Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಗುಳು-ಮಗಳು

ಚಿಗುರುತಿದೆ ಒಡಲಲಿ ಮುಗುಳು
ನೀನಾಗಿರಲೆಂದು ಬೇಡುವೆ ಮಗಳು
ಕತ್ತಲ ಬಾಳಲಿ ನಗುವ ತಿಂಗಳು
ಮನೆಮನ ಬೆಳಗೋ ಬೆಳದಿಂಗಳು

ಹಣೆಗೆ ಚೆಂದದೊಂದು ಬೊಟ್ಟು
ಕಿವಿಗೋಲೆ , ಕಣ್ಣಿಗೆ ಕಾಡಿಗೆ ಇಟ್ಟು
ಬಣ್ಣಬಣ್ಣದ ಬಟ್ಟೆಯ ತೊಟ್ಟು
ನಲಿಯಬೇಕು ನೀ ಹರುಷಪಟ್ಟು

ಗೆಜ್ಜೆ ಕಟ್ಟಿ ಕುಣಿವ ನಿನ್ನ ಕಾಲಿಗೆ
ಬೇಡಿ‌‌ ಹಾಕದೆ ಬಿಡುವೆ ಬಯಲಿಗೆ
ಹೆಣ್ಣಿನ ಬಾಳ ಚೆಲುವ ಕನಸ ದಾರಿಗೆ
ನೀನಾಗು ‌ದಾರಿ ತೋರೊ ದೀವಟಿಗೆ

ಹೆಣ್ಣೆಂದು ನನ್ನ ಕನಸಿಗಾಕಿದರು ಕನ್ನ
ಎಂದೂ ನಿನಗೆ ಜೊತೆಯಾಗಿರುವೆ ಚಿನ್ನ
ಮುಟ್ಟಬೇಕು ನೀನು ಮಹಾ ಕನಸುಗಳ ಗಗನ
ನಾ‌ ನೋಡಿ ನಲಿವೆ ಚುಕ್ಕಿಯಂತೆ ಮಿನುಗೋ ನಿನ್ನ

- ಶ್ರೀಕಾವ್ಯ

03 Nov 2017, 02:17 pm

ಹೂವುಗಳು

ಕೆಲವು
ಸುಂದರವಾದ
ಹೂವುಗಳು ಅರಳುತ್ತವೆ,
ಬಡವರ ಮನೆ
ಅಂಗಳದಲ್ಲಿ !!

ಅದರಲ್ಲಿ
ಕೆಲವೊಂದು
ದುಷ್ಟ ಶ್ರೀಮಂತರ
ಕಪಿಮುಷ್ಟಿಯಲ್ಲಿ
ಸಿಕ್ಕು ರೋಧಿಸುತ್ತವೆ
ಮರೆಯಲ್ಲಿ !!

- ನಾಗರಾಜ್

03 Nov 2017, 10:01 am

ಸೋತ ಹೃದಯ

ಸೋತ ಮನಸುಗಳೆದುರು
ಗೆಲುವು ನೋಡಿ ನಕ್ಕಂತೆ
ನಗುವ ಜನರೆದುರು
ತಲೆ ಎತ್ತಿ ಬಾಳಬೇಕಂತೆ

ಕಣ್ಣ ಭಾಷೆ ತಿಳಿಯದ ಹೃದಯ
ಹತ್ತಿರವಿದ್ದು ದೂರಾದಹಾಗೆ
ಪ್ರೀತಿಸುವ ಮನಸುಗಳಿಗೆ ಕೊಡದ ಸಮಯ
ಎಲೆ ಇಲ್ಲದ ಒಣಮರದ ಹಾಗೆ!

ಕನಸು ಕಾಣುವ ಕಣ್ಣಿಗೆ
ಸೂಚನೆ ನೀಡಿದೆ ಮೆಲ್ಲಗೆ
ಮರೆಯಬೇಕಿರುವ ನೆನಪುಗಳ ಯಾತನೆ
ಸುಳಿಯಲು ಬಿಡದಿರು ಸುಮ್ಮನೆ!

ಕೋಪದಲಿ ಮನಸು ನೊಂದು ಪರಿತಪಿಸಿದೆ
ಪ್ರೀತಿಯೆಂಬ ಮಾಯಾಜಾಲದಲಿ ಸಿಲುಕಿ,
ಕಹಿನೆನಪುಗಳು ಮರೆಯಬೇಕಿದೆ
ಪ್ರೀತಿಸುವ ಜೀವಗಳ ಜೊತೆಯಲ್ಲಿ!

ಪ್ರಿಯಾಂಕ✍

- ಪ್ರಿಯಾಂಕ

02 Nov 2017, 08:21 pm

ಕರುನಾಡ ವೈಭವ

ನೇತ್ರಾವತಿ‌‌ ಶರಾವತಿ‌‌‌ ಕೃಷ್ಣೇಕಾವೇರಿ
ನದಿಗಳ ಮಡಿಲು ತಾಯಿ ಭುವನೇಶ್ವರಿ
ಮಲೆನಾಡ‌ ಮಣ್ಣ ಹಸಿರ ಚೆಲುವ ಮೈಸಿರಿ‌
ಕನ್ನಡಮ್ಮನ ಸೌಂದರ್ಯಕೆ ಸೊಬಗ ಗರಿ

ಪಶ್ಚಿಮಘಟ್ಟದಲಿ ಭವ್ಯ ಜೀವಸಂಕುಲದಾಟ
ಗಿರಿ ಶಿಖರಗಳೆ ಅವಳಿಗೆ ತೊಡಿಸಿದ ಕಿರೀಟ
ಧುಮ್ಮಿಕ್ಕುವ ಜಲಪಾತಗಳ‌ ವೈಭವದ ಮಾಟ
ಉತ್ತರದಿ ದಕ್ಷಿಣವರೆಗೂ ವೈವಿಧ್ಯ ನೋಟ

ಆದಿಕವಿಗಳು ಪಂಪ ರನ್ನ ಜನ್ನ ಪೊನ್ನ
ಕನಕ ಪುರಂದರ ಅಕ್ಕ ಮಹಾದೇವಿ ಬಸವಣ್ಣ
ಮಹಾ ಕಾವ್ಯವ ಹರಿಸಿ ಸವೆಸಿದರು ಬಾಳ ಯಾನ
ಜೢಾನಪೀಠ ಪುರಸ್ಕೃತರಿಗೂ ಕನ್ನಡಮ್ಮನೇ ತಾಣ

ಚಿನ್ನದ ನಾಡು ಗಂಧದ ಬೀಡು ಚೆಲುವ ಕರುನಾಡು
ಸಾಹಿತ್ಯ ಸಂಗೀತ ಸಾರುತಿವೆ ಅವಳೊಡಲ ಹಾಡು
ನಾಟ್ಯ ನೃತ್ಯ ಯಕ್ಷಗಾನ ಸಿರಿಯೂ ಅವಳಲಿದೆ ನೋಡು
ಅವಳ್ವೈಭವಕೆ ಸಾಕ್ಷಿ ಹಂಪೆ ಐಹೊಳೆ ಹಾಸನ ಹಳೆಬೀಡು

ಸಾಗರ ರಾಜನಿಗೂ ನೆಲೆಯಾಗಿದೆ ಕರುನಾಡ ಕರಾವಳಿ
ರಾಜರಾಣಿಯರು ಮಣ್ಣಾದರು ಈ ನೆಲದಿ ವೈಭವದಿ ಆಳಿ
ಕನ್ನಡಮ್ಮ ಕಂಡರೂ ಲೆಕ್ಕವಿಲ್ಲದಷ್ಟು ಹಾವಳಿ
ಜಗದಗಲ ಹರಡಿರುವಳ ಅವಳ ಬಲದ ಪ್ರಭಾವಳಿ

ಕನ್ನಡನುಡಿಯೇ ಕರುನಾಡಿಗೆ ಅರಿಶಿಣ ಕುಂಕುಮ
ಎಲ್ಲೆಡೆ ಜೇಂಕರಿಸಲಿ ಸವಿ ನುಡಿಯ ಡಿಂಡಿಮ
ಅವಳಿಗಲಂಕಾರ ಕರುಣೆ ಪ್ರೀತಿ ತ್ಯಾಗಗಳ ಸಂಗಮ
ನೆಲ‌ ಜಲ‌ ಭಾಷೆಗೆ ಮುಡಿಪಾದವನೆ ಇಲ್ಲಿ ನಿಜ ಜಂಗಮ

ಹಲ್ಮಿಡಿಯಾದಿ ನೂರು ಹಲವು ಶಾಸನ
ಸಾರಿವೆ ಅವಳೊಡಲ ಭಾಷೆಯ ಇತಿಹಾಸಾನ
ಯಾರದರೇನು ಹಿಂದೂ ಕ್ರೈಸ್ತ ಮುಸಲ್ಮಾನ
ಅವಳ ತಾಯ ಮಡಿಲಲಿ ಎಲ್ಲರೂ ಸಮಾನ

ಯಾರೇ ಬಂದರೂ ಕರುನಾಡಿಗೆ ಅಂಗಲಾಚಿ
ಕನ್ನಡಮ್ಮ ಆಲಿಂಗಿಸುವಳು ತನ್ನೆರಡ ಕೈಯ ಚಾಚಿ
ಅವಳ‌ ವೈಭವ ಸಾರುತ ಹಾರಲಿ ಕನ್ನಡದ ಬಾವುಟ
ಬಂದವರ ಅಪ್ಪಿ ನಿರಂತರವಾಗಿರಲಿ ಬಾವುಟದ ಹಾರಟ

- ಶ್ರೀಕಾವ್ಯ

02 Nov 2017, 05:48 pm

ಕನ್ನಡ

ಮನದಲ್ಲಿ ಮೂಡಿದ ಸೊಗಸಾದ
ಭಾಷೆ ಕನ್ನಡವಾಯಿತು.

ಪ್ರತಿಯೊಬ್ಬ ಕನ್ನಡಿಗನ ಮನಸೇರಿ
ಈ ಭಾವ ಕವನವಾಯಿತು.

ನಮ್ಮೆಲ್ಲರ ಭಾವ ಭಾಷೆಗಳ ಬಿಡಿಸಿಲಾಗದ
ಬಂಧನ ಕನ್ನಡ ಕವನವಾಯಿತು.

- ಚುಕ್ಕಿ

01 Nov 2017, 11:25 pm

ಎಂದೂ ಕನ್ನಡ

ನಾಡು ಬಿಟ್ಟರೇನು?
ನರ ನಾಡಿಗಳಲ್ಲಿ ಉಂಟು
ಕನ್ನಡ ನಂಟು
ಆಡು ಭಾಷೆ ದೂರಾದರೇನು?
ರಕ್ತಗತವಾಗಿದೆ ಅಭಿಮಾನದ ಗಂಟು.
ಕೂಡಿ ನಲಿದಾಡವ ಅದೃಷ್ಟವಿಲ್ಲ ದಿದ್ದರೇನು ?
ನಡೆಯಲ್ಲಿದೆ ಕನ್ನಡ
ನುಡಿಯಲ್ಲಿದೆ ಕನ್ನಡ

- ಎಸ್ಕೆ

01 Nov 2017, 11:07 pm

ಅಲೆಗಳ ಹಾವಳಿ

ಅಲೆಗಳಲ್ಲಿ ಮೂಡದ ತಂಪಾದ ಇಬ್ಬನಿ ಎಲ್ಲಿಂದಲೋ ಬಂದು ಇಂದು ಮನತಣಿಸಿದೆ ನಿನ್ನಂತೆ ನನ್ನಲ್ಲಿ.

ಭ್ರಮೆಯಲ್ಲಿ ಬದುಕುತಿರುವೆ ನನ್ನೆದುರು ಇಲ್ಲದಿರುವ ನಿನ್ನ ರೂಪ ನಾನೆಂದು ನೆನೆದು ನನ್ನಲ್ಲಿ.

ನನ್ನ ಹೆಸರ ಕರೆದಂತೆ ನೀನು ಪ್ರತಿಕ್ಷಣವೂ ಆಚೀಚೆ ನೋಡುವುದು ಅಭ್ಯಾಸವಾಗೋಯ್ತು ನಿನ್ನ ಸ್ಪರ್ಶ ಮನದ ಬಳಿ ಕಾಣದೆ ನುಗ್ಗಿ ಬಂದಾಗ.

ಮೆಲ್ಲಾ ಮೆಲ್ಲನೆ ಕಚ್ಚಿ ನಿನ್ನ ಉಸಿರು ಬೆಸುಗೆಯಾಕಿದೆ ಭಾನಂಚಿನ ನಿರಂತೆ ನನ್ನ ಹೃದಯದಲ್ಲಿ ರುದಿರದಂತೆ ಬದಲಾಗಿ.

ನಿನ್ನ ನೋಡಲು ಕಾದು ಕಾದು ನನ್ನ ಕಣ್ಣುಗಳು
ಬೆವರು ಸುರಿಸುತ ನನ್ನೊಳಗಿನ ಭಾವಸರದಿಯ
ಕಾಡಿ ಇಂದು ನನ್ನ ಜವಾಬು ಬೇಡುತಿವೆ ನನ್ನ ಪ್ರೀತಿಯ ರೂಪ ಬಚ್ಚಿಡಲು ನೀನ್ಯಾರು ಹೇಳೆಂದು ಸರ್ವಾಧಿಕಾರದಿ.

- ಚುಕ್ಕಿ

01 Nov 2017, 11:00 pm

ನಿರ್ಧರಿಸುವವರೆಗೂ

ಬಯಕೆ ಎಂಬ ಸುಕುಮಾರಿ ಸ್ವಾರ್ಥ ಪುಟದಲಿ
ಪ್ರೀತಿ ಎಂಬ ಕಂಬಳಿಯೊದ್ದು ಲೇಖನಿಯ ಗಡಿಬಿಡಿ ಇಲ್ಲದೆ ಮಲಗಿದೆ ನಾನಿಂದು ಎಚ್ಚೆತ್ತು ನನ್ನಲ್ಲಿ ನಾನಿರಳು ನಿರ್ಧರಿಸುವವರೆಗೂ!!!!

- ಚುಕ್ಕಿ

01 Nov 2017, 10:52 pm

ರಾಜ್ಯೋತ್ಸವ

ವಜ್ರಮಹೋತ್ಸವದ ಸಡಗರದಲಿ
ಜನ್ಮದಿನದ ಸವಿನೆನಪಲಿ,ನಿನ್ನ
ಮೆರೆಸುತಿಹರು ನಿನ್ನ ಮಕ್ಕಳು
ಮದದೊಳಗಿನ ಮುದದಲಿ!

ನಿನ್ನಲ್ಲಿನ ಕೊರತೆಯ ಮರೆತು
ರಂಜನೆಯಲಿ ಮೈಮರೆತು
ಮತದಾರನ ತಲೆಸವರಿ
ಕೂರುವರು ಅಶಾಶ್ವತದ ಕುರ್ಚಿಯೇರಿ!

ಬಹುದಿನಗಳು ಪರಿತಪಿಸಿ
ಬಹು ಪ್ರಯಾಸದಿ,ಹಲವರು
ನಿನ್ನ ಕರುಳಕುಡಿಗಳ ಒಗ್ಗೂಡಿಸಿ
ಸ್ವತಂತ್ರ ನಾಡೆಂದು ಘೋಷಿಸಿದರು!

ಸಾಗಿಬಂದ ಸನ್ಮಾರ್ಗವ ಮರೆತಿಹರು
ಆರ್ಜನೆಯ ಮಾರ್ಗವ ಅರಸುತಿಹರು
ಆಪಾದಕರೆ ನಮ್ಮನಾಳುತಿಹರು
ಸಾಚಾತನವ ಎಲ್ಲಿ ಕಾಣುವರು!






ಶಾರಧ

- ಶಕುಂತಲಾ

01 Nov 2017, 09:39 pm

ಪಾತಾಳಕೆ ತಳ್ಳಿದೆ

ಕಡಲಿನ ತೀರವು ಇಂದು
ಮೌನ ರಾಗ ಹಾಡಿದೆ!!
ಪಾತಾಳಕೆ ಕರೆದೊಯ್ಯಲು
ಅಲೆಯು ಬಲೆಯ ಬೀಸಿದೆ!!

ಸುಮ್ಮನಿರದೇ ತಂಪು ಗಾಳಿ
ನನ್ನ ಎಳೆದು ತಂದಿದೆ!!
ಅಲೆಗಳೊಡನೆ ತೇಲುವ ಆಟ
ಆಡಿ ಗೆಲ್ಲು ಎಂದಿದೆ!!

ಮುಗ್ಧವಾದ ಮನಸಿನಲ್ಲಿ
ಬಿರುಗಾಳಿಯು ಎದ್ದಿದೆ!!
ಅಬ್ಬರದ ಏರಿಳಿತಕ್ಕೆ
ನನ್ನ ನೂಕಿ ನಗುತಲಿದೆ!!

ಅಲೆಗಳೊಡನೆ ಯುದ್ಧ ಸಾರಿ
ಮನವು ತೇಲಿ ಬಂದಿದೆ!!
ಮಳೆಯ ರೂಪದಿ ಬಂದು ನೀ
ನನ್ನ ಪಾತಾಳಕೆ ತಳ್ಳಿದೆ!!

- ಪಿ.ಜಿ.ಜ್ಯೋತಿ

01 Nov 2017, 08:41 pm