜಾರುವ ಸಂಜೆಗೆ ಚಂದ್ರನ ಗೈರಿದೆ
ಮಿನುಗುವ ತಾರೆಯ ಮೋಡವು ತಡೆದಿದೆ
ಮತ್ತದೇ ನೀಲಿ ಆಕಾಶ
ಮತ್ತದೇ ಕತ್ತಲಿನ ಸನ್ನಿವೇಶ
ಮತ್ತದೇ ಬೆಳಕಿನ ಅನ್ವೇಷ |೧|

ಹರೆಯದ ಹಗಲಲಿ ಸೂರ್ಯನ ಗೈರಿದೆ
ಕಿರಣಗಳ ಕಿರುಗುಂಪನೂ ಮೋಡವು ತಡೆದಿದೆ
ಮತ್ತದೇ ಕಾರ್ಮೋಡಗಳ ಅಟ್ಟಹಾಸ
ಮತ್ತದೇ ಬಿರುಮಳೆಯ ಸನ್ನಿವೇಶ
ಮತ್ತದೇ ಕಣ್ಣೀರಿನ ಮೌನಾವೇಶ |೨|

ಬೆಳದಿಂಗಳ ಅಂಗಳದಿ ತಂಗಾಳಿಯ ಗೈರಿದೆ
ಬಾನನಿರಿಯುವಂತಿಹ ಶಿಖರವು ತಂಪು ಹವೆಯ ತಡೆದಿದೆ
ಮತ್ತದೇ ಬಿಸಿ ಉಸಿರಿನ ಉಚ್ಛ್ವಾಸ
ಮತ್ತದೇ ಕಡಲಲೆಗಳ ಸೆರೆವಾಸ
ಮತ್ತದೇ ಲತೆತರುಗಳ ಉಪವಾಸ |೩|

- ಅಕವಿ

13 Nov 2017, 08:32 pm

ಅಂಧ ಸತ್ಯ

ಕಾಣದೊಂದು ಹೊಸ್ತಿಲಲ್ಲಿ
ಅಂಧ ಸತ್ಯ ಕಣ್ಮುಚ್ಚಿ ಕುಳಿತಿದೆ
ಯಾರು ಕರೆದರೂ ತಿರುಗದು
ಯಾರು ಜಡಿದರೂ ಮರುಗದು
ದೀನ ದಲಿತರ ಪಾಲಿಗೆ
ದುಃಖದ ಕಲೆಯೆಂದು ಮಾಸದು
ನ್ಯಾಯದ ತಕ್ಕಡಿಯೆಂದು ತೂಗದು
ಸತ್ಯದ ಬಾಗಿಲೆಂದು ತೆರೆಯದು
ನ್ಯಾಯ ದೇವತೆ ಕಣ್ಮುಚ್ಚಿ ಕುಳಿತಿದ್ದರೇ
ಹಾಲು ನೀರು ಒಂದೇ ಎಂದು ಸಾರಿಬಿಡುತ್ತಾರೆ
ನೊಂದು ಬೆಂದವರ ಬದುಕಿನಲ್ಲಿ ನ್ಯಾಯವೆಂಬ
ಹಕ್ಕಿಯನ್ನು ಒಂದೇ ದಿಕ್ಕಿಗೆ ಹಾರಿಸಿ ಬಿಡುತ್ತಾರೆ
ಮಸಣಕ್ಕದೇ ದಾರಿ ಎಂದು ತೋರಿ ನಲಿಯುತ್ತಾರೆ.

................ಸಹೃದಯಿ.............ಸಿಂಚನ.............

- ಡಿ.ಸಿ.ಎನ್@100%

13 Nov 2017, 07:55 pm