Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನ ...

ಮನಸಲ್ಲಿ ತುಂಬಿದೆ ನೂರಾರು ಕನಸು...
ಹೇಳಾಲಾಗುತ್ತಿಲ್ಲ ಮನಸಲ್ಲೇ ಮುನಿಸು...

ಕಣ್ಣಲ್ಲಿ ತುಂಬಿದೆ ಆ ಮನಸಿನ ಕನಸು..‌
ಕಣ್ಣಿರಾಗಿ ಹರಿಯುತ್ತಿದೆ ಅ ಮುನಿಸು...

ಆದರೂ ಸುಮ್ಮನಿದೆ ಈ‌ ನಿಗೂಢ ಮನಸು..
ಇದನ್ನು ಅರಿತವರೇ ಬಾಳೂದು ಏಲ್ಲವನ್ನು ಮರೆತು...



ಇದರಲ್ಲಿರುವ ಭಾವನೆ ಒಂದೇ ಅದುವೇ...............‌

ಈ ನೀರವ ಮೌನ ........

- Shru Sush

20 May 2017, 11:04 pm

ಜೀವನ

ಜೀವನ ಒಂದು ನಾಟಕ ರಂಗ,
ಸೂತ್ರದಾರಿ ಅವನೆ ಪಾಂಡುರಂಗ,
ಇದ ತಿಳಿದವ ದಾಟುವ ಜೀವದ ಹಂಗ,
ತಿಳಿಯದವ ಸಿಲುಕುವ ರೇಷ್ಮೆ ಹುಳುವಿನಾಂಗ. . .

- tippu

20 May 2017, 10:45 pm

ಅರಿಯದ ಹಾದಿ.

ಹೊಸತು ಹೊಸತೆಂದೇಕೆ
ಹಳತನು ದೂರುವೆ ನಾಳಿಗದು ಹಳತೆ
ಹೊಸತು ಬರುವ ತನಕ ಹಳತಿನ
ಒಳಿತು ನೆನೆದು ಬದುಕು ಓ ಮನುಜ

ಬಾ ಬಾ ಎನ್ನುವುದ ಬಿಡು
ಬಂದಿರುವುದ ನೆನೆದು ಮನುಜ
ಇಲ್ಲ ಇಲ್ಲೆಂದೇಕೆ ಸಿಡುಕುವೆ
ಬದುಕು ಇರುವುದ ನೆನೆದು

ಹರ್ಷವಿಲ್ಲೆಂದೇಕೆ ಮರುಗುವೆ
ಕುರುಡು ಕತ್ತಲ ಆಚೆ ದಿಟ್ಟಿಸು
ಹರ್ಷ ತಾನಾಗಿಯೇ ಬರುವುದು
ಸೊರಗಬೇಡ ಹೊಸ ಚಿತ್ತವಿರಲಿ ಸುತ್ತ

ಇರುವುದರಲ್ಲಿ ಇತರರಿಗಿಕ್ಕಿ ತಣಿಸಿದೆಡೆ
ಬಂದಗಳು ಬಾಂಧವ್ಯ ಬೆಸೆಯುವುವು
ಇತರರನ್ನು ಕಸಿದುಕೊಂಡು ಕುಣಿದೆಡೆ
ಬಂಧಗಳು ಬೇಸತ್ತು ಬರಡಾಗುವವು ಓ ಮನುಜ

ಭಕ್ತಿಯ ಹಾದಿಯಲಿ
ಮುಕ್ತಿಯಾಕಂಡುಕೊಂಡ
ಪುಣ್ಯಾತ್ಮರು ನೂರಾರು ಅದರ್ಶವಾಗಿರುವಾಗ
ಶಕ್ತಿಯಿಂದ ಮುಕ್ತಿ ಗೆಲ್ಲ ಹೊರಟ
ಮೂಡ ನೀ ಓ ಮನುಜ....

-ಅನಿಲ್ ಕುಮಾರ್. ಜಿ.

- ಅನಿಲಕುಮಾರ್.ಜಿ.

20 May 2017, 03:15 pm

ಕವಿ ಅಲ್ಲ ನಾನು

ಕವಿ ಅಲ್ಲ ನಾನು
ಆದರು ಬರೆಯುವೆನು
ಪದಪುಂಜಗಳ ಕಡಲ ಈಜಲಾರೆನು
ಆದರು ನಿಂತಿಲ್ಲ ಬರೆಯುವ ವ್ಯಾಮೋಹವಿನ್ನು

ಮನಸೊಳಗೆ‌ ಪದಗಳದೆ ಗೊಣಗಾಟ
ಮಾತಿಗೆ ನಿಲುಕದ ಪರದಾಟ
ಬರೆಯಬೇಕೆಂಬ ಆಸೆ ಆಡುವುದು ಬಯಲಾಟ
ಬರೆಯಲಾರದೆ ಅನುಭವಿಸಲಾರೆನು ಈ ತೊಳಲಾಟ

ಮನಸಿನಲಿ‌ ಕಟ್ಟುತ್ತಿರುವೆ ‌ಪದಗಳ ಹೂದೋಟ
ಒಂದೊಂದು ಹೂವ ಹೆಕ್ಕಿ ಭಾವಗಳ ಸೇರಿಸಿ ಸಾಲುಗಳ ಕಟ್ಟುವುದೆ ಆಟ
ನಿಲ್ಲದು ಸುಂದರ ಸಾಲುಗಳ ಮಾಲೆಯ ಕಟ್ಟಬೇಕೆಂಬ ಚಟ
ಎಂದಿಗೂ ನಿಲ್ಲದಿರಲೆಂದು ಬಯಸುವೆ ಈ ಚಟದ ಆರ್ಭಟ

ಸಹಸ್ರ ಸುಂದರ ಪದಗಳ ಹೆಕ್ಕುವುದ ಅರಿಯೆನು
ಆದರೂ ತಿಳಿದಷ್ಟು ಪದಗಳ‌ ಪೋಣಿಸಿ ಭಾವ ಸೇರಿಸುವೆನು
ನಾ ಬರೆಯುವ ಸಾಲುಗಳ ಸೊಗಸನ್ನು ನಾನು‌‌‌‌ ತಿಳಿಯೆನು
ಬರೆಯುವಾಗಲೆಲ್ಲ ಮನಕೆ ಕಂಪು ಸೂಸಿ ಖುಷಿ ಮೂಡಲೆಂದೆ ಬರೆಯುವೆನು
ತಪ್ಪಿದ್ದರೆ ಮನ್ನಿಸಿ‌ ತಿದ್ದಿ ಎನ್ನನು

ಕವಿ ಅಲ್ಲ ನಾನು
ಆದರೂ ಬರೆಯುವೆನು.....

- ಶ್ರೀಕಾವ್ಯ

20 May 2017, 12:54 pm

ಪ್ರೀತಿಯ ಕನವರಿಕೆ

ನನ್ನ ನಲ್ಲನ ನೆನೆವುದೆ ಒಂದು ಸುಂದರ ಕನವರಿಕೆ....‌...
ಅದು ಅವನಿಗೆ ಯಾವಾಗ ಆಗುವುದೂ ಮನವರಿಕೆ.....‌‌

ನನ್ನ ಮನದ ತುಂಬಾ ಅವನದೇ ಚಡಪಡಿಕೆ...
ಅದನ್ನು ಅರಿತು ಯಾವಾಗ ಬರುವನೂ ಸನಿಹಕೆ....‌‌‌.‌

ಏನೇ ಆದರೂ ಕೊನೆ ವರೆಗೂ ಕಯುವೆ ಗೆಳೆಯ...
ಆಗಲಾದರು ತಿಳಿ ನನ್ನ ಮನದ ಸಿಹಿಯ...

ಇಂತಿ
ನಿನ್ನ ಕಯುತ್ತಿರುವ ಹೃದಯ

- Shru Sush

20 May 2017, 12:33 pm

*ಸುಂದರ ನಲ್ಲೆ*

*ಸುಂದರ ನಲ್ಲೆ*

          By *ಮಂಜು*

"ನಲ್ಲೆ ನೀ ಮುಡಿದ ಮಲಿಗೆಯ ಹುವಿನ  ಕಂಪಿಗೆ ದಿನಕರನ ಬಿಸಿಉಸಿರಿನ ಗಾಳಿ ತಂಪಾಗಿದೆ ."

"ನಲ್ಲೆ ನೀ ನಡೆವ ಕಲ್ಲು ಮುಳ್ಳಿನ ಹಾದಿ ನಿನ್ನ ನೇೂಡಿ ಹೂ ಮಳೆಯನ್ನೇತರಿಸಿದೆ."

"ನಲ್ಲೆ ನಿನ್ನ ಬಳುಕುವ ವೈಯಾರದ ನಡು ನೇೂಡಿ ಹಂಸದ ನಡುಜಾರಿದೆ."

"ನಲ್ಲೆ ನಿನ್ನ ಈ ಸುಂದರ ಮೊಗವ ಕಂಡ ಆ ಚಂದಿರ ನಾಚಿ ನೀರಾಗಿ ಈ ಭೂಮಿಗೆ ಬಂದು ನಿನ್ನನು ಸ್ಪರ್ಷಿಸಿದ...."

"ನಲ್ಲೆ ತಂಗಾಳಿಗು ಕೂಡ ನಿನ್ನ ಮೈ ಸವರೊ ಆಸೆ....."

*ಮಂಜು.ಸಿ*

- Manjunatha.c

19 May 2017, 11:04 pm

ಚಂದದ ಮುಗುಳು ನಗೆ

ಓ ನನ್ನ ಮುದ್ದು ಕಂದಮ್ಮ....

ನಿನ್ನ ಮುದ್ದು ನಗೆಯ ನೋಡಲು ಏನೂ ಚಂದವಮ್ಮ....



ನಿನ್ನ ಮುಗ್ದ ನಗುವೆ ನನ್ನ ನೋವಿನ ಕೂನೆಯಮ್ಮ ..

ನೀ ನಕ್ಕರೆ ಅದುವೇ ನನ್ನ ಸ್ವರ್ಗವಮ್ಮ....


ನೀ ಎಂದು ಈಗೆ ನಗುತಿರು .......
ಓ ನನ್ನ ಮುದ್ದು ಕಂದಮ್ಮ........

- Shru Sush

19 May 2017, 08:09 pm

ನಿದ್ರಿಸಲೇ

ಹಾಲಿನoತ ಮನಸ್ಸಿನಲ್ಲಿ
ಮಧುವಾಗಿ ಬೆರೆತೊಗಲೇ.....

ಬೆಳೆದಿಂಗಳ ಬೆಳಕಿನಲ್ಲಿ
ಬೆಳ್ಳಕ್ಕಿಯಾಗಿ ಹಾರಾಡಲೇ.....

ಸುಕೋಮಲ ಜಾಜಿಮಲ್ಲಿಗೆಯ
ಮಡಿಲಲ್ಲಿ ಸದ್ದಿಲ್ಲದೆ ನಿದ್ರಿಸಲೇ......

ನಿನ್ನ ಎದೆಯುಸಿರ ತಂಪಿಗೆ
ಜೋಗುಳದ ಹಾಡಿಗೆ ನಿನ್ನ ಮನಸಲ್ಲಿ ಮಲಗಳೇ............

- ಚುಕ್ಕಿ

19 May 2017, 07:38 pm

ಚಿಂದಿ ಆಯುವ ಹೊತ್ತು

ಎಲ್ಲಾ ಕವನಗಳು
ಒಂದಲ್ಲೊಂದು ರೀತಿಯಲ್ಲಿ
ಮನಸು ಮುಟ್ಟುತ್ತವೆ

ಎಲ್ಲಾ ಕವನಗಳು
ಒಂದಲ್ಲೊಂದು ರೀತಿಯಲ್ಲಿ
ಕನಸು ಹುಟ್ಟಾಕುತ್ತವೆ

ಎಲ್ಲಾ ಕವನಗಳು
ಒಂದಲ್ಲೊಂದು ರೀತಿಯಲ್ಲಿ
ಎದೆಗೆ ಗಾಸಿ ಮಾಡುತ್ತವೆ

ನಾನು ಆಗಾಗ ಕವನ ಗೀಚುತ್ತೇನೆ
ನನಗೆ ಬಿಳಿಯ ಹಾಳೆಯೇ ಬೇಕೆಂದೇನಿಲ್ಲ
ಗೋಡೆಯ ಮೇಲೋ
ಮರದ ಕಾಂಡದ ಮೇಲೋ
ಚಿಂದಿ ಹಾಳೆಗಳ ಮೇಲೋ
ಹೀಗೆ ಸಿಕ್ಕ ಸಿಕ್ಕಲ್ಲಿ ಕಂಡ ಕಂಡಲ್ಲಿ ಗೀಚುತ್ತೇನೆ

ಕನವರಿಕೆಗಯಲ್ಲೂ ಕವನ ಹೇಳುತ್ತಿರುತ್ತೇನೆ
ಹಾಗೆಂದು ನಾನು ನನ್ನನ್ನು ಕವಿಯೆಂದು
ನಾನೆಂದು ಕರೆದುಕೊಂಡವನಲ್ಲ
ಚಿಂದಿ ಆಯಿಯುವ ಹುಡುಗರಿಗೆ ಸಿಕ್ಕರೆ
ಅವು ಓದಿ ಖುಷಿ ಪಡಲೆಂದು ಬರೆಯುತ್ತೇನೆ

ಹೀಗೆ ನಾ ಬರೆದ ಅದೆಷ್ಟೋ ಕವನಗಳು
ಗಾಳಿಯಲ್ಲಿ ಹಾರಾಡುತ್ತ
ಆಡುವ ಹುಡುಗರ ಬಾಯಲ್ಲಿ ಹಾಡಾಗುತ್ತವೆ

ನಿಮಗೆ ನಾನು ಬರೆದ ಎಲ್ಲಾ ಕವನಗಳು
ಓದಲು ಸಿಗುವುದಿಲ್ಲ
ಅವು ಗಾಳಿಯಲ್ಲಿ ತೇಲಾಡುತ್ತಿರುತ್ತವೆ
ನಿಮ್ಮ ಕಿವಿಗವು ಬಿದ್ದರು
ಕೆಲದವರಂತೆ ಸುಮ್ಮನೆ ಹೋಗುತ್ತಿರುತ್ತೀರಿ
ಒಂದೊಮ್ಮೆ ನನ್ನ ಕವನಗಳು
ಕಿರುಚಾಡಳು ಶುರುಮಾಡುತ್ತವೆ
ಆಗ ಕೇಳಲಾರದೆ ಕಿವಿ ಮುಚ್ಚಿಕೊಳ್ಳುತ್ತೀರಿ

ಹೀಗೆ ನಮ್ಮ ಕವನಗಳು ಮರೆತು ಹೋಗುತ್ತವೆ
ಆಗಾಗ ನಮ್ಮ ಕಥೆಗಳು
ಚಿನ್ನ ಗೆದ್ದ ನಿಮ್ಮ ಸಿನೆಮಾಗಳಲ್ಲಿ ಹುಡುಗಿರುತ್ತವೆ
ನಮಗೇನು ಚಿನ್ನದ ಆಸೆ ಇಲ್ಲ
ಚಿಂದಿ ಆಯುವ ಹೊತ್ತು
ಚಿಂದಿ ಹಾಳೆಗಳ ಮೇಲೆ ಗೀಚಿದ
ಸುಂದರ ಕವನಗಳ ಹುಡುಕಿ
ಜೇಬಲ್ಲಿ ಮುಚ್ಚಿಟ್ಟುಕೊಳ್ಳುವುದೆ ಗಮ್ಮತ್ತು

- HarshaHL

19 May 2017, 06:55 pm

ಪರಾಶಿವ

ಹುಟ್ಟಿಲ್ಲ ಸಾವಿಲ್ಲ ನಿನಗೆ
ಹೆಸರಿಲ್ಲ ಉಸಿರಿಲ್ಲ ನಿನಗೆ
ಸರ್ವೇಶ್ವರನಾದರು
ಆದಿಭಿಕ್ಷು ನೀನು..........

ನಿನ್ನ ಆಜ್ಞೆ ಇಲ್ಲದೆ ಇರುವೆಯು
ತನ್ನಲ್ಲಿ ಚಲನವಲನ ನಡೆಸಲ್ಲಾ
ನರನಾಡಿಯಲ್ಲಿನ ರುದಿರವು
ನಿನ್ನ ಕೇಳದೆ ಸಾಗಲ್ಲಾ........

ಬದುಕಿದ್ದಾಗ ಪಾಪಗಳಿಂದ
ತುಂಬಿದ ದೇಹಕ್ಕೆ ವಿಮುಕ್ತಿ
ನೀಡಲು ಜನರ ಪ್ರಾಣ
ಹರಿಸುವೆ................

ಅವರ ಆತ್ಮಕ್ಕೆ ಶಾಂತಿನಿಡಲು
ಸುಟ್ಟ ಚಿತಾಭಸ್ಮವ ವಿಭೂತಿ
ಎಂದೇ ನಿನ್ನ ಮೈ ಮೇಲೆ
ಧರಿಸುವೆ................

ಅರ್ಧನಾರೀಶ್ವರನಾಗಿ ಪಾರ್ವತಿಯ
ಪ್ರೀತಿಗೆ ಬೆಳೆಕಟ್ಟಲಾಗದ ಕೊಡುಗೆ
ಕೊಟ್ಟೆ ಪರಮೇಶ್ವರನಾಗಿ

ಪರಾಶಿವನಾಗಿ..............

- ಚುಕ್ಕಿ

19 May 2017, 06:54 pm