ಜೊತೆಯಾಗಿ ನಿಲ್ಲದೆ ಆಸರೆ ತೋರದೆ
ಬದುಕಿನ ಪಯಣದಲ್ಲಿ ಯಾರು ನನ್ನವರು
ಬಾಂದವ್ಯ ಬೆಸಯದೆ ಬದುಗಳ್ಯಾರು ನನ್ನವರು
ಸ್ವಾರ್ಥ ಬಯಸದೆ ನಿಸ್ವಾರ್ಥದಿಂದಯಿರುವವರು
ಯಾರು ನನ್ನವರು ನಮಗಾಗಿ ಬಂದವರು
ಆಸರೆ ಕಷ್ಟಕ್ಕಾಗಲಿಲ್ಲ
ಸೋತಾಗ ಬಲ ತುಂಬಿದವರಲ್ಲ
ಯಾರು ನನ್ನವರು ಜೊತೆಯಾಗಿ ಬಂದವರು
ಹುಟ್ಟುವಾಗೊಂದೆ ಸಾಯುವಾಗೊಂದೆ
ನಡುವೆ ಬರುವ ಸಂಬಂದಗಳು ಸಂಬಂಧಿಕರು
ನಿಜವಾಗಲಿಲ್ಲ ಯಾರು ನನ್ನವರು.
ನೀನಿಟ್ಟ ಚುಕ್ಕಿ
ಬಾನಂಗಳದಲಿ ತೇಲಿಹೋಗಿದೆ...
ಮೋಡದ ಮರೆಯಲ್ಲಿ....
ನಾ ಹೇಗೆ ಹುಡುಕಲಿ
ಆ ಬೆಳ್ಳಕ್ಕಿ ಸಾಲಿನಲಿ...
ಆದರೂ ಹುಡುಕುವೆ
ವ್ಯರ್ಥ ಪ್ರಯತ್ನದಲಿ...
ಬಿಡಲಾರೆ ಎಂದಿಗೂ
ನನ್ನೀ ಜನುಮದಲಿ....
ಅಮರ ಪ್ರೇಮಿಗಳು ನಾವಂದು
ನೀ ಬಿಟ್ಟು ದೂರ ಹೋದೆ ಯಾಕಿಂದು
ನನ್ನ ನೋಡಿ ನಗುತ್ತಿದ್ದಾರೆ ಜನರಿಂದು
ನೀ ಇರದೇ ಹೇಗಿರಲಿ ನಾನಿಂದು
ನಿನ್ನ ನೆನಪಲ್ಲಿ ಸಾಯುತ್ತಿದೆ ಮನವಿಂದು
ಯಾವ ಜನ್ಮದ ಶಿಕ್ಷೆಯೋ ನನಗಿಂದು!
ಹಣದ ದಾಹದ ಎದುರು
ಪ್ರೀತಿ ವಾತ್ಸಲ್ಯದ ನುಡಿಗಳು
ಬಹುದೂರ.
ತನ್ನವರನ್ನೆ ಕಳೆದುಕೊಳ್ಳಲು
ತಯಾರಾಗಿ ನಿಂತ
ಈ ಹಾಳು
ಮನುಜನ ಕಣ್ಣಿಗೆ
ಹಣವು ಮಾತ್ರವೇ
ಗೋಚರಿಸುವುದು!
ಶ್ರೀಮಂತರ ಹುಚ್ಚು ಮೋಹಕ್ಕೆ
ಎಲ್ಲೆಲ್ಲಿಯೂ ನಡೆಯುತ್ತಿದೆ
ರಕ್ತದ ದಾಹ.
ಕೂಡಿಟ್ಟ ಹಣವ ಕರಗಿಸಲು
ಹೆಣಗಾಡುತ್ತಿದ್ದರೂ
ಇವರ ಆಸೆಯ ದಾಹ
ಎಂದೂ ಕರಗದು!
ಕೊನೆಯಿರದ ಇವರ
ಅತಿ ಆಸೆಗಳಿಗೆ
ಅದೆಷ್ಟು ಕುಟುಂಬಗಳು
ಬಲಿಯಾಗಬೇಕಿದೆಯೋ?