Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕಿನ ಬಂಡಿ

ರಜೆಯ ಮಜಾ ಮುಗಿಯಿತು ಇಂದಿಗೆ
ಹೋಗಬೇಕು ಡ್ಯೂಟಿಗೆ ಎಂದಿನಂತೆ
ಸುರಿಯುವ ಜಿಟಿಜಿಟಿ ಮಳೆಗೆ ಹೊರಹೋಗಲು ಮನಸ್ಸಿಲ್ಲ,
ಹೋಗದಿದ್ರೆ ಬೇರೆ ಉಪಾಯವಿಲ್ಲ
ಜೀವನವೇ ಒಂದು ತಿರುಗೊ ಚಕ್ರ
ರಜೆ ಸಿಕ್ಕಾಗ ಮಜಾ ಮಾಡಬೇಕು, ಡ್ಯೂಟಿ ಬಂದಾಗ ಸಜೆಯಲ್ಲಿದ್ದಾಂಗೆ ಇರಬೇಕು
ದುಡಿಯುವವರ ಹಣೆಬರಹವಿದು

- ಎಸ್.ಬಿ

28 Aug 2017, 10:00 am

ಯಾರು ನನ್ನವರು

ಜೊತೆಯಾಗಿ ನಿಲ್ಲದೆ ಆಸರೆ ತೋರದೆ
ಬದುಕಿನ ಪಯಣದಲ್ಲಿ ಯಾರು ನನ್ನವರು
ಬಾಂದವ್ಯ ಬೆಸಯದೆ ಬದುಗಳ್ಯಾರು ನನ್ನವರು
ಸ್ವಾರ್ಥ ಬಯಸದೆ ನಿಸ್ವಾರ್ಥದಿಂದಯಿರುವವರು
ಯಾರು ನನ್ನವರು ನಮಗಾಗಿ ಬಂದವರು
ಆಸರೆ ಕಷ್ಟಕ್ಕಾಗಲಿಲ್ಲ
ಸೋತಾಗ ಬಲ ತುಂಬಿದವರಲ್ಲ
ಯಾರು ನನ್ನವರು ಜೊತೆಯಾಗಿ ಬಂದವರು
ಹುಟ್ಟುವಾಗೊಂದೆ ಸಾಯುವಾಗೊಂದೆ
ನಡುವೆ ಬರುವ ಸಂಬಂದಗಳು ಸಂಬಂಧಿಕರು
ನಿಜವಾಗಲಿಲ್ಲ ಯಾರು ನನ್ನವರು.

- nageshwarh

28 Aug 2017, 09:57 am

ಸುಂದರ ಸಂಜೆಯಲ್ಲಿ

ಇಂದು ಈ ಸುಂದರ ಸಂಜೆಯಲ್ಲಿ
ತಿಂಗಳ‌ ಬೆಳಕಿನಲ್ಲಿ ತಂಗಾಳಿ ಸವಿಯುತ್ತ
ಹುಲ್ಲು ಹಾಸಿಗೆಯ ಮೇಲೆ ಕುಳಿತು
ನನ್ನ‌ವನ ಬರುವಿಗಾಗಿ ಕಾಯುತ್ತಿರುವೆ!!

ಅವನಿಗೇಕೋ ಇಂದು ನನ್ನ ನೆನಪಿಲ್ಲ
ನೆನಪಿದ್ದರೂ ಹುಸಿ ಮನಿಸೇ
ಬರದೇ ನನ್ನನ್ನು ಕಾಡಿಸುತ್ತಿರುವನೇ
ಇಲ್ಲಾ ನನ್ನನ್ನು ಪರೀಕ್ಷಿಸುತ್ತಿರುವನೇ!!

ಆಕಾಶದ ತುಂಬ ಅಲ್ಲಲ್ಲಿ ಮುಸುಕಿರುವ
ಮೋಡವು ಏನನ್ನೋ ಮರೆಮಾಚುತ್ತಿದೆ
ಯಾರದೋ ಹೊಳಪು ಮ‌ರೆಯಲ್ಲಿ ನಿಂತು
ನನ್ನನ್ನು ಕದ್ದು ನೋಡುತ್ತಿರುವಂತಿದೆ!!

ಅದೋ ಅಲ್ಲಿ ಮೇಲೆ ದೂರದಲ್ಲಿ
ನಕ್ಷತ್ರಗಳ ಸಾಲಿನಲ್ಲಿ ನಿಂತು ಅವನು
ಇಲ್ಲಿಯೇ ಇಣುಕಿ ನೋಡುತ್ತ ನಿಂತಿರುವ
ಬಾ ಎಂದು ಕೈ ಚಾಚಿ ನನ್ನ ಕರೆದಿರುವ!!

- ಪಿ.ಜಿ.ಜ್ಯೋತಿ

28 Aug 2017, 09:43 am

ಚುಕ್ಕಿ

ನೀನಿಟ್ಟ ಚುಕ್ಕಿ
ಬಾನಂಗಳದಲಿ ತೇಲಿಹೋಗಿದೆ...
ಮೋಡದ ಮರೆಯಲ್ಲಿ....
ನಾ ಹೇಗೆ ಹುಡುಕಲಿ
ಆ ಬೆಳ್ಳಕ್ಕಿ ಸಾಲಿನಲಿ...
ಆದರೂ ಹುಡುಕುವೆ
ವ್ಯರ್ಥ ಪ್ರಯತ್ನದಲಿ...
ಬಿಡಲಾರೆ ಎಂದಿಗೂ
ನನ್ನೀ ಜನುಮದಲಿ....

- ಪ್ರಿಯಾಂಕ

28 Aug 2017, 08:17 am

ವರಸೆ

ಜೀವನದಲ್ಲಿ ನೀನು ಮಾದರಿಯಂತೆ ಬಾಳು
ಭೂಮಿತಾಯಿಯ ಋಣ ಅಪಾರ ಅದುವೆ
ನಿನ್ನ ಜೀವನದ್ಯೇಯದ ಆಚಾರ
ನಂಬಿಕೆ ನಿನ್ನಲ್ಲಿ ಅಪಾರ
ಹೂಸಿಯಾಗದಿರಲಿ ನಿರಂತರ

- nageshwarh

27 Aug 2017, 10:07 pm

ಕನಸು......

ನನ್ನ ಹೃದಯ ಬಡಿತಗಳನ್ನು
ಒಂದು ಕ್ಷಣ ನಿಲ್ಲಿಸುವಂತೆ
ಬಂದು ಹೋಗುವ ............ ಕನಸೇ
ನೀ ಏಕೆ ಹೀಗೆ ............

ನೀ ಬರೀ ಸುಳ್ಳಿನ ಸರಮಾಲೆ
ಸತ್ಯವನ್ನೇ ನುಂಗುವ ಶವ್ರ್ಯಕ್ಕೇ...
ನಾ . ಏನು ತಾನೇ ಹೇಳಲಿ..

ಒಂದು ಬಾರಿ ಖುಷಿಯ ಹೊನಲು
ಹೊತ್ತು ತರುವೆ.........
ಹಾಗೆಯೇ ಆತಂಕದ ಭಯದ ಅಲೆಗಳನ್ನು
ಕರೆತರುವೆ...........

ರಾತ್ರಿಯಲ್ಲಿ ನೀ ಹೆಚ್ಚಾಗಿ ಬರುವೆ
ನಕ್ಷತ್ರಗಳ ನಡುವಿನ .. ಚಂದಿರನಂತೆ
ಕತ್ತಲ ನಡುವಲ್ಲಿ ಹೋಂಬೆಳಕಂತೆ...

ಕೆಲವು ಯಶಸ್ಸಿಗೆ ನೀ ಸ್ಪುರ್ತೀಯಂತೆ
ಅದರೆ ಅಲವು ಗೊಂದಲಗಳಿಗು
ನೀ ಕಾರಣನಂತೆ..........

ಆದರು ನೀ ನನಗೆ ಅವಷ್ಯಕನಂತೆ
ಏಕೆಂದರೆ ........
ನೀ ನನ್ನ ಹೃದಯದ ಬಾಗವಂತೆ.........



......ಮಂಜು

- ಮಂಜು

27 Aug 2017, 09:59 pm

ಪ್ರೇಮಿ ನಾನು...

ಅಮರ ಪ್ರೇಮಿಗಳು ನಾವಂದು
ನೀ ಬಿಟ್ಟು ದೂರ ಹೋದೆ ಯಾಕಿಂದು
ನನ್ನ ನೋಡಿ ನಗುತ್ತಿದ್ದಾರೆ ಜನರಿಂದು
ನೀ ಇರದೇ ಹೇಗಿರಲಿ ನಾನಿಂದು
ನಿನ್ನ ನೆನಪಲ್ಲಿ ಸಾಯುತ್ತಿದೆ ಮನವಿಂದು
ಯಾವ ಜನ್ಮದ ಶಿಕ್ಷೆಯೋ ನನಗಿಂದು!

- ಪ್ರಿಯಾಂಕ

27 Aug 2017, 02:48 pm

ಹಣದ ದಾಹ

ಹಣದ ದಾಹದ ಎದುರು
ಪ್ರೀತಿ ವಾತ್ಸಲ್ಯದ ನುಡಿಗಳು
ಬಹುದೂರ.
ತನ್ನವರನ್ನೆ ಕಳೆದುಕೊಳ್ಳಲು
ತಯಾರಾಗಿ ನಿಂತ
ಈ ಹಾಳು
ಮನುಜನ ಕಣ್ಣಿಗೆ
ಹಣವು ಮಾತ್ರವೇ
ಗೋಚರಿಸುವುದು!
ಶ್ರೀಮಂತರ ಹುಚ್ಚು ಮೋಹಕ್ಕೆ
ಎಲ್ಲೆಲ್ಲಿಯೂ ನಡೆಯುತ್ತಿದೆ
ರಕ್ತದ ದಾಹ.
ಕೂಡಿಟ್ಟ ಹಣವ ಕರಗಿಸಲು
ಹೆಣಗಾಡುತ್ತಿದ್ದರೂ
ಇವರ ಆಸೆಯ ದಾಹ
ಎಂದೂ ಕರಗದು!
ಕೊನೆಯಿರದ ಇವರ
ಅತಿ ಆಸೆಗಳಿಗೆ
ಅದೆಷ್ಟು ಕುಟುಂಬಗಳು
ಬಲಿಯಾಗಬೇಕಿದೆಯೋ?


ಪ್ರಿಯಾಂಕ✍

- ಪ್ರಿಯಾಂಕ

27 Aug 2017, 02:43 pm

ಮಾಯೆ....

ಪ್ರೀತಿಯೊಂದು ಮಾಯೆ..
ಪಸರಿಸಿದೆ ಎಲ್ಲಡೆ
ತನ್ನ ಛಾಯೆ.....

ಅಮರ ಪ್ರೇಮದಿಂದ
ಅರಳಿದೆ ಜೀವಜಗತ್ತು...
ಎಷ್ಟು ಪ್ರೇಮಿಗಳು
ಇರುವರು ನಸುನಗುತ್ತ....

- ಪ್ರಿಯಾಂಕ

27 Aug 2017, 11:31 am

ಜೊತೆಯಾಗಿ......

ಸಾಗುತ್ತಿರುವ ನನ್ನೀ ಪಯಣದಲಿ
ಜೊತೆಯಾದವಳು ನನ್ನೀ ಮಡದಿ.
ಬಿಸಿಲು-ಮಳೆ, ಚಳಿ-ಗಾಳಿಯನ್ನದೇ
ಬಹುದೂರ ನಡೆದೆವು ಸಂತಸದಿ!

ಬಟ್ಟೆ ಮಾಸಿದರೂ, ಚಪ್ಪಲಿ ಸವೆದರೂ
ನಮ್ಮ ಪ್ರೀತಿಗಿಲ್ಲ ಯಾವುದೇ ಕೊರತೆ.
ಹಸಿವು ಬಾಯಾರಿಕೆಯಿಂದ ಕಂಗೆಟ್ಟರೂ
ಯಾರೂ ಕೇಳೊರಿಲ್ಲ ನಮ್ಮ ಕತೆ!

ಊರೂರು ಸುತ್ತಿ ಬಿಕ್ಷೆಯ ಬೇಡಿ
ದಣಿವಾರಿಸಲು ನಮಗಿಲ್ಲ ಸ್ವಂತಮನೆ.
ದೇವಸ್ಥಾನದ ಜಗುಲಿ, ಪಾಳು ಕಟ್ಟಡಗಳು
ಅದೇ ನಮ್ಮ ಪ್ರೀತಿಯ ಅರಮನೆ.

ಸಾವಿನಲ್ಲೂ ಒಂದಾಗಿಸು ಓ ದೇವರೇ,
ನನ್ನ ಬಿಟ್ಟು ಅವಳಿಗಿಲ್ಲ ಬೇರೆ ಆಸರೆ!
ನಿನ್ನ ನಂಬಿದ ಭಕ್ತ ನಾನು
ನಮಗಿಲ್ಲ ಬೇರೆ ತೊಂದರೆ!

ಪ್ರಿಯಾಂಕ✍

- ಪ್ರಿಯಾಂಕ

27 Aug 2017, 11:23 am