ನೇತ್ರಾವತಿ ಶರಾವತಿ ಕೃಷ್ಣೇಕಾವೇರಿ
ನದಿಗಳ ಮಡಿಲು ತಾಯಿ ಭುವನೇಶ್ವರಿ
ಮಲೆನಾಡ ಮಣ್ಣ ಹಸಿರ ಚೆಲುವ ಮೈಸಿರಿ
ಕನ್ನಡಮ್ಮನ ಸೌಂದರ್ಯಕೆ ಸೊಬಗ ಗರಿ
ಪಶ್ಚಿಮಘಟ್ಟದಲಿ ಭವ್ಯ ಜೀವಸಂಕುಲದಾಟ
ಗಿರಿ ಶಿಖರಗಳೆ ಅವಳಿಗೆ ತೊಡಿಸಿದ ಕಿರೀಟ
ಧುಮ್ಮಿಕ್ಕುವ ಜಲಪಾತಗಳ ವೈಭವದ ಮಾಟ
ಉತ್ತರದಿ ದಕ್ಷಿಣವರೆಗೂ ವೈವಿಧ್ಯ ನೋಟ
ಆದಿಕವಿಗಳು ಪಂಪ ರನ್ನ ಜನ್ನ ಪೊನ್ನ
ಕನಕ ಪುರಂದರ ಅಕ್ಕ ಮಹಾದೇವಿ ಬಸವಣ್ಣ
ಮಹಾ ಕಾವ್ಯವ ಹರಿಸಿ ಸವೆಸಿದರು ಬಾಳ ಯಾನ
ಜೢಾನಪೀಠ ಪುರಸ್ಕೃತರಿಗೂ ಕನ್ನಡಮ್ಮನೇ ತಾಣ
ಚಿನ್ನದ ನಾಡು ಗಂಧದ ಬೀಡು ಚೆಲುವ ಕರುನಾಡು
ಸಾಹಿತ್ಯ ಸಂಗೀತ ಸಾರುತಿವೆ ಅವಳೊಡಲ ಹಾಡು
ನಾಟ್ಯ ನೃತ್ಯ ಯಕ್ಷಗಾನ ಸಿರಿಯೂ ಅವಳಲಿದೆ ನೋಡು
ಅವಳ್ವೈಭವಕೆ ಸಾಕ್ಷಿ ಹಂಪೆ ಐಹೊಳೆ ಹಾಸನ ಹಳೆಬೀಡು
ಸಾಗರ ರಾಜನಿಗೂ ನೆಲೆಯಾಗಿದೆ ಕರುನಾಡ ಕರಾವಳಿ
ರಾಜರಾಣಿಯರು ಮಣ್ಣಾದರು ಈ ನೆಲದಿ ವೈಭವದಿ ಆಳಿ
ಕನ್ನಡಮ್ಮ ಕಂಡರೂ ಲೆಕ್ಕವಿಲ್ಲದಷ್ಟು ಹಾವಳಿ
ಜಗದಗಲ ಹರಡಿರುವಳ ಅವಳ ಬಲದ ಪ್ರಭಾವಳಿ
ಕನ್ನಡನುಡಿಯೇ ಕರುನಾಡಿಗೆ ಅರಿಶಿಣ ಕುಂಕುಮ
ಎಲ್ಲೆಡೆ ಜೇಂಕರಿಸಲಿ ಸವಿ ನುಡಿಯ ಡಿಂಡಿಮ
ಅವಳಿಗಲಂಕಾರ ಕರುಣೆ ಪ್ರೀತಿ ತ್ಯಾಗಗಳ ಸಂಗಮ
ನೆಲ ಜಲ ಭಾಷೆಗೆ ಮುಡಿಪಾದವನೆ ಇಲ್ಲಿ ನಿಜ ಜಂಗಮ
ಹಲ್ಮಿಡಿಯಾದಿ ನೂರು ಹಲವು ಶಾಸನ
ಸಾರಿವೆ ಅವಳೊಡಲ ಭಾಷೆಯ ಇತಿಹಾಸಾನ
ಯಾರದರೇನು ಹಿಂದೂ ಕ್ರೈಸ್ತ ಮುಸಲ್ಮಾನ
ಅವಳ ತಾಯ ಮಡಿಲಲಿ ಎಲ್ಲರೂ ಸಮಾನ
ನಾಡು ಬಿಟ್ಟರೇನು?
ನರ ನಾಡಿಗಳಲ್ಲಿ ಉಂಟು
ಕನ್ನಡ ನಂಟು
ಆಡು ಭಾಷೆ ದೂರಾದರೇನು?
ರಕ್ತಗತವಾಗಿದೆ ಅಭಿಮಾನದ ಗಂಟು.
ಕೂಡಿ ನಲಿದಾಡವ ಅದೃಷ್ಟವಿಲ್ಲ ದಿದ್ದರೇನು ?
ನಡೆಯಲ್ಲಿದೆ ಕನ್ನಡ
ನುಡಿಯಲ್ಲಿದೆ ಕನ್ನಡ
ಅಲೆಗಳಲ್ಲಿ ಮೂಡದ ತಂಪಾದ ಇಬ್ಬನಿ ಎಲ್ಲಿಂದಲೋ ಬಂದು ಇಂದು ಮನತಣಿಸಿದೆ ನಿನ್ನಂತೆ ನನ್ನಲ್ಲಿ.
ಭ್ರಮೆಯಲ್ಲಿ ಬದುಕುತಿರುವೆ ನನ್ನೆದುರು ಇಲ್ಲದಿರುವ ನಿನ್ನ ರೂಪ ನಾನೆಂದು ನೆನೆದು ನನ್ನಲ್ಲಿ.
ನನ್ನ ಹೆಸರ ಕರೆದಂತೆ ನೀನು ಪ್ರತಿಕ್ಷಣವೂ ಆಚೀಚೆ ನೋಡುವುದು ಅಭ್ಯಾಸವಾಗೋಯ್ತು ನಿನ್ನ ಸ್ಪರ್ಶ ಮನದ ಬಳಿ ಕಾಣದೆ ನುಗ್ಗಿ ಬಂದಾಗ.
ಮೆಲ್ಲಾ ಮೆಲ್ಲನೆ ಕಚ್ಚಿ ನಿನ್ನ ಉಸಿರು ಬೆಸುಗೆಯಾಕಿದೆ ಭಾನಂಚಿನ ನಿರಂತೆ ನನ್ನ ಹೃದಯದಲ್ಲಿ ರುದಿರದಂತೆ ಬದಲಾಗಿ.
ನಿನ್ನ ನೋಡಲು ಕಾದು ಕಾದು ನನ್ನ ಕಣ್ಣುಗಳು
ಬೆವರು ಸುರಿಸುತ ನನ್ನೊಳಗಿನ ಭಾವಸರದಿಯ
ಕಾಡಿ ಇಂದು ನನ್ನ ಜವಾಬು ಬೇಡುತಿವೆ ನನ್ನ ಪ್ರೀತಿಯ ರೂಪ ಬಚ್ಚಿಡಲು ನೀನ್ಯಾರು ಹೇಳೆಂದು ಸರ್ವಾಧಿಕಾರದಿ.