ಎಲ್ಲರ ಬಾರ ಹೂರುವಳು
ಭೂಮಿತಾಯಿ.....
ಅವಳಿಗೆ ಯಾವ ಬೆದವು ಇಲ್ಲ
ಯಾರ ಹಂಗು ಇಲ್ಲ....
ಅವಳು ಎಂದು ಸೂಲದ
ತಾಯಿ ಅವಳು...
ಕೆಟ್ಟವರ ತುಳಿಯದೆ
ಒಳ್ಳೆಯವರ ಅಳಿಸದೆ
ಎಲ್ಲರನ್ನು ತನ್ನ ಮಡಿಲಲ್ಲಿ
ಹೆತ್ತಿರುವ ಸುಂದರ ದೆವತೆ ಅವಳು...
ಹಸಿರು ತುಂಬಿದ ಒಡಲು ಅವಳು
ಅವಳ ತಾಳ್ಮೆ ಇನ್ನೂಯಾವ ದೆವರಿಗು ಇಲ್ಲ
ಇನ್ನೂ ಯಾರು ಈ ಮನುಜರ ಬಾರ ಹೂರಲು ಸಾದ್ಯವಿಲ್ಲ......
ಎಂದಿಗೂ ಬತ್ತದ ಪ್ರೀತಿ ಅವಳದು
ಭೂಮಿತಾಯಿ........
ಕಾಲೇಜಿನ ಮೊದಲ ದಿನ
ಮೊದಲ ಪರಿಚಯವೇ
ನಗುವಿನೊಂದಿಗೆ ಶುರುವಾಗಿತ್ತು
ಆ ತುಂಟು ನಗುವು,ಕಣ್ಣರೆಪ್ಪೆ
ಮನದ ಸಾಗರದಿ
ಪ್ರೀತಿಯ ಅಲೆಯ ಹಬ್ಬಿಸಿತ್ತು
ಪ್ರತಿದಿನವೂ ಅವಳ
ನಗುವಿಗೆ ಕಾಯುತ
ಕೂರುವುದೇ ಕೆಲಸವಾಗಿತ್ತು
ರಾತ್ರಿ ಬೇಡದಾಗಿ
ಚಂದಿರನಿಗೆ ಬೈಗುಳ ಸಾಕಾಗಿ
ಸೂರ್ಯ ಬೇಗ ಉದಯಿಸಿದಂತಿತ್ತು
ತಿಂಗಳು ಉರುಳುತಿದ್ದರು
ನಗುವಲ್ಲೇ ನಡೆತಿತ್ತು
ನಮ್ಮ ಉಭಯ ಕುಶಲೋಪರಿ
ನಗು ಮಾತಾಗುವ
ಸಮಯಕ್ಕಾಗಿ ಕಾದು ಕುಳಿತ
ಹೃದಯಕ್ಕೂ ಮೆಲ್ಲಗೆ ಕೋಪ ಬರತೊಡಗಿತ್ತು
ಮನಸಲ್ಲಿ ಮೂಡತೊಡಗಿದ್ದವು
ನೂರಾರು ಪ್ರಶ್ನೆಗಳು
ನಗುವುದು ಅವಳ ಖಾಯಿಲೆಯೇ ?
ಇಲ್ಲವೇ ನನ್ನ ಮುಗ್ದತೆಯೇ
ಬಂಡವಾಳ ಮಾಡಿಕೊಂಡು
ನನ್ನ ವಂಚಿಸಲು ಮಾಡುತಿರುವ ನಾಟಕವೇ ?
ತಾಳ್ಮೆ ಮೀತಿ ಮೀರಿ
ಕೋಪದ ತಾಪವು ಹೆಚ್ಚಾಗಿ
ಕೇಳಿಬಿಟ್ಟೆ ಕೊನೆಗೆ ಒಮ್ಮೆ ನಾನು
ನೀ ನನ್ನ ನೋಡಿ
ನಗುವುದು ಏತಕ್ಕಾಗಿ?
ಮತ್ತೆ ಆ ನಗುವೇ ಉತ್ತರವಾಗಿತ್ತು
ತಲೆ ಕೆಟ್ಟು ಕೈ ಮೇಲೆತ್ತಿದ್ದೆ
ಅಷ್ಟರಲ್ಲೇ ಅವಳ ಗೆಳತಿ
ಮಾತು ಕೇಳಿ ಹೃದಯ ನಿಂತಿತ್ತು...
ನನ್ನ ಹುಡುಗಿಯು ಮೂಕಳಂತೆ
ನಗುವಲ್ಲೇ ಮನಸ ಜೊತೆ ಮಾತನಾಡುತಿದ್ದ
ಅವಳೆಗೇ ಮೂಗಿ ಹಾಗಲು ಸಾಧ್ಯ?
ಪ್ರೀತಿಗೆ ಕಣ್ಣಿಲ್ಲ ಎಂದು ಕೇಳಿದ್ದೆ
ನನ್ನ ಪ್ರೀತಿಗೆ ಬಾಯಿರಲಿಲ್ಲ ಅಷ್ಟೇ
ಆದರೇನಾಯಿತು ಎಂದಿನಂತೆ
ಕಾಡುವ ಅವಳ ನಗೆಯುಂಟು
ನಗೆಯಲ್ಲೇ ಉತ್ತರ ಹುಡುಕುವ
ಪ್ರೀತಿಯ ಛಲವುಂಟು ನನಗೆ…..
ಹುಟ್ಟಿದಾಗಲೇ ಹೇಳಿಬಿಟ್ಟಿದ್ದರು
ಅವಳಿಗೆ ನೀ‘ಹೆಣ್ಣೆಂದು’
ಬೆಳೆಯುವಾಗ ಅನಿಸಿತ್ತು ಅವಳಿಗೆ
ನಾನ್ಯಾಕೆ ಹೆಣ್ಣಾಗಿ ಹುಟ್ಟಿದೆನೆಂದು
ಕೈ ಬಳಪ ಹಿಡಿಯುವ ವಯಸ್ಸಿನಲಿ
ಕೆಲಸಕ್ಕೆ ಹೋಗು ಅಂದಾಗ
ಪುಟ್ಟ ಜೀವವು ಪ್ರಶ್ನಿಸಿತ್ತು ಏಕೆಂದು ?
‘ನೀನು ಹೆಣ್ಣು‘ಹೇಳಿತ್ತು ತಾಯಿ ಜೀವವೊಂದು
ಊಟವೆಲ್ಲವು ಖಾಲಿಯಾಗಿ
ನೀರನ್ನೇ ಕುಡಿದು ಮಲಗು ಅಂದಾಗ
ಪ್ರಶ್ನೆ ಕೇಳಲಿಲ್ಲ ಈ ಬಾರಿ
ಅಭ್ಯಾಸ ಆಗಿಹೋಗಿತ್ತು ತುಂಬಾ ಸಾರಿ...
ಇಷ್ಟವಿಲ್ಲದೆ ಸಣ್ಣ ವಯಸ್ಸಿನಲ್ಲೇ
ಬಲವಂತದಿ ಮದುವೆ ಮಾಡಿಕೊಡಲು
ಅತ್ತಿತ್ತು ಜೀವ ಬಿಟ್ಟು ಹೋಗುವ ನೆಪಕ್ಕೆ ?
ಇಲ್ಲವೇ ಭುವಿಗಿಂತಲೂ ತಾ ಭಾರವೆಂದಿನಿಸಿದಕ್ಕೆ
ಕಣ್ಣಂಚಿನ ನೀರಲ್ಲೇ ಮನೆಬಿಟ್ಟಾಗ
ಅವಳಿಗೇನು ಗೊತ್ತಿತ್ತು
ಇನ್ಮುಂದೆ ಕಣ್ಣೀರೇ ಆಗುವುದು
ತನ್ನ ಬಾಳಸಂಗಾತಿಯೆಂದು .....
ಮಗುವಿರುವಾಗಲೇ ತಾಯಿಯಾಗಿದ್ದಳು
ನಗುತಿರುವ ಮಗು ನೋಡಿ
ಅಳಬೇಕೆ ಇಲ್ಲ ನಗಬೇಕೇ?
ಯಕ್ಷಪ್ರಶ್ನೆಗೆ ಉತ್ತರ ಹುಡುಕಬಲ್ಲಳೇನು
ಗಂಡನೆಂಬುವುನು ಗದರಿದಾಗ
ಕತ್ತಲ ಕೋಣೆಯನು ಸೇರಿದವಳು
ಮತ್ತೆ ಹೊರಬರಲೇ ಇಲ್ಲ
ಅಂಧಕಾರವೇ ಬದುಕು ಮಾಡಿಕೊಂಡಳು
ಸ್ಪಂದಿಸುವುದ ಮರೆತಳು ಭಾವನೆಗಳಿಗೆ
ಜೀವವಿಲ್ಲದ ಗೊಂಬೆಯಂತೆ
ಬದುಕಿರುವುದೇ ಸುಳ್ಳು ಎಂದೆನಿಸಿದಾಗ
ಉಸಿರಾಡಿ ಇನ್ನು ಸತ್ತಿಲ್ಲ ಎಂದು ತಿಳಿದಳು
ಗೋಡೆಗೆ ಜೀವವಿದ್ದರೆ ಅವಳ ಕಂಡು
ಕೇಳಿತ್ತಿತೇನೋ ಒಮ್ಮೆಯಾದರೂ
ನಿನ್ನ ಕಣ್ಣಿರೀಗೆ ಕಾರಣವೇನೆಂದು ?
ಮನುಷ್ಯರಾರು ಆ ಗೊಡವೆಗೆ ಹೋಗಲಿಲ್ಲ
ಕೊನೆವರೆಗೂ ಅವಳಿಗೆ ತಿಳಿಯಲಿಲ್ಲ
ತನ್ನೆದೆನೆಂದು,ತನ್ನವರಾರೆಂದು
ತನ್ನವರೆಲ್ಲವ ತನ್ನೆದೆಂದುಕೊಂಡಳು
ತನ್ನವರೇ ತನಗಾಗದಾಗ ಅತ್ತು ಸುಮ್ಮನಾದಳು
ಕಡಲ ತೀರದಂತೆ ಶಾಂತವಾಗಿ
ಕಾಣುತಿದ್ದ ಅವಳ ಮನಸಲ್ಲಿ
ದುಃಖದ ಅಲೆಗಳು ಹುಯಿಲೆಬ್ಬಿಸಿದ್ದರೂ
ಕಡಲು ಶಾಂತವಾಗಿಯೆ ಇತ್ತು ವಿಧಿಯಿಲ್ಲದೇ
ಹುಟ್ಟಿನಿಂದ ಸಾಯುವರೆಗೂ
ಕಾಡುತಿದ್ದ ಪ್ರಶ್ನೆಯು ಒಂದೇ
ಉತ್ತರ ಸಿಗದ ಪ್ರಶ್ನೆಯು ಒಂದೇ
ತಾನ್ಯಾಕೆ ಹೆಣ್ಣಾಗಿ ಹುಟ್ಟಿದೆನೆಂದು....
ಗಾದೆಪ್ಪ
ಕಡಲೆದೆಯ ಮೇಲೆ ಕುಣಿದಾಡುವ ಅಲೆಗಳು
ಕತ್ತಲ ಸಂಜೆಗೆ ಕಂಬನಿ ಸುರಿಸುವ ನಕ್ಷತ್ರಗಳು
ವಿಶಾಲವಾದ ಸಮುಂದರದ ನೀರಲಿ ಬಿದ್ದು ಒಂದಾಗಿ ಬೆರೆತು ನೆರಳ ಛಾಯೆಯಲ್ಲಿ ಈಜಾಡುತ್ತವೆ, ಹರಿದಾಡುತ್ತವೆ.
ಭಾವ ವಿನಿಮಯವ ಹಂಚಿಕೊಂಡು ಕಡೆಗೊಮ್ಮೆ ಬೀಳ್ಕೊಟ್ಟು ಮರೆಯಾಗುತ್ತವೆ.
ಮತ್ತೆ ಸಂಜೆಗೆ ಮೈ ಬೆಳಗಿನ ಮರುಹುಟ್ಟು ಪಡೆದು ನಕ್ಷತ್ರಗಳು ಇರುವ ತನಕ ಮಿಂಚಿ ಸಂಭ್ರಮಿಸುತ್ತವೆ.
ಧರ್ಮಗಳು ನಮ್ಮನ್ನು ಬಲೆಯಲ್ಲಿಡುವವು
ದೇವರುಗಳು ನಮ್ಮನು ಬಯಲಿಗೆ ತಂದು ನಿಲ್ಲಿಸುವವು
ಜಾತಿಗಳು ನಮ್ಮ ಕನಸ್ಸುಗಳ ಕಿತ್ತುಕೊಳ್ಳುವವು
ಗಡಿ ಗುಡಾರಗಳು ನಮ್ಮನ್ನು ದೂರ ಇಡುವವು
ನಾನು ಕಾಯುತ್ತಿದ್ದೇನೆ ಓಡಿಯಲು ಆ ಗೋಡೆಗಳನ್ನು
ಕೈ ಜೋಡಿಸುವಿರ ನನ್ನೊಟ್ಟಿಗೆ ನೀವು...